ಆ್ಯಪ್ನಗರ

ಅಂಗೈಯಲ್ಲಿ ಈ ಅದೃಷ್ಟದ ಚಿಹ್ನೆ ಇದ್ದರೆ ಸಂಪತ್ತು- ಶ್ರೀಮಂತಿಕೆ ಹೆಚ್ಚಾಗುವುದಂತೆ..!

ಜ್ಯೋತಿಷ್ಯಶಾಸ್ತ್ರದ ಭಾಗವಾಗಿರುವ ಹಸ್ತರೇಖಾಶಾಸ್ತ್ರವೂ ಕೂಡಾ ನಮ್ಮ ಭವಿಷ್ಯದ ಕೆಲವೊಂದು ಸಂಗತಿಗಳನ್ನು ಸೂಚಿಸುತ್ತವೆ. ಅದರಲ್ಲೂ ಹಣ ಮತ್ತು ಸಂಪತ್ತಿನ ವಿಚಾರದಲ್ಲಿ ಅಂಗೈಯಲ್ಲಿರುವ ಕೆಲವೊಂದು ಚಿಹ್ನೆಗಳ ಮೂಲಕ ನಮ್ಮ ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಆ ರೇಖೆಗಳು ಮತ್ತು ವಿಶೇಷ ಚಿಹ್ನೆಗಳ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

Vijaya Karnataka Web 7 Oct 2020, 12:35 pm
ನಮ್ಮ ಅಂಗೈಯಲ್ಲಿ ಅನೇಕ ರೇಖೆಗಳನ್ನು ನಾವು ಕಾಣಬಹುದು. ಅದು ವೃತ್ತಿಜೀವನದ ಯಶಸ್ಸಿನ ಜೊತೆಗೆ, ಅಪಾರ ಸಂಪತ್ತಿನ ಗಳಿಕೆ ಹಾಗೂ ಶ್ರೀಮಂತಿಕೆಯನ್ನೂ ಸೂಚಿಸುತ್ತದೆ. ಅದರಲ್ಲೂ ಕೆಲವೊಂದು ಗುರುತುಗಳು ಹಣದ ನಷ್ಟವನ್ನು ಸೂಚಿಸುತ್ತವೆ, ಎಷ್ಟೇ ಶ್ರಮಪಟ್ಟರೂ ಯಶಸ್ಸನ್ನು ಗಳಿಸುವುದು ಸಾಧ್ಯವಾಗದ ಮಾತಾಗಿರುತ್ತದೆ. ವಿಶೇಷವಾಗಿ ಅಂಗೈಯಲ್ಲಿರುವ ಕೆಲವೊಂದು ಗುರುತುಗಳು ಅಪಾರ ಸಂಪತ್ತಿನ ಗಳಿಕೆಯನ್ನು ಸೂಚಿಸುತ್ತದೆ. ಆ ರೇಖೆಗಳು ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
Vijaya Karnataka Web these auspicious sign on your palm can make you rich
ಅಂಗೈಯಲ್ಲಿ ಈ ಅದೃಷ್ಟದ ಚಿಹ್ನೆ ಇದ್ದರೆ ಸಂಪತ್ತು- ಶ್ರೀಮಂತಿಕೆ ಹೆಚ್ಚಾಗುವುದಂತೆ..!


ಶುಕ್ರ ಪರ್ವತಗಳು

ಹಸ್ತರೇಖಾ ಶಾಸ್ತ್ರದ ಪ್ರಕಾರ ಅಂಗೈಯ ಹೆಬ್ಬೆರಳಿನ ಕೆಳಗಿನ ಭಾಗವನ್ನು ಶುಕ್ರ ಪರ್ವತವೆಂದು ಕರೆಯಲಾಗುತ್ತದೆ. ಈ ಶುಕ್ರ ಪರ್ವತವು ಎತ್ತರಕ್ಕೆ ಏರಿದರೆ ಆ ವ್ಯಕ್ತಿ ಶ್ರೀಮಂತನಾಗುತ್ತಾನೆ ಹಾಗೂ ಜೀವನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಪಡೆಯುತ್ತಾನೆ. ಇಂತಹ ವ್ಯಕ್ತಿಗಳು ತಮ್ಮ ವೈವಾಹಿಕ ಜೀವನದಲ್ಲೂ ಸಂತೋಷವಾಗಿರುತ್ತಾರೆ ಮತ್ತು ಸಮಾಜದಲ್ಲೂ ಸಾಕಷ್ಟು ಪ್ರಸಿದ್ಧಿಯನ್ನೂ ಪಡೆಯುತ್ತಾರೆ.

ಹಸ್ತರೇಖಾಶಾಸ್ತ್ರ: ಅಂಗೈಯಲ್ಲಿ ಈ ರೇಖೆಯನ್ನು ಹೊಂದಿರುವವರು ಸೋಮಾರಿಯಾಗಿರುತ್ತಾರಂತೆ..!

​ಶುಕ್ರ ಪರ್ವತದ ಮೇಲಿರುವ ಈ ಸ್ಥಳ

ಯಾರದಾದರೂ ಕೈಯಲ್ಲಿ ಶುಕ್ರ ಪರ್ವತದ ಮೇಲೆ ಒಂದು ಚದರದ ಗುರುತು ಇದ್ದರೆ, ಆ ವ್ಯಕ್ತಿಯ ಅಳಿಯಂದಿರಲ್ಲಿ ಸಾಕಷ್ಟು ಸಂಪತ್ತು ಇರುತ್ತದೆ ಮತ್ತು ಆ ಸಂಪತ್ತಿನಿಂದ ಅವರು ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ಇನ್ನೊಂದೆಡೆ ಗುರು ಪರ್ವತದ ಮೇಲೆ ಶಿಲುಬೆಯಂತಹ ರಚನೆ ಇದ್ದರೆ ಅಂತಹ ವ್ಯಕ್ತಿಗಳು ವಿವಾಹದ ನಂತರ ಸಾಕಷ್ಟು ಹೆಸರು ಮತ್ತು ಹಣವನ್ನು ಸಂಪಾದಿಸುತ್ತಾರೆ. ಮದುವೆಯ ನಂತರ ಇವರ ಅದೃಷ್ಟವು ಹೆಚ್ಚಾಗುತ್ತದೆ ಹಾಗೂ ಹಣದ ಸಂಪಾದನೆಯೂ ಹೆಚ್ಚಾಗುತ್ತದೆ.

​ಮಣಿಬಂಧದ ಮೇಲೆ ಈ ರೇಖೆಗಳಿದ್ದರೆ

ಯಾರ ಕೈಯಲ್ಲಾದರೂ ಮಣಿಬಂಧದ ಮೇಲೆ ಮೂರು ಸಾಲುಗಳಿದ್ದರೆ ಅಂತವರನ್ನು ಬಹಳ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಮಣಿಕಟ್ಟಿನ ಮೇಲಿರುವ ಈ ಹಸ್ತರೇಖೆಯು ಹಿಂದಿನ ಜನ್ಮದ ಕರ್ಮಗಳಿಗೆ ಸಂಬಂಧಿಸಿರುತ್ತದೆ ಮತ್ತು ಇದರ ಆಧಾರದ ಮೇಲೆ ಈ ರೇಖೆಗಳು ರೂಪುಗೊಳ್ಳುತ್ತವೆ ಎಂಬ ನಂಬಿಕೆ ಇದೆ.

ಹಸ್ತರೇಖೆಯಲ್ಲಿ ಧನ ಯೋಗ: ಅಂಗೈಯಲ್ಲಿ ಈ ಚಿಹ್ನೆಯಿದ್ದರೆ ಧನಲಕ್ಷ್ಮೀ ಯೋಗ..!

​ಮಣಿಕಟ್ಟಿನಿಂದ ಹೊರಡುವ ರೇಖೆ

ಯಾರದಾದರೂ ಕೈಯ ಮಣಿಕಟ್ಟಿನಿಂದ ಹೊರಡುವ ಒಂದು ರೇಖೆಯು ನೇರವಾಗಿ ಶನಿ ಪರ್ವತವನ್ನು ಸಂಧಿಸಿದರೆ ಆ ವ್ಯಕ್ತಿಯು ಬಹಳ ಅದೃಷ್ಟವಂತನಾಗಿರುತ್ತಾನೆ ಎಂದು ಹಸ್ತರೇಖಾ ಶಾಸ್ತ್ರವು ವಿವರಿಸುತ್ತದೆ. ಇಂತಹ ವ್ಯಕ್ತಿಗಳು ಬಹಳ ಕಡಿಮೆ ಸಮಯದಲ್ಲೇ ಹೆಚ್ಚಿನ ಮಟ್ಟದ ಯಶಸ್ಸನ್ನು ಪಡೆಯುತ್ತಾರೆ ಜೊತೆಗೆ ಅಪಾರ ಸಂಪತ್ತನ್ನೂ ಗಳಿಸುತ್ತಾರೆ. ಈ ರೇಖೆಯನ್ನು ಹೊಂದಿರುವ ವ್ಯಕ್ತಿಗಳು ಅತ್ಯಂತ ಅದೃಷ್ಟವಂತರು ಹಾಗೂ ಶ್ರೀಮಂತರು.

​ಭಾಗ್ಯರೇಖೆಯಲ್ಲಿ ಈ ಗುರುತು ಇದ್ದರೆ

ನಮ್ಮ ಅಂಗೈಯಲ್ಲಿರುವ ಭಾಗ್ಯರೇಖೆಗೆ ಬಹಳ ಮಹತ್ವವನ್ನು ನೀಡಲಾಗುತ್ತದೆ. ಯಾರದಾದರೂ ಅಂಗೈಯಲ್ಲಿರುವ ಈ ಭಾಗ್ಯರೇಖೆಯಲ್ಲಿ ತ್ರಿಕೋನದ ಗುರುತು ಇದ್ದರೆ ಆ ವ್ಯಕ್ತಿಯು ರಿಯಲ್‌ ಎಸ್ಟೇಟ್‌ ಉದ್ಯಮಿಯಾಗುತ್ತಾನೆ. ಇಂತಹ ವ್ಯಕ್ತಿಗಳ ಜೀವನದಲ್ಲಿ ಐಷಾರಾಮಕ್ಕೇನೂ ಕೊರತೆ ಇರುವುದಿಲ್ಲ. ಇದರ ಜೊತೆಗೆ ಇವರು ತಮ್ಮ ತಂದೆಯ ಕೆಲಸವನ್ನೂ ಮುನ್ನಡೆಸಿಕೊಂಡು ಹೋಗಬೇಕಾಗುತ್ತದೆ.

​ಅಂಗೈಯಲ್ಲಿ ಎರಡು ಸೂರ್ಯರೇಖೆಗಳಿದ್ದರೆ

ಯಾರದಾದರೂ ಅಂಗೈಯಲ್ಲಿ ಎರಡು ಸೂರ್ಯರೇಖೆಗಳು ಇದ್ದರೆ ಅಂತಹ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚಿನ ಗೌರವ ಹಾಗೂ ಪ್ರಸಿದ್ಧಿಯನ್ನು ಪಡೆಯುತ್ತಾರೆ. ಇವರಿಗೆ ಹಣ ಮತ್ತು ಸಂಪತ್ತಿನ ಕೊರತೆ ಇರುವುದಿಲ್ಲ.

ಅಂಗೈಶಾಸ್ತ್ರದ ಪ್ರಕಾರ ಜೀವನ ರೇಖೆಯು ಹೀಗಿದ್ದರೆ ದೀರ್ಘಾಯುಸ್ಸು ಹೊಂದಿರುತ್ತಾರಂತೆ..!

​​ಭಾಗ್ಯರೇಖೆಯು ಸೂರ್ಯರೇಖೆಯನ್ನು ಸಂಧಿಸಿದರೆ

ಕೆಲವರ ಅಂಗೈಯಲ್ಲಿರುವ ಭಾಗ್ಯ ರೇಖೆಯು ಸೂರ್ಯ ರೇಖೆಯನ್ನು ಸಂಧಿಸಿದರೆ ಅಂತಹ ವ್ಯಕ್ತಿಗಳು ಹೆಚ್ಚು ಹಣವನ್ನು ಗಳಿಸುತ್ತಾರೆ. ಅನಿರೀಕ್ಷಿತವಾಗಿ ಇವರ ಜೀವನದಲ್ಲಿ ಸಂಪತ್ತಿನ ಏರಿಕೆಯಾಗಬಹುದು. ಚಿಕ್ಕ ವಯಸ್ಸಿನಿಂದಲೇ ಶ್ರೀಮಂತಿಕೆಯಲ್ಲೇ ಬೆಳೆಯುತ್ತಾರೆ. ಇದರ ಜೊತೆಗೆ ಅಂಗೈಯಲ್ಲಿ ಮೀನಿನ ಗುರುತನ್ನೂ ಶುಭವೆಂದು ಪರಿಗಣಿಸಲಾಗುತ್ತದೆ. ಇಂತವರಿಗೆ ದೇವರು ಎಲ್ಲಾ ಸುಖಗಳನ್ನೂ ಕರುಣಿಸುತ್ತಾನಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ