ಆ್ಯಪ್ನಗರ

Nithya Bhavishya: ವೃಷಭ ರಾಶಿಯವರೇ ಸದಾ ನಕಾರಾತ್ಮಕ ಚಿಂತನೆಯಿಂದ ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳದಿರಿ

ತುಲಾ ರಾಶಿಯವರೇ ಪರರು ನಿಮ್ಮ ಮೇಲೆ ಅಪನಂಬಿಕೆ ಇಟ್ಟಿರುವ ವಿಚಾರ ನಿಮಗೆ ತಿಳಿದೇ ಇದೆ. ಆದರೆ ಅವರ ಅಪನಂಬಿಕೆಯು ದೂರವಾಗುವಂತಹ ಒಂದು ಪ್ರಮುಖ ಘಟನೆಯು ಜರುಗುವುದು. ಇದರಿಂದ ಒಳಿತಾಗುವುದು.

Vijaya Karnataka Web 12 Nov 2019, 9:56 am
ಮೇಷ:- ನಿಮ್ಮ ಬಳಿ ಹಲವು ವಿಚಾರಗಳನ್ನು ತಿಳಿಯಲು ಬರುವ ಜನರು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ನೆನೆದು ಅವರಿಗೆ ಸೂಕ್ತ ಉತ್ತರವನ್ನು ಪರಿಹಾರ ರೂಪದಲ್ಲಿ ನೀಡಿ. ಇದರಿಂದ ಜನರು ಸಂತುಷ್ಟರಾಗುವರು.
Vijaya Karnataka Web dinabhavishya vk 2


ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್‌ ತಿಂಗಳ ಭವಿಷ್ಯ ನೋಡಿ

ವೃಷಭ:- ಸದಾ ನಕಾರಾತ್ಮಕ ಚಿಂತನೆಯಿಂದ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಮನೆಯ ಇತರರ ಸಮಸ್ಯೆಗೂ ಕಾರಣರಾಗುವಿರಿ. ಆದಷ್ಟು ಒಳಿತನ್ನು ಚಿಂತಿಸಿ ಒಳಿತಾಗುವುದು. ಆಶಾವಾದಿಗೆ ಜೀವನ ನಿರಾಶಾವಾದಿಗೆ ಅಲ್ಲಎಂಬುದನ್ನು ತಿಳಿಯಿರಿ.

ಮಿಥುನ:- ದೈವಬಲ ಕಡಿಮೆ ಆಗಿದೆ. ನಿಮ್ಮ ಮುಂದೆ ಹಲವು ದಾರಿಗಳು ಗೋಚರಿಸುತ್ತಿವೆ. ಯಾವ ಮಾರ್ಗದಲ್ಲಿ ಹೋದರೆ ಸೂಕ್ತ ಎಂಬ ಗೊಂದಲ ಉಂಟಾಗುವುದು. ಹಾಗಾಗಿ ಒಂದೇ ಮನಸ್ಸಿನಿಂದ ಕುಲದೇವರನ್ನು ಸ್ಮರಣೆ ಮಾಡಿ. ಮಾರ್ಗ ತೋರುವುದು.

ಕಟಕ:- ಏಕಕಾಲದಲ್ಲಿ ಎರಡೂ ಕಡೆಯಿಂದ ಉತ್ತಮ ಅವಕಾಶಗಳು ಬರಲಿದ್ದು 2 ಅವಕಾಶಗಳಲ್ಲಿಒಂದನ್ನು ಶುದ್ಧ ಮನಸ್ಸಿನಿಂದ ಆಯ್ದುಕೊಳ್ಳಿ. ಎರಡು ದೋಣಿಗಳಲ್ಲಿ ಕಾಲಿಟ್ಟು ಪ್ರಯಾಣ ಬೆಳೆಸಿದರೆ ಇಚ್ಛಿತ ಗುರಿಯನ್ನು ತಲುಪಲು ಆಗುವುದಿಲ್ಲ.

ಗುರು ಸಂಚಾರದಿಂದ ಕಟಕ ರಾಶಿಯವರಿಗೆ ಯಾವ ಶುಭ- ಅಶುಭ ಫಲಗಳುಂಟಾಗುವುದು ಗೊತ್ತಾ?

ಸಿಂಹ:- ಸದ್ಯದ ಪರಿಸ್ಥಿತಿಯಲ್ಲಿ ಎಲ್ಲವೂ ಕನ್ನಡಿಯ ಗಂಟಿನಂತೆ ತೋರುತ್ತಿದ್ದರೂ ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಹಿರಿಯರ ಅಶೀರ್ವಾದ ಪಡೆಯಿರಿ. ಅವರ ಆಶೀರ್ವಾದದಿಂದ ಸ್ವಲ್ಪ ಉತ್ತಮ ಫಲವನ್ನು ಕಾಣುವಿರಿ.

ಕನ್ಯಾ:- ನಿಮ್ಮಿಂದ ದೂರವಾಗಿದ್ದ ವ್ಯಕ್ತಿಗಳೇ ನಿಮ್ಮ ಬಳಿ ಪುನಃ ಬಂದು ಸ್ನೇಹದ ಹಸ್ತವನ್ನು ಚಾಚುವರು. ಅವರ ಅಂತರಂಗದ ಭಾವನೆಗಳು ಶುದ್ಧವೆಂದು ಕಂಡುಬಂದಲ್ಲಿ ಅವರ ಸಖ್ಯವನ್ನು ಬೆಳೆಸಿ. ಹಣಕಾಸು ಸ್ಥಿತಿ ಉತ್ತಮವಾಗುವುದು.

ತುಲಾ:- ಪರರು ನಿಮ್ಮ ಮೇಲೆ ಅಪನಂಬಿಕೆ ಇಟ್ಟಿರುವ ವಿಚಾರ ನಿಮಗೆ ತಿಳಿದೇ ಇದೆ. ಆದರೆ ಅವರ ಅಪನಂಬಿಕೆಯು ದೂರವಾಗುವಂತಹ ಒಂದು ಪ್ರಮುಖ ಘಟನೆಯು ಜರುಗುವುದು. ಇದರಿಂದ ಒಳಿತಾಗುವುದು.

ವೃಶ್ಚಿಕ:- ಕೆಲವೊಂದು ವಿಚಾರ ವ್ಯವಹಾರಗಳಲ್ಲಿ ನೇರಾ ನೇರ ಮುಖಕೊಟ್ಟು ಮಾತನಾಡುವುದು ಒಳ್ಳೆಯದು. ಇದರಿಂದ ನಿಮ್ಮ ಬಗ್ಗೆ ಹೆಚ್ಚಿನ ಗೌರವ ಮೂಡುವುದು. ವ್ಯಾಪಾರ, ವ್ಯವಹಾರದಲ್ಲಿಅಧಿಕ ಲಾಭ ಉಂಟಾಗುವುದು.

ಗುರು ಗೋಚಾರ ಫಲ: ಕುಂಭ ರಾಶಿಯ ಮೇಲೆ ಉಂಟಾಗುವ ಪರಿಣಾಮಗಳೇನು ಗೊತ್ತಾ?

ಧನುಸ್ಸು:- 'ಮಾತು ಬೆಳ್ಳಿ ಮೌನ ಬಂಗಾರ' ಕೆಲವೊಮ್ಮೆ ತಿಳಿಯದೇ ಅನರ್ಥ ನುಡಿಯುವ ಸಾಧ್ಯತೆ ಇದೆ. ಇದರಿಂದ ಸುತ್ತಲಿನ ಪರಿಸರದ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಮೌನ ವಹಿಸುವುದು ಒಳ್ಳೆಯದು.

ಮಕರ:- ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಎಚ್ಚರ ಇರಬೇಕು. ಅಗತ್ಯಕ್ಕಿಂತಲೂ ಹೆಚ್ಚು ಖರ್ಚು ಮಾಡುವ ಸಂದರ್ಭ ಎದುರಾಗುವುದು. ಪ್ರಯಾಣದಲ್ಲಿ ತುಸು ಎಚ್ಚರಿಕೆ ಇರಲಿ. ಮನದಲ್ಲಿ ದುರ್ಗಾ ಜಪವನ್ನು ಮಾಡಿ.

ಕುಂಭ:- ಹಲವು ವಿಚಾರಗಳಲ್ಲಿ ಹೆಚ್ಚಿನ ಒತ್ತಡವನ್ನು ಎದುರಿಸಬೇಕಾಗುವುದು. ಆದರೂ ಕರ್ತವ್ಯದಲ್ಲಿನ ನಿಮ್ಮ ನಿಷ್ಠೆಯು ಸಾಮಾಜಿಕವಾಗಿ ಗೌರವಿಸಲ್ಪಡುವುದು. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.

ಮೀನ:- ವಿಶೇಷವಾಗಿ ಅಲೆದಾಡುವ ಶ್ರಮವೇ ಜಾಸ್ತಿ. ಆದರೂ ನಿರಾಶರಾಗದಿರಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ನಿಮಗೆ ಅನುಕೂಲವಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ