ದಿನ ಭವಿಷ್ಯ : 31-5-2018 ಗುರುವಾರ
ಮೇಷ:- ನೀವು ಹೂಡುವ ಹೊಸ ಹೂಡಿಕೆಗಳು ಲಾಭ ತರುವಂತಹದ್ದಾಗಿರುತ್ತದೆ. ಆದರೆ ಒಮ್ಮೆಲೇ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಡಿ. ಷೇರು ವ್ಯವಹಾರ ನಡೆಸುವ ವ್ಯಕ್ತಿಗಳ ಸಹಕಾರ ಪಡೆದಲ್ಲಿ ಒಳಿತಾಗುವುದು.
ವೃಷಭ:- ನಿಮ್ಮಲ್ಲಿ ಕೆಲವರು ಬೆಲೆ ಬಾಳುವ ವಸ್ತುಗಳ ಖರೀದಿಗೆ ಮುಂದಾಗುವರು. ಆದರೆ ನಿಮ್ಮ ಮನೆತನದವರು ವ್ಯವಹರಿಸುತ್ತಿದ್ದ ಹಳೆಯ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸದಿರಿ. ಇಲ್ಲವೆ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುವಿರಿ.
ಮಿಥುನ:- ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.
ಕಟಕ:- ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.
ಸಿಂಹ:- ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ತುಸುವಾದರೂ ಬಿಗಿ ಮನೋಭಾವ ತೋರುವುದು ಒಳ್ಳೆಯದು. ತೀರ ಒಳ್ಳೆಯತನ ಒಳ್ಳೆಯದಲ್ಲ. ಸ್ನೇಹಿತರು ನಿಮಗೆ ಸಹಾಯ ಹಸ್ತ ನೀಡುವರು.
ಕನ್ಯಾ:- ಹೆಚ್ಚುವರಿಯಾಗಿ ಬಂದ ಹಣವನ್ನು ಒಂದು ಸುರಕ್ಷಿತ ಸಂಸ್ಥೆಯಲ್ಲಿ ತೊಡಗಿಸಿ ಅಥವಾ ಸ್ಥಿರಾಸ್ಥಿ ಖರೀದಿಗೆ ಬಳಸಿ. ಇದರಿಂದ ಒಳಿತಿನ ದಾರಿ ಗೋಚರಿಸುವುದು. ಸಮಾಜದಲ್ಲಿ ಗೌರವ ಆದರಗಳು ಹೆಚ್ಚಾಗುವವು.
ತುಲಾ:- ಮಾನಸಿಕ ದೃಢತೆ ಸಂಪಾದಿಸಿಕೊಳ್ಳಿ. ಲಾಭ ತರುವಂತಹ ಹೊಸದಾದ ಕಾರ್ಯಕ್ಷ ಮತೆಗೆ ಸಿದ್ಧಿ ದೊರೆಯುವುದು. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯುವವು. ಸಹೋದರನಿಂದ ಉತ್ತಮ ಮಾಹಿತಿ ದೊರೆಯುವುದು.
ವೃಶ್ಚಿಕ:- ಕುಟುಂಬ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ. ಮನೆ ಗೆದ್ದು ಮಾರು ಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆತನ ಆಗುಹೋಗುಗಳ ಕಡೆ ಗಮನ ಕೊಟ್ಟಲ್ಲಿ ಹೆಚ್ಚಿನ ಲಾಭವಾಗುವುದು.
ಧನಸ್ಸು:- ದೈಹಿಕ ಆರೋಗ್ಯದ ಕಡೆ ಉದಾಸೀನತೆ ತೋರದೆ ಕುಟುಂಬ ವೈದ್ಯರ ಸಲಹೆ ಪಡೆಯಿರಿ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಆಂಜನೇಯ ಸ್ವಾಮಿಯ ಮಂತ್ರ ಪಠಿಸಿ ಮತ್ತು ಗುರುರಾಯರ ದರ್ಶನ ಪಡೆಯಿರಿ.
ಮಕರ:- ಬಹಳ ದಿನಗಳಿಂದ ದೊಡ್ಡ ಸ್ವರೂಪದಲ್ಲಿ ತಲೆ ತಿನ್ನುತ್ತಿದ್ದ ವಿಚಾರವೊಂದು ಮಂಜುಗಡ್ಡೆಯಂತೆ ಕರಗಿ ಹೋಗಲಿದೆ. ಇದರಿಂದ ಮಾನಸಿಕ ಸದೃಢತೆ ಉಂಟಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವುದು.
ಕುಂಭ:- ನಂಬಿದ ಸ್ನೇಹಿತರೇ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಶಕ್ತಿ ನಿಮ್ಮದಾಗಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ. ಗುರು ಅನುಗ್ರಹದಿಂದ ಪಾರಾಗುವಿರಿ.
ಮೀನ:- ಸಮಯ ಬಂದಾಗ ಹುಲ್ಲುಕಡ್ಡಿ ಸಹಾಯವೂ ಬೇಕಾಗುತ್ತದೆ. ಹಾಗಾಗಿ ಯಾರನ್ನು ತಿರಸ್ಕರಿಸಬೇಡಿ ಮತ್ತು ಯಾರ ಬಗ್ಗೆಯೂ ಅಪಪ್ರಚಾರ ಮಾಡದಿರಿ. ಕೆಲವೊಮ್ಮೆ ನೀವು ಶತ್ರು ಎಂದು ತಿಳಿದ ವ್ಯಕ್ತಿಯಿಂದಲೇ ನಿಮಗೆ ಸಹಾಯ ದೊರೆಯುವುದು.
ಮೇಷ:- ನೀವು ಹೂಡುವ ಹೊಸ ಹೂಡಿಕೆಗಳು ಲಾಭ ತರುವಂತಹದ್ದಾಗಿರುತ್ತದೆ. ಆದರೆ ಒಮ್ಮೆಲೇ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಬೇಡಿ. ಷೇರು ವ್ಯವಹಾರ ನಡೆಸುವ ವ್ಯಕ್ತಿಗಳ ಸಹಕಾರ ಪಡೆದಲ್ಲಿ ಒಳಿತಾಗುವುದು.
ವೃಷಭ:- ನಿಮ್ಮಲ್ಲಿ ಕೆಲವರು ಬೆಲೆ ಬಾಳುವ ವಸ್ತುಗಳ ಖರೀದಿಗೆ ಮುಂದಾಗುವರು. ಆದರೆ ನಿಮ್ಮ ಮನೆತನದವರು ವ್ಯವಹರಿಸುತ್ತಿದ್ದ ಹಳೆಯ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸದಿರಿ. ಇಲ್ಲವೆ ಬಣ್ಣದ ಮಾತುಗಳಿಗೆ ಮರುಳಾಗಿ ಹಣ ಕಳೆದುಕೊಳ್ಳುವಿರಿ.
ಮಿಥುನ:- ತುಂಬಾ ಭಾವನಾತ್ಮಕವಾಗಿ ಬಂಧುಗಳೊಡನೆ ಸ್ಪಂದಿಸುವಿರಿ. ಆದರೆ ಹೊರ ಜಗತ್ತಿನಲ್ಲಿ ಅತಿಯಾದ ಭಾವನಾತ್ಮಕತೆ ತೊಂದರೆಯನ್ನುಂಟು ಮಾಡುವುದು. ಹಿರಿಯರ ಸಲಹೆಯಂತೆ ನಡೆದಲ್ಲಿ ನಿಮಗೆ ಅನ್ಯಾಯವಾಗುವುದು ತಪ್ಪುತ್ತದೆ.
ಕಟಕ:- ಅತಿಯಾದ ಲಾಭಾಂಶದ ಆಸೆಗೆ ಬಿದ್ದು ನಿಮ್ಮ ಶಕ್ತಿಗೆ ಮೀರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಡುತ್ತೇನೆ ಎಂದು ಭಾವಿಸಿ ಏಕಕಾಲಕ್ಕೆ ಕೆಲಸಗಳನ್ನು ಕೈಗೆತ್ತಿಕೊಳ್ಳದಿರಿ. ಇದರಿಂದ ಮಾನಸಿಕ ಕ್ಷೋಭೆ ಮತ್ತು ಹಣಕಾಸಿನ ತೊಂದರೆ ಎದುರಿಸಬೇಕಾಗುವುದು.
ಸಿಂಹ:- ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ತುಸುವಾದರೂ ಬಿಗಿ ಮನೋಭಾವ ತೋರುವುದು ಒಳ್ಳೆಯದು. ತೀರ ಒಳ್ಳೆಯತನ ಒಳ್ಳೆಯದಲ್ಲ. ಸ್ನೇಹಿತರು ನಿಮಗೆ ಸಹಾಯ ಹಸ್ತ ನೀಡುವರು.
ಕನ್ಯಾ:- ಹೆಚ್ಚುವರಿಯಾಗಿ ಬಂದ ಹಣವನ್ನು ಒಂದು ಸುರಕ್ಷಿತ ಸಂಸ್ಥೆಯಲ್ಲಿ ತೊಡಗಿಸಿ ಅಥವಾ ಸ್ಥಿರಾಸ್ಥಿ ಖರೀದಿಗೆ ಬಳಸಿ. ಇದರಿಂದ ಒಳಿತಿನ ದಾರಿ ಗೋಚರಿಸುವುದು. ಸಮಾಜದಲ್ಲಿ ಗೌರವ ಆದರಗಳು ಹೆಚ್ಚಾಗುವವು.
ತುಲಾ:- ಮಾನಸಿಕ ದೃಢತೆ ಸಂಪಾದಿಸಿಕೊಳ್ಳಿ. ಲಾಭ ತರುವಂತಹ ಹೊಸದಾದ ಕಾರ್ಯಕ್ಷ ಮತೆಗೆ ಸಿದ್ಧಿ ದೊರೆಯುವುದು. ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆ ನಡೆಯುವವು. ಸಹೋದರನಿಂದ ಉತ್ತಮ ಮಾಹಿತಿ ದೊರೆಯುವುದು.
ವೃಶ್ಚಿಕ:- ಕುಟುಂಬ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ. ಮನೆ ಗೆದ್ದು ಮಾರು ಗೆಲ್ಲು ಎಂದರು ಹಿರಿಯರು. ಹಾಗಾಗಿ ಮನೆತನ ಆಗುಹೋಗುಗಳ ಕಡೆ ಗಮನ ಕೊಟ್ಟಲ್ಲಿ ಹೆಚ್ಚಿನ ಲಾಭವಾಗುವುದು.
ಧನಸ್ಸು:- ದೈಹಿಕ ಆರೋಗ್ಯದ ಕಡೆ ಉದಾಸೀನತೆ ತೋರದೆ ಕುಟುಂಬ ವೈದ್ಯರ ಸಲಹೆ ಪಡೆಯಿರಿ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಆಂಜನೇಯ ಸ್ವಾಮಿಯ ಮಂತ್ರ ಪಠಿಸಿ ಮತ್ತು ಗುರುರಾಯರ ದರ್ಶನ ಪಡೆಯಿರಿ.
ಮಕರ:- ಬಹಳ ದಿನಗಳಿಂದ ದೊಡ್ಡ ಸ್ವರೂಪದಲ್ಲಿ ತಲೆ ತಿನ್ನುತ್ತಿದ್ದ ವಿಚಾರವೊಂದು ಮಂಜುಗಡ್ಡೆಯಂತೆ ಕರಗಿ ಹೋಗಲಿದೆ. ಇದರಿಂದ ಮಾನಸಿಕ ಸದೃಢತೆ ಉಂಟಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬಡ್ತಿ ದೊರೆಯುವುದು.
ಕುಂಭ:- ನಂಬಿದ ಸ್ನೇಹಿತರೇ ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇದೆ. ಆದರೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಶಕ್ತಿ ನಿಮ್ಮದಾಗಿರುವುದರಿಂದ ಹೆಚ್ಚಿನ ತೊಂದರೆ ಇಲ್ಲ. ಗುರು ಅನುಗ್ರಹದಿಂದ ಪಾರಾಗುವಿರಿ.
ಮೀನ:- ಸಮಯ ಬಂದಾಗ ಹುಲ್ಲುಕಡ್ಡಿ ಸಹಾಯವೂ ಬೇಕಾಗುತ್ತದೆ. ಹಾಗಾಗಿ ಯಾರನ್ನು ತಿರಸ್ಕರಿಸಬೇಡಿ ಮತ್ತು ಯಾರ ಬಗ್ಗೆಯೂ ಅಪಪ್ರಚಾರ ಮಾಡದಿರಿ. ಕೆಲವೊಮ್ಮೆ ನೀವು ಶತ್ರು ಎಂದು ತಿಳಿದ ವ್ಯಕ್ತಿಯಿಂದಲೇ ನಿಮಗೆ ಸಹಾಯ ದೊರೆಯುವುದು.