ಆ್ಯಪ್ನಗರ

Nithya Bhavishya:ಮಿಥುನ ರಾಶಿಯವರಿಗೆ ಕೌಟುಂಬಿಕ ನೆಮ್ಮದಿ ಹರ್ಷವನ್ನುಂಟು ಮಾಡುವುದು.

ಕಟಕರಾಶಿಯವರೇ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಲುಕಿಕೊಂಡಂತೆ ನೀವು ಅಪೇಕ್ಷಿಸಿದ್ದ ವ್ಯಕ್ತಿಯ ಭೇಟಿ ನಿಮಗಾಗುವುದು. ಅವರಿಂದ ಮಹತ್ತರವಾದ ವಿಷಯಗಳನ್ನು ಅರಿಯುವಿರಿ. ಹೊಸ ಯೋಜನೆಯನ್ನು ರೂಪಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

Vijaya Karnataka 21 Aug 2019, 7:10 am
ಮೇಷ:- ಮನೋಕಾಮನೆಗಳು ಪೂರ್ಣಗೊಳ್ಳುವುವು. ಮಧುರ ಪದಾರ್ಥಗಳನ್ನು ಸವಿಯುವಿರಿ, ಆಶಾವಾದದಿಂದ ಹಮ್ಮಿಕೊಂಡ ಕಾರ್ಯಗಳು ಯಶಸ್ಸಿನತ್ತ ಸಾಗುವುವು. ಬಂಧು ಮಿತ್ರರು ಹಣಕಾಸಿನ ವಿಷಯದಲ್ಲಿಸಹಾಯ ಮಾಡುವರು.

ವೃಷಭ:- ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ. ಮಹತ್ತರ ಕೆಲಸವೊಂದು ಪೂರ್ಣಗೊಳ್ಳಲಿದೆ. ಮಗನಿಂದ ಬರುವ ವಾರ್ತೆಯು ಸಂತಸವನ್ನುಂಟು ಮಾಡುವುದು.
ಪತಿ, ಪತ್ನಿಯರಲ್ಲಿಸಣ್ಣವಿಷಯಕ್ಕೆ ಭಿನ್ನಾಭಿಪ್ರಾಯ ಬರುವ ಸಾಧ್ಯತೆ ಇದೆ.
ಮಿಥುನ:- ಪರಾಕ್ರಮ ಕೆಲಸಗಳಲ್ಲಿಯಶಸ್ಸು ದೊರೆಯಲಿದೆ. ಸಹೋದರರು ನಿಮ್ಮ ಇಚ್ಛೆಯಂತೆ ನಡೆದುಕೊಳ್ಳುವರು. ಬಾಕಿ ಬರಬೇಕಾಗಿದ್ದ ಹಣ ಕೈಸೇರುವ ಸಂದರ್ಭವಿದೆ. ಕೌಟುಂಬಿಕ ನೆಮ್ಮದಿ ನಿಮಗೆ ಹರ್ಷವನ್ನುಂಟು ಮಾಡುವುದು.

ಕಟಕ:- ಹುಡುಕುತ್ತಿದ್ದ ಬಳ್ಳಿ ಕಾಲಿಗೆ ಸಿಲುಕಿಕೊಂಡಂತೆ ನೀವು ಅಪೇಕ್ಷಿಸಿದ್ದ ವ್ಯಕ್ತಿಯ ಭೇಟಿ ನಿಮಗಾಗುವುದು. ಅವರಿಂದ ಮಹತ್ತರವಾದ ವಿಷಯಗಳನ್ನು ಅರಿಯುವಿರಿ. ಹೊಸ ಯೋಜನೆಯನ್ನು ರೂಪಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ನಿಮ್ಮ ನಿಷ್ಠುರ ಮಾತುಗಳಿಗೆ ಹೆದರಿ ಜನರು ನಿಮ್ಮಿಂದ ದೂರ ಸರಿಯುವ ಸಾಧ್ಯತೆ ಇದೆ. ಆದರೆ ಕೆಲವೊಮ್ಮೆ ನಿಷ್ಠುರತೆ, ನಿರ್ಬಂಧತೆ ಬೇಕಾಗುವುದು. ನಿರ್ಬಂಧವಿಲ್ಲದೆ ನಿರ್ವಹಣೆ ಅಸಾಧ್ಯ ಎನ್ನುವುದು ನಿಮ್ಮ ಧ್ಯೇಯವಾಕ್ಯವಾಗಿರುತ್ತದೆ. ಕೆಲವರಿಗೆ ಇದು ಕಿರಿಕಿರಿ ಎನಿಸುವುದು.

ಕನ್ಯಾ:- ಊದಿನಕಡ್ಡಿಯಿಂದ ಹಂಡೆ ನೀರನ್ನು ಕಾಯಿಸಲು ಆಗುವುದಿಲ್ಲ. ಅಂತೆಯೇ ನಿಮ್ಮ ಸೌಮ್ಯ ಸ್ವಭಾವದಿಂದ ಮಹತ್ತರ ಕೆಲಸವನ್ನು ಸಾಧಿಸಲು ಆಗುವುದಿಲ್ಲ. ಹಾಗಾಗಿ ಕೆಲವು ಕಾರ್ಯಗಳಿಗೆ ಮನಸ್ಸಿನ ದೃಢತೆ ಬೇಕಾಗುವುದು.

ತುಲಾ:- ಸ್ವಸ್ಥ ಮನಸ್ಸು ಸ್ವಸ್ಥ ಆರೋಗ್ಯವನ್ನುಂಟು ಮಾಡುವುದು. ಹಾಗಾಗಿ ಮನಸ್ಸು ಮಧುರತೆಯಿಂದ ಕೂಡಿದ್ದು, ಪ್ರಮುಖ ಕೆಲಸ ಕಾರ್ಯಗಳು ದೈವದ ಸಹಾಯದಿಂದ ಪೂರ್ಣಗೊಳ್ಳುವುವು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ:- ನೀರಲ್ಲಿಮುಳುಗುವವನಿಗೆ ಹುಲ್ಲುಕಡ್ಡಿ ಆಸರೆಯೆಂಬಂತೆ ಇಷ್ಟಬಂಧುಮಿತ್ರರ ಸಹಾಯ ಮತ್ತು ಅವರ ಸಹಾನುಭೂತಿಯ ಮಾತುಗಳು ನಿಮ್ಮಲ್ಲಿಹೊಸ ಚೈತನ್ಯ ತುಂಬುತ್ತವೆ. ಜೀವನದಲ್ಲಿಹೊಸ ಹುರುಪಿನಿಂದ ಕಾರ್ಯಪ್ರವೃತ್ತರಾಗಿ.

ಧನುಸ್ಸು:- ಮನೆಯಲ್ಲಿಸಣ್ಣಪುಟ್ಟ ವಸ್ತುಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಮನಸ್ಸು ಕಿರಿಕಿರಿಯನ್ನು ಅನುಭವಿಸುವುದು. ಕಳೆದುಕೊಂಡ ವಸ್ತುಗಳನ್ನು ಪುನಃ ಪಡೆಯುವಿರಿ. ಪ್ರಯಾಣದಲ್ಲಿಎಚ್ಚರಿಕೆ ಇರಲಿ.

ಮಕರ:- ವಿವಿಧ ಮೂಲಗಳಿಂದ ಹಣ ಬಂದರೂ ಅಷ್ಟೇ ವೇಗದಲ್ಲಿಖರ್ಚಾಗುವುದು. ಆದರೆ ನಿಮ್ಮ ಮನೋಗತ ಕಾರ್ಯವು ಸಿದ್ಧಿಸುವುದು. ಉದರ ಶೂಲೆಗೆ ಸಂಬಂಧಪಟ್ಟಂತೆ ವೈದ್ಯರನ್ನು ಭೇಟಿ ಮಾಡಬೇಕಾಗುವುದು.

ಕುಂಭ:- ರಾಜಕೀಯ ಮುಖಂಡರ ಅಥವಾ ಉನ್ನತ ಅಧಿಕಾರಿಗಳ ಭೇಟಿಯಿಂದ ಕಾರ್ಯ ಸಿದ್ಧಿಸುವುದು. ಮದುವೆ ಪ್ರಸ್ತಾಪ ಬರುವ ಸಾಧ್ಯತೆ ಇದ್ದು ಅದನ್ನು ತಿರಸ್ಕರಿಸುವಿರಿ.

ಮೀನ:- ಮನಸ್ಸಿನ ವೇಗವನ್ನು ಅಳೆಯಲು ಆಗುವುದಿಲ್ಲ. ಒಮ್ಮೆ ಧನಾತ್ಮಕವಾಗಿ ಚಿಂತಿಸಿದರೆ ಮತ್ತೊಮ್ಮೆ ಋುಣಾತ್ಮಕವಾಗಿ ಚಿಂತಿಸುವುದು. ಹಾಗಾಗಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳದಿರುವುದು ಉತ್ತಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ