ಮೇಷ:- ಎದುರಾಳಿಗಳನ್ನು ಎದುರಿಸುವ ಕಲೆ ನಿಮಗೆ ಕರಗತವಾಗಿರುವುದು. ಅಂತೆಯೇ ಅವರ ಮನಸ್ಥಿತಿಯನ್ನು ಅರಿತು ಅವರ ಸ್ನೇಹವನ್ನು ಬಯಸುವಿರಿ. ಆದರೆ ಶತ್ರು, ಶತ್ರುವೇ ಮಿತ್ರನಲ್ಲ. ಆತನನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಿ.
ವೃಷಭ:- ವಿವಾಹ ಆಕಾಂಕ್ಷಿಗಳಿಗೆ ಈದಿನ ಶುಭ ಸಮಾಚಾರ ಬರುವುದು. ಕೆಲವರಿಗೆ ಮದುವೆಯೂ ನಿಶ್ಚಯವಾಗುವ ಸಂದರ್ಭವಿರುತ್ತದೆ. ಬದುಕಿನ ಬಹುಮುಖ್ಯ ನಿರ್ಣಯವೊಂದನ್ನು ಇಂದು ನೀವು ಕೈಗೊಳ್ಳಬೇಕಾಗುವುದು.
ಮಿಥುನ:- ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದಲೇ ಕಿರಿಕಿರಿ. ಹಾಗಾಗಿ ಅವರ ವಿಶ್ವಾಸವನ್ನು ಮೊದಲು ಪಡೆಯಿರಿ. 'ದುರ್ಜನಂ ಪ್ರಥಮಂ ವಂದೇ' ಎನ್ನುವಂತೆ ಅವರನ್ನು ಸಮಾಧಾನಿಸಿದರೆ ಈದಿನ ನಿಮ್ಮ ಕೆಲಸಕ್ಕೆ ಯಾವುದೇ ಭಂಗ ಇರುವುದಿಲ್ಲ.
ಕಟಕ:- ರಾಜಕಾರಣಿಗಳಿಗೆ ವಿರೋಧಿಗಳ ತೊಂದರೆ. ಅವರು ಮಾಡುವ ಅಪಪ್ರಚಾರದಿಂದಾಗಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಬರುವ ಸಾಧ್ಯತೆ. ಕಾರ್ಮಿಕ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ. ಆಂಜನೇಯ ಸ್ತೋತ್ರ ಪಠಿಸಿರಿ.
ಸಿಂಹ:- ಮಕ್ಕಳ ವಿಚಾರದಲ್ಲಿ ಒತ್ತಡ. ಶಿಕ್ಷ ಣದ ವಿಚಾರದಲ್ಲಿ ತಂದೆ ಮಗನಲ್ಲಿ ಅಪಸ್ವರ ಮೂಡುವುದು. ಶಿವಸ್ತುತಿಯನ್ನು ಪಠಿಸಿರಿ. ಗುರುವಿನ ಅನುಗ್ರಹ ಪಡೆಯುವುದರಿಂದ ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು.
ಕನ್ಯಾ:- ಕೆಲಸದ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಆದರೆ ಅದಕ್ಕಾಗಿ ಹೆಚ್ಚು ಚಿಂತಿಸಬೇಕಿಲ್ಲ. ಆದ್ಯತೆಯ ಮೇರೆಗೆ ಮೊದಲು ಬಂದ ಕೆಲಸವನ್ನು ಮೊದಲು ಮುಗಿಸಿ. ಕಾರ್ಯದ ವೇಳಾಪಟ್ಟಿ ಇರಲಿ.
ತುಲಾ:- ಸ್ಪಷ್ಟ ನಡೆಯ ಸ್ವಭಾವವುಳ್ಳ ನೀವು ಅದನ್ನು ಇಂದು ಜಾರಿಗೆ ತರುವಿರಿ. ಇದರಿಂದ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ-ವಿಶ್ವಾಸವನ್ನು ಉನ್ನತ ಅಧಿಕಾರಿಗಳು ತೋರಿಸುವರು. ಚಿಕ್ಕಮಗುವಿನ ಪ್ರಶ್ನೆಗೆ ಉತ್ತರಿಸಲು ಸೋಲುವಿರಿ.
ವೃಶ್ಚಿಕ:- ಇದುವರೆಗೂ ಬಯಸುತ್ತಿದ್ದ ವೃತ್ತಿಯಲ್ಲಿ ಬದಲಾವಣೆಯ ಜತೆಗೆ ಮುಂಬಡ್ತಿಯು ದೊರೆಯುವುದು. ನೂತನ ಸ್ಥಳದಲ್ಲಿ ಕೆಲಸ ಮಾಡುವ ಮುನ್ನ ಕೆಲದಿನ ಮಡದಿ ಮಕ್ಕಳೊಡನೆ ಪ್ರವಾಸ ಮಾಡಿರಿ.
ಧನಸ್ಸು:- ಕೃಷಿಕರಿಗೆ ಉತ್ತಮ ಕಾಲ. ಕೆಲವರಿಗೆ ಸ್ಥಾನ ಪಲ್ಲಟ. ಕೆಲವರು ಮನೆಯನ್ನು ಬದಲಾಯಿಸುವ ಚಿಂತನೆಯಲ್ಲಿರುವರು. ಅವರೆಲ್ಲರ ಬಯಕೆ ಈಡೇರಿಸಿಕೊಳ್ಳಲು ಇಂದು ಸಕಾಲವಾಗಿರುತ್ತದೆ.
ಮಕರ:- ಉನ್ನತ ಸ್ಥಾನದಲ್ಲಿ ಕೆಲಸ ಮಾಡುವ ನೀವು ಕೆಲವು ವೇಳೆ ಘನತೆ, ಗಾಂಭೀರ್ಯವನ್ನು ಪ್ರದರ್ಶಿಸಬೇಕಾಗುವುದು. ಹಾಗಾಗಿ ಸಹೋದ್ಯೋಗಿಗಳ ಜತೆ ಮತ್ತು ನಿಮ್ಮ ಕೈಕೆಳಗಿನವರ ಜತೆ ಸಲುಗೆ ಬೇಡ.
ಕುಂಭ:- ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕೆಲವು ಅನಪೇಕ್ಷಿತ ಘಟನೆಗಳಿಂದ ಮನಸ್ಸಿಗೆ ಕಿರಿಕಿರಿ ಆಗುವುದು. ಗುರುವಿನ ಧ್ಯಾನದಿಂದ ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮೀನ:- ಸರಕಾರಿ ಕೆಲಸದಲ್ಲಿದ್ದವರಿಗೆ ಪದೋನ್ನತಿಯು, ಕೋರ್ಟು ಕಚೇರಿಯ ವ್ಯಾಜ್ಯಗಳಲ್ಲಿ ಯಶಸ್ಸು ನಿಮ್ಮದಾಗುವುದು. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಉಂಟಾಗುವುದು. ಆರ್ಥಿಕ ಸ್ಥಿತಿಯು ಚೇತೋಹಾರಿಯಾಗಿರುತ್ತದೆ.