ಮೇಷ:- ನಿಮ್ಮದೇ ಆದ ವಾಹನ ಖರೀದಿಗೂ ಮುನ್ನ ಉತ್ತಮ ತಿಳುವಳಿಕೆ ಇರುವವರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ಮಾತನಾಡುವಾಗ ಆದಷ್ಟು ಎಚ್ಚರ ವಹಿಸಿ, ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೃಷಭ:- ಹಿಂದಿನಿಂದಲೂ ಬಂದ ಕುಟುಂಬದ ಸಂಪ್ರದಾಯ ವಿಧಾನಗಳನ್ನು ನಾಜೂಕಾಗಿ ನಿರ್ವಹಿಸಿ. ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ. ನಿಮಗೆ ಬರಬೇಕಾಗಿದ್ದ ಹಣವು ನಿಮ್ಮ ಕೈ ಸೇರುವುದು.
ಮಿಥುನ:- ಅನೇಕ ದಿನಗಳ ಸ್ನೇಹವನ್ನು ಒಂದೇ ಒಂದು ಮಾತು ಹಾಳು ಮಾಡುವ ಸಾಧ್ಯತೆ ಉಂಟಾಗುವುದು. ಹಾಗಾಗಿ ಮಾತನಾಡುವಾಗ ಆದಷ್ಟು ಎಚ್ಚರವಹಿಸಿ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.
ಕಟಕ:- ಆಹಾರದ ಕುರಿತಾಗಿ ಅಸಡ್ಡೆ ನಿರ್ಲಕ್ಷ ್ಯವನ್ನು ತೋರದಿರಿ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಏರು-ಪೇರು ಆಗುವ ಸಾಧ್ಯತೆ ಇದೆ. ಮನೆ ವೈದ್ಯರ ಸಲಹೆಪಡೆಯಿರಿ. ಆದಷ್ಟು ವಿಶ್ರಾಂತಿ ಪಡೆಯುವುದು ಒಳ್ಳೆಯದು.
ಸಿಂಹ:- ನಿಮಗೆ ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು. ಹಾಗಾಗಿ ಗೆಳೆಯರೆ ನಿಜವಾದ ಆಸ್ತಿ ಎನಿಸಿಕೊಳ್ಳುವರು. ಉದಾಸೀನ ಪ್ರವೃತ್ತಿಯನ್ನು ಬಿಟ್ಟರೆ ಒಳ್ಳೆಯದು.
ಕನ್ಯಾ:- ಲಲಿತಕಲೆ, ಸಂಗೀತ ನೃತ್ಯಗಳಲ್ಲಿ ಆಸಕ್ತಿ ಹೊಂದಿರುವಂಥವರು ಹೆಚ್ಚಿನ ಹೆಸರನ್ನು ಕೀರ್ತಿಯನ್ನು ಪಡೆಯುವರು. ಮಗನು ಮಾಡಲ್ಪಟ್ಟ ಸಾಲದ ಬಾಧೆಯು ಕಡಿಮೆ ಆಗುತ್ತಾ ಹೋಗುತ್ತಿರುವುದು ಸಂತಸ ನೀಡಿದೆ.
ತುಲಾ:- ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವಿರಿ ಮತ್ತು ಆ ನಿಟ್ಟಿನಲ್ಲಿ ಯಶಸ್ಸನ್ನು ಹೊಂದುವಿರಿ. ಗುರುಹಿರಿಯರ ಸಂಗಡ ಉತ್ತಮ ಸೌಹಾರ್ದತೆಯನ್ನು ಇಟ್ಟುಕೊಳ್ಳಿ.
ವೃಶ್ಚಿಕ:- ಜಾಗತಿಕ ವ್ಯವಹಾರ ತಜ್ಞರು, ಪತ್ರಿಕೋದ್ಯಮಿಗಳು ಹೆಚ್ಚಿನ ಚಾತುರ್ಯವನ್ನು ತೋರುವರು. ಹಾಗಾಗಿ ಇವರುಗಳಿಗೆ ಹೆಚ್ಚಿನ ಸೌಲಭ್ಯ ದೊರಕುವುದು. ಆಂಜನೇಯ ಸ್ತೋತ್ರವನ್ನು ಪಠಿಸಿ.
ಧನಸ್ಸು:- ಆಡಳಿತ ವಿಚಾರಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಬಗ್ಗೆ ಚಿಂತನೆ ನಡೆಸುವಿರಿ. ಇದಕ್ಕೆ ಕೆಲವರ ವಿರೋಧವಿದ್ದರೂ ಅಂತಿಮ ತೀರ್ಮಾನ ನಿಮ್ಮದಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಕರ:- ಆಸ್ತಿ ಖರೀದಿಯ ಬಗ್ಗೆ ಮರು ಪರೀಶಿಲನೆ ನಡೆಸುವುದರಿಂದ ಅನುಕೂಲವಾಗುವುದು. ನಿಮ್ಮ ಮನದ ಇಷ್ಟದಂತೆ ಕಾರ್ಯಗಳು ಕೈಗೂಡುವುದರಿಂದ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ.
ಕುಂಭ:- ನಿಮ್ಮ ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ನೀವು ಸ್ವೀಕರಿಸಿದ ಸಿವಿಲ್ ಪ್ರಾಜೆಕ್ಟ್ಗಳನ್ನು ಸಕಾಲದಲ್ಲಿ ಮುಗಿಸಿಕೊಡಲು ಅನುಕೂಲವಾಗುವುದು. ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವುದು ಕ್ಷೇಮ.
ಮೀನ:- ನಿಮ್ಮ ಸೇವೆಯ ರೀತಿನೀತಿಗಳಿಂದ ಸಂತೋಷಗೊಂಡ ಹಿರಿಯರಿಂದ ವಿಶೇಷವಾದ ಲಾಭವೊಂದು ಬರಲಿದೆ. ಸಾಧ್ಯವಾದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ, ಬಡವರಿಗೆ ಸಹಾಯ ಮಾಡಿ.