ಆ್ಯಪ್ನಗರ

Nithya Bhavishya: ಮೀನರಾಶಿಯವರೇ ನಿಮ್ಮದೇ ಆದ ಸ್ವಂತ ನಿರ್ಣಯದಿಂದ ಎಲ್ಲವೂ ಸುಗಮವಾಗಲಿದೆ

ಮಿಥುನರಾಶಿಯವರೇ ಸದ್ಯದ ಗ್ರಹಸ್ಥಿತಿ ಉತ್ತಮವಾಗಿರದ ಕಾರಣ, ಮಡದಿ ಮಕ್ಕಳೇ ನಿಮ್ಮನ್ನು ಆದರಿಸದೆ ಹೋಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಅಷ್ಟೇನು ಉತ್ತಮವಿರುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಇರುವುದು ಒಳ್ಳೆಯದು.

Vijaya Karnataka 17 Sep 2019, 9:52 am
ಮೇಷ:- ಹತ್ತಿರದವರಿಂದಲೇ ಅನಿರೀಕ್ಷಿತವಾದ ಚುಚ್ಚುಮಾತುಗಳನ್ನು ಕೇಳುವ ಸಾಧ್ಯತೆ ಇದೆ. ಅದಕ್ಕೆ ಪ್ರತಿಕ್ರಿಯಿಸದೇ ಇರುವುದು ಉತ್ತಮ. ಅವಮಾನ ಪ್ರಸಂಗಗಳನ್ನು ಎದುರಿಬೇಕಾಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ವೃಷಭ:- ಶುಭ ಮುಂಜಾನೆಯು ದಿನವಿಡಿ ಲವಲವಿಕೆಯಿಂದ ಇರುವಂತೆ ಮಾಡುವುದು. ಗುರು ಜನರು ನಿಮ್ಮ ವಿಚಾರ ಧಾರೆಗಳನ್ನು ಗೌರವಿಸುವರು. ಹಾಗಂತ ನಾಲಿಗೆಯನ್ನು ಹರಿಬಿಡಬೇಡಿ. ಇದರಿಂದ ನೀವು ತೊಂದರೆ ಎದುರಿಸಬೇಕಾಗುವುದು.

ಮಿಥುನ:- ಸದ್ಯದ ಗ್ರಹಸ್ಥಿತಿ ಉತ್ತಮವಾಗಿರದ ಕಾರಣ, ಮಡದಿ ಮಕ್ಕಳೇ ನಿಮ್ಮನ್ನು ಆದರಿಸದೆ ಹೋಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಅಷ್ಟೇನು ಉತ್ತಮವಿರುವುದಿಲ್ಲ. ಹಾಗಾಗಿ ತಾಳ್ಮೆಯಿಂದ ಇರುವುದು ಒಳ್ಳೆಯದು.

ಕಟಕ:- ಮನೆ ಒಳಾಂಗಣ ವಿನ್ಯಾಸಕಾರರಿಗೆ ಹೇರಳ ಅವಕಾಶಗಳು ಬರಲಿವೆ. ಕೆಲವರಿಗೆ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ಸಿಗುವುದು. ಸಂಗಾತಿಯೊಂದಿಗಿನ ಬಾಂಧವ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ಕನ್ಯಾ ರಾಶಿಯವರೇ ನಿಮ್ಮ ಬದುಕಿನಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳು ಮಹತ್ತರ ತಿರುವಿಗೆ ಕಾರಣವಾಗಲಿವೆ: ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಸಿಂಹ:- ಮರಕ್ಕಿಂತ ಮತ್ತೊಂದು ಮರ ದೊಡ್ಡದು ಎಂಬ ಜಾಗತಿಕ ಸತ್ಯವನ್ನು ಅರಿಯಿರಿ. ನೀವೇ ಬುದ್ಧಿವಂತರು ಎಂದು ಬೀಗದಿರಿ. ನಿಮಗಿಂತ ಹೆಚ್ಚಿನ ಬುದ್ಧಿವಂತರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ:- ಬರೀ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿರುವ ನಿಮಗೆ ಯಾವುದೇ ಕೆಲಸವನ್ನು ಸಕಾಲಕ್ಕೆ ಮಾಡಲಾಗುತ್ತಿಲ್ಲಎಂಬ ಕೊರಗು ಕೂಡ ಕಾಡುತ್ತಿದೆ. ಆದಷ್ಟು ಭಗವಂತನ ಮೊರೆ ಹೋಗುವುದು ಒಳ್ಳೆಯದು.

ತುಲಾ:- ಸ್ಥಳ ಬದಲಾವಣೆಯ ಸಾಧ್ಯತೆ ಇದೆ ಅಥವಾ ಮಾಡುವ ವೃತ್ತಿಯಲ್ಲಿ ಪ್ರಗತಿ ಕಂಡು ಬರುವುದು. ಆದಷ್ಟು ಕೋಪಗೊಳ್ಳದೆ ಶಾಂತತೆ ಕಾಪಾಡಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸು ಬರುವುದು.

ವೃಶ್ಚಿಕ:- ಸರಿಯಾಗಿ ಸಾಗುತ್ತಿರುವ ಕಾರ್ಯ ವಿಧಾನಗಳಲ್ಲಿ ಬದಲಾವಣೆ ಬೇಡ. ಸದ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಿಲ್ಲ. ಕುಲದೇವರನ್ನು ಸ್ಮರಿಸಿ. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಎಳ್ಳುದೀಪ ಹಚ್ಚಿ.

ಧನುಸ್ಸು: ವೃಥಾ ನಿಂದನೆಗಳನ್ನು ಎದುರಿಸಬೇಕಾಗಿ ಬರಬಹುದು. ನಿಮ್ಮನ್ನು ನೀವೇ ವಿಮರ್ಶಿಸಿಕೊಳ್ಳಿ. ದಶರಥ ಕೃತ ಶನಿಯ ಸ್ತೋತ್ರ ಪಠಿಸಿ. ಪ್ರಯಾಣ ಕಾಲದಲ್ಲಿಉದ್ದಿನಕಾಳನ್ನು ಇಟ್ಟುಕೊಂಡು ಹೋಗಿ.

ಮಕರ:- ಕಚೇರಿಯ ಕೆಲಸ ಕಾರ್ಯಗಳಲ್ಲಿಅಚ್ಚುಕಟ್ಟುತನ ತೋರುವ ನಿಮಗೆ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಕಚೇರಿಯಲ್ಲಿಆಗದವರು ನಿಮ್ಮನ್ನು ಕೆಣಕುವ ಸಾಧ್ಯತೆ ಇದೆ. ಅವರೆಲ್ಲರನ್ನು ಚಾಣಾಕ್ಷತನದಿಂದ ದೂರ ಮಾಡಿಕೊಳ್ಳಿ.

ಕುಂಭ:- ಕುಟುಂಬ ಸದಸ್ಯರ ಬೆಂಬಲ ನಿಮಗಿರುವುದರಿಂದ ನೀವು ಹಮ್ಮಿಕೊಂಡ ಕಾರ್ಯಗಳನ್ನು ಧೈರ್ಯದಿಂದ ಮುನ್ನುಗ್ಗಿ ಮಾಡಬಹುದು. ಎಲ್ಲರನ್ನು ನಗುಮುಖದಿಂದ ಸ್ವಾಗತಿಸುವಿರಿ.

ಮೀನ:- ನಿಮ್ಮದೇ ಆದ ಸ್ವಂತ ನಿರ್ಣಯದಿಂದ ಎಲ್ಲವೂ ಸುಗಮವಾಗಲಿದೆ. ಆದರೆ ಇತರರ ಅಭಿಪ್ರಾಯಕ್ಕೂ ಬೆಲೆ ಕೊಡುವುದು ಒಳ್ಳೆಯದು. ತಾಯಿಯ ಆರೋಗ್ಯದ ಕಡೆ ಗಮನ ನೀಡಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ