ಆ್ಯಪ್ನಗರ

ದಿನ ಭವಿಷ್ಯ 23 ಮಾರ್ಚ್‌ 2018

ಮೇಷ: ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಮಾತೃ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು, ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.

Vijaya Karnataka 23 Mar 2018, 5:00 am
ಮೇಷ:- ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ಮಾತೃ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು, ಆಸ್ಪತ್ರೆ ಖರ್ಚು ಬರುವ ಸಾಧ್ಯತೆ ಇದೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.
Vijaya Karnataka Web daily rashi bhavishya in kannada march 23nd 2018
ದಿನ ಭವಿಷ್ಯ 23 ಮಾರ್ಚ್‌ 2018


ವೃಷಭ:- ತೀರ ಸಣ್ಣದಾದ ವಿಷಯವೊಂದಕ್ಕೆ ಬಂಧು ಬಳಗದವರ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಇದೆ. ಹಾಗಾಗಿ ಕ್ಷ ಮಿಸುವ ಗುಣ ಇದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.

ಮಿಥುನ:-ತೋಟಗಾರಿಕೆ, ಪಶುಪಾಲನೆ ವೃತ್ತಿ ವಿಶೇಷವಾದ ಅದೃಷ್ಟವನ್ನು ತಂದುಕೊಡಲಿದೆ. ನಿಮ್ಮ ಮನೆಗೆ ಹಿತೈಷಿಗಳಾಗಿದ್ದ ಹಿರಿಯರ ದರ್ಶನ ಭಾಗ್ಯ ದೊರೆಯುವುದು. ಅವರ ಸಾಂತ್ವನ ನುಡಿಗಳು ನಿಮಗೆ ಚೇತೋಹಾರಿ ಆಗಿರುತ್ತದೆ.

ಕಟಕ:- ಸಾಮಾಜಿಕ ಜೀವನದ ನಾಗಾಲೋಟ ಮತ್ತು ಜನಪರವಾದ ನಿಮ್ಮ ಕಾಳಜಿಯು ಸಮಾಜ ಬಾಂಧವರಿಂದ ಗುರುತಿಸಲ್ಪಡುವುದು. ಅದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು ಅವರು ಆಯೋಜಿಸಿ ನಿಮ್ಮನ್ನು ಆಮಂತ್ರಿಸುವ ಸಾಧ್ಯತೆ ಇರುತ್ತದೆ.

ಸಿಂಹ:- ಸಾವಿರ ಉಳಿಪೆಟ್ಟಿನಿಂದ ಒಂದು ಸುಂದರ ಮೂರ್ತಿಯ ನಿರ್ಮಾಣವಾಗುವಂತೆ ಕಷ್ಟವು ನಿಮ್ಮನ್ನು ಅಂತರ್‌ಮುಖಿಯನ್ನಾಗಿ ಮಾಡುವುದಲ್ಲದೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗುವುದು.

ಕನ್ಯಾ:- ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು.

ತುಲಾ:- ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.

ವೃಶ್ಚಿಕ:- ಕಷ್ಟದ ದಿನಗಳು ಇನ್ನು ಮುಗಿದಿಲ್ಲ. ಹಾಗಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ.

ಧನಸ್ಸು:- ಗುರು ಹಿರಿಯರ ಬಗ್ಗೆ ವಿಶೇಷವಾದ ಗೌರವ ಮತ್ತು ವಿನಯವನ್ನು ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಈ ದಿನ ಸಂತೋಷ ಸಂಭ್ರಮದಿಂದ ಕಳೆಯುವಿರಿ.

ಮಕರ:- ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಕುಂಭ:- ನಿಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟಪಡುತ್ತಾರೆ. ನಿಮಗಿಂದು ಸಾಮಾಜಿಕ ನಾಯಕತ್ವ ಲಭ್ಯವಾಗಲಿದೆ. ಇದರೊಟ್ಟಿಗೆ ನಿಮ್ಮ ಜವಾಬ್ದಾರಿಯೂ ಹೆಚ್ಚುವುದು. ಎಲ್ಲವೂ ಗುರುವಿನ ಮಹಿಮೆ ಎಂದು ತಿಳಿಯಿರಿ.

ಮೀನ:- ನಿಮ್ಮ ಜರೂರಾದ ಪ್ರವಾಸ ಕಾರ್ಯಕ್ರಮಗಳು ಅನಿರೀಕ್ಷಿತವಾಗಿ ಮುಂದೂಡಲ್ಪಡುವುದು. ಹಾಗಾಗಿ ಸ್ವಲ್ಪ ನಿರಾಸೆ ಉಂಟಾಗುವುದು. ಆದರೆ ಇದಕ್ಕೆ ಬೇಸರಿಸುವ ಅಗತ್ಯವಿಲ್ಲ. ಆದದ್ದೆಲ್ಲಾ ಒಳಿತೇ ಆಯಿತು ಎನ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ