ಮೇಷ:- ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೇರಳವಾಗಿರುವುದು. ಆದರೆ ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪನ್ನು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ.
ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ, ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ಒಳಿತಾಗುವುದು.
ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ.
ಸಿಂಹ ರಾಶಿಯವರೇ ನೀವು ಅಂದುಕೊಂಡಂತೆ ಎಲ್ಲ ಕೆಲಸಗಳು ಸರಾಗವಾಗಿ ಸಾಗುವವು: ನಿಮ್ಮ ವಾರ ಭವಿಷ್ಯ ನೋಡಿ
ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯನ್ನು ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.
ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.
ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.
30 ವರ್ಷಗಳ ನಂತರ ಮಕರ ರಾಶಿ ಪ್ರವೇಶಿಸಲಿರುವ ಶನಿ: ಮಹತ್ವವೇನು?
ತುಲಾ:- ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ. ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಲ್ಲಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷಕನಾದ ಶ್ರೀ ಲಕ್ಷ್ಮೀನಾರಸಿಂಹನನ್ನು ನೆನೆಯಿರಿ.
ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ವಿಚಾರಗಳಲ್ಲಿ ಕೆಲವು ವಿಚಾರಗಳಿಗೆ ಸಮ್ಮತಿ ಸೂಚಿಸಿ. ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೊಸತನ ಮೂಡಿಬರಲಿದೆ.
ಧನುಸ್ಸು:- ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಅದರಿಂದ ರಕ್ಷಣೆ ಪಡೆಯಲು ಸೂರ್ಯ ಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.
ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವುಗಳನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆ ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.
ಶನಿ ಸಂಚಾರ ಫಲ: ಕನ್ಯಾ ರಾಶಿಗೆ ಪಂಚಮಶನಿಯಿಂದ ಉಂಟಾಗುವ ಫಲಗಳೇನು ಗೊತ್ತಾ?
ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರಲಾರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.
ಮೀನ:- ಮನೋಮಂಡಲದಲ್ಲಿನ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ನೀವು ಆಂಜನೇಯ ಸ್ವಾಮಿ ಮಂತ್ರ ಇಲ್ಲವೇ ಗಣಪತಿ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳು ದಾನ ಮಾಡುವುದು ಕ್ಷೇಮ.
ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ, ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರುವುದನ್ನು ಕಲಿಯಿರಿ. ಇದರಿಂದ ಒಳಿತಾಗುವುದು.
ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದಿಲ್ಲ.
ಸಿಂಹ ರಾಶಿಯವರೇ ನೀವು ಅಂದುಕೊಂಡಂತೆ ಎಲ್ಲ ಕೆಲಸಗಳು ಸರಾಗವಾಗಿ ಸಾಗುವವು: ನಿಮ್ಮ ವಾರ ಭವಿಷ್ಯ ನೋಡಿ
ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯನ್ನು ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.
ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.
ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.
30 ವರ್ಷಗಳ ನಂತರ ಮಕರ ರಾಶಿ ಪ್ರವೇಶಿಸಲಿರುವ ಶನಿ: ಮಹತ್ವವೇನು?
ತುಲಾ:- ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ. ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಲ್ಲಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷಕನಾದ ಶ್ರೀ ಲಕ್ಷ್ಮೀನಾರಸಿಂಹನನ್ನು ನೆನೆಯಿರಿ.
ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ವಿಚಾರಗಳಲ್ಲಿ ಕೆಲವು ವಿಚಾರಗಳಿಗೆ ಸಮ್ಮತಿ ಸೂಚಿಸಿ. ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೊಸತನ ಮೂಡಿಬರಲಿದೆ.
ಧನುಸ್ಸು:- ನಿಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಅದರಿಂದ ರಕ್ಷಣೆ ಪಡೆಯಲು ಸೂರ್ಯ ಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.
ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವುಗಳನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆ ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.
ಶನಿ ಸಂಚಾರ ಫಲ: ಕನ್ಯಾ ರಾಶಿಗೆ ಪಂಚಮಶನಿಯಿಂದ ಉಂಟಾಗುವ ಫಲಗಳೇನು ಗೊತ್ತಾ?
ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರಲಾರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.
ಮೀನ:- ಮನೋಮಂಡಲದಲ್ಲಿನ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ನೀವು ಆಂಜನೇಯ ಸ್ವಾಮಿ ಮಂತ್ರ ಇಲ್ಲವೇ ಗಣಪತಿ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳು ದಾನ ಮಾಡುವುದು ಕ್ಷೇಮ.