ಆ್ಯಪ್ನಗರ

ಈ ರೇಖೆಗಳು ಅಂಗೈಯಲ್ಲಿದ್ದರೆ ತಪ್ಪಿದ್ದಲ್ಲ ಕಂಟಕ..! ಈ ರೇಖೆಗಳಿದ್ದರೆ ಎಚ್ಚರ

ನಮ್ಮ ಅಂಗೈಯಲ್ಲಿ ವಿಧಿಯ ರೇಖೆ, ಹೃದಯ, ಜೀವನ ಮತ್ತು ವಿವಾಹದ ರೇಖೆಯಂತಹ ಹಲವು ಸಾಲುಗಳಿವೆ. ಈ ರೇಖೆಗಳು ನಮ್ಮ ಜೀವನದ ಆಗು - ಹೋಗುಗಳ ಬಗ್ಗೆ ಹೇಳುತ್ತದೆ. ಆದರೆ ಈ ಕೆಳಗಿನ ರೇಖೆಗಳು ನಮ್ಮ ಕೈಯಲ್ಲಿದ್ದರೆ ಸಮಸ್ಯೆ ತಪ್ಪಿದ್ದಲ್ಲ. ನಮ್ಮ ಆರೋಗ್ಯದ ಸಮಸ್ಯೆಗಳನ್ನು, ನಮ್ಮ ಜೀವನದ ಕಹಿ ಕ್ಷಣಗಳನ್ನು ಸೂಚಿಸುವ ಆ ಅಂಗೈ ರೇಖೆಗಳು ಯಾವುವು..? ಈ ರೇಖೆಗಳು ನಿಮ್ಮ ಅಂಗೈಯಲ್ಲೂ ಇರಬಹುದು ಎಚ್ಚರ..!

Vijaya Karnataka Web 19 Dec 2020, 5:39 pm
ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ, ನಮ್ಮ ಕೈ ರೇಖೆಗಳು ನಮ್ಮ ಜೀವನದ ಬಗ್ಗೆ ಹೇಳುತ್ತವೆ. ಉದಾಹರಣೆಗೆ, ಹಿಂದೆ ಏನಾಯಿತು, ಮುಂದೆ ಏನಾಗಲಿದೆ ಮತ್ತು ಯಾವುದನ್ನೂ ಬದಲಾಯಿಸಬಹುದು. ಇವನ್ನೆಲ್ಲಾ ತಿಳಿಯಬಹುದು. ಹೌದು, ಅಂಗೈಯಲ್ಲಿ ವಿಧಿಯ ರೇಖೆ, ಹೃದಯ, ಜೀವನ ಮತ್ತು ವಿವಾಹದ ರೇಖೆಯಂತಹ ಹಲವು ಸಾಲುಗಳಿವೆ. ಅವು ನಮ್ಮ ಬಗ್ಗೆ ಹೇಳುತ್ತದೆ. ಆದರೆ ಕಾಲಾನಂತರದಲ್ಲಿ ಬದಲಾಗುವ ಕೆಲವು ಸಾಲುಗಳಿವೆ. ಅವು ತಮ್ಮ ಕಾರ್ಯ ಶುರು ಮಾಡಿದಾಗ ಜೀವನದಲ್ಲಿ ಯೋಚನೆಗಳು ಹೆಚ್ಚುತ್ತವೆ. ಹಾಗಾದರೆ ಆ ಸಾಲುಗಳು ಯಾವುವು ತಿಳಿಯೋಣ.
Vijaya Karnataka Web ಈ ರೇಖೆಗಳು ಅಂಗೈಯಲ್ಲಿದ್ದರೆ ತಪ್ಪಿದ್ದಲ್ಲ ಕಂಟಕ..! ಈ ರೇಖೆಗಳಿದ್ದರೆ ಎಚ್ಚರ


ಈ ರೇಖೆಗಳಿದ್ದರೆ ಮಂಗಳಕರವಲ್ಲ:

ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಅಂಗೈನ ಎರಡೂ ಮಂಗಳ ಪರ್ವತಗಳು ಮುಚ್ಚಿಹೋಗಿದ್ದರೆ ಇದು ಶುಭ ಚಿಹ್ನೆ ಅಲ್ಲ. ಅಂತಹ ಜನರು ಜೀವನದಲ್ಲಿ ಎಂದಿಗೂ ಸಂತೋಷವನ್ನು ಪಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅವರ ಜೀವನದಲ್ಲಿ ಯೋಚನೆ ಹಾಗೇ ಇರುತ್ತದೆ. ಇದಲ್ಲದೆ, ಕೈಯಲ್ಲಿ ಸಣ್ಣ ಗೆರೆಗಳನ್ನು ಹೊಂದಿದ್ದರೆ, ಆ ವ್ಯಕ್ತಿಯ ಜೀವನದಲ್ಲೂ ಇದೇ ರೀತಿಯ ಪರಿಸ್ಥಿತಿ ಇರುತ್ತದೆ. ಸಮಸ್ಯೆಗಳು ಆವೃತವಾಗಿರುತ್ತವೆ.

ಮಕರ ರಾಶಿಯಲ್ಲಿ ಗುರು- ಶನಿ ಮಹಾ ಸಂಗಮ: ಶುಭವೋ? ಅಶುಭವೋ?

ಈ ಗುರುತುಗಳು ತುಂಬಾ ಕೆಟ್ಟ ಸೂಚನೆ:
ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಅದೃಷ್ಟದ ರೇಖೆಯ ಬಳಿ ಹಣದ ಗುರುತು ಹೊಂದಿರುವ ವ್ಯಕ್ತಿಯು ಜೀವನದಲ್ಲಿ ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿ ಒಂದು ರೇಖೆಯನ್ನು ಹೊಂದಿದ್ದರೆ ಮತ್ತು ಅದೂ ಅಪೂರ್ಣವಾಗಿದ್ದರೆ, ಅದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಮೆದುಳಿನ ರೇಖೆಯು ತುಂಬಾ ಚಿಕ್ಕದಾಗಿದ್ದರೆ, ಅಂತಹ ಜನರು ಸಾವಿನ ಭಯದಿಂದ ಬಳಲುತ್ತಿದ್ದಾರೆ.

ಕುಂಡಲಿಯ 12 ಮನೆಗಳ ಮೇಲೆ ಮಂಗಳ-ಚಂದ್ರನ ಸಂಯೋಜನೆ ಪ್ರಭಾವವೇನು..?

ಈ ಗುರುತುಗಳಿದ್ದರೆ ಶುಭಕರವಲ್ಲ:

ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಬುಧನ ಪರ್ವತವು ವ್ಯಕ್ತಿಯ ಅಂಗೈಯಲ್ಲಿ ಚಪ್ಪಟೆಯಾಗಿದ್ದರೆ, ಅವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಅಂತಹ ಜನರು ಮನಸ್ಸಿಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ವಿಯಾಗುವುದಿಲ್ಲ. ಇದಲ್ಲದೆ, ಕೈಯಲ್ಲಿ ತುಂಡಾದ ಜೀವನ ರೇಖೆಯನ್ನು ಹೊಂದಿರುತ್ತಾರೋ ಅಂತಹವರು ಗರ್ಭಾಶಯ ಮತ್ತು ಮುಟ್ಟಿನ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಹೃದಯ ರೇಖೆ ಎರಡು ಭಾಗಗಳಾಗಿ ವಿಂಗಡಣೆಯಾಗಿದ್ದರೆ, ಆ ವ್ಯಕ್ತಿಗೆ ಹೃದ್ರೋಗ ಬರುವ ಅಪಾಯವಿದೆ.

ಈ 4 ರಾಶಿಯವರ ಬಳಿ ಭಯವೆಂಬ ಪದವೇ ಇರದು..! ನಿಮ್ಮ ರಾಶಿಗಿದೆಯೇ ಭಯ.?

ಈ ಮೇಲಿನ ರೇಖೆಗಳು ನಮ್ಮ ಜೀವನದ ಕಹಿಯನ್ನು ಹೇಳುತ್ತದೆ. ನಿಮ್ಮ ಕೈಯಲ್ಲೂ ಕೂಡ ಈ ರೇಖೆ ಇರಬಹುದು. ಒಂದು ವೇಳೆ ಈ ರೇಳೆಗಳು ನಿಮ್ಮ ಕೈಯಲ್ಲಿದ್ದರೆ ಅದಕ್ಕೆ ಸೂಕ್ತ ಪರಿಹಾರವನ್ನು ಮತ್ತು ಜಾಗೃತೆ ವಹಿಸುವುದು ಅತ್ಯಗತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ