ಆ್ಯಪ್ನಗರ

Nithya Bhavishya: ತುಲಾ ರಾಶಿಯವರೇ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗದಿರಿ

ಸಿಂಹ ರಾಶಿಯವರೇ ಸುಮ್ಮನೆ ಅಪವಾದಗಳನ್ನು ಎದುರಿಸುವ ಭೀತಿ ಕಾದಿರುತ್ತದೆ. ಆದ್ದರಿಂದ ಮೌನದಿಂದಿರಿ. ಎಲ್ಲವೂ ಸರಳವಾಗುವುದು. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಅಥವಾ ಜಾಮೀನಿಗೆ ಸಹಿ ಹಾಕದಿರುವುದು ಒಳ್ಳೆಯದು.

Vijaya Karnataka 19 Feb 2020, 10:19 am
Vijaya Karnataka Web ದಿನ ಭವಿಷ್ಯ
ಮೇಷ:- ಎಲ್ಲರ ಮಾತನ್ನು ಕೇಳಬೇಕಾಗಿಲ್ಲ. ಆದರೆ ಮುಖ್ಯ ವಿಚಾರವನ್ನು ಅನ್ಯರ ಜೊತೆ ಚರ್ಚಿಸುವುದು ಉತ್ತಮ. ಇದರಿಂದ ನೀವು ಹಮ್ಮಿಕೊಂಡಿರುವ ಕೆಲಸ ಕಾರ್ಯ ಮಾಡಲು ನೂತನ ವಿಚಾರಧಾರೆಗಳು ತಿಳಿಯುವುವು.

ವೃಷಭ:- ದಾಂಪತ್ಯದ ವಿಚಾರದಲ್ಲಿ ತೊಂದರೆಗಳು ಏಳದಂತೆ ನಿಗಾ ವಹಿಸಿ. ಇಂದು ಮಹತ್ವದ ದಿನವಾಗಿದ್ದು ದಂಪತಿಗಳು ಒಂದೇ ಮನಸ್ಸಿನಿಂದ ಕಾರ್ಯ ನಿರ್ವಹಿಸಿದಲ್ಲಿ ಸಫಲತೆ ಹೊಂದುವಿರಿ. ಮಕ್ಕಳ ಪ್ರಗತಿಯು ಸಂತಸವನ್ನುಂಟು ಮಾಡುವುದು.

ಮಿಥುನ:- ಹಳೆಯ ಕಡತಗಳನ್ನು ಜತನದಿಂದ ಜೋಡಿಸಿಡಿ. ಹಳೆಯದೆಲ್ಲವನ್ನು ಗುಜರಿಗೆ ಹಾಕುವ ಮುನ್ನ 2 ಬಾರಿ ಪರಿಶೀಲಿಸಿ. ಅವುಗಳಲ್ಲಿ ಕೆಲವು ಮಹತ್ತರವಾದ ದಾಖಲೆಗಳು ಇರುವ ಸಾಧ್ಯತೆ ಇದೆ.

ಮಕರ ರಾಶಿಯವರೇ ಸಂಯಮದಿಂದ ವರ್ತಿಸಿದರೆ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು:ವಾರ ಭವಿಷ್ಯ ನೋಡಿ

ಕಟಕ:- ಮುಂದಿನ ದಿನಗಳ ಒಳಿತಿಗೆ ನಾಂದಿಯಾಗುವ ಉತ್ತಮ ಕೆಲಸಕ್ಕೆ ಸದ್ಯವೇ ಚಾಲನೆ ದೊರೆಯಲಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುವು. ವಾಹನ ಖರೀದಿ ಅಥವಾ ಆಸ್ತಿ ಖರೀದಿಗೆ ಮನಸ್ಸು ಮಾಡುವಿರಿ.

ಸಿಂಹ:- ಸುಮ್ಮನೆ ಅಪವಾದಗಳನ್ನು ಎದುರಿಸುವ ಭೀತಿ ಕಾದಿರುತ್ತದೆ. ಆದ್ದರಿಂದ ಮೌನದಿಂದಿರಿ. ಎಲ್ಲವೂ ಸರಳವಾಗುವುದು. ಸ್ನೇಹಿತರ ಹಣಕಾಸು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದು ಅಥವಾ ಜಾಮೀನಿಗೆ ಸಹಿ ಹಾಕದಿರುವುದು ಒಳ್ಳೆಯದು.

ಕನ್ಯಾ:- ಕೆಲವರು ನಿಮ್ಮ ಎದುರಿಗೆ ಸರಿಯಾಗಿರುತ್ತಾರೆ ಆದರೆ ಹಿಂದಿನಿಂದ ತೊಂದರೆ ಕೊಡುತ್ತಾರೆ. ಈ ಬಗ್ಗೆ ಎಚ್ಚರದಿಂದ ಇರಿ. ನಡೆಯುವ ವ್ಯಕ್ತಿ ಎಡುವನಲ್ಲದೆ ಕುಳಿತ ವ್ಯಕ್ತಿ ಎಡವುದಿಲ್ಲ. ಹಾಗಾಗಿ ಎಡುವುದನ್ನೇ ಸೋಲು ಎಂದು ಭ್ರಮಿಸದಿರಿ.

ಜ್ಯೋತಿಷ್ಯದ ಪ್ರಕಾರ ಈ ಐದು ರಾಶಿಯವರು ಇತರ ರಾಶಿಯವರಿಗಿಂತ ಹೆಚ್ಚು ಸ್ವಾರ್ಥಿಗಳು..!

ತುಲಾ:- ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗದಿರಿ. ಬಾಳಸಂಗಾತಿಯ ಸಕಾಲಿಕ ಎಚ್ಚರಿಕೆ ಮತ್ತು ಬೆಂಬಲದ ಸಹಕಾರದಿಂದ ಒಳಿತಾಗುವುದು. ಹಣಕಾಸಿನ ವಿಷಯದಲ್ಲಿ ಜಾಗ್ರತೆ ಇರಲಿ.

ವೃಶ್ಚಿಕ:- ನಿರಾಸೆಯ ನಡುವೆಯೇ ಕಾಲ ದೂಡುತ್ತಿರುವ ನಿಮಗಿಂದು ಸಂತಸದ ಸುದ್ದಿ ಲಭ್ಯವಾಗಲಿದೆ. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು.

ಧನುಸ್ಸು:- ಹಿರಿಯರ ಬಳಿ ವಿನಯಪೂರ್ವಕವಾದ ಮಾತುಕತೆಯ ಪ್ರಭಾವದಿಂದ ಒಳಿತನ್ನೇ ಕಾಣುವಿರಿ. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಆಶ್ಚರ್ಯಕರ ರೀತಿಯಲ್ಲಿಯಶಸ್ಸನ್ನು ಕಾಣುವುದು.

ಮಕರ:- ಮನಸಿನಲ್ಲಿ ಮಂಡಿಗೆ ತಿನ್ನುವ ಆಸೆ, ಗೋಧಿಯ ಮೇಲೆ ಪ್ರೀತಿ ಎನ್ನುವಂತೆ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ಕುಲದೇವತಾ ಪ್ರಾರ್ಥನೆ ಮಾಡಿ. ಕೆಲವರು ಈಗಿರುವ ಕೆಲಸದಿಂದ ನಿವೃತ್ತಿ ಹೊಂದುವರು.

ಬುಧವಾರ ಜನಿಸಿದವರ ಸ್ವಭಾವ ಹಾಗೂ ವೈವಾಹಿಕ ಜೀವನ ಹೇಗಿರುತ್ತೆ ಗೊತ್ತಾ?

ಕುಂಭ:- ನಿಮ್ಮನ್ನು ನೀವು ಮೊದಲು ನಂಬಿ. ಇದರಿಂದ ಹೆಚ್ಚಿನ ಉತ್ತಮ ಕೆಲಸಗಳು ನೆರವೇರಲು ಸಾಧ್ಯವಾಗುವುವು. ನಿಮ್ಮ ಬಹುದಿನದ ಕನಸು ನೆರವೇರುವುದು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು.

ಮೀನ:- ಮನೆಗೆದ್ದು ಮಾರುಗೆಲ್ಲುಎಂದರು ಅನುಭಾವಿಗಳು. ಅಂತೆಯೇ ನೀವು ನಿಮ್ಮ ಮೇಲೆ ವಿಶ್ವಾಸವನ್ನು ಇಟ್ಟುಕೊಳ್ಳಿ. ನೀವೇ ಅಪನಂಬಿಕೆಯಿಂದ ಕೆಲಸ ಆಗುತ್ತೋ ಇಲ್ಲವೋ ಎಂದು ಸಂಶಯ ತಾಳಿದರೆ ಆಗುವ ಕೆಲಸವೂ ಆಗುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ