ಮೇಷ:- ಸಂತೋಷಕ್ಕೆ ಅನೇಕ ದಾರಿಗಳಿವೆ. ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೇರಳವಾಗಿವೆ. ಆ ದಾರಿಯಲ್ಲಿ ಕೂಡಾ ನೀವು ನಿಮ್ಮದೇ ಆದ ಛಾಪು ಅಥವಾ ಹೆಜ್ಜೆ ಗುರುತುಗಳನ್ನು ಮೂಡಿಸುವಿರಿ.
ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್ನ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರಿ. ಇದರಿಂದ ಒಳಿತಾಗುವುದು.
ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಇಲ್ಲ.
ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.
ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.
ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.
ತುಲಾ:- ನಿಮ್ಮ ವೈರಿಗಳ ಬಗ್ಗೆ ಎಚ್ಚರಿಕೆ ಇರಲಿ. ಈ ಬಗ್ಗೆ ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಿಂದಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷ ಕನಾದ ಶ್ರೀಲಕ್ಷ್ಮೀನಾರಸಿಂಹನನ್ನು ನೆನೆಯಿರಿ.
ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ಕೆಲ ವಿಚಾರಗಳ ಬಗ್ಗೆ ಸಮ್ಮತಿ ಸೂಚಿಸಿ. ಆಗ ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೊಸತನ ಮೂಡಿಬರುವುದು.
ಧನುಸ್ಸು:- ಆರೋಗ್ಯಂ ಭಾಸ್ಕರಾಚೇತ್ ಎಂದರು ಹಿರಿಯರು. ನಿಮಗೆ ಕಾಡುತ್ತಿರುವ ಅನಾರೋಗ್ಯದಿಂದ ರಕ್ಷ ಣೆ ಪಡೆಯಲು ಸೂರ್ಯಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.
ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆಯು ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.
ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.
ಮೀನ:- ಮನೋಮಂಡಲದಲ್ಲಿ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ಸದ್ಗುರು ದತ್ತಾಷ್ಟಕವನ್ನಾಗಲಿ ಇಲ್ಲವೆ ನೀವು ನಂಬಿದ ಗುರುವಿನ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳನ್ನು ದಾನ ಮಾಡಿದರೆ ಉತ್ತಮ.
ವೃಷಭ:- ಕಾಲ ಒಂದೇ ತೆರನಾಗಿರುವುದಿಲ್ಲ. ಹಾಗಾಗಿ ಎಂದಿನ ನಗೆ ತಮಾಷೆಯನ್ನು ಮಾಡಲು ಹೋಗಿ ಕಚೇರಿಯಲ್ಲಿ ಬಾಸ್ನ ಕೆಂಗಣ್ಣಿಗೆ ಗುರಿ ಆಗುವಿರಿ. ಆದಷ್ಟು ಸೌಮ್ಯತೆಯಿಂದ ಇರಿ. ಇದರಿಂದ ಒಳಿತಾಗುವುದು.
ಮಿಥುನ:- ಒಗಟಾಗಿ ಮಾತನಾಡುವ ಮಂದಿ ನಿಮ್ಮನ್ನು ಉದ್ರೇಕಿಸುತ್ತಾರೆ. ಆದರೆ ಅದನ್ನು ಗಹನವಾಗಿ ತೆಗೆದುಕೊಳ್ಳದೆ ತಿಳಿಹಾಸ್ಯದಿಂದ ಅವರೆಲ್ಲರನ್ನು ಸಂಭಾಳಿಸುವಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಗತಿ ಇಲ್ಲ.
ಕಟಕ:- ಆರೋಗ್ಯವನ್ನು ಅಲಕ್ಷಿಸಬಾರದು ಎಂಬುದು ನೆನಪಿರಲಿ. ಕೆಲಸಕ್ಕೆ ರಜೆ ಹಾಕಿಯಾದರೂ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ. ಸಂಜೆಯ ವೇಳೆಗೆ ನಿಮಗೆ ಇಷ್ಟವಾದ ಪುಸ್ತಕ ಇಲ್ಲವೆ ಕಾದಂಬರಿಯನ್ನು ಓದಿ.
ಸಿಂಹ:- ನಿಮ್ಮ ಲೇವಾದೇವಿ ವ್ಯವಹಾರದ ಪತ್ರಗಳು ಮತ್ತು ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಹೊರಗಡೆ ಕೊಂಡೊಯ್ಯುವಾಗ ಜಾಗ್ರತೆ ಇರಲಿ. ಕೆಲವು ಪತ್ರಗಳು ಕಣ್ಮರೆ ಆಗುವ ಸಾಧ್ಯತೆಗಳು ಇವೆ. ಅಪರಿಚಿತ ಜನರೊಡನೆ ಹೆಚ್ಚು ಸಲುಗೆ ಬೇಡ.
ಕನ್ಯಾ:- ಬೇಡ ಬೇಡ ಎಂದರೂ ಒತ್ತಡ ತರುವ ಮಂದಿ ಹಣಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ. ಹಾಗಾಗಿ ನೀವು ನಿಷ್ಠುರ ವ್ಯಕ್ತಿ ಎನಿಸಿಕೊಂಡರೂ ಪರವಾಗಿಲ್ಲ. ಅನ್ಯರಿಗೆ ಹಣಕಾಸಿನ ನೆರವು ನೀಡದಿರಿ.
ತುಲಾ:- ನಿಮ್ಮ ವೈರಿಗಳ ಬಗ್ಗೆ ಎಚ್ಚರಿಕೆ ಇರಲಿ. ಈ ಬಗ್ಗೆ ಮೈಮರೆಯಬೇಡಿ. ಅವರು ನಿಮ್ಮನ್ನು ಯಾವ ರೀತಿಯಿಂದಾದರೂ ಖೆಡ್ಡಾಕ್ಕೆ ಕೆಡವಿಕೊಳ್ಳುವ ಸಾಧ್ಯತೆ ಇದೆ. ಮನೆಯಿಂದ ಹೊರಗಡೆ ಹೊರಡುವಾಗ ಭಯ ರಕ್ಷ ಕನಾದ ಶ್ರೀಲಕ್ಷ್ಮೀನಾರಸಿಂಹನನ್ನು ನೆನೆಯಿರಿ.
ವೃಶ್ಚಿಕ:- ಹೊಗಳುವ ಮಂದಿಯನ್ನು ನಂಬಬೇಡಿ. ಆದರೆ ನಂಬಿದಂತೆ ನಂಬಿ ಅವರು ತಿಳಿಸುವ ಕೆಲ ವಿಚಾರಗಳ ಬಗ್ಗೆ ಸಮ್ಮತಿ ಸೂಚಿಸಿ. ಆಗ ಅವರ ನಿಜವಾದ ಆಂತರ್ಯ ನಿಮಗೆ ತಿಳಿಯುವುದು. ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಹೊಸತನ ಮೂಡಿಬರುವುದು.
ಧನುಸ್ಸು:- ಆರೋಗ್ಯಂ ಭಾಸ್ಕರಾಚೇತ್ ಎಂದರು ಹಿರಿಯರು. ನಿಮಗೆ ಕಾಡುತ್ತಿರುವ ಅನಾರೋಗ್ಯದಿಂದ ರಕ್ಷ ಣೆ ಪಡೆಯಲು ಸೂರ್ಯಮಂತ್ರ ಇಲ್ಲವೆ ಸೂರ್ಯ ಕವಚ ಪಠಿಸಿ. ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಬಿಗಿ ಧೋರಣೆ ತಳೆಯುವುದು ಒಳ್ಳೆಯದು.
ಮಕರ:- ಬಾಳಸಂಗಾತಿಯ ಮಾತುಗಳನ್ನು ಆಲಿಸಿ. ಅವನ್ನು ಪಾಲಿಸಲು ಪ್ರಯತ್ನಿಸಿ. ದಿನವೂ ರಗಳೆ ಎಂದು ರೇಗಾಡಬೇಡಿ. ಅವರು ಆಡುವ ಮಾತುಗಳ ಸತ್ಯಾಸತ್ಯತೆಯು ಸಂಜೆಯೊಳಗೆ ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆ ಇದೆ.
ಕುಂಭ:- ನಿಮ್ಮ ಪಾಲಿಗೆ ಅದೃಷ್ಟ ಬರದು ಎಂದು ನಿರಾಶರಾಗಬೇಡಿ. ನಿಮಗೆ ಬರಬೇಕಾದ ಅದೃಷ್ಟ ಮಹತ್ವವುಳ್ಳದ್ದಾಗಿರುವುದರಿಂದ ಅದು ಬರುವುದು ವಿಳಂಬವಾದೀತು ಅಷ್ಟೆ. ಆದರೆ ಅದು ಬಂದ ಮೇಲೆ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ.
ಮೀನ:- ಮನೋಮಂಡಲದಲ್ಲಿ ಅನುಮಾನಗಳ ಹುತ್ತ ತಲೆ ಎತ್ತುತ್ತಿರುತ್ತದೆ. ಸದ್ಗುರು ದತ್ತಾಷ್ಟಕವನ್ನಾಗಲಿ ಇಲ್ಲವೆ ನೀವು ನಂಬಿದ ಗುರುವಿನ ಸ್ತೋತ್ರ ಪಠಿಸಿ. ಸಾಧ್ಯವಾದಲ್ಲಿ ಕಡಲೆಕಾಳನ್ನು ದಾನ ಮಾಡಿದರೆ ಉತ್ತಮ.