ಅದೃಷ್ಟದ ಸಸ್ಯಗಳು
ಸಸ್ಯಗಳು, ಪ್ರಕೃತಿಯ ಭವ್ಯತೆ ಮತ್ತು ಸಮೃದ್ಧಿಯ ಸಂಕೆತ. ಪ್ರೀತಿ, ಔದಾರ್ಯ, ಕಾಳಜಿ ಮತ್ತು ವಾತ್ಸಲ್ಯದ ಒಂದು ಸಣ್ಣ ಪರಿಮಾಣಕ್ಕೆ ಪ್ರತಿಯಾಗಿ, ಅವು ನಮಗೆ ಜೀವನದಲ್ಲಿ ಅದೃಷ್ಟದಂತಹ ದೊಡ್ಡ ವಿಷಯಗಳನ್ನು ನೀಡುತ್ತವೆ. ಜ್ಯೋತಿಷ್ಯದಲ್ಲಿ, ಒಂದು ಗಿಡವನ್ನು ನೆಟ್ಟು, ನೀರುಹಾಕಿ ನೋಡಿಕೊಳ್ಳುವುದು, ಚಂದ್ರ, ಬುಧ ಮತ್ತು ಸೂರ್ಯನಿಗೆ ಪ್ರಬಲವಾದ ಪರಿಹಾರವಾಗಿದೆ. ಇದರಿಂದ ನಿರಂತರ ಒತ್ತಡ, ಖಿನ್ನತೆ ಮತ್ತು ಆತಂಕದಿಂದ ಪಾರಾಗಬಹುದು.ನೀವು ಸರಿಯಾದ ಪಾಲನೆಯನ್ನು ಮಾಡಲು ಸಾಧ್ಯವಾಗದಿದ್ದರೆ, ಅದೃಷ್ಟದ ಸಸ್ಯವನ್ನು ಇಟ್ಟುಕೊಳ್ಳಬೇಡಿ. ಇದು ಭಯಂಕರ ನಷ್ಟವನ್ನು ತರುತ್ತದೆ.
ದಿನನಿತ್ಯ ಈ 5 ಕಾರ್ಯಗಳನ್ನು ಮಾಡಿದರೆ ಮನೆಯ ಸಂಪತ್ತು ವೃದ್ಧಿಯಾಗುವುದು..!
ಉಪ್ಪು
ಉಪ್ಪು, ಶುಕ್ರ ಮತ್ತು ಚಂದ್ರನನ್ನು ಪ್ರತಿನಿಧಿಸುತ್ತದೆ. ಆದರೆ ಉಕ್ಕು, ಮತ್ತು ಕಬ್ಬಿಣವು ಶನಿಯನ್ನು ಸೂಚಿಸುತ್ತದೆ. ಆದ್ದರಿಂದ, ಈ ಎರಡೂ ವಸ್ತುಗಳ ಸಂಯೋಜನೆಯು ಸಾಮಾನ್ಯವಾಗಿ ಮಾರಕವಾಗಿರುತ್ತದೆ. ಹೀಗಾಗಿ, ನಿಮ್ಮ ಉಪ್ಪನ್ನು ಗಾಜಿನ ಪಾತ್ರೆಯಲ್ಲೇ ಇಡಬೇಕು.ಪ್ರತಿ ಶುಕ್ರವಾರ ನಿಮ್ಮ ಗಾಜಿನ ಪಾತ್ರೆಯನ್ನು ತುಂಬಿಸಿ. ಅಲ್ಲದೆ, ಉಪ್ಪಿನೊಂದಿಗೆ ಬೆರೆಸಿದ ನೀರಿನಿಂದ ನೆಲವನ್ನು ಒರೆಸಿ. ಇದರಿಂದ, ನಿಮ್ಮ ಸಾಲಗಳು ತೀರಿ, ನಿಮ್ಮ ವೃತ್ತಿ ಜೀವನ ಸುಧಾರಿಸುತ್ತದೆ.
ನಿಮ್ಮ ದಿನಚರಿ ಹೀಗಿರಲಿ
ನಿಮ್ಮ ಪ್ರತಿಸ್ಪರ್ಧಿಗಳೊಂದಿಗೆ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಸಮಸ್ಯೆಗಳನ್ನು ಪರಿಹರಿಸಲು, ನಿಮ್ಮ ಸಾಕ್ಸ್, ಬೂಟುಗಳು, ಹಾಗು ಚಪ್ಪಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ಬಿಟ್ಟುಬಿಡಿ. ಹಾಗೆಯೇ, ಪ್ರತಿದಿನ ನಿಮ್ಮ ಸಾಕ್ಸ್ ಅನ್ನು ತೊಳೆಯಿರಿ. ನಿಮ್ಮ ಪಾದರಕ್ಷೆಗಳನ್ನು ಸರಿಯಾದ ಸ್ಥಳದಲ್ಲಿ ಜೋಡಿಸಿ.
ನಗುವ ಬುದ್ಧನ ಮೂರ್ತಿಯನ್ನು ಮನೆಯಲ್ಲಿಟ್ಟರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಸೂಕ್ತವಾದ ಉದ್ಯೋಗವನ್ನು ಪಡೆಯಲು
ಪ್ರತಿದಿನ ತಡರಾತ್ರಿ ಮಲಗುವ ಅಭ್ಯಾಸ ಇದೆಯೇ?. ಜ್ಯೋತಿಷಿಗಳ ಪ್ರಕಾರ, ಆದಷ್ಟು ಬೇಗ ನೀವು ನಿಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು. ಪ್ರತಿದಿನ ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳಲು ಪ್ರಯತ್ನಿಸಬೇಕು. ಸಾಧ್ಯವಾದಷ್ಟು, ಉದಯಿಸುತ್ತಿರುವ ಸೂರ್ಯನಿಗೆ ಸಾಕ್ಷಿಯಾಗಿ ಪ್ರಾಣಾಯಾಮ ಮಾಡಬೇಕು.
ಸಾಲ
ನೀವು ಗಳಿಸುವ ಹಣ, ನಿಮ್ಮ ಜೀವನದ ಅದೃಷ್ಟದ ಮೂಲಗಳಲ್ಲಿ ಒಂದಾಗಿದೆ. ಹೀಗಾಗಿ, ನೀವು ಹಣವನ್ನು ಸಂಪಾದಿಸಿದಾಗ, ಮುಂದಿನ 24 ಗಂಟೆಗಳವರೆಗೆ ಅದನ್ನು ಮುಟ್ಟಬಾರದು. ಇದು ಹೆಚ್ಚುವರಿ ವೆಚ್ಚಗಳನ್ನು ತಡೆಯುತ್ತದೆ. ಯಾವುದೇ ತಿಂಗಳಿನ ಮಂಗಳವಾರ, ಸಾಲವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಇದು, ಮರುಪಾವತಿಸುವಾಗ ತೊಂದರೆಗಳನ್ನು ಉಂಟುಮಾಡುತ್ತದೆ. ನಿಮ್ಮ ಜಾತಕದಲ್ಲಿನ ಜನ್ಮ ಹೆಸರು ಮತ್ತು ನಿಮ್ಮ ಹೆಸರು ಭಿನ್ನವಾಗಿದ್ದರೆ, ಅದನ್ನು ಆದಷ್ಟು ಬೇಗ ಬದಲಾಯಿಸಿ.
ನಿಮ್ಮ ಅದೃಷ್ಟವನ್ನು ಬದಲಾಯಿಸಲು ಅಮಾವಾಸ್ಯೆಯಂದು ಹೀಗೆ ಮಾಡಿ
ರಾಹು ಪೂಜೆ
ಕುಂಡಲಿಯಲ್ಲಿ ರಾಹು ಇದ್ದರೆ, ಸಂತೋಷವನ್ನು ಅನುಭವಿಸಲು ಆಗುವುದಿಲ್ಲ. ಸಮಯಕ್ಕೆ ಸರಿಯಾಗಿ, ಪರಿಪೂರ್ಣ ಕಾರ್ಯವನ್ನು ನಿರ್ವಹಿಸಲು ರಾಹು ನಿಮಗೆ ಎಂದಿಗೂ ಅವಕಾಶ ನೀಡುವುದಿಲ್ಲ. ನೀವು ತೀವ್ರ ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೆ, ಹಾಗು ಸೋಲುಗಳನ್ನು ಕಾಣುತ್ತಿದ್ದರೆ, ಅದಕ್ಕೆ ರಾಹು ಕಾರಣವಾಗಿರಬಹುದು. ರಾಹುವಿನ ಹಾನಿಕಾರಕ ಪರಿಣಾಮವನ್ನು ತೊಡೆದುಹಾಕಲು, ನೀವು ಪ್ರತಿ ಶನಿವಾರ ಒಂದು ತೆಂಗಿನಕಾಯಿಯನ್ನು ರಾಹುವಿಗೆ ಅರ್ಪಿಸಿ ಪೂಜೆ ಮಾಡಿ.