ಆ್ಯಪ್ನಗರ

Nithya Bhavishya: ಮೀನರಾಶಿಯವರೇ ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದಗಳು ಬಂದರೂ ಕಿವಿಗೊಡದೇ ಧೈರ್ಯದಿಂದಿರಿ

ಕನ್ಯಾರಾಶಿಯವರೇ ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಸಂಭಾಳಿಸಿ. ಹಣಕಾಸಿನ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಸಲಹೆ ಪಡೆಯಿರಿ. ಆಪತ್ತು ಎದುರಾಗುವ ಮುನ್ನ ಅದರ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವುದು ಒಳ್ಳೆಯದು.

Vijaya Karnataka 22 Oct 2019, 5:53 am
ಮೇಷ:- ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಾಫಲಗಳು ದೊರೆಯುವುವು. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ಹಾಗಾಗಿ ಯಾರಿಗೂ ಉಪದೇಶ ನೀಡಲು ಮುಂದಾಗದಿರಿ.

ಮೀನ ರಾಶಿಯವರಿಗೆ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು; ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ವೃಷಭ:- ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಅಪಾರವಾಗಿವೆ. ಅವರು ಅವನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಇದರಿಂದ ನಿಮಗೆ ಆತ್ಮತೃಪ್ತಿ ಮತ್ತು ಧನ್ಯತಾಭಾವ ಮೂಡುವುದು.

ಮಿಥುನ:- ದೂರದ ಊರಿನಿಂದ ಅಥವಾ ವಿದೇಶದಿಂದ ಬಂದಂತಹ ಸ್ನೇಹಿತರು ಅಥವಾ ಬಂಧುಗಳು ನಿಮ್ಮ ಜೊತೆಯಲ್ಲಿ ವ್ಯಾಜ್ಯ ಮಾಡುವ ಸಾಧ್ಯತೆ ಇದೆ. ಆದರೆ ನಿಮ್ಮ ಮೇಲೆ ದೈವಾನುಗ್ರಹ ಇರುವುದರಿಂದ ನಿಮ್ಮ ನಡೆ-ನುಡಿಯು ಸತ್ಯವಾಗಿದೆ ಎಂದು ಅವರು ಅರಿತುಕೊಳ್ಳುವರು.

ಕಟಕ:- ಮನೆ, ಮಠ ಅಥವಾ ಸಂಘ ಪರಿವಾರಗಳಲ್ಲಿ ನಿಮ್ಮ ಮಾತೇ ಅಂತಿಮವಾಗಬೇಕೆಂಬ ಆಲೋಚನೆಗೆ ತಡೆಯೊಡ್ಡಿ. ಎಲ್ಲಾ ಕಾರ್ಯವೂ ನನ್ನಿಂದಲೇ ಆಯಿತು ಎನ್ನುವುದಕ್ಕಿಂತ ನಿಮ್ಮ ಸಹಕಾರದಿಂದ ಆಯಿತು ಎನ್ನಿ.

ಕಟಕ ರಾಶಿಯವರೇ, ಅನಗತ್ಯ ಯೋಚನೆಗಳಿಂದ ಒತ್ತಡಕ್ಕೊಳಗಾಗಿ ಮಾನಸಿಕ ಅಶಾಂತಿ ಹೆಚ್ಚುವುದು; ನಿಮ್ಮ ಅಕ್ಟೋಬರ್‌ ತಿಂಗಳ ಭವಿಷ್ಯ ನೋಡಿ

ಸಿಂಹ:- ಮಕ್ಕಳ ಬಗ್ಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುವುದು. ಆದರೆ ಉನ್ನತ ಸ್ಥಾನದಲ್ಲಿರುವ ನೀವು ಕೆಳಗೆ ನಿಂತು ಸಾಮಾನ್ಯ ಜನರಂತೆ ಚಿಂತಿಸಿ ಆಗ ನಿಮ್ಮ ಕಾರ್ಯಗಳು ಸುಲಲಿತವಾಗುವುವು.

ಕನ್ಯಾ:- ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಸಂಭಾಳಿಸಿ. ಹಣಕಾಸಿನ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಸಲಹೆ ಪಡೆಯಿರಿ. ಆಪತ್ತು ಎದುರಾಗುವ ಮುನ್ನ ಅದರ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳುವುದು ಒಳ್ಳೆಯದು.

ತುಲಾ:- ಕಬ್ಬು ಸಿಹಿ ಇದೆ ಎಂದು ಸಿಪ್ಪೆಯ ಸಹಿತ ಅಗೆಯಲು ಆಗುವುದಿಲ್ಲ. ಅಂತೆಯೇ ಕೆಲವು ವಿಚಾರಗಳ ಮೂಲಕ್ಕೆ ಕೈಹಾಕಲು ಮುಂದಾಗದಿರಿ. ಇದರಿಂದ ನೋವಿಗೆ ದಾರಿ ಆಗುವುದು. ಅರಿತು ಆಳಿದರೆ ಆರು ವರ್ಷ ಮರೆತು ಬಾಳಿದರೆ ಮೂರು ವರ್ಷ ಎಂಬುದು ನೆನಪಿರಲಿ.

ವೃಶ್ಚಿಕ:- ಕ್ರಮವರಿತು ಕೆಲಸ ಮಾಡುವ ನೀವಿಂದು ಹಂತ ಹಂತವಾಗಿ ಬೆಳೆದು ಎತ್ತರ ಸ್ಥಾನದಲ್ಲಿರುವಿರಿ. ಹಾಗಾಗಿ ನಿಮ್ಮ ಬಳಿ ಸಹಾಯ ಸಹಕಾರ ಕೇಳಲು ಜನರು ಬರುವರು. ಅವರನ್ನು ತಿರಸ್ಕಾರದಿಂದ ಕಾಣದಿರಿ.

ಧನುಸ್ಸು:- ಹಳೆಯ ಅನವಶ್ಯಕ ಕಡತಗಳನ್ನು ನಾಶ ಮಾಡುವ ಸಂದರ್ಭದಲ್ಲಿ ಬೇಕಾದ ಕಡತಗಳನ್ನು ನಾಶಗೊಳಿಸದಿರಿ. ಆದಷ್ಟು ಕಬ್ಬಿಣಕ್ಕೆ ಸಂಬಂಧಪಟ್ಟ ವಸ್ತುಗಳ ವಿಲೇವಾರಿಯಲ್ಲಿ ಜಾಗ್ರತೆ ಇರಲಿ. ಇಲ್ಲವೆ ಅದಕ್ಕೆ ಸಂಬಂಧಪಟ್ಟ ಸಮಸ್ಯೆ ಬರಬಹುದು.

ಕಟಕ -ಕನ್ಯಾ ರಾಶಿಯವರ ಮಧ್ಯೆ ಪ್ರೀತಿ, ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಹೇಗಿರುತ್ತೆ ಗೊತ್ತಾ?

ಮಕರ:- ಅನವಶ್ಯಕ ವಿಚಾರಗಳಲ್ಲಿ ಹಣ ಸುರಿಯಬೇಡಿ. ಅರ್ಥಾತ್‌ ಯಾರಾದರೂ ನೌಕರಿ ಕೊಡಿಸುತ್ತೇನೆಂದು ಹೇಳಿ ಹಣ ಕೇಳುವ ಸಂದರ್ಭವಿದೆ. ಈ ಬಗ್ಗೆ ಸೂಕ್ತ ಮಧ್ಯವರ್ತಿಯ ಮೂಲಕ ಮಾತುಕತೆ ನಡೆಸಿ.

ಕುಂಭ:- ವಿರಸವೇ ಮರಣ ಸರಸವೇ ಜೀವನ ಎನ್ನುವಂತೆ ಎಲ್ಲರೊಂದಿಗೆ ವಿನೋದವಾಗಿ ಸ್ನೇಹಪೂರ್ಣವಾಗಿ ವರ್ತಿಸುವ ಗುಣವೇ ನಿಮ್ಮನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮೀನ:- ನಿಮ್ಮ ಕುರಿತಾಗಿ ಇಲ್ಲಸಲ್ಲದ ಹಲವಾರು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಿ. ಇದರಿಂದ ನಿಮಗೆ ಅನುಕೂಲವಾಗುವುದು. ಮನೆಯ ಸದಸ್ಯರು ನಿಮಗೆ ಸಹಕಾರಿಯಾಗಿ ನಿಲ್ಲುವರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ