ಆ್ಯಪ್ನಗರ

Nithya Bhavishya: ಸಿಂಹ ರಾಶಿಯವರೇ ನಿಮ್ಮ ದೂರಾಲೋಚನೆಯ ಪ್ರಭಾವದಿಂದ ಕೆಲಸ ಕಾರ್ಯಗಳು ಸಕಾಲದಲ್ಲಿ ನಡೆಯುವುದು

ತುಲಾ ರಾಶಿಯವರೇ ನಿಮ್ಮ ಹೊಸ ಯೋಜನೆಗಳು ಆರ್ಥಿಕ ಸಂವರ್ಧನೆಗಾಗಿ ಸಕಾರಾತ್ಮಕ ಪರಿಣಾಮವನ್ನು ನೀಡಲಿವೆ. ಬೃಹತ್‌ ಪ್ರಮಾಣದ ಆದಾಯದ ಹರಿವಿನ ಮೂಲ ಗೋಚರಿಸುವುದು. ಆದರೆ ಅದನ್ನು ಬಾಚಿಕೊಳ್ಳಲು ಸದ್ಯಕ್ಕೆ ಮುಂದಾಗದಿರಿ.

Vijaya Karnataka 18 Feb 2020, 10:08 am
ಮೇಷ:- ಸೂಜಿಯಿಂದ ಹಲಸಿನ ಹಣ್ಣನ್ನು ಕತ್ತರಿಸಲು ಆಗುವುದಿಲ್ಲ. ಅದಕ್ಕೆ ಚೂಪಾದ ಹರಿತ ಆಯುಧವೇ ಬೇಕು. ಅಂತೆಯೇ ಕೆಲವು ವಿಚಾರಗಳಲ್ಲಿ ಸೌಮ್ಯತೆಯು ಫಲ ಕೊಡುವುದಿಲ್ಲ. ನಿಷ್ಠುರತೆಯನ್ನು ಅನಿವಾರ್ಯವಾಗಿ ಪ್ರದರ್ಶಿಸಬೇಕಾಗುವುದು.
Vijaya Karnataka Web ದಿನ ಭವಿಷ್ಯ


ವೃಷಭ:- ಋುಣಾತ್ಮಕ ಚಿಂತನೆಯು ದೇಹದ ಆರೋಗ್ಯವನ್ನು ಹಾಳು ಮಾಡುವುದು. ಹಾಗಾಗಿ ಸದಾ ಸಕಾರಾತ್ಮಕ ಚಿಂತನೆಯನ್ನು ಮಾಡಿ. ಒಳಿತಾಗುವುದು. ಹಿರಿಯರ ಆಶೀರ್ವಾದ ಪಡೆದು ಒಂದಿಲ್ಲೊಂದು ಕಾರ್ಯದಲ್ಲಿ ಮಗ್ನರಾಗಿ. ಒಳಿತಾಗುವುದು.

ಮಿಥುನ:- 'ಸಂಸಾರ ಗುಟ್ಟು ವ್ಯಾಧಿ ರಟ್ಟು' ಎಂದರು ಅನುಭಾವಿಗಳು. ಹಾಗಾಗಿ ನಿಮ್ಮ ವೈಯಕ್ತಿಕ ಜೀವನ ಕುರಿತು ಪರರ ಮುಂದೆ ಮಾತನಾಡಿ ಅಪಹಾಸ್ಯಕ್ಕೆ ಒಳಗಾಗದಿರಿ. ಮನಸ್ಸಿನ ತಾಕಲಾಟಗಳನ್ನು ಮನಸ್ಸಿನಲ್ಲಿಯೇ ಅದುಮಿ ಹಿಡಿದಿಟ್ಟುಕೊಳ್ಳುವುದು ಒಳ್ಳೆಯದು.

ಮಕರ ರಾಶಿಯವರೇ ಸಂಯಮದಿಂದ ವರ್ತಿಸಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು:ವಾರ ಭವಿಷ್ಯ ನೋಡಿ

ಕಟಕ:- ನಿಮ್ಮ ನಿರೀಕ್ಷೆಯಂತೆಯೇ ಎಲ್ಲಾ ಕೆಲಸ ಕಾರ್ಯಗಳು ನಡೆಯುವುವು. ವಾಹನ ಖರೀದಿಗೆ ಮುಂದಾಗುವಿರಿ. ಇಲ್ಲವೆ ಸ್ಥಿರಾಸ್ತಿ ಖರೀದಿಯ ಬಗ್ಗೆ ಚಿಂತನೆ ನಡೆಸುವಿರಿ.

ಸಿಂಹ:- ನಿಮ್ಮ ದೂರಾಲೋಚನೆಯ ಪ್ರಭಾವದಿಂದ ಕೆಲಸ ಕಾರ್ಯಗಳು ಸಕಾಲದಲ್ಲಿ ನಡೆಯುತ್ತವೆ. ನಿಮ್ಮ ವಾದವನ್ನು ಎಲ್ಲರೂ ಮೆಚ್ಚುವರು. ಆದರೆ ದೀಪದ ಅಡಿಯಲ್ಲಿ ಕತ್ತಲು ಇರುವಂತೆ ಮನೆಯ ಸದಸ್ಯರೇ ನಿಮ್ಮ ಬಗ್ಗೆ ಅಸಹನೆ ತಾಳುವರು.

ಕನ್ಯಾ:- ಅನ್ಯರಿಗೆ ಹಣವನ್ನು ಕೊಡಿಸುವ ಕೆಲಸವನ್ನು ಬಿಡಿ. ಸದಾ ಪರರ ಪ್ರಗತಿಯ ಬಗ್ಗೆ ಚಿಂತಿಸುವ ನೀವು ನಿಮ್ಮ ಸ್ವಂತಕ್ಕೆ ಒಂದಿಷ್ಟು ಹಣವನ್ನು ಗಳಿಸುವ ಪ್ರಯತ್ನವನ್ನು ಮಾಡಿ. ಅನ್ಯರ ಹೊಗಳಿಕೆಯು ನಿಮ್ಮ ಹೊಟ್ಟೆ ತುಂಬಿಸುವುದಿಲ್ಲ.

ತುಲಾ:- ನಿಮ್ಮ ಹೊಸ ಯೋಜನೆಗಳು ಆರ್ಥಿಕ ಸಂವರ್ಧನೆಗಾಗಿ ಸಕಾರಾತ್ಮಕ ಪರಿಣಾಮವನ್ನು ನೀಡಲಿವೆ. ಬೃಹತ್‌ ಪ್ರಮಾಣದ ಆದಾಯದ ಹರಿವಿನ ಮೂಲ ಗೋಚರಿಸುವುದು. ಆದರೆ ಅದನ್ನು ಬಾಚಿಕೊಳ್ಳಲು ಸದ್ಯಕ್ಕೆ ಮುಂದಾಗದಿರಿ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೇಷ ರಾಶಿಯವರ ಗುಣ ಸ್ವಭಾವ ಹಾಗೂ ದೌರ್ಬಲ್ಯತೆಗಳೇನು ಗೊತ್ತಾ?

ವೃಶ್ಚಿಕ:- ಧೈರ್ಯಂ ಸರ್ವತ್ರ ಸಾಧನಂ ಎಂಬುದು ಎಲ್ಲರಿಗೂ ಅನ್ವಯಿಸುವಂತಹ ಮಾತು. ಸದ್ಯದ ಗ್ರಹಸ್ಥಿತಿಗಳು ನಿಮ್ಮ ಮನೋಸ್ಥೈರ್ಯವನ್ನು ಕಸಿದುಕೊಳ್ಳುವಂತಹ ಪ್ರಯತ್ನ ಮಾಡಲಿವೆ. ಇದಕ್ಕಾಗಿ ಅಂಜದಿರಿ. ಇದರಿಂದ ನೀವು ಇನ್ನಷ್ಟು ಗಟ್ಟಿ ಆಗುವಿರಿ.

ಧನುಸ್ಸು:- ನಿಮ್ಮ ಮನೋಕಾಮನೆಗಳು ಆಶ್ಚರ್ಯ ರೀತಿಯಲ್ಲಿ ನೆರವೇರುವುವು. ಇದರಿಂದ ಬದುಕಿನಲ್ಲಿ ಒಂದು ಹೊಸ ಆಶಾಕಿರಣ ಮೂಡುವುದು. ಆರ್ಥಿಕ ಸಮಸ್ಯೆ ಕ್ರಮೇಣ ಕರಗುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಮಕರ:- ಕೈಲಾಗದವರು ಮೈ ಪರಚಿಕೊಂಡ ಹಾಗೆ ಈ ದಿನದ ಗ್ರಹಸ್ಥಿತಿಯು ನಿಮ್ಮ ಇಚ್ಛಿತ ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟು ಮಾಡುವುದರಿಂದ ಸಹಜವಾಗಿಯೇ ನಿಮ್ಮ ಮನಸ್ಸು ವ್ಯಘ್ರವಾಗುವುದು. ಆದಷ್ಟು ತಾಳ್ಮೆಯನ್ನು ಪ್ರದರ್ಶಿಸಿ.

ಕುಂಭ ರಾಶಿಗೆ ಸೂರ್ಯ ಪ್ರವೇಶ: ಶುಭ ಫಲವನ್ನು ಪಡೆಯುವ ರಾಶಿಗಳಿವು..!

ಕುಂಭ:- ಹಣಕಾಸಿನ ವಿಚಾರದಲ್ಲಿ ಅತೀ ಆತುರ ತೋರುವ ಗುಣವನ್ನು ಕೈಬಿಡಿ. ನಿಮ್ಮ ಪಾಲಿಗೆ ಸೇರಬೇಕಾಗಿದ್ದ ಹಣ ಖಂಡಿತವಾಗಿಯೂ ನಿಮ್ಮ ಕೈಸೇರುವುದು. ಹಾಗಂತ ಅನಗತ್ಯ ಖರ್ಚುಗಳನ್ನು ಮಾಡುವುದು ಶೋಭೆ ತರುವಂತಹದ್ದಲ್ಲ.

ಮೀನ:- ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಮಕ್ಕಳ ಅವಿಧೇಯತೆ ಬಗ್ಗೆ ಕೋಪಗೊಳ್ಳುವಿರಿ. ಆದರೆ ಮಕ್ಕಳು ಏಕೆ ಈ ದಾರಿ ತುಳಿದರು ಎಂಬುದನ್ನು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ಉತ್ತರ ದೊರೆಯುವುದು. ಮಕ್ಕಳನ್ನು ಪ್ರೀತಿಯಿಂದ ಕಾಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ