ಆ್ಯಪ್ನಗರ

ಹೂವಿಗೂ ಇದೆ ಗ್ರಹದೋಷ ದೂರಾಗಿಸುವ ಶಕ್ತಿ..! ಆ ಹೂವುಗಳಾವುವು..?

ಹೂವು ಕೇವಲ ದೇವರ ಪೂಜೆಗೆ.. ಮಹಿಳೆಯ ಅಲಂಕಾರಕ್ಕೆ ಮಾತ್ರವಲ್ಲ, ಗ್ರಹದೋಷದ ನಿವಾರಣೆಗೂ ಕೂಡ ಬಹು ಸಹಕಾರಿ. ಯಾವೆಲ್ಲಾ ಹೂವುಗಳು ಗ್ರಹ ದೋಷವನ್ನು ದೂರಾಗಿಸುವುದು..? ಯಾವ ಗ್ರಹ ದೋಷಕ್ಕೆ ಯಾವ ಹೂವು ಸೂಕ್ತ..?

Vijaya Karnataka Web 12 Jan 2021, 4:50 pm
ಪ್ರತಿಯೊಂದು ಹೂವಿಗೂ ಕೆಲವು ವಿಶೇಷತೆಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅವುಗಳ ಬಣ್ಣ, ಪರಿಮಳ ಏನೇ ಇರಲಿ, ಅವುಗಳ ಆಕರ್ಷಣೆಗೆ ನಾವು ಮರುಳಾಗದೇ ಇರುತ್ತೇವಾ? ಇದು ನಿಮಗೆ ಗೊತ್ತಿರಲಿ ಗ್ರಹ ದೋಷಗಳನ್ನು ಹೂವುಗಳೂ ಸಹ ಪರಿಹರಿಸುತ್ತವೆಯಂತೆ. ಅಂತಹ ಹೂವುಗಳು ಯಾವುವು? ಅವು ಹೇಗೆ ಗ್ರಹ ದೋಷವನ್ನು ಪರಿಹರಿಸುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
Vijaya Karnataka Web ಹೂವಿಗೂ ಇದೆ ಗ್ರಹದೋಷ ದೂರಾಗಿಸುವ ಶಕ್ತಿ..! ಆ ಹೂವುಗಳಾವುವು..?


ಕಾನೂನು ವ್ಯಾಜ್ಯಗಳ ಸಮಸ್ಯೆ ನಿವಾರಣೆಗೆ ಈ ಹೂವು ಸೂಕ್ತ:

ಈ ಸಸ್ಯವನ್ನು ಮಂಗಳದ ಸಂಕೇತವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳ ದೋಷ ಇದ್ದರೆ, ಪ್ರತಿ ಮಂಗಳವಾರ ಆಂಜನೇಯನಿಗೆ ದಾಸವಾಳದ ಹೂವನ್ನು ಅರ್ಪಿಸುವುದರಿಂದ ಈ ದೋಷ ಪರಿಹಾರವಾಗುತ್ತದೆ. ಇದಲ್ಲದೆ, ಆಸ್ತಿ ಅಥವಾ ಕಾನೂನು ಸಂಬಂಧಿತ ಸಮಸ್ಯೆ ಇದ್ದರೂ ಇತ್ಯರ್ಥವಾಗುತ್ತದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ದಾಸವಾಳದ ಹೂವುಗಳನ್ನು ನೀರಿನಲ್ಲಿ ಇರಿಸಿ ಸೂರ್ಯನಿಗೆ ಅರ್ಪಿಸುವುದರಿಂದ ಕಣ್ಣು, ಮೂಳೆಗಳ ಸಮಸ್ಯೆ ಪರಿಹಾರಗೊಳ್ಳುತ್ತದೆ. ಜೊತೆಗೆ ಹಸರು, ಖ್ಯಾತಿ ಗಳಿಸಬಹುದು. ತಾಯಿಯ ಕಡೆಯ ಸಂಬಂಧಿಕರಿಗೆ ದಾಸವಾಳದ ಹೂವು ನೀಡುವುದರಿಂದ ತೊಂದರೆಗಳು ಪರಿಹಾರವಾಗುತ್ತವೆ.

ಮಕರ ರಾಶಿಗೆ ಶನಿ ಪ್ರವೇಶ: 2021ರಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ..?

ಈ ಸಸ್ಯವು ಚಂದ್ರ ದೋಷವನ್ನು ಪರಿಹರಿಸುತ್ತದೆ
ಪಾರಿಜಾತ ಸಸ್ಯವು ಚಂದ್ರನಿಗೆ ಸಂಬಂಧಿಸಿದೆ. ಇದು ಸ್ವತಃ ಶಾಂತಿ ಮತ್ತು ತಂಪನ್ನು ತರುವ ಗ್ರಹವಾಗಿದೆ. ಈ ಸಸ್ಯವನ್ನು ಮನೆಯ ಮಧ್ಯದಲ್ಲಿ ಅಥವಾ ಹಿಂಭಾಗದಲ್ಲಿ ನೆಡುವುದರಿಂದ ಆರ್ಥಿಕ ಸಮೃದ್ಧಿ ಸಿಗುತ್ತದೆ. ಈ ಸಸ್ಯವನ್ನು ಒಣಗಿಸುವುದು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಅದರ ಆರೈಕೆಯಲ್ಲಿ ಕಾಳಜಿ ವಹಿಸಿ. ಪಾರಿಜಾತ ಹೂವು ಎಷ್ಟು ಅದ್ಭುತವಾಗಿದೆ ಎಂದರೆ ಅದನ್ನು ಸ್ಪರ್ಶಿಸುವುದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಈ ಹೂವನ್ನು ಲಕ್ಷ್ಮಿ ಪೂಜೆಗೆ ಸಹ ಬಳಸಲಾಗುತ್ತದೆ. ಆದರೆ ಗಮನಿಸಬೇಕಾದ ವಿಷಯವೆಂದರೆ, ಪೂಜೆಯಲ್ಲಿ ಬಳಕೆಯಾಗುವ ಹೂವು ತಾನಾಗೇ ಉದುರಿ ನೆಲದ ಮೇಲೆ ಬಿದ್ದಿರಬೇಕು.

Vara Bhavishya: ಕುಂಭದವರಿಗೆ ದೈಹಿಕ ನೋವು ತಪ್ಪಿದ್ದಲ್ಲ..! ಗಾಯವೂ ಆಗಬಹುದು

ಈ ಹೂವಿನ ವಾಸನೆಯನ್ನು ತೆಗೆದುಕೊಳ್ಳಿ:

ರಾತ್ರಿರಾಣಿ ಹೂವುಗಳು ರಾತ್ರಿ ಮಾತ್ರ ಅರಳುತ್ತದೆ. ಅಷ್ಟೇನು ಪರಿಮಳ ಇರುವುದಿಲ್ಲ. ಅದರ ವಾಸನೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಚಂದ್ರ ಗ್ರಹದ ದೋಷಗಳನ್ನು ಸಹ ತೆಗೆದುಹಾಕುತ್ತದೆ ಎಂಬುದನ್ನು ನೆನಪಿನಲ್ಲಿಡಿ. ವಾಸ್ತು ಶಾಸ್ತ್ರದ ಪ್ರಕಾರ, ರಾತ್ರಿ ರಾಣಿ ಸಸ್ಯವು ಯಾವುದೇ ಮನೆಯಲ್ಲಿದ್ದರೂ, ಆ ಮನೆಯಲ್ಲಿ ಬರುವ ನೋವು ಮತ್ತು ದುಃಖವನ್ನು ಕಡಿಮೆ ಮಾಡುತ್ತದೆ. ಆದರೆ ನೀವು ಈ ಸಸ್ಯವನ್ನು ಮನೆಯಲ್ಲಿಯೇ ನೆಟ್ಟಿದ್ದರೆ ಅದನ್ನು ಎಂದಿಗೂ ಒಣಗಲು ಬಿಡಬೇಡಿ. ಅದಕ್ಕೆ ಒಳ್ಳೆಯ ಗೊಬ್ಬರ ನೀಡಿ. ಈ ಸಸ್ಯದ ಬಗ್ಗೆ ನೀವು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟು ಅದು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ.

2021 ಆರೋಗ್ಯ ರಾಶಿ ಭವಿಷ್ಯ: ಯಾವ ರಾಶಿಯವರ ಆರೋಗ್ಯ ಹೇಗಿರಲಿದೆ..? ತಪ್ಪದೇ ತಿಳಿಯಿರಿ

ಈ ಹೂವು ಋಣಾತ್ಮಕ ಶಕ್ತಿ ತೆಗೆದುಹಾಕಬಲ್ಲದು:
ಮಲ್ಲಿಗೆ ಹೂ ಋಣಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಈ ಹೂವಿನ ಪರಿಣಾಮದಿಂದಾಗಿ ವ್ಯಕ್ತಿಯ ಆಲೋಚನೆಗಳು ಮತ್ತು ಭಾವನೆಗಳು ಕ್ರಮೇಣ ಬದಲಾಗುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಮಲ್ಲಿಗೆ ಹೂವಿನ ಗಿಡ ನೆಡುವುದರಿಂದ ಚಿಂತನೆಯು ಸಕಾರಾತ್ಮಕವಾಗಿರಲು ಪ್ರಾರಂಭಿಸುತ್ತದೆ. ಅಷ್ಟು ಮಾತ್ರವಲ್ಲ, ಮಲ್ಲಿಗೆ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

2021ರಲ್ಲಿ ಘಟಿಸಲಿವೆ ನಾಲ್ಕು ಗ್ರಹಣಗಳು, ಜ್ಯೋತಿಷ್ಯದ ಲೆಕ್ಕಾಚಾರ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ