ಆ್ಯಪ್ನಗರ

Nithya Bhavishya: ಮಕರ ರಾಶಿಯವರೇ ಬಾಳಸಂಗಾತಿಯ ಮಾತುಗಳನ್ನು ಆಲಿಸಿ, ಅವುಗಳನ್ನು ಪಾಲಿಸಲು ಪ್ರಯತ್ನಿಸಿ

ವೃಶ್ಚಿಕ ರಾಶಿಯವರೇ ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ವಿಚಾರಗಳಲ್ಲಿ ಕೆಲವು ವಿಚಾರಗಳಿಗೆ ಸಮ್ಮತಿ ಸೂಚಿಸಿ. ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು.

Vijaya Karnataka 23 Jan 2020, 9:55 am
ಮೇಷ:- ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೇರಳವಾಗಿರುವುದು. ಆದರೆ ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪನ್ನು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ.
Vijaya Karnataka Web ದಿನ ಭವಿಷ್ಯ


ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ, ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್‌ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ಒಳಿತಾಗುವುದು.

ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ.

ಸಿಂಹ ರಾಶಿಯವರೇ ನೀವು ಅಂದುಕೊಂಡಂತೆ ಎಲ್ಲ ಕೆಲಸಗಳು ಸರಾಗವಾಗಿ ಸಾಗುವವು: ನಿಮ್ಮ ವಾರ ಭವಿಷ್ಯ ನೋಡಿ

ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯನ್ನು ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.

ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್‌ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.

ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.

30 ವರ್ಷಗಳ ನಂತರ ಮಕರ ರಾಶಿ ಪ್ರವೇಶಿಸಲಿರುವ ಶನಿ: ಮಹತ್ವವೇನು?

ತುಲಾ:- ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ. ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಲ್ಲಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷಕನಾದ ಶ್ರೀ ಲಕ್ಷ್ಮೀನಾರಸಿಂಹನನ್ನು ನೆನೆಯಿರಿ.

ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ವಿಚಾರಗಳಲ್ಲಿ ಕೆಲವು ವಿಚಾರಗಳಿಗೆ ಸಮ್ಮತಿ ಸೂಚಿಸಿ. ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೊಸತನ ಮೂಡಿಬರಲಿದೆ.

ಧನುಸ್ಸು:- ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಅದರಿಂದ ರಕ್ಷಣೆ ಪಡೆಯಲು ಸೂರ್ಯ ಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.

ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವುಗಳನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆ ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.

ಶನಿ ಸಂಚಾರ ಫಲ: ಕನ್ಯಾ ರಾಶಿಗೆ ಪಂಚಮಶನಿಯಿಂದ ಉಂಟಾಗುವ ಫಲಗಳೇನು ಗೊತ್ತಾ?

ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರಲಾರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.

ಮೀನ:- ಮನೋಮಂಡಲದಲ್ಲಿನ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ನೀವು ಆಂಜನೇಯ ಸ್ವಾಮಿ ಮಂತ್ರ ಇಲ್ಲವೇ ಗಣಪತಿ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳು ದಾನ ಮಾಡುವುದು ಕ್ಷೇಮ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ