ಆ್ಯಪ್ನಗರ

Nithya Bhavishya: ತುಲಾ ರಾಶಿಯವರೇ ನಯವಂಚಕರನ್ನು ನಯವಾಗಿಯೇ ನಿಯಂತ್ರಿಸಿ

ಕಟಕ:- ನಿಮ್ಮ ವಿಚಾರದಲ್ಲಿ ನೇರವಾಗಿಯೇ ಕಿರುಕುಳ ಕೊಡುವವರು ಕೆಲ ಜನ ಇರುತ್ತಾರೆ. ಆದರೆ ಗುರುವಿನ ಕೃಪೆ ನಿಮ್ಮ ಮೇಲೆ ಇದೆ. ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಅವರೆಲ್ಲರ ಕಿರುಕುಳ ನಿಮಗೆ ಪುಷ್ಪವೃಷ್ಟಿಯನ್ನು ಮಾಡುವಂತೆ ಆಗುತ್ತದೆ. ಧೈರ್ಯದಿಂದಿರಿ.

Vijaya Karnataka 14 Feb 2019, 5:00 am
ಮೇಷ:- ನಿಮ್ಮ ಯೋಜನೆಗಳನ್ನು ಹಿತಮಿತವಾಗಿ ಹಾಕಿಕೊಳ್ಳಿ. 'ಲಾಭ ಮತ್ತು ನಷ್ಟದ ವಿಚಾರದಲ್ಲಿ' ಸ್ಥಿತಪ್ರಜ್ಞನಾಗಿರು ಎಂದು ಗೀತೆಯು ಬೋಧಿಸುವುದು. ಗುರುವಿನ ಕೃಪೆಯನ್ನು ಹೊಂದುವುದು ಅನಿವಾರ್ಯ. ನವಮ ಭಾಗ್ಯದ ಶನಿ ಪಿತೃ ಆರೋಗ್ಯದಲ್ಲಿ ತೊಂದರೆ ಕೊಡುವ ಸಾಧ್ಯತೆ ಇದೆ.

ವೃಷಭ:- ಅಷ್ಟಮ ಶನಿಯ ಕಾಟವು ನಿಮಗೆ ಸೋಲನ್ನು ಉಂಟು ಮಾಡುವ ಸಾಧ್ಯತೆ ಇದೆ. ನಿರ್ವಿಘ್ನಗಳನ್ನು ತರದಂತೆ ಗಣಪತಿಯನ್ನು ಮತ್ತು ದುರ್ಗೆಯನ್ನು ಆರಾಧಿಸಿ. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತನ್ನು ಕೇಳಿದಲ್ಲಿ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ.

ಮಿಥುನ:- ಬೌದ್ಧಿಕ ಚಾತುರ್ಯ ಪ್ರವೀಣರಾದ ನಿಮಗೆ ಬಾಳಿನಲ್ಲಿ ಸಂತಸದ ಕ್ಷ ಣಗಳನ್ನು ಆಸ್ವಾದಿಸಲು ಸಾಕಷ್ಟು ಸಮಯ ದೊರೆಯುವುದು. ಹಳಿ ತಪ್ಪದ ರೈಲು ಸರಾಗವಾಗಿ ಓಡುತ್ತದೆ. ಆದರೆ ನಾಲಿಗೆ ತಪ್ಪಿ ಮಾತನಾಡಿದಾಗ ಅವಘಡಗಳು ಜಾಸ್ತಿ, ಮಾತಿನಲ್ಲಿ ಮೃದುತ್ವ ಇರಲಿ.

ಕಟಕ:- ನಿಮ್ಮ ವಿಚಾರದಲ್ಲಿ ನೇರವಾಗಿಯೇ ಕಿರುಕುಳ ಕೊಡುವವರು ಕೆಲ ಜನ ಇರುತ್ತಾರೆ. ಆದರೆ ಗುರುವಿನ ಕೃಪೆ ನಿಮ್ಮ ಮೇಲೆ ಇದೆ. ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಅವರೆಲ್ಲರ ಕಿರುಕುಳ ನಿಮಗೆ ಪುಷ್ಪವೃಷ್ಟಿಯನ್ನು ಮಾಡುವಂತೆ ಆಗುತ್ತದೆ. ಧೈರ್ಯದಿಂದಿರಿ.

ಸಿಂಹ:- ಧೈರ್ಯದಿಂದ ಗೆಲ್ಲುವ ಕಾಲ ವಿರೋಧಿಗಳಿಂದಲೇ ಬರುವ ಸಂಭವವಿದೆ. ವ್ಯಯಸ್ಥಾನದ ರಾಹುವಿನ ಪ್ರಭಾವದಿಂದ ಕೆಲಕಾಲ ಊರನ್ನು ಬಿಡಿಸುವ ಸಾಧ್ಯತೆ ಇದೆ. ಆದರೆ ಇದರಿಂದ ನಿಮಗೆ ಲಾಭವೇ ಆಗುವುದು. ದಿವ್ಯವಾದ ಶಕ್ತಿಯ ಸಂಪಾದನೆಗೆ ದಾರಿ ಆಗುವುದು. ಅದರಿಂದ ಮನಸ್ಸು ಪ್ರಫುಲ್ಲವಾಗುವುದು.

ಕನ್ಯಾ:- ಸಾಲದ ಬಾಧೆಯಿಂದ ಮುಕ್ತನಾಗಲು ಹೊಸ ಸಾಲ ಮಾಡುವುದು ತರವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ, ನಿಮ್ಮನ್ನು ಬಾಧಿಸಲು ಹಠ ಹೊತ್ತಿರುವ ಜನರ ವಿರುದ್ಧ ಸಾತ್ವಿಕ ಹೋರಾಟ ಮಾಡಿ. ಕೆಲವೊಂದು ಅಗೋಚರ ಶಕ್ತಿಯು ನೀವು ಗೆಲ್ಲುವಂತೆ ಮಾಡುವುದು. ಭಗವಂತನಿಗೆ ಶರಣು ಹೋಗಿ.

ತುಲಾ:- ನಯವಂಚಕರನ್ನು ನಯವಾಗಿಯೇ ನಿಯಂತ್ರಿಸಿ. ಅನೇಕ ರೀತಿಯ ಒಳಿತುಗಳನ್ನು ಸಾಧಿಸಿಕೊಳ್ಳಲು ಕಾಲ ಪಕ್ವವಾಗಿದೆ. ಎಲ್ಲರೊಂದಿಗೂ ಮುಕ್ತವಾಗಿ ಬೆರೆಯಿರಿ. ಆದರೆ ಅವರು ನಿಮ್ಮ ಹೇಗಲೇರಿ ಕುಳಿತುಕೊಳ್ಳದಂತೆ ನಿಗಾ ವಹಿಸಿ. ನಿಮ್ಮ ಸ್ವಂತ ಶಕ್ತಿಯಿಂದ ಲಾಭವುಂಟಾಗುವುದು.

ವೃಶ್ಚಿಕ:- ಹೊಯ್ದಾಡುವ ಮನಸ್ಸು ಅಪಾಯಕಾರಿ. ಬಹುಮುಖ್ಯವಾದುದನ್ನು ಮಾಡಿ ಮುಗಿಸಬೇಕೆಂಬ ಸಂಕಲ್ಪದೊಂದಿಗೆ ಕೆಲಸ ಆರಂಭಿಸಿ. ಆಗ ನಿಮ್ಮ ಕಾರ್ಯಗಳಲ್ಲಿ ಜಯ ಹೊಂದಲು ಸಾಧ್ಯವಾಗುವುದು. ಬಹು ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ವಿಳಂಬವಾದರೂ ಕಾರ್ಯಸಿದ್ಧಿ ಆಗುವುದು.

ಧನುಸ್ಸು:- ಬಹು ಖರ್ಚಿನ ಬಾಬ್ತುಗಳ ಬಗ್ಗೆ ವಿಚಾರ ಮಾಡದೆ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಮುಂದಾಗದಿರಿ. ಗುರುವಿನ ಅನುಗ್ರಹ ಮತ್ತು ಆಂಜನೇಯನ ಕೃಪಾಶೀರ್ವಾದಕ್ಕಾಗಿ ಹನುಮಾನ್‌ ಚಾಲೀಸಾ ಪಠಣ ಮಾಡಿ. ಪ್ರಯಾಣ ಕಾಲದಲ್ಲಿ ತುಸು ಎಚ್ಚರಿಕೆ ಅಗತ್ಯ.

ಮಕರ:- ಅಧಿಕಾರವನ್ನು ಪಡೆಯಲು ಮತ್ತು ಮಹತ್ವದ ಪುರಸ್ಕಾರ ಪಡೆಯಲು ಲಾಭದಾಯಕ ವ್ಯವಹಾರದಲ್ಲಿ ಕೈಹಾಕಲು ಇದು ಉತ್ತಮ ಅವಧಿ. ನೀವು ಬುದ್ಧಿವಂತರು ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಅನ್ಯರನ್ನು ಅಳೆದು ಅವರ ಶಕ್ತಿ ತಿಳಿಯಲು ತಾಳ್ಮೆ ಇರಲಿ. ಧೈರ್ಯಹೀನರಾಗದಿರಿ.

ಕುಂಭ:- ಕೆಲಸ ಕಾರ್ಯಗಳು ಜಯ ತರುತ್ತದೆಯಾದರೂ ಖರ್ಚಿಗೂ ಅನೇಕ ದಾರಿಗಳಿವೆ. ಗಣಪತಿ ಆರಾಧನೆಯಿಂದ ವ್ಯರ್ಥ ಕಸರತ್ತುಗಳಿಗೆ ಅಡೆತಡೆಗಳು ಬೀಳುತ್ತವೆ. ಸ್ವಯಂ ಉದ್ಯೋಗಿಗಳು ಕಟ್ಟಡ ವಿನ್ಯಾಸಕಾರರಿಗೆ ಉತ್ತಮ ಫಲ ದೊರೆಯಲಿದೆ.

ಮೀನ:- ಅಂದುಕೊಂಡ ವೇಗದಲ್ಲಿ ಹೆಜ್ಜೆ ಇಡಲು ಸಾಧ್ಯವಾಗದು. ಏನೋ ಒಂದು ತಡೆಯುತ್ತಿರುವಂತೆ ಜಡತೆ ಬಂದು ಕಿರಿಕಿರಿ ಎನಿಸುವ ವರ್ತಮಾನವನ್ನು ಎದುರಿಸಬೇಕಾಗುವುದು. ಮನೆಯ ಸಮಸ್ಯೆಗಳನ್ನು ಹೊರಗಡೆ ಚರ್ಚೆ ಮಾಡುವುದು ಸೂಕ್ತವಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ