ಆ್ಯಪ್ನಗರ

Nithya Bhavishya: ಸಿಂಹ ರಾಶಿಯವರೇ ಸಮಸ್ಯೆಗಳ ನಡುವೆಯೇ ಜೀವನ ನಡೆಸುವುದು ಅನಿವಾರ್ಯ

ಮೀನ ರಾಶಿಯವರೇ ವ್ಯಾಜ್ಯದ ಕುರಿತು ಹೊಂದಾಣಿಕೆಗಾಗಿ ಸಂಬಂಧಿಗಳ ಸಹಾಯ ಸಿಗಲು ವಿಫುಲ ಅವಕಾಶಗಳಿವೆ. ಸಮಸ್ಯೆ ಸರಿಪಡಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ತೊಂದರೆ ಇರುವುದಿಲ್ಲ. ಮಕ್ಕಳು ನಿಮ್ಮನ್ನು ಗೌರವಿಸುವರು.

Vijaya Karnataka 20 Jan 2020, 5:59 am
ಮೇಷ:- ವ್ಯಾಪಾರದಲ್ಲಿ ಹಲವು ಜನ ಹೊಸ ವಹಿವಾಟಿನ ಮಳಿಗೆ ತೆರೆಯಲು ಸಲಹೆ ನೀಡುವರು. ಇನ್ನು ಕೆಲವರು ನೀವು ಇರುವ ರಾಜಕೀಯ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬಂದು ಬಿಡಿ ಎಂದು ದುಂಬಾಲು ಬೀಳುವರು. ಸದ್ಯಕ್ಕೆ ಆತುರದ ನಿರ್ಧಾರ ಮಾಡುವುದು ಒಳ್ಳೆಯದಲ್ಲ.
Vijaya Karnataka Web ದಿನ ಭವಿಷ್ಯ


ವೃಷಭ:- ವಿದ್ಯಾರ್ಥಿಗಳಿಗೆ ಹೆಚ್ಚಿನ ವ್ಯಾಸಂಗದ ಬಗೆಗಿನ ಅವಕಾಶಗಳು ಹೇರಳವಾಗಿವೆ. ಕೆಲವು ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುವುವು. ಸಂಗಾತಿಯ ಪ್ರೀತಿ ವಾತ್ಸಲ್ಯಕ್ಕೆ ಕರಗಿ ಹೋಗುವಿರಿ.

ಮಿಥುನ:- ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಉನ್ನತ ಅವಕಾಶಗಳು ಬರುವುವು. ನೀವು ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಮುತುವರ್ಜಿಯಿಂದ ವರ್ತಿಸಿದಲ್ಲಿ ಹೆಚ್ಚಿನ ಲಾಭ ಮತ್ತು ಗೌರವವನ್ನು ಸಾಮಾಜಿಕ ಕ್ಷೇತ್ರದಲ್ಲಿ ಹೊಂದುವಿರಿ.

ಸಿಂಹ ರಾಶಿಯವರೇ ನೀವು ಅಂದುಕೊಂಡಂತೆ ಎಲ್ಲ ಕೆಲಸಗಳು ಸರಾಗವಾಗಿ ಸಾಗುವವು: ನಿಮ್ಮ ವಾರ ಭವಿಷ್ಯ ನೋಡಿ

ಕಟಕ:- ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಕೊಟ್ಟ ಸಾಲದ ಹಣ ಹಿಂತಿರುಗಲು ದೈವ ಬಲದ ಸಹಾಯ ದೊರೆಯುವುದು. ಹಾಗಾಗಿ ನಿಮ್ಮಿಂದ ಸಾಲ ಪಡೆದವರು ತಾವೇ ಖುದ್ದಾಗಿ ನಿಮ್ಮ ಬಳಿ ಬಂದು ಹಣ ಮರುಪಾವತಿ ಮಾಡುವರು.

ಸಿಂಹ:- ಸಮಸ್ಯೆಗಳ ನಡುವೆಯೇ ಜೀವನ ನಡೆಸುವುದು ಅನಿವಾರ್ಯ. ಅಂತೆಯೇ ನಿಮ್ಮ ಬುದ್ಧಿ ಚಾತುರ್ಯದ ಫಲವಾಗಿ ಸಾಫಲ್ಯತೆ ಸಿಗಲು ಮಕ್ಕಳಿಂದ ಬೆಂಬಲ ದೊರೆಯುವುದು. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.

ಕನ್ಯಾ:- ಚಿಕ್ಕ ವಿಷಯವನ್ನು ದೊಡ್ಡದಾಗಿಸಿ ಪ್ರಕರಣವನ್ನು ಹಿಗ್ಗಿಸಲು ಹೋಗಬೇಡಿ. ಬಾಳಸಂಗಾತಿಯ ಕೋಪಕ್ಕೆ ಅವಕಾಶ ಕೊಡದಿರಿ. ಇದ್ದ ವಿಷಯವನ್ನು ಕುಳಿತು ನೇರವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ತುಲಾ:- ನಿಮ್ಮ ಸಂಬಂಧಿಗಳು ಹಳೆಯ ಆಸ್ತಿ ವಿಚಾರದಲ್ಲಿ ಹೊಸ ತಗಾದೆ ತೆಗೆದು ಕಿರಿಕಿರಿ ಎಬ್ಬಿಸುವ ಸಾಧ್ಯತೆ ಇದೆ. ನಿಮ್ಮ ಬೀಗರ ಮನೆಯ ಸಮಸ್ಯೆಯ ವಿಚಾರದಲ್ಲಿ ಮೂಗು ತೂರಿಸುವುದು ಒಳ್ಳೆಯದಲ್ಲ. ಅವರ ಮನೆ ವಿಚಾರ ಬಗೆಹರಿಸಲು ಹೋಗಬೇಡಿ.

ಮಕರ ರಾಶಿಗೆ ಶನಿ ಪ್ರವೇಶ: ಮಿಥುನ ರಾಶಿಯ ಮೇಲೆ ಉಂಟಾಗುವ ಫಲಗಳೇನು ಗೊತ್ತಾ?

ವೃಶ್ಚಿಕ:- ನಿಮಗೆ ನಿಮ್ಮದೇ ಆದ ಹೊಸ ಮನೆಯನ್ನು ಕಟ್ಟಲು ಹೊಸ ವಿನ್ಯಾಸಕಾರರೊಬ್ಬರ ಸಲಹೆ ಸೂಚನೆಗಳನ್ನು ಪಡೆಯುವಿರಿ. ಇಲ್ಲವೆ ನಿಮ್ಮದೇ ಆದ ಬೃಹತ್‌ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಲು ಉತ್ತಮ ದಿನವಾಗಿರುತ್ತದೆ.

ಧನುಸ್ಸು:- ಆರೋಗ್ಯದ ಕಡೆ ಗಮನ ಹರಿಸಿ. ವಾತಾವರಣ ಬದಲಾವಣೆಯಿಂದ ಅಜೀರ್ಣ ಕಾಡುವ ಸಾಧ್ಯತೆ ಇದೆ. ವೈದ್ಯರ ಸೂಕ್ತ ಸಲಹೆಯನ್ನು ಪಡೆಯುವುದು ಒಳ್ಳೆಯದು.

ಮಕರ:- ಕೆಲಸ ಮಾಡುವ ಕಚೇರಿಯಲ್ಲಿ ಪದೋನ್ನತಿಯ ವಿಚಾರದಲ್ಲಿ ನಿಮ್ಮ ಪರವಾಗಿ ಕೆಲವರು ಮೇಲಧಿಕಾರಿಗಳಿಗೆ ಒತ್ತಡ ಹೇರುವರು. ಅದು ಕಾರ್ಯರೂಪಕ್ಕೂ ಬರುವ ಸಾಧ್ಯತೆ ಇರುವುದು.

ಶನಿ ಫಲ 2020: ಕಟಕ ರಾಶಿಯವರಿಗೆ ಯಾವ ಫಲಗಳು ಉಂಟಾಗುತ್ತವೆ ಗೊತ್ತಾ?

ಕುಂಭ:- ಹಲವು ಹೊಸ ವ್ಯಕ್ತಿಗಳು ನಿಮ್ಮ ವಹಿವಾಟಿನ ವಿಚಾರದಲ್ಲಿ ನೀಡುವ ಸಲಹೆ ಸೂಚನೆಗಳಿಗೆ ನಿಮ್ಮ ನಿರ್ಧಾರವನ್ನು ಪ್ರಕಟ ಮಾಡದಿರಿ. ತಾಳಿದವನು ಬಾಳಿಯಾನು ಎಂಬ ತತ್ವವನ್ನು ಪಾಲಿಸಿ.

ಮೀನ:- ವ್ಯಾಜ್ಯದ ಕುರಿತು ಹೊಂದಾಣಿಕೆಗಾಗಿ ಸಂಬಂಧಿಗಳ ಸಹಾಯ ಸಿಗಲು ವಿಫುಲ ಅವಕಾಶಗಳಿವೆ. ಸಮಸ್ಯೆ ಸರಿಪಡಿಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ತೊಂದರೆ ಇರುವುದಿಲ್ಲ. ಮಕ್ಕಳು ನಿಮ್ಮನ್ನು ಗೌರವಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ