ಆ್ಯಪ್ನಗರ

ಮಕರ ರಾಶಿಯವರೇ ವ್ಯಾಪಾರ-ವ್ಯವಹಾರಗಳಲ್ಲಿ ಬದಲಾವಣೆಯ ಗಾಳಿ ಬೀಸುವುದು

ಸಿಂಹ ರಾಶಿಯವರೇ ಎದುರಾಗುವ ಕಠಿಣ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಆದಾಗ್ಯೂ ಸಮಾಜದಲ್ಲಿ ನಿಮ್ಮ ಗೌರವಕ್ಕೆ ಕುಂದು ಬರಲಾರದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹೊಸಬರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು.

Vijaya Karnataka 27 Feb 2020, 5:37 pm
ಮೇಷ:- ಸ್ವಭಾವತಃ ಧಾರಾಳಿಯಾದ ನಿಮ್ಮನ್ನು ಇತರರು ಶೋಷಿಸಲು ಬಿಡದಿರಿ. ಸ್ವಲ್ಪ ಎಚ್ಚರದಿಂದ ಇರುವುದು ಒಳ್ಳೆಯದು. ಆರ್ಥಿಕ ವಿಚಾರದಲ್ಲಿ ಸಾಧಾರಣ ಫಲವಿದೆ. ಆರೋಗ್ಯದ ಕಡೆ ಗಮನ ಹರಿಸಿರಿ. ಮತ್ತು ಆರೋಗ್ಯದ ಸಲುವಾಗಿ ಮನೆ ವೈದ್ಯರನ್ನು ಭೇಟಿ ಮಾಡಿರಿ.
Vijaya Karnataka Web ದಿನ ಭವಿಷ್ಯ


ವೃಷಭ:- ಮನೆಯಲ್ಲಿನ ಸದಸ್ಯರ ಜೊತೆ ಮನ ಬಿಚ್ಚಿ ಮಾತನಾಡಿ ಇದರಿಂದಲೇ ಹಲವು ಸಮಸ್ಯೆಗಳು ದೂರವಾಗಲಿವೆ. ಸಂಗಾತಿಯ ಮಾತುಗಳು ನಿಮಗೆ ಅಪಥ್ಯ ಎನಿಸಿದರೂ ಅದರ ಹಿನ್ನೆಲೆಯನ್ನು ತಿಳಿದುಕೊಂಡರೆ ಸಂಗಾತಿಯ ಮಾತಿನಲ್ಲಿ ಸತ್ಯವಿರುವುದು ಗೊತ್ತಾಗುವುದು.

ಮಿಥುನ:- ವಿಘ್ನಗಳನ್ನು ನಿವಾರಿಸಿ ಒಳಿತಿನ ದಾರಿಯನ್ನು ತೋರಿಸಿಕೊಡಬಲ್ಲ ಶ್ರೀಗಜರಾಜನನ್ನು ಭಕ್ತಿಯಿಂದ ಸ್ತುತಿಸಿ. ಕೆಲವರಿಗೆ ಶಿರೋವೇದನೆಯು ಕಾಡುವ ಸಾಧ್ಯತೆ ಇರುವುದು. ಆದಿತ್ಯ ಹೃದಯವನ್ನು ಪಾರಾಯಣ ಮಾಡುವುದರಿಂದ ಒಳಿತಾಗುವುದು.

ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ

ಕಟಕ:- ಸಾಲಗಾರರ ನಿರಂತರ ಕಾಟವು ಜಿಗುಪ್ಸೆ ತರಬಹುದು. ಈ ಸಂದರ್ಭವನ್ನು ಬುದ್ಧಿಮತ್ತೆಯಿಂದ ನಿಭಾಯಿಸಿರಿ. ಹಣಕಾಸಿನ ವಿಚಾರವಾಗಿ ಸ್ನೇಹಿತರು ನಿಮಗೆ ಸಹಕಾರ ನೀಡುವ ಸಾಧ್ಯತೆ ಇರುವುದು.

ಸಿಂಹ:- ಎದುರಾಗುವ ಕಠಿಣ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವಿರಿ. ಆದಾಗ್ಯೂ ಸಮಾಜದಲ್ಲಿ ನಿಮ್ಮ ಗೌರವಕ್ಕೆ ಕುಂದು ಬರಲಾರದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹೊಸಬರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರಬೇಕು.

ಕನ್ಯಾ:- ಹೊಸದಾದ ಕೆಲಸವನ್ನು ಹುಡುಕುವ ಪ್ರಯತ್ನವನ್ನು ಚುರುಕುಗೊಳಿಸಲು ಉತ್ತಮವಾದ ದಿನ. ಹಾಗಾಗಿ ನಿಮ್ಮ ಮನೋಕಾಮನೆಗಳು ಈಡೇರುವವು. ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ತುಲಾ:- ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನಡೆಯುವುದು. ನೂತನ ಮನೆಯ ಕೆಲಸಗಳು ಭರದಿಂದ ಸಾಗುವವು. ಕೆಲಸದ ಒತ್ತಡದ ನಡುವೆ ನಿದ್ರೆ ಬಾರದೆ ಹೋಗುವ ಸಂದರ್ಭವಿರುತ್ತದೆ. ಮನೋನಿಯಾಮಕ ರುದ್ರದೇವರನ್ನು ಭಜಿಸಿರಿ.

ಯಾವ ರಾಶಿಯವರಿಗೆ ಯಾವ ರಾಶಿಯವರು ಉತ್ತಮ ಸ್ನೇಹಿತರಾಗುತ್ತಾರೆ ಗೊತ್ತಾ?

ವೃಶ್ಚಿಕ:- ನಿಮ್ಮ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಂತಹ ಜನರಿಂದ ದೂರವಾಗಿಯೇ ಉಳಿಯುವುದು ಒಳ್ಳೆಯದು. ಜೊತೆಯಲ್ಲಿ ತಾಳ್ಮೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಆಂಜನೇಯ ಸ್ವಾಮಿಯನ್ನು ಆರಾಧಿಸಿರಿ.

ಧನಸ್ಸು:- ಸುತ್ತಮುತ್ತಲಿನ ಜನರು ಉಪದೇಶಿಸಿ ನಿಮ್ಮ ತಲೆ ತಿನ್ನಬಹುದು. ಇಂದು ಎಲ್ಲಾ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುವುದು.

ಮಕರ:- ವ್ಯಾಪಾರ-ವ್ಯವಹಾರಗಳಲ್ಲಿ ಬದಲಾವಣೆಯ ಗಾಳಿ ಬೀಸುವುದು. ಕೆಲವು ಹೊಸ ಸೂತ್ರಗಳಿಂದ ಹೆಚ್ಚಿನದಾದ ಒಳಿತಾಗಲಿದೆ. ಆರ್ಥಿಕ ಸಮಸ್ಯೆ ಇಂದೇನೂ ಅಷ್ಟು ಕಾಡುವುದಿಲ್ಲ. ಹಿರಿಯರ ಆಶೀರ್ವಾದದಿಂದ ಒಳಿತಾಗುವುದು.

ಜನ್ಮಕುಂಡಲಿಯಲ್ಲಿ ಕೇತು ಶುಭ ಸ್ಥಾನದಲ್ಲಿದ್ದರೆ ಈ ಅದೃಷ್ಟ ಪಡೆಯಬಹುದು!

ಕುಂಭ:- ಗೃಹನಿರ್ಮಾಣಕ್ಕೆ ಬೇಕಾದ ಸಹಾಯವು ನಿಮ್ಮ ಪಾಲಿಗೆ ದೊರೆಯುವುದು. ಹಿರಿಯರೊಬ್ಬರ ಆಶೀರ್ವಾದದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯವು ಪೂರ್ಣಗೊಳ್ಳುವುದು. ನೀವು ಮಾಡುವ ಕೆಲಸದ ವಾತಾವರಣದಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುವುದು.

ಮೀನ:- ತೀರ ಬಿಗಿಯಾಗಿ ವರ್ತಿಸಲು ಮುಂದಾಗದಿರಿ. ಇದರಿಂದ ಉತ್ತಮ ಸಂಬಂಧಗಳು ಕಡಿದುಕೊಳ್ಳುವ ಭೀತಿ ಎದುರಾಗುವುದು. ಮೃದುವಾದ ಧೋರಣೆಯಿಂದಲೇ ಒಳಿತಿನ ದಾರಿ ಗೋಚರವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ