ಆ್ಯಪ್ನಗರ

ದಿನ ಭವಿಷ್ಯ 9 ಏಪ್ರಿಲ್‌ 2018

ಧನಸ್ಸು:- ಇಟ್ಟ ಗುರಿ ತಲುಪುವಲ್ಲಿ ಯಶಸ್ಸು ಹೊಂದುವಿರಿ. ಗುರುವಿನ ಅನುಗ್ರಹದಿಂದ ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಿರಿ. ಬಡವರಿಗೆ ಆಹಾರ ನೀಡಿ ಮತ್ತು ಆಂಜನೇಯ ಸ್ತೋತ್ರ ಪಠಿಸಿ.

Vijaya Karnataka 9 Apr 2018, 6:47 am
ಮೇಷ:- ನಿಮ್ಮ ನಡೆ ನುಡಿಯನ್ನು ಪರೀಕ್ಷಿಸಿ ಮುಂದಿನ ವಿಚಾರ ನಿಷ್ಕರ್ಶಿಸಲು ಜನರು ಕಾದಿದ್ದಾರೆ. ನಿಮ್ಮ ತಾಳ್ಮೆಯ ಜೀವನ ಇತರರಿಗೆ ಮಾದರಿಯಾಗಲಿದೆ. ರಾಜಕೀಯ ನೇತಾರರಿಗೆ ಹರ್ಷ ತಂದುಕೊಡುವ ದಿನವಾಗಿದೆ.
Vijaya Karnataka Web today astrology in kannada 09 04 2018
ದಿನ ಭವಿಷ್ಯ 9 ಏಪ್ರಿಲ್‌ 2018


ವೃಷಭ:- ಹಿಡಿದ ಕೆಲಸವನ್ನು ಶತಾಯ, ಗತಾಯ ಪೂರೈಸಬೇಕೆಂಬ ತುಡಿತಕ್ಕೆ ಭಗವಂತನು ಸಹಾಯ ಮಾಡುವನು. ಇದರ ಸಾಫಲ್ಯತೆಗಾಗಿ ಹೊಸದಾದ ದಾರಿಗಳು ಗೋಚರಿಸುವವು. ಆದರೆ ಇದಕ್ಕೂ ಮುನ್ನ ಸಂಗಾತಿಯ ಒಪ್ಪಿಗೆ ಪಡೆಯಿರಿ.

ಮಿಥುನ:- ಅತಿ ಬುದ್ಧಿಚಾತುರ‍್ಯವುಳ್ಳವರಾದ ನೀವು ವಿನಾಕಾರಣ ಇನ್ನೊಬ್ಬರ ವಿಚಾರದಲ್ಲಿ ತಲೆ ಹಾಕಿ ಅವಮಾನಕ್ಕೆ ಒಳಗಾಗುವಿರಿ. ಕೆಲವರು ಇದನ್ನೆ ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಆದರೆ ಗುರುವಿನ ಕೃಪಾಶೀರ್ವಾದ ಇರುವುದರಿಂದ ತೊಂದರೆಯಿಲ್ಲ.

ಕಟಕ:- ವಿವಿಧ ತರಹದ ಜನರು ನಿಮ್ಮನ್ನು ಭೇಟಿ ಆಗಲಿದ್ದಾರೆ. ಅವರು ನೀವು ಮಾಡುವ ಕೆಲಸದಲ್ಲಿನ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸುವರು. ಇದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿಯತ್ತ ಸಾಗುವುದು. ಹಣಕಾಸು ಕೂಡಾ ಉತ್ತಮವಾಗಲಿದೆ.

ಸಿಂಹ:- ಯಾವುದೇ ವಿಚಾರದಲ್ಲೂ ಸೂಕ್ಷ ್ಮ ಒತ್ತಡಗಳನ್ನು ಕಾಣುವಿರಿ. ಆದರೆ ಅದನ್ನು ಅರ್ಧದಲ್ಲಿಯೇ ನಿಲ್ಲಿಸದಿರಿ. ಕೌಟುಂಬಿಕ ಜೀವನದಲ್ಲಿ ಮಡದಿ ಮಕ್ಕಳು ನಿಮಗೆ ಸಹಾಯ ಮಾಡುವರು. ನೀವು ಬಯಸಿದ ಕಾರ್ಯಗಳು ಶೀಘ್ರದಲ್ಲಿಯೇ ಕೈಗೂಡುವವು.

ಕನ್ಯಾ:- ಮಹತ್ತರ ಯೋಜನೆಗಳಿಗೆ ಅಲ್ಪ ವಿಘ್ನಗಳು ತಲೆದೋರಿದರೂ ಭಗವಂತನ ಕೃಪೆಯಿಂದ ಆ ವಿಘ್ನಗಳನ್ನು ದಾಟುವಿರಿ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಆರ್ಥಿಕ ಸ್ಥಿತಿಯು ಉತ್ತಮಗೊಳ್ಳುವುದು. ಬಂಧುಗಳಿಂದ ಪ್ರಶಂಸೆಯನ್ನು ಪಡೆಯುವಿರಿ.

ತುಲಾ:- ಕೆಲಸದ ಒತ್ತಡವು ನಿಮ್ಮ ಮಾನಸಿಕ ನೆಮ್ಮದಿಯನ್ನು ಕೆಡಿಸುವುದು. ಎಲ್ಲಾ ಬಿಟ್ಟು ಎಲ್ಲಾದರೂ ಹೋಗಿ ಬಿಡಬೇಕೆಂದು ಅನಿಸುವುದು. ಆದರೆ ಎಲ್ಲೇ ಹೋದರು ನೀವು ಜವಾಬ್ದಾರಿಯ ಸ್ಥಾನವನ್ನು ಬಿಡಲು ಆಗುವುದಿಲ್ಲ. ತಾಳ್ಮೆಯಿಂದ ಎದುರಿಸಿ ಒಳಿತಾಗುವುದು.

ವೃಶ್ಚಿಕ:- ಕಬ್ಬಿಣದ ವಸ್ತುಗಳ ಮಾರಾಟಗಾರರಿಗೆ ಅನುಕೂಲವಾಗುವುದು. ಕಬ್ಬಿಣ ವಸ್ತು ಎಂದು ತಾತ್ಸಾರ ಮಾಡಬಾರದು. ಶನಿ ದೇವರ ಅನುಗ್ರಹ ಪಡೆಯಲು ಕಬ್ಬಿಣ ಇಲ್ಲವೆ ಎಳ್ಳನ್ನು ದಾನ ಮಾಡುವುದು ಒಳಿತು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು:- ಇಟ್ಟ ಗುರಿ ತಲುಪುವಲ್ಲಿ ಯಶಸ್ಸು ಹೊಂದುವಿರಿ. ಗುರುವಿನ ಅನುಗ್ರಹದಿಂದ ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಿರಿ. ಬಡವರಿಗೆ ಆಹಾರ ನೀಡಿ ಮತ್ತು ಆಂಜನೇಯ ಸ್ತೋತ್ರ ಪಠಿಸಿ.

ಮಕರ:- ದಶಮ ಸ್ಥಾನದ ಗುರುವು ಉದ್ಯೋಗದಲ್ಲಿ ಬದಲಾವಣೆಯನ್ನು ತರುವ ಸಾಧ್ಯತೆ ಇರುತ್ತದೆ. ಕೆಲವರು ನೂತನ ಮನೆಯ ಕಟ್ಟಡದ ಕೆಲಸವನ್ನು ಆರಂಭಿಸುವರು. ಕೆಲವರಿಗೆ ನೂತನ ಉದ್ಯೋಗವು ದೊರೆಯುವ ಸಾಧ್ಯತೆ ಇರುತ್ತದೆ.

ಕುಂಭ:- ನಿಮ್ಮ ಯಶಸ್ಸಿನ ಹಾದಿಯು ಸುಗಮವಾಗಲಿದೆ. ಇದುವರೆಗೂ ಪಟ್ಟ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ವಿವಿಧ ಮೂಲಗಳಿಂದ ಹಣಕಾಸು ಬರುವುದು. ನೂತನ ಗೆಳೆಯರು ನಿಮ್ಮ ಸ್ನೇಹ ಹಸ್ತವನ್ನು ಬಯಸಿ ಬರುವರು.

ಮೀನ:- ಮನೋವೇಗದಲ್ಲಿ ಎಲ್ಲವನ್ನು ದಿಢೀರನೆ ಮಾಡಿ ಮುಗಿಸಬೇಕೆಂಬ ತರಾತುರಿಯು ಉತ್ತಮವಲ್ಲ. ಸಾವಧಾನದಿಂದ ಎರಡೆರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ನಿಮ್ಮ ಹೃದಯ ವೈಶಾಲ್ಯಕ್ಕೆ ಯಾವಾಗಲೂ ಬೆಲೆ ಇರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ