ಆ್ಯಪ್ನಗರ

Nithya Bhavishya: ನಿಮ್ಮ ಇಂದಿನ ರಾಶಿ ಫಲಾಫಲಗಳೇನು? (17.1.2019 ಗುರುವಾರ)

ಸಿಂಹ ರಾಶಿಯವರು ಶ್ರೀ ನಾರಸಿಂಹ ದೇವರನ್ನು ನೆನೆಯಿರಿ. ಆತನ ಕರುಣೆಯಿಂದ ನಿಮ್ಮ ಸಂತತಿಗೆ ಸೂಕ್ತ ಸಂಗಾತಿ ದೊರೆಯುತ್ತಾರೆ. ಮಡದಿಯ ಮಾತನ್ನು ತಿರಸ್ಕರಿಸಬೇಡಿ. ನಿಮ್ಮ ಇಂದಿನ ರಾಶಿ ಭವಿಷ್ಯ ತಿಳಿಯಿರಿ.

Vijaya Karnataka 17 Jan 2019, 10:01 am
ಮೇಷ:- ನಿಮ್ಮ ಉತ್ತಮ ಬೌದ್ಧಿಕ ಶಕ್ತಿಯಿಂದಾಗಿ ಜನರಿಂದ ಗೌರವ ಮತ್ತು ಪ್ರಶಂಸೆಗೆ ಗುರಿಯಾಗುವಿರಿ. ಇದರಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಿ ಇನ್ನಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಲು ನಿರ್ಧರಿಸುವಿರಿ.
Vijaya Karnataka Web horoscope-1 new


ವೃಷಭ:-ಅಪರಿಚಿತರನ್ನು ಹೆಚ್ಚು ಪರಿಚಯ ಮಾಡಿಕೊಂಡು ಸಂಕಷ್ಟಕ್ಕೆ ಗುರಿಯಾಗುವಿರಿ. ಅಂತಹವರಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಸಂಗಾತಿಯ ಸಲಹೆಯಂತೆ ನಡೆದರೆ ಕ್ಷೇಮ.

ಮಿಥುನ:-ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಕಚೇರಿಗೆ ಹೊರಡುವಾಗ ಐದು ಅಥವಾ ಹತ್ತು ನಿಮಿಷ ಮುಂಚೆಯೇ ಮನೆಯಿಂದ ಹೊರಡಿ. ಅನಗತ್ಯ ಒತ್ತಡದಿಂದ ದೂರವಿರಿ. ಕೆಲಸಗಳು ಮನಸ್ಸಿಗೆ ನೆಮ್ಮದಿ ನೀಡುವವು.

ಕಟಕ:- ಮೇಲಧಿಕಾರಿಗಳಿಂದ ಕಿರುಕುಳವಿದ್ದರೂ ತಾಳ್ಮೆ ಕಳೆದುಕೊಳ್ಳಬೇಡಿ. ನೀವು ಮಾಡಿರುವ ಕೆಲಸ ಸರಿಯಾಗಿಯೇ ಇದೆ. ಆದರೆ ನಿಮಗೆ ಆಗದವರೊಬ್ಬರು ನಿಮ್ಮ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ನಿಮ್ಮ ಬಾಸ್‌ಗೆ ತಿಳಿಸಿ ಅವರು ನಿಮ್ಮ ಮೇಲೆ ಕೋಪಗೊಳ್ಳುವಂತೆ ಮಾಡಿರುವರು.

ಸಿಂಹ:- ಮಕ್ಕಳ ಸಮಸ್ಯೆ ನಿಮಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಶ್ರೀ ನಾರಸಿಂಹ ದೇವರನ್ನು ನೆನೆಯಿರಿ. ಆತನ ಕರುಣೆಯಿಂದ ನಿಮ್ಮ ಸಂತತಿಗೆ ಸೂಕ್ತ ಸಂಗಾತಿ ದೊರೆಯುತ್ತಾರೆ. ಮಡದಿಯ ಮಾತನ್ನು ತಿರಸ್ಕರಿಸಬೇಡಿ.

ಕನ್ಯಾ:- ವಿಪರೀತ ದಣಿದು ಕೆಲಸಕ್ಕೆ ಮುಂದಾಗದಿರಿ. ಕೆಲಸದ ಒತ್ತಡದ ನಡುವೆ ಸ್ವಲ್ಪ ವಿಶ್ರಾಂತಿ ಪಡೆಯಿರಿ. ನಿಮ್ಮ ಕೈಲಿ ಆಗುವಷ್ಟು ಕೆಲಸವನ್ನು ಮಾತ್ರ ಒಪ್ಪಿಕೊಳ್ಳಿ.

ತುಲಾ:- ಚಿಕ್ಕ ಮತ್ತು ಚೊಕ್ಕ ಮನೆಯನ್ನು ಶುಭ್ರವಾಗಿಟ್ಟುಕೊಳ್ಳುವುದೇ ದೇವರ ಒಲುಮೆಗೆ ಸೋಪಾನ. ಸ್ವಚ್ಛತೆಯಿದ್ದಲ್ಲಿ ಭಗವಂತ ಇರುತ್ತಾನೆ. ಹಾಗಾಗಿ ಆತನ ಒಲುಮೆಗೆ ಮನೆ ಮತ್ತು ಮನಸ್ಸಿನ ಸ್ವಚ್ಛತೆಗೆ ಮೀಸಲಿಡಿ.

ವೃಶ್ಚಿಕ:- ನೀವು ಮಾಡುವ ಕೆಲಸವನ್ನು ಜನರು ಬಹಿರಂಗವಾಗಿ ಹೊಗಳದಿದ್ದರೂ ನಿಮ್ಮ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವರು. ಹಾಗಾಗಿ ನೀವು ತೀರಿಸಬೇಕಾಗಿರುವ ಸಾಲದ ಬಗೆಗೂ ಯಾರೂ ಒತ್ತಡ ಹೇರುತ್ತಿಲ್ಲ. ನ್ಯಾಯಯುತವಾಗಿ ದುಡಿದು ಹಣ ಮರು ಪಾವತಿಸುವಿರಿ.

ಧನುಸ್ಸು:- ವಿವಾಹ ಆಪೇಕ್ಷೆಯುಳ್ಳವರಿಗೆ ಸ್ವಲ್ಪ ನಿರಾಶೆ ಕಾಡುವುದು. ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವಂತೆ ಕೊನೆಯ ಕ್ಷ ಣದಲ್ಲಿ ವಧುವಿನ ಕಡೆಯುವರು ತಮ್ಮ ಅಸಮ್ಮತಿಯನ್ನು ತಿಳಿಸುವರು. ಇನ್ನೂ ಸ್ವಲ್ಪ ದಿನ ಕಾಯುವುದು ಅನಿವಾರ್ಯ.

ಮಕರ:- ಕೆಲಸಕ್ಕೆ ಬಾರದ ಜನ ತಲೆ ತಿನ್ನುವ ಸಾಧ್ಯತೆ ಹೆಚ್ಚಿದೆ. ದೂರ ಪ್ರವಾಸ ಮಾಡುವ ಯೋಗವಿದೆ. ಪತಿ ಪತ್ನಿಯರಲ್ಲಿ ಮನಸ್ತಾಪ ಬರುವುದು. ಶಿವ ಪಂಚಾಕ್ಷ ರಿ ಮಂತ್ರವನ್ನು ತಪ್ಪದೆ ಪಠಿಸಿ.

ಕುಂಭ:- ನೀವು ಹುಟ್ಟಿದ ಊರಿನಲ್ಲಿ ಸಂಭ್ರಮದ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮ್ಮೊಡನೆ ಆಡಿ ಬೆಳೆದ ಸಹಪಾಠಿಗಳ ಭೇಟಿ ನಿಮಗೆ ಸಂತಸ ನೀಡುವುದು. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು.

ಮೀನ:- ಅನಿರೀಕ್ಷಿತ ಬೆಳವಣಿಗೆಗಳು ನಿಮ್ಮ ಪರವಾಗಿ ಆಗುವುದರಿಂದ ತಡೆ ಹಿಡಿಯಲ್ಪಟ್ಟಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಜೀವನದಲ್ಲಿ ಹೊಸ ಆಶಾಕಿರಣ ಮೂಡುವುದು. ಮನಸ್ಸು ಹಕ್ಕಿಯಂತೆ ಹಾರಾಡುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ