ದಿನ ಭವಿಷ್ಯ
ದಿನಾಂಕ: 11-5-2018 ಶುಕ್ರವಾರ
ಮೇಷ:- ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ತಾಯಿ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು ಆಸ್ಪತ್ರೆ ಖರ್ಚು ಬರುವ ಸಾಧ್ಯತೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.
ವೃಷಭ:- ತೀರ ಸಣ್ಣದಾದ ವಿಷಯವೊಂದಕ್ಕೆ ಬಂಧು ಬಳಗದವರ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಬರುತ್ತದೆ. ಹಾಗಾಗಿ ಕ್ಷ ಮಿಸುವ ಗುಣ ಇದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ಮಿಥುನ:- ತೋಟಗಾರಿಕೆ, ಪಶುಪಾಲನೆ ವೃತ್ತಿಯಿಂದ ವಿಶೇಷವಾದ ಅದೃಷ್ಟ ಬರಲಿದೆ. ನಿಮ್ಮ ಮನೆಗೆ ಹಿತೈಷಿಗಳಾಗಿದ್ದ ಹಿರಿಯರ ದರ್ಶನ ಭಾಗ್ಯ ದೊರೆಯುವುದು. ಅವರ ಸಾಂತ್ವನ ನುಡಿಗಳು ನಿಮಗೆ ಚೇತೋಹಾರಿ ಆಗಿರುತ್ತದೆ.
ಕಟಕ:- ಸಾಮಾಜಿಕ ಜೀವನದ ನಾಗಾಲೋಟ ಮತ್ತು ಜನಪರವಾದ ನಿಮ್ಮ ಕಾಳಜಿಯು ನಿಮ್ಮ ಸಮಾಜ ಬಾಂಧವರಿಂದ ಗುರುತಿಸಲ್ಪಡುವುದು. ಅದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು ಅವರು ಆಯೋಜಿಸಿ ನಿಮ್ಮನ್ನು ಆಮಂತ್ರಿಸುವ ಸಾಧ್ಯತೆ ಇರುತ್ತದೆ.
ಸಿಂಹ:- ಸಾವಿರ ಉಳಿಪೆಟ್ಟಿನಿಂದ ಒಂದು ಸುಂದರ ಮೂರ್ತಿಯ ನಿರ್ಮಾಣವಾಗುವಂತೆ ಕಷ್ಟವು ನಿಮ್ಮನ್ನು ಅಂತರ್ಮುಖಿಯನ್ನಾಗಿ ಮಾಡುವುದಲ್ಲದೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗುವುದು.
ಕನ್ಯಾ:- ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.
ತುಲಾ:- ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.
ವೃಶ್ಚಿಕ:- ಕಷ್ಟದ ದಿನಗಳು ಇನ್ನು ಮುಗಿದಿಲ್ಲ. ಅದಕ್ಕಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ.
ಧನಸ್ಸು:- ಗುರು, ಹಿರಿಯರ ಬಗ್ಗೆ ವಿಶೇಷವಾದ ಗೌರವ ಮತ್ತು ವಿನಯವನ್ನು ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಈ ದಿನ ಸಂತೋಷ ಸಂಭ್ರಮದಿಂದ ಕಳೆಯುವಿರಿ.
ಮಕರ:- ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ:- ನಿಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟಪಡುತ್ತಾರೆ. ನಿಮಗೆ ಸಾಮಾಜಿಕ ನಾಯಕತ್ವ ಲಭ್ಯವಾಗಲಿದೆ. ಇದರೊಟ್ಟಿಗೆ ನಿಮ್ಮ ಜವಾಬ್ದಾರಿಯೂ ಹೆಚ್ಚುವುದು. ಎಲ್ಲವೂ ಗುರುವಿನ ಮಹಿಮೆ ಎಂದು ತಿಳಿಯಿರಿ.
ಮೀನ:- ನಿಮ್ಮ ಜರೂರಾದ ಪ್ರವಾಸ ಕಾರ್ಯಕ್ರಮಗಳು ಅನಿರೀಕ್ಷಿತವಾಗಿ ಮುಂದೂಡಲ್ಪಡುವುದು. ಹಾಗಾಗಿ ನಿಮಗೆ ಸ್ವಲ್ಪ ನಿರಾಸೆ ಉಂಟಾಗುವುದು. ಆದರೆ ಇದಕ್ಕೆ ಬೇಸರಿಸುವ ಅಗತ್ಯವಿಲ್ಲ. ಆದದ್ದೆಲ್ಲಾ ಒಳಿತೇ ಆಯಿತು ಎನ್ನಿ.
ದಿನಾಂಕ: 11-5-2018 ಶುಕ್ರವಾರ
ಮೇಷ:- ಮಕ್ಕಳ ಬಗ್ಗೆ ವಿಶೇಷವಾದ ಕಾಳಜಿ ವಹಿಸಿ. ತಾಯಿ ಸಂಬಂಧದವರಿಗೆ ಅನಾರೋಗ್ಯ ಕಾಡಲಿದ್ದು ಆಸ್ಪತ್ರೆ ಖರ್ಚು ಬರುವ ಸಾಧ್ಯತೆ. ನಿಮ್ಮ ಬಂಧುಗಳು ಅನಿರೀಕ್ಷಿತವಾಗಿ ನಿಮಗೆ ಸಹಾಯ ಮಾಡುವರು.
ವೃಷಭ:- ತೀರ ಸಣ್ಣದಾದ ವಿಷಯವೊಂದಕ್ಕೆ ಬಂಧು ಬಳಗದವರ ವಿರೋಧ ಕಟ್ಟಿಕೊಳ್ಳುವ ಸಂದರ್ಭ ಬರುತ್ತದೆ. ಹಾಗಾಗಿ ಕ್ಷ ಮಿಸುವ ಗುಣ ಇದ್ದಲ್ಲಿ ನೀವು ಅತಿ ಎತ್ತರಕ್ಕೆ ಏರಬಲ್ಲಿರಿ. ಮನೋನಿಯಾಮಕ ರುದ್ರದೇವರನ್ನು ಭಜಿಸಿ.
ಮಿಥುನ:- ತೋಟಗಾರಿಕೆ, ಪಶುಪಾಲನೆ ವೃತ್ತಿಯಿಂದ ವಿಶೇಷವಾದ ಅದೃಷ್ಟ ಬರಲಿದೆ. ನಿಮ್ಮ ಮನೆಗೆ ಹಿತೈಷಿಗಳಾಗಿದ್ದ ಹಿರಿಯರ ದರ್ಶನ ಭಾಗ್ಯ ದೊರೆಯುವುದು. ಅವರ ಸಾಂತ್ವನ ನುಡಿಗಳು ನಿಮಗೆ ಚೇತೋಹಾರಿ ಆಗಿರುತ್ತದೆ.
ಕಟಕ:- ಸಾಮಾಜಿಕ ಜೀವನದ ನಾಗಾಲೋಟ ಮತ್ತು ಜನಪರವಾದ ನಿಮ್ಮ ಕಾಳಜಿಯು ನಿಮ್ಮ ಸಮಾಜ ಬಾಂಧವರಿಂದ ಗುರುತಿಸಲ್ಪಡುವುದು. ಅದಕ್ಕಾಗಿ ಸನ್ಮಾನ ಕಾರ್ಯಕ್ರಮವನ್ನು ಅವರು ಆಯೋಜಿಸಿ ನಿಮ್ಮನ್ನು ಆಮಂತ್ರಿಸುವ ಸಾಧ್ಯತೆ ಇರುತ್ತದೆ.
ಸಿಂಹ:- ಸಾವಿರ ಉಳಿಪೆಟ್ಟಿನಿಂದ ಒಂದು ಸುಂದರ ಮೂರ್ತಿಯ ನಿರ್ಮಾಣವಾಗುವಂತೆ ಕಷ್ಟವು ನಿಮ್ಮನ್ನು ಅಂತರ್ಮುಖಿಯನ್ನಾಗಿ ಮಾಡುವುದಲ್ಲದೆ ಮನಸ್ಸಿನ ಕಲ್ಮಶಗಳನ್ನು ತೊಡೆದು ಹಾಕಲು ಸಹಕಾರಿಯಾಗುವುದು.
ಕನ್ಯಾ:- ಬಹುವಿಧವಾದ ಪ್ರಶಂಸೆಗಳನ್ನು ನೀವು ಪಡೆಯಬಲ್ಲಿರಿ ಮತ್ತು ವಿಶೇಷವಾದ ಪುರಸ್ಕಾರಕ್ಕೆ ನಿಮ್ಮನ್ನು ಜನರು ಆಯ್ಕೆ ಮಾಡುವರು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿದ್ದು ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು.
ತುಲಾ:- ವಿಶೇಷವಾಗಿ ನಿಮಗೆ ತಿಳಿಯಲಾಗದಂತಹ ಅನಿವಾರ್ಯ ಖರ್ಚಿನ ಪ್ರಸಂಗಗಳು ಎದುರಾಗುವುದು. ಅತ್ಯಂತ ಆಪ್ತವಾದ ಗೆಳೆಯ ನಿಮಗೆ ಹಣಕಾಸಿನ ನೆರವನ್ನು ನೀಡುವನು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ.
ವೃಶ್ಚಿಕ:- ಕಷ್ಟದ ದಿನಗಳು ಇನ್ನು ಮುಗಿದಿಲ್ಲ. ಅದಕ್ಕಾಗಿ ನಿರಾಶರಾಗುವುದು ಬೇಡ. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲ. ಕುಲದೇವತಾ ಪ್ರಾರ್ಥನೆ ಮಾಡಿ. ಭಗವಂತ ಕೊಟ್ಟಿದ್ದರಲ್ಲಿಯೇ ಅಲ್ಪ ದಾನವನ್ನು ಮಾಡಿ.
ಧನಸ್ಸು:- ಗುರು, ಹಿರಿಯರ ಬಗ್ಗೆ ವಿಶೇಷವಾದ ಗೌರವ ಮತ್ತು ವಿನಯವನ್ನು ತೋರುತ್ತ ಬಂದಿರುವ ನಿಮಗೆ ಹರ್ಷದ ಸುದ್ದಿ ಕಾದಿದೆ. ಈ ದಿನ ಸಂತೋಷ ಸಂಭ್ರಮದಿಂದ ಕಳೆಯುವಿರಿ.
ಮಕರ:- ನಿಮ್ಮದು ಸದಾ ಸತ್ಯದ ಪರವಾದ ಹೋರಾಟ. ಹಾಗಾಗಿ ಸಮಾಜದಲ್ಲಿ ಕೆಲವರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುವುದು. ಸತ್ಯದ ಕೆಲಸಗಳಿಗಾಗಿ ನೀವು ಗೌರವಿಸಲ್ಪಡುವಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಕುಂಭ:- ನಿಮ್ಮ ಅನುಪಮವಾದ ಮಾನವೀಯತೆಯನ್ನು ಜನರು ಇಷ್ಟಪಡುತ್ತಾರೆ. ನಿಮಗೆ ಸಾಮಾಜಿಕ ನಾಯಕತ್ವ ಲಭ್ಯವಾಗಲಿದೆ. ಇದರೊಟ್ಟಿಗೆ ನಿಮ್ಮ ಜವಾಬ್ದಾರಿಯೂ ಹೆಚ್ಚುವುದು. ಎಲ್ಲವೂ ಗುರುವಿನ ಮಹಿಮೆ ಎಂದು ತಿಳಿಯಿರಿ.
ಮೀನ:- ನಿಮ್ಮ ಜರೂರಾದ ಪ್ರವಾಸ ಕಾರ್ಯಕ್ರಮಗಳು ಅನಿರೀಕ್ಷಿತವಾಗಿ ಮುಂದೂಡಲ್ಪಡುವುದು. ಹಾಗಾಗಿ ನಿಮಗೆ ಸ್ವಲ್ಪ ನಿರಾಸೆ ಉಂಟಾಗುವುದು. ಆದರೆ ಇದಕ್ಕೆ ಬೇಸರಿಸುವ ಅಗತ್ಯವಿಲ್ಲ. ಆದದ್ದೆಲ್ಲಾ ಒಳಿತೇ ಆಯಿತು ಎನ್ನಿ.