ಆ್ಯಪ್ನಗರ

ತುಳಸಿ ಗಿಡ ಪದೇ ಪದೇ ಒಣಗುತ್ತಿದ್ರೆ ಎಚ್ಚರ..! ಮುಂಬರುವ ತೊಂದರೆಯ ಸೂಚನೆಯಿದು..

ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ದೈವಿಕ ಮಹತ್ವವಿರುವ ತುಳಸಿಯು ನಮಗೆ ಮುಂಬರುವ ದಿನಗಳಲ್ಲಿ ಎದುರಾಗುವ ಸಮಸ್ಯೆಗಳನ್ನು, ದೋಷಗಳನ್ನು ಸೂಚಿಸುತ್ತದೆ.

Vijaya Karnataka Web 22 Jun 2022, 11:19 am
ಮನೆಯಲ್ಲಿ ತುಳಸಿ ಗಿಡ ನೆಡುವುದನ್ನು ಧರ್ಮಗ್ರಂಥಗಳಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ತುಳಸಿ ಕೇವಲ ಧಾರ್ಮಿಕ ಮಹತ್ವವನ್ನು ಮಾತ್ರ ಹೊಂದಿಲ್ಲ, ತುಳಸಿಯು ನಿಮ್ಮ ಮನೆಯಲ್ಲಿ ಮುಂಬರುವ ಸಂತೋಷ ಮತ್ತು ದುಃಖವನ್ನು ಸೂಚಿಸುತ್ತದೆ. ಧರ್ಮಗ್ರಂಥಗಳಲ್ಲಿ, ತುಳಸಿ ಸಸ್ಯಗಳನ್ನು ರೋಗಗಳ ನಾಶಕ ಎಂದು ವಿವರಿಸಲಾಗಿದೆ ಮತ್ತು ಎಲ್ಲಾ ತೊಂದರೆಗಳಿಂದ ವ್ಯಕ್ತಿಯನ್ನು ರಕ್ಷಿಸುವ ರಕ್ಷಕ ಎಂದು ಹೇಳಲಾಗಿದೆ. ವಾಸ್ತುವಿನಲ್ಲೂ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ ಮುಂಬರುವ ಭವಿಷ್ಯದ ಘಟನೆಗಳ ಮೊದಲು ತುಳಸಿ ಸಸ್ಯವು ಸಂಕೇತವನ್ನು ನೀಡುತ್ತದೆ. ಹಾಗಾಗಿ ತುಳಸಿ ಸೂಚಿಸುವ ಶುಭ ಮತ್ತು ಅಶುಭ ಸಂಕೇತಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
Vijaya Karnataka Web know how tulsi plant in your home can predict your future
ತುಳಸಿ ಗಿಡ ಪದೇ ಪದೇ ಒಣಗುತ್ತಿದ್ರೆ ಎಚ್ಚರ..! ಮುಂಬರುವ ತೊಂದರೆಯ ಸೂಚನೆಯಿದು..


​ತುಳಸಿ ಒಣಗಿದರೆ

ನಿಮ್ಮ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭಿಸಿದರೆ, ಇದನ್ನು ನಿರ್ಲಕ್ಷಿಸಬೇಡಿ. ತುಳಸಿ ಗಿಡವನ್ನು ಒಣಗಿಸುವುದು ನಿಮ್ಮ ಮನೆಯಿಂದ ಸಂಪತ್ತನ್ನು ಕಳೆದುಕೊಳ್ಳುವ ಸಂಕೇತ. ಇದರೊಂದಿಗೆ ಕೆಲವೊಮ್ಮೆ ಪಿತೃ ದೋಷ ಇದ್ದಾಗ ಕೂಡ ತುಳಸಿ ಗಿಡ ಒಣಗಿ ಹೋಗುತ್ತದೆ. ಒಬ್ಬ ವ್ಯಕ್ತಿಯು ಪಿತೃ ದೋಷದಿಂದ ಬಳಲುತ್ತಿದ್ದಾಗ ತುಳಸಿ ಸಸ್ಯವು ಮತ್ತೆ ಮತ್ತೆ ಒಣಗುತ್ತದೆ. ಹಲವಾರು ಬಾರಿ ನೆಟ್ಟ ನಂತರವೂ ನಿಮ್ಮ ಮನೆಯಲ್ಲಿ ತುಳಸಿ ಗಿಡ ಮತ್ತೆ ಮತ್ತೆ ಒಣಗುತ್ತಿದ್ದರೆ ನೀವು ಪೂರ್ವಜರಿಗೆ ಋಣಿಯಾಗಿದ್ದೀರಿ ಎಂದರ್ಥ. ಅದನ್ನು ತೆಗೆದುಹಾಕಲು, ನೀವು ಅಗತ್ಯವಿರುವ ಜನರಿಗೆ ದಾನ ಮಾಡಬೇಕು ಮತ್ತು ಅದೇ ಸಮಯದಲ್ಲಿ ಸಂತರಿಗೆ ಆಹಾರವನ್ನು ನೀಡಬೇಕು.

ಸುಖ ದಾಂಪತ್ಯಕ್ಕಾಗಿ ರಾಧಾ ಕೃಷ್ಣನ ಫೋಟೋವನ್ನು ಈ ದಿಕ್ಕಿನಲ್ಲಿಡಿ

​ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ

ತುಳಸಿ ಎಲೆಗಳು ನಿಮ್ಮ ಮನೆಯಲ್ಲಿ ಹಠಾತ್ತನೆ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಅದು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ಮುಂಬರುವ ಸಮಯದಲ್ಲಿ, ನಿಮ್ಮ ಕುಟುಂಬದ ಮೇಲೆ ದೊಡ್ಡ ಬಿಕ್ಕಟ್ಟು ಉಂಟಾಗಬಹುದು ಅಥವಾ ಯಾರಾದರೂ ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ತುಳಸಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ, ನೀವು ಈ ಎಲೆಗಳನ್ನು ತೆಗೆದು ಹರಿಯುವ ನೀರಿನಲ್ಲಿ ಎಸೆಯಬೇಕು. ಈ ಹಂತದಲ್ಲಿ ನಿಮ್ಮ ಮನಸ್ಸನ್ನು ಪೂಜೆಗೆ ಮೀಸಲಿಡಬೇಕು. ಬೇಕಿದ್ದರೆ ಮನೆಯಲ್ಲಿ ರಾಮಾಯಣ ಅಥವಾ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ನಿಮ್ಮ ಪರಿಸ್ಥಿತಿಗಳು ಉತ್ತಮವಾಗಬಹುದು.

​ತುಳಸಿ ಹೂವು ಒಣಗಿದರೆ

ತುಳಸಿಯ ಹೂವು ಒಣಗಲು ಪ್ರಾರಂಭಿಸಿದರೆ, ತಕ್ಷಣ ಅದನ್ನು ತೆಗೆದುಹಾಕಬೇಕು. ತುಳಸಿಯ ಹೂವು ಒಣಗಲು ಶುರುವಾದಾಗ ಅದನ್ನು ತೆಗೆಯದಿದ್ದರೆ ಗಿಡದ ಭಾರ ಹೆಚ್ಚುತ್ತದೆ, ಹಾಗೆಯೇ ಮನೆಯ ತಲೆಯ ಮೇಲೆ ಸಾಲದ ಭಾರವೂ ಹೆಚ್ಚುತ್ತದೆ ಎಂಬ ಮಾತಿದೆ. ತುಳಸಿಯ ಒಣಗಿದ ಹೂವುಗಳನ್ನು ತೆಗೆದು ನದಿಗೆ ಎಸೆಯಬೇಕು ಅಥವಾ ಅದನ್ನು ಒಣಗಿಸಿ ತುಳಸಿ ಬೀಜಗಳಂತೆ ಇಡಬೇಕು.

​ತುಳಸಿ ಹಸಿರಾಗಿದ್ದರೆ

ಯಾವ ಮನೆಯಲ್ಲಿ ತುಳಸಿ ಗಿಡ ಹಸಿರಾಗಿದೆಯೋ ಆ ಮನೆಯಲ್ಲಿ ಶ್ರೀ ಹರಿಯ ವಿಶೇಷ ಕೃಪೆ ಇರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಮತ್ತು ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ. ಆ ಮನೆಯಲ್ಲಿ ಕುಟುಂಬದವರೆಲ್ಲರೂ ಪರಸ್ಪರ ಪ್ರೀತಿ ಗೌರವದಿಂದ ಬದುಕುತ್ತಾರೆ.

ನಿಮ್ಮ ಅಂಗೈಯಲ್ಲಿ ಈ ಅದೃಷ್ಟ ರೇಖೆಯಿದ್ದರೆ ಸಾಯೋವರೆಗೂ ಶ್ರೀಮಂತಿಕೆ ಅನುಭವಿಸುತ್ತೀರಿ!

​ತುಳಸಿ ಬುಧ ಗ್ರಹ ಪ್ರತಿನಿಧಿಸುತ್ತದೆ

ತುಳಸಿಯು ಬುಧ ಗ್ರಹಕ್ಕೆ ಸಂಬಂಧಿಸಿದೆ. ಇದು ಹಸಿರು, ಹುಲ್ಲು ಮತ್ತು ಸಸ್ಯಗಳನ್ನು ಪ್ರತಿನಿಧಿಸುತ್ತದೆ. ತುಳಸಿ ಗಿಡದಲ್ಲಿ ಅಂದರೆ ಮಂಜರಿಯಲ್ಲಿ ಹೂವು ಬರಲು ಬುಧ ಕಾರಣ ಎಂದು ಹೇಳಲಾಗುತ್ತದೆ. ಹಾಗಾಗಿ ತುಳಸಿಗೆ ವಾಸ್ತುವಿನಲ್ಲಿ ವಿಶೇಷ ಪ್ರಾಮುಖ್ಯತೆ ಇದೆ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ತುಳಸಿ ಗಿಡದಲ್ಲಿ ಹೆಚ್ಚು ಹೂವುಗಳು ಬಂದಿದ್ದರೆ ಬುಧನ ಅನುಗ್ರಹ ಪಡೆಯುತ್ತೀರಿ ಎನ್ನಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ