ಆ್ಯಪ್ನಗರ

Nithya Bhavishya: ಸಿಂಹರಾಶಿಯವರೇ ಪರಿಶ್ರಮದಲ್ಲಿ ನಂಬಿಕೆ ಇಡಿ. ಕಿಡಿಗೇಡಿಗಳ ಸಹವಾಸ ಮಾಡಬೇಡಿ.

ಕನ್ಯಾರಾಶಿಯವರೇ ಸಭ್ಯರ ಬಳಿ ಮಾತನಾಡಿ. ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುವ, ಬೆಂಬಲಿಸುವ ಸ್ನೇಹಿತರ ಸಹಕಾರದಿಂದ ಕಾರ್ಯಗಳು ಯಶಸ್ಸಿನತ್ತ ಸಾಗುವುವು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಹೆಚ್ಚಿನ ತೊಂದರೆಯಿಲ್ಲ.

Vijaya Karnataka 13 Sep 2019, 10:17 am
ಮೇಷ:- ಗಟ್ಟಿತನ, ಜಿಗುಟುತನ ನಿಮ್ಮ ದೊಡ್ಡ ಆಸ್ತಿ. ಹಿಡಿದ ಕೆಲಸವನ್ನು ಬಿಡದೆ ಸಾಧಿಸುವ ಸಫಲತೆ ತೋರುವಿರಿ. ಇದಕ್ಕೆ ನಿಮ್ಮ ಸಮಾಜದ ಜನರ ಬೆಂಬಲವೂ ದೊರೆಯುವುದು. ಇದರಿಂದಾಗಿ ಸಾಮಾಜಿಕ ಕ್ಷೇತ್ರದಲ್ಲಿಹೆಸರು ಮಾಡುವಿರಿ.

ವೃಷಭ:- ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಅಭ್ಯಾಸ ರೂಢಿಸಿಕೊಳ್ಳಿ. ಯಾವ ತೊಂದರೆಗಳು ಬಾರದಂತೆ ಶಾಂತಿ ಕಾಣುತ್ತೀರಿ. ಸಂಗಾತಿಯ ಸಕಾಲಿಕ ಬೆಂಬಲದಿಂದ ಮನಸ್ಸಿನಲ್ಲಿಸಂತೋಷದ ಅಲೆಗಳು ಬರುವವು.

ಮಿಥುನ:- ಸಿನಿಮಾ ರಂಗ, ಮಾಡೆಲಿಂಗ್‌, ಕಿರುತೆರೆ ಅಥವಾ ಜಾಹೀರಾತು ವಿಭಾಗದಲ್ಲಿತೊಡಗಿಸಿಕೊಳ್ಳಲು ವಿಶೇಷ ಅವಕಾಶ ಲಭ್ಯವಾಗಲಿದೆ. ಕೆಲವರು ವಿದ್ಯೆಗೆ ಸಂಬಂಧ ಪಟ್ಟಂತೆ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ವಿಷಯವನ್ನು ಆಯ್ಕೆ ಮಾಡಿಕೊಳ್ಳುವರು.

ಕಟಕ:- ಮನೆಯ ಒಳಾಂಗಣ ವಿನ್ಯಾಸಕಾರರಿಗೆ ಹೇರಳ ಅವಕಾಶಗಳು ಬರಲಿವೆ. ಕೆಲವರಿಗೆ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಸಿಗುವುದು. ಸಂಗಾತಿಯೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ನಿಮ್ಮ ಅದೃಷ್ಟ ಬದಲಾಯಿಸಬಹುದು ಗೊತ್ತೇ?

ಸಿಂಹ:- ಯಾರ ಬಳಿಯೂ ಒಣ ಚರ್ಚೆ, ಆವೇಶದ ಮಾತುಗಳು ಮತ್ತು ಕುಚೋದ್ಯದ ಮಾತುಗಳು ಬೇಡ. ಇವು ನಿಮ್ಮ ಘನ ವ್ಯಕ್ತಿತ್ವಕ್ಕೆ ಮಸಿ ಬಳಿಯುವವು. ಪರಿಶ್ರಮದಲ್ಲಿ ನಂಬಿಕೆ ಇಡಿ. ಕಿಡಿಗೇಡಿಗಳ ಸಹವಾಸ ಮಾಡಬೇಡಿ.

ಕನ್ಯಾ:- ಸಭ್ಯರ ಬಳಿ ಮಾತನಾಡಿ. ನಿಮ್ಮ ಮಾತನ್ನು ಅರ್ಥ ಮಾಡಿಕೊಳ್ಳುವ, ಬೆಂಬಲಿಸುವ ಸ್ನೇಹಿತರ ಸಹಕಾರದಿಂದ ಕಾರ್ಯಗಳು ಯಶಸ್ಸಿನತ್ತ ಸಾಗುವುವು. ವಿವಿಧ ಮೂಲಗಳಿಂದ ಹಣಕಾಸು ಬರುವುದರಿಂದ ಹೆಚ್ಚಿನ ತೊಂದರೆಯಿಲ್ಲ.

ತುಲಾ:- ನಿಮಗೆ ಅರಿವು ಇರದಂತೆ ಬಿಕ್ಕಟ್ಟಿನ ಸನ್ನಿವೇಶದಿಂದ ಹೊರಬರುವ ಸಾಧ್ಯತೆಗಳನ್ನು ಅನಿರೀಕ್ಷಿತವಾಗಿ ಪಡೆಯಬಲ್ಲಿರಿ. ಗುರು, ಹಿರಿಯರ ಆಶೀರ್ವಾದದಿಂದ ಒಳಿತಾಗುವುದು. ಸಹೋದರನ ಸಂಗಡ ಸೌಹಾರ್ದಯುತ ಮಾತುಕತೆ ನಡೆಸಿ.

ವೃಶ್ಚಿಕ:- ಅಲ್ಪರ ಸಂಗ ಅಭಿಮಾನ ಭಂಗ ಎಂಬ ಗಾದೆಯ ಮಾತನ್ನು ಕೇಳಿರುತ್ತೀರಿ. ಹಾಗಾಗಿ ಕ್ಷುದ್ರರ ಬಳಿಯಲ್ಲಿಒಡನಾಟ ಮಾಡಬೇಡಿ. ಅದರಲ್ಲೂಹಣಕಾಸಿನ ವಿಷಯದಲ್ಲಿಜಾಗ್ರತೆಯಿಂದ ಇರಿ. ಹನುಮಾನ್‌ ಚಾಲೀಸ್‌ ಪಠಣ ಮಾಡಿ.

ನಿಮ್ಮ ರಾಶಿ ಮೇಲೆ ನಂದಿ ಯೋಗದ ದುಷ್ಪರಿಣಾಮಗಳನ್ನು ತಡೆಯಲು ಪರಿಹಾರಗಳು ಇಲ್ಲಿವೆ ನೋಡಿ !

ಧನುಸ್ಸು:- ಅವಸರದಿಂದ ತುಂಬ ಬೆಲೆ ತೆರುತ್ತಿದ್ದೀರಿ. ನಿಮ್ಮ ರಾಶಿಯಲ್ಲಿಸಂಚರಿಸುವ ಶನಿಯ ಗುಣವನ್ನು ಸ್ವಲ್ಪ ರೂಢಿಸಿಕೊಳ್ಳಿ ಮತ್ತು ಯೋಚಿಸಿ ಕಾರ್ಯ ಪ್ರವೃತ್ತರಾಗಿ. ಮಾಡಿದ ತಪ್ಪನ್ನು ಪುನಃ ಮಾಡದಿರಿ.

ಮಕರ:- ನಿಮ್ಮನ್ನು ಅರಿಯಬೇಕಾದವರು ಅರಿತುಕೊಳ್ಳದೇ ನೋವು ತರುವ ಸಾಧ್ಯತೆ ಅಧಿಕವಾಗಿದೆ. ವಿವೇಕಿಗಳಾದ ನಿಮಗೆ ಇದು ಮುಜುಗರವನ್ನುಂಟು ಮಾಡುವುದು. ವಿಷ್ಣು ಸಹಸ್ರನಾಮದ ಪಾರಾಯಣದಿಂದ ಒಳಿತಾಗುವುದು.

ಕುಂಭ:- ಕಾಣದ ಶಕ್ತಿಯೊಂದು ನಿಮ್ಮನ್ನು ಕಾಪಾಡಲು ಅವಕಾಶ ಪಡೆಯುತ್ತದೆ. ಇಷ್ಟದೇವರನ್ನು ಮರೆಯದೆ ಸ್ತುತಿಸಿ ನಿರಾಳರಾಗಿ. ದಿನದಿಂದ ದಿನಕ್ಕೆ ನಿಮ್ಮ ಕೀರ್ತಿಯ ಶಿಖರ ಬೆಳೆಯುವುದು.

ಮೀನ:- ವಿವಿಧ ಕಾರ್ಯಕ್ರಮ ರೂಪಿಸಿ ಗುರಿ ತಲುಪಲು ಪ್ರಯತ್ನಿಸುವಿರಿ. ಆದರೆ ಅನವಶ್ಯಕ ಸಮಯ ಹಾಳಾಗುವುದು. ಅದಕ್ಕಾಗಿ ಕೆಲದಿನ ಕಾಯುವುದು ಒಳ್ಳೆಯದು. ಆಸ್ತಿಗೆ ಸಂಬಂಧಪಟ್ಟ ವ್ಯಾಜ್ಯ ಮುಂದೂಡಲ್ಪಡುವುದು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ