ಆ್ಯಪ್ನಗರ

Nithya Bhavishya: ಧನುಸ್ಸು ರಾಶಿಯವರಿಗೆ ಆರಂಭಿಸಿದ ಕಾರ್ಯಗಳು ಕೈಗೂಡುವವು

ಕನ್ಯಾ ರಾಶಿಯವರೆ ಸ್ಪಷ್ಟ ಕಲ್ಪನೆಗಳೊಂದಿಗೆ ಹೆಜ್ಜೆ ಇರಿಸಿ. ಮನದ ಸಂಕಲ್ಪಗಳು ಬೇಗನೆ ಈಡೇರುವವು. ನಿಮ್ಮ ವಿಚಾರಧಾರೆಗಳಿಗೆ ಸಮಾಜದಲ್ಲಿ ಬೆಲೆ ಬರುವುದು ಮತ್ತು ಸಂಘ ಸಂಸ್ಥೆಗಳಲ್ಲಿ ನಿಮ್ಮ ಮಾತೇ ಅಂತಿಮವಾಗುವುದು.

Vijaya Karnataka 12 Jun 2019, 7:38 am
ಮೇಷ:- ಮಾತಿನ ಮಂಟಪ ಕಟ್ಟಲು ಹೋಗದಿರಿ. ಹಾಗೆಯೇ ಕಟ್ಟುವವರನ್ನು ನಂಬಲೂ ಬೇಡಿ. ಮನೆಯಲ್ಲಿನ ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಸಾಧ್ಯವಾದರೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ವೃಷಭ:- ವೃಷಭ ವಾಹನನಾದ ಪರಶಿವನನ್ನು ಭಕ್ತಿಯಿಂದ ಆರಾಧಿಸಿ. ಇದರಿಂದ ವಿರೋಧಿಗಳ ತೊಂದರೆ ಇರಲಾರದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. ಸಂಗಾತಿಯೊಂದಿಗೆ ಗಹನವಾದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವಿರಿ.

ಮಿಥುನ:- ಹೂವುಗಳನ್ನು ಕೀಳುವ ಧಾವಂತದಲ್ಲಿ ಅದರ ಮುಳ್ಳು ಚುಚ್ಚುವ ಸಂಭವವಿರುವಂತೆ ಒಳ್ಳೆಯ ಕೆಲಸಗಳನ್ನು ಮಾಡಲು ಹೊರಟ ನಿಮಗೆ ವಿರೋಧಿಗಳ ಟೀಕೆ ಟಿಪ್ಪಣಿಗಳು ಮುಳ್ಳಿನಂತೆ ನಿಮ್ಮನ್ನು ಚುಚ್ಚುವ ಸಾಧ್ಯತೆ ಇದೆ.

ಕಟಕ:- ಸಂಭ್ರಮಾಚರಣೆ ಇರದೆ ಸರಳವಾಗಿ ಯಶಸ್ಸು ಆಚರಿಸಿ. ಇದರಿಂದ ಇನ್ನಷ್ಟು ಗಟ್ಟಿ ಆಗುವಿರಿ. ಕೆಲವರಿಗೆ ದೂರದ ಪ್ರವಾಸದ ಬಗ್ಗೆ ಸೂಚನೆಗಳು ಬರುವ ಸಾಧ್ಯತೆ ಇದೆ. ಕುಲದೇವರ ಪ್ರಾರ್ಥನೆ ಮಾಡಿ.

ಸಿಂಹ:- ಬೆನ್ನ ಹಿಂದಿನ ಷಡ್ಯಂತ್ರಗಳ ಬಗೆಗೂ ಲೆಕ್ಕ ಇಟ್ಟುಕೊಳ್ಳಿ. ವೇಳೆ ಬಂದಾಗ ಸೂಕ್ತ ಉತ್ತರ ನೀಡಲು ಮುಂದಾಗುವಿರಿ. ನಿಮ್ಮ ಆತ್ಮೀಯ ಗೆಳೆಯರು ಈ ವಿಷಯದಲ್ಲಿ ಸಹಾಯ ಮಾಡುವರು. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಕನ್ಯಾ:- ಸ್ಪಷ್ಟ ಕಲ್ಪನೆಗಳೊಂದಿಗೆ ಹೆಜ್ಜೆ ಇರಿಸಿ. ಮನದ ಸಂಕಲ್ಪಗಳು ಬೇಗನೆ ಈಡೇರುವವು. ನಿಮ್ಮ ವಿಚಾರಧಾರೆಗಳಿಗೆ ಸಮಾಜದಲ್ಲಿ ಬೆಲೆ ಬರುವುದು ಮತ್ತು ಸಂಘ ಸಂಸ್ಥೆಗಳಲ್ಲಿ ನಿಮ್ಮ ಮಾತೇ ಅಂತಿಮವಾಗುವುದು.

ತುಲಾ:- ಎಷ್ಟೇ ಬಾರಿ ಕೈ ಸುಟ್ಟುಕೊಂಡರೂ ಮತ್ತೆ ಮತ್ತೆ ಅದೇ ತಪ್ಪು ಮಾಡುವಂತಹ ನಿಮ್ಮ ಬುದ್ಧಿಗೆ ಏನು ಹೇಳಬೇಕು. ಎಲ್ಲವೂ ದಿಢೀರನೆ ಆಗಬೇಕೆಂದರೆ ಜೀವನದಲ್ಲಿ ಮುಗ್ಗರಿಸಿ ಬೀಳುವಿರಿ. ಕೂತು ಮಲಗು ಎಂದರು ಹಿರಿಯರು. ಯಾವುದಕ್ಕೂ ಆತುರ ತೋರದಿರುವುದು ಒಳಿತು.

ವೃಶ್ಚಿಕ:- ತೀವ್ರ ನಿರಾಸೆ ಎದುರಾಗುವ ಸಂದರ್ಭವಿದೆ. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಹೋರಾಟ ಮಾಡಿದಲ್ಲಿ ಯಶಸ್ಸು ನಿಮ್ಮದಾಗುವುದು. ನಿಮ್ಮ ಮಾತಿನಲ್ಲಿ ಸೌಜನ್ಯ ತುಂಬಿರಲಿ.

ಧನುಸ್ಸು:- ಭಗವಂತನ ಸ್ಮರಣೆಯಿಂದ ಆರಂಭಿಸಿದ ಕಾರ್ಯಗಳು ಕೈಗೂಡುವವು. ಅದಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡಬೇಕಾಗುವುದು. ಸಂಗಾತಿಯ ಸೂಕ್ತ ಸಲಹೆ ಸ್ವೀಕರಿಸಿದಲ್ಲಿ ಒಳಿತಾಗುವುದು.

ಮಕರ:- ಕೆಸರಿನಲ್ಲಿ ಹೂತುಹೋದ ಕಂಬದಂತೆ ಆಕಡೆ ಈಕಡೆ ಹೊರಳಾಡುವಂತಹ ಸಂದರ್ಭದಿಂದ ತಪ್ಪಿಸಿಕೊಳ್ಳಿ. ಮನೋಜಯವಂತನಾದ ಶ್ರೀ ಆಂಜನೇಯ ಸ್ವಾಮಿಯನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿ. ಸಂಕಷ್ಟದಿಂದ ಪಾರಾಗುವಿರಿ.

ಕುಂಭ:- ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಕೆಲವರಿಗೆ ಸ್ಥಾನ ಬದಲಾವಣೆ ಆದರೆ ಕೆಲವರಿಗೆ ಮುಂಬಡ್ತಿ ದೊರೆಯುವುದು. ತಡೆಹಿಡಿಯಲ್ಪಟ್ಟ ಸಂಬಳ ಬಿಡುಗಡೆ ಆಗುವುದರಿಂದ ಮನಸ್ಸಿಗೆ ಸಮಾಧಾನವಾಗುವುದು.

ಮೀನ:- ವಾಹನದಲ್ಲಿ ಸಂಚರಿಸುವಾಗ ದುರ್ಗಾದೇವಿಯನ್ನು ಸ್ಮರಿಸಿ. ಮನೆಯ ಹಿರಿಯರ ಆರೋಗ್ಯದ ಸಲುವಾಗಿ ಹಣ ಖರ್ಚಾಗುವ ಸಾಧ್ಯತೆ ಇದೆ. ಗುರುವಿನ ಅನುಗ್ರಹವಿರುವುದರಿಂದ ಹೆಚ್ಚಿನ ತೊಂದರೆಯಿರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ