ಆ್ಯಪ್ನಗರ

ಮನೆಯ ವಾಸ್ತು ಪ್ರಬಲವಾಗಿರಲು ಯಾವ ದಿಕ್ಕಿನಲ್ಲಿ ಏನೇನಿರಬೇಕು ಗೊತ್ತಾ?

ವಾಸ್ತುಪುರುಷ ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕು. ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಾಗಿರುತ್ತದೆ . ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

Vijaya Karnataka 17 Mar 2020, 5:54 pm
ವಸಂತಿ ಅಸ್ಮಿನ್‌ ಇತಿ ವಾಸ್ತುಃ ಅಂದರೆ 'ಇಲ್ಲಿ ವಾಸಿಸುವುದು' ಎಂದರ್ಥ. ನಾವು ವಾಸ ಮಾಡುವ ಜಾಗದ ಅಥವಾ ಮನೆಯ ಬಗ್ಗೆ ಹೇಳುವ ಶಾಸ್ತ್ರವೇ ವಾಸ್ತುಶಾಸ್ತ್ರ. 'ಭೂರೇವ ಮುಖ್ಯ ವಸ್ತು ಸ್ಯಾತ್‌ ತತ್ರ ಜಾತಾನಿ ಯಾನಿಹಿ' ಎಂಬುದು ಮಯ ಎಂಬ ವಾಸ್ತುಶಿಲ್ಪಿಯ ಮಾತು. ಭೂಮಿಯೇ ಮುಖ್ಯವಾದ ವಸ್ತು. ಈ ಭೂಮಿ ಎಂಬ ವಸ್ತುವಿನಿಂದ ನಿರ್ಮಿಸುವ ಮನೆ, ದೇವಾಲಯ, ಕಾರ್ಯಾಲಯ ಮುಂತಾದ ನಿರ್ಮಾಣ ವಿಶೇಷಗಳಿಗೆ 'ವಾಸ್ತು' ಎಂಬ ಹೆಸರು ಬಂದಿದೆ.
Vijaya Karnataka Web vastu for happiness.


ವಾಸ್ತುಪುರುಷ ಬಲವಾಗಿದ್ದರೆ ಮನೆಯ ಎಲ್ಲಸದಸ್ಯರೂ ಆರೋಗ್ಯವಂತರಾಗಿ, ವಿದ್ಯಾವಂತರಾಗಿ ಹಾಗೂ ಆರ್ಥಿಕವಾಗಿಯೂ ಪ್ರಬಲರಾಗಿರುತ್ತಾರೆ. ವಾಸ್ತುಪುರುಷ ಪ್ರಬಲನಾಗಲು ಮನೆಯ ವಾಸ್ತು ಸರಿ ಇರಬೇಕು. ಮನೆಯ ಯಾವ ಯಾವ ದಿಕ್ಕಿನಲ್ಲಿ ಏನೇನಿದ್ದರೆ ಮನೆಯ ವಾಸ್ತು ಬಲವಾಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ನವದಂಪತಿಗಳ ಸುಖಸಂಸಾರಕ್ಕೆ ವಾಸ್ತು ಸಲಹೆಗಳು ಇಲ್ಲಿದೆ ನೋಡಿ..

ಈಶಾನ್ಯ ದಿಕ್ಕಿಗೆ ವಾಸ್ತುಶಾಸ್ತ್ರದಲ್ಲಿ ಪ್ರಥಮ ಆದ್ಯತೆ ನೀಡುತ್ತಾರೆ. ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಭಾಗ. ಈ ದಿಕ್ಕಿನಲ್ಲಿ ಭಾರ ಕಡಿಮೆ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಬೇಕು. ಇದರಿಂದ ಮನೆಯ ಯಜಮಾನನಿಗೂ ಹಾಗೂ ಮನೆಯ ಗಂಡು ಮಕ್ಕಳಿಗೆ ಉತ್ತಮ ಲಾಭವಾಗುತ್ತದೆ. ಅಥವಾ ಈ ದಿಕ್ಕಿನ ಜಾಗವನ್ನು ಖಾಲಿ ಬಿಡಬೇಕು. ಇಲ್ಲಿ ಶೌಚಾಲಯ ಕಟ್ಟಬಾರದು. ಹಾಗೆಯೇ ಇಲ್ಲಿ ಪೊರಕೆ, ಚಪ್ಪಲಿಗಳನ್ನು ಇಟ್ಟರೆ ಮನೆಗೆ ಹಾಗೂ ಮನೆಯ ಯಜಮಾನನಿಗೆ ಶ್ರೇಯಸ್ಸಲ್ಲ.

ಪೂರ್ವ ದಿಕ್ಕಿನಲ್ಲಿ ಮನೆಯ ಬಾಗಿಲು ಇರಬೇಕು. ಪೂರ್ವ ದಿಕ್ಕಿಗೆ ಅಭಿಮುಖವಾಗಿ ಮನೆ ಕಟ್ಟಿದರೆ ತುಂಬಾ ಉತ್ತಮ. ಸೂರ್ಯನ ಕಿರಣ ಮನೆಯ ಪ್ರಧಾನ ಬಾಗಿಲಿನ ಮೇಲೆ ಬೀಳಬೇಕು. ಮನೆಯ ಪೂರ್ವದ ಜಾಗ ಖಾಲಿ ಇದ್ದರೆ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಉತ್ತರ ದಿಕ್ಕಿನಲ್ಲಿ ಮುಖ್ಯ ದ್ವಾರ ಅಂದರೆ ಬಾಗಿಲು, ಡೈನಿಂಗ್‌ ಹಾಲ್‌ ಅಥವಾ ಸ್ಟಡಿ ಕೋಣೆ ಮಾಡಬಹುದು. ಈ ದಿಕ್ಕಿನ ಪರಿಣಾಮದಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ.

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಓದುವ ಕೊಠಡಿಯ ವಾಸ್ತು ಹೇಗಿರಬೇಕು ಗೊತ್ತಾ?

ಆಗ್ನೇಯ ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಅಡುಗೆ ಮನೆ ಇರಬೇಕು.ಈ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಾರೆ. ಆದಾಯಕ್ಕೆ ಮೀರಿದ ಖರ್ಚು, ಸಾಲ, ಗಂಡು ಸಂತಾನದ ನಾಶ ಮುಂತಾದ ಸಂಕಷ್ಟಗಳು ಬರುತ್ತವೆ. ದಕ್ಷಿಣ ದಿಕ್ಕಿನಲ್ಲಿ ಬಾವಿ ಇರಬಾರದು. ಇದ್ದರೆ ಮನೆಯ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತದೆ. ಈ ದಿಕ್ಕಿನಲ್ಲಿ ಶಯನಗೃಹ ಇದ್ದರೆ ಒಳ್ಳೆಯದು.

ಈಶಾನ್ಯ ದಿಕ್ಕಿಗಿರುವಷ್ಟೇ ಪ್ರಮುಖ ಸ್ಥಾನ ನೈಋುತ್ಯ ದಿಕ್ಕಿಗೂ ಇದೆ. ಈ ಭಾಗವು ಎತ್ತರವಾಗಿರಬೇಕು. ಈ ದಿಕ್ಕಿನಲ್ಲೂ ಶಯನಗೃಹವಿರಬಹುದು. ಈಶಾನ್ಯ ದಿಕ್ಕಿನಲ್ಲಿ ದುಡ್ಡು, ಸಂಪತ್ತು ಹಾಗೂ ಒಡವೆಗಳನ್ನು ಇಡುವ ಕಪಾಟನ್ನು ಉತ್ತರಾಭಿಮುಖವಾಗಿಟ್ಟರೆ ಸಂಪತ್ತು ಇನ್ನೂ ವೃದ್ಧಿಯಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಸ್ಟೋರ್‌, ಶೌಚಾಲಯ ನಿರ್ಮಿಸಬೇಕು. ಈ ಭಾಗದಲ್ಲಿ ಗಿಡಗಳನ್ನು ನೆಡಬಹುದು. ಈ ದಿಕ್ಕಿನಲ್ಲಿ ದೇವರ ಮನೆ ಅಥವಾ ಅಡುಗೆ ಮನೆ ಇರಬಾರದು.

'ವಾಯವ್ಯೇ ಪಶುಮಂದಿರಂ ಸ್ಯಾತ್‌' ಅಂದರೆ ವಾಯವ್ಯ ದಿಕ್ಕಿನಲ್ಲಿ ಪಶುಮಂದಿರವಿರಬೇಕು. ಈಗಿನ ನಗರ ಜೀವನದ ವ್ಯವಸ್ಥೆಯಲ್ಲಿ ಕೊಟ್ಟಿಗೆ ಇಲ್ಲವಾಗಿದೆ. ವಾಯವ್ಯ ಕೋಣೆಯಲ್ಲಿಅಡುಗೆ ಮನೆ ಇರಬಹುದು. ವಾಯವ್ಯ ದಿಕ್ಕಿನ ದೋಷದಿಂದಲೇ ಕೋರ್ಟ್‌ನಲ್ಲಿ ಸೋಲು, ಮಿತ್ರರು ಶತ್ರುಗಳಾಗುವುದು, ಗಂಡಸರು ದುಶ್ಚಟಗಳ ದಾಸರಾಗುವುದು, ಮಹಿಳೆಯರು ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ಮಲಗುವ ಕೋಣೆ ಹೀಗಿದ್ದರೆ ಆರೋಗ್ಯ ವೃದ್ಧಿಯಾಗುವುದು..!

ದೇವರ ಕೋಣೆಯ ವೈಶಿಷ್ಟ್ಯ
ಮನೆಯಲ್ಲಿ ದೇವರ ಕೋಣೆಯೇ ಪ್ರಧಾನ. ಈಶಾನ್ಯದಲ್ಲಿ ದೇವರ ಕೋಣೆ ಮಾಡಿ ದೇವರನ್ನು ಪೂರ್ವಾಭಿಮುಖವಾಗಿಡಬೇಕು ಅಥವಾ ಉತ್ತರಾಭಿಮುಖವಾಗಿ ಇಡಬೇಕು. ಇದರಲ್ಲಿ ವಾಸ್ತು ಪ್ರಾಧಾನ್ಯ ಕಂಡುಬರುತ್ತದೆ. ಪಶ್ಚಿಮಕ್ಕೆ ಮುಖ ಮಾಡಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ ಭದ್ರಾಚಲ, ಶ್ರೀಕಾಳಹಸ್ತಿ ಮೊದಲಾದ ಪುಣ್ಯಕ್ಷೇತ್ರಗಳು ಸಂಪೂರ್ಣ ಫಲ ಅನುಭವಿಸುತ್ತಿಲ್ಲ. ಆದ್ದರಿಂದ ಮನೆ ಕಟ್ಟುವಾಗ ಹಾಗು ಮನೆ ಕೊಂಡುಕೊಳ್ಳುವಾಗ ವಾಸ್ತುಪ್ರಕಾರವಾಗಿಯೂ ಯೋಚಿಸಿ ಮುಂದುವರಿಯಿರಿ.

-ವಿನಯ ಭಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ