ಆ್ಯಪ್ನಗರ

Nithya Bhavishya: ಸಿಂಹ ರಾಶಿಯವರಿಗೆ ಮಕ್ಕಳಿಂದ ಸಿಹಿ ಸುದ್ದಿ

ಕಟಕ ರಾಶಿಯವರು ಅಧಿಕಾರ, ಗೌರವ ಹಾಗೂ ಪ್ರತಿಷ್ಠೆಗಳು ಬರಬೇಕೆಂದರೆ ಅದಕ್ಕೆ ದೈಹಿಕ ಮತ್ತು ಮಾನಸಿಕ ಶ್ರಮ ಅತ್ಯಗತ್ಯ. ಎಲ್ಲವನ್ನು ಬಿಟ್ಟು ನಿಮ್ಮ ಗುರಿಯೆಡೆಗೆ ಗಮನ ಹರಿಸಿದಲ್ಲಿ ಹೆಚ್ಚಿನ ಶುಭಫಲ ಕಾಣುವಿರಿ.

Vijaya Karnataka 24 Apr 2019, 5:00 am
ಮೇಷ:- ನಿಮ್ಮ ಅನೇಕ ಗೆಳೆಯರಿಂದ ಸಕಾರಾತ್ಮಕ ಬೆಂಬಲ ಪಡೆಯಲು ನಿಮಗಿಂದು ಉತ್ತಮ ಕಾಲವಾಗಿದೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ವಿವಿಧ ಮೂಲಗಳಿಂದ ಹಣಕಾಸಿನ ನೆರವು ಬರುವುದು.

ವೃಷಭ:- ದೂರದ ಬಂಧುವೊಬ್ಬರು ನಿಮ್ಮ ಕುಟುಂಬದ ಸಮಸ್ಯೆಗಳಿಗೆ ಪರಿಹಾರದ ಮಾರ್ಗಗಳನ್ನು ತಿಳಿಸಿಕೊಡುವರು. ಅದರಂತೆ ನೀವು ನಡೆದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಚಿಂತಿಸುವ ಅಗತ್ಯವಿಲ್ಲ.

ಮಿಥುನ:- ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬಂದರೂ ಕೆಲವೊಂದು ವಿಷಯಗಳಲ್ಲಿ ಆಂತರಿಕ ಹಿಂಜರಿಕೆ ಕಂಡುಬರುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ನಿಮ್ಮ ಸಂಗಾತಿಯ ಸಲಹೆ ಸಹಕಾರಗಳನ್ನು ಪಡೆಯುವುದು ಒಳಿತು.

ಕಟಕ:- ಅಧಿಕಾರ, ಗೌರವ ಹಾಗೂ ಪ್ರತಿಷ್ಠೆಗಳು ಬರಬೇಕೆಂದರೆ ಅದಕ್ಕೆ ದೈಹಿಕ ಮತ್ತು ಮಾನಸಿಕ ಶ್ರಮ ಅತ್ಯಗತ್ಯ. ಎಲ್ಲವನ್ನು ಬಿಟ್ಟು ನಿಮ್ಮ ಗುರಿಯೆಡೆಗೆ ಗಮನ ಹರಿಸಿದಲ್ಲಿ ಹೆಚ್ಚಿನ ಶುಭಫಲ ಕಾಣುವಿರಿ.

ಸಿಂಹ:- ಮಕ್ಕಳಿಂದ ಸಂತೋಷದ ವಾರ್ತೆ ಕೇಳಲಿದ್ದೀರಿ. ಅದಕ್ಕೂ ಹಾಗೂ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಮನಸ್ಸು ಹಕ್ಕಿಯಂತೆ ಹಾರಾಡುವುದು.

ಕನ್ಯಾ:- ಹಣದ ವಿಚಾರವಾಗಿ ಖಂಡಿತವಾಗಿ ನಿರಾಸಕ್ತರಾಗಬೇಡಿ. ನಿರ್ಲಕ್ಷ ದ ಕಾರಣಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಬಹು ನಿರೀಕ್ಷಿಸಿದ್ದ ಹಣ ಬರುವ ಸೂಚನೆ ಇದ್ದು, ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಜೊತೆ ನಿರಂತರ ಸಂಪರ್ಕದಲ್ಲಿರಿ. ಒಳಿತಾಗುವುದು.

ತುಲಾ:- ಯಶಸ್ಸುಗಳು ಸುಲಭವಾಗಿ ಬರುವುದಕ್ಕೆ ಇಂದಿನ ವರ್ತಮಾನ ನಿಮಗೆ ಸಹಕಾರ ನಿಡುವುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಅವರ ಸಲಹೆಯಂತೆ ಮುನ್ನಡೆಯುವುದು ಕ್ಷೇಮ. ತಡೆಹಿಡಿಯಲ್ಪಟ್ಟ ಹಣಕಾಸು ನಿಮಗೆ ದೊರೆಯುವುದು.

ವೃಶ್ಚಿಕ:- ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆ ಇರಲಿ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಜಾಗ್ರತೆ ಇರಲಿ. ನಗೆ ಹೋಗಿ ಹೊಗೆ ಆಗುವ ಸಾಧ್ಯತೆ ಇರುವುದು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ವೃತ್ತಿಯಲ್ಲಿ ಆದಷ್ಟು ಪ್ರಾಮಾಣಿಕತೆ ಇಟ್ಟುಕೊಂಡಲ್ಲಿ ಒಳಿತಾಗುವುದು.

ಧನುಸ್ಸು:- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾರ್ಯೋನ್ಮುಖರಾಗಲು ಉತ್ತಮ ಅವಕಾಶ ಇದೆ. ಈ ಅವಕಾಶವನ್ನು ತಪ್ಪಿಸಿಕೊಳ್ಳದಿರಿ. ಆಂಜನೇಯ ಸ್ವಾಮಿ ಮಂತ್ರ ಪಠಿಸುವುದರಿಂದ ಒಳಿತಾಗುವುದು. ಮಂದಾಗ್ನಿ ಸಂಬಂಧ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಮಕರ:- ನೀವು ಹಮ್ಮಿಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು. ಮುಂದಿನ ದಿನಗಳಿಂದ ಒಳಿತಾಗುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕುಂಭ:- ನೀವು ದಿನದಿಂದ ದಿನಕ್ಕೆ ಅಂತರ್‌ಮುಖಿಗಳಾಗುತ್ತಿರುವಿರಿ ಮತ್ತು ದೀರ್ಘ ಆಲೋಚನೆಯಿಂದ ಪ್ರಸ್ತುತ ಸುಖ ಕಳೆದುಕೊಳ್ಳುವಿರಿ. ಈಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ.

ಮೀನ:- ಸ್ವತಂತ್ರ ಉದ್ದಿಮೆದಾರರಿಗೆ ಉತ್ತಮ ಪ್ರಗತಿಯಿದೆ. ವ್ಯಾಪಾರ, ವಹಿವಾಟಿನಲ್ಲಿ ಹೆಚ್ಚಿನ ಲಾಭ ಹೊಂದುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ. ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರು ಹಾಕದಂತೆ ನೋಡಿಕೊಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ