ಮೇಷ:- ಬಹಳಷ್ಟು ಉನ್ನತ ಸ್ಥಾನವನ್ನು ಅಲಂಕರಿಸುವ ಯೋಗ ಬರುವ ಸಾಧ್ಯತೆ ಇದೆ. ವರ್ತಮಾನದ ದಿನಗಳು ನಿಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವವು. ವಿವಿಧ ಮೂಲಗಳಿಂದ ಹಣ ಬರುವುದು.
ವೃಷಭ:- ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಮಕ್ಕಳ ವಿಷಯದಲ್ಲಿ ಅತಿಯಾದ ವಿಶ್ವಾಸ ಇಡುವುದು ಬೇಡ.
ಮಿಥುನ:- ನಿಮ್ಮ ಆಸಕ್ತಿಯ ವಿಷಯದ ವಿಸ್ತಾರ ಕಗ್ಗಂಟಾಗುವಂತೆ ಹತ್ತಿರದವರು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಆರಾಧನೆ ಮಾಡುವುದು ಒಳ್ಳೆಯದು. 250 ಗ್ರಾಂ ಉದ್ದಿನಕಾಳನ್ನು ದಾನಮಾಡಿ.
ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ
ಕಟಕ:- ತುರ್ತು ಅವಶ್ಯಕತೆಯ ಕಾರಣದಿಂದ ಬೇಡವಾಗಿರುವ ಪ್ರವಾಸ ಒಂದನ್ನು ಕೈಗೊಳ್ಳಬೇಕಾಗಿ ಬರುವ ಸಾಧ್ಯತೆ ಇದೆ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಿರಿಯರ ಆಶೀರ್ವಾದ ಪಡೆದು ಪ್ರಯಾಣ ಮಾಡಿ.
ಸಿಂಹ:- ಗುರಿ ತಲುಪಲು ಬೇಕಾದ ಅವಕಾಶ ಜಾಸ್ತಿಯೇ ಇದೆಯಾದರೂ ದುಡುಕಿನ ಮಾತುಗಳು ಇದಕ್ಕೆ ತೊಂದರೆ ತರುವ ಸಾಧ್ಯತೆ ಇದೆ. ನಿಮ್ಮ ಪಾಂಡಿತ್ಯ ಮತ್ತು ನೀವು ಇರುವ ಸ್ಥಾನಮಾನವನ್ನು ಅರಿತು ತೂಕಬದ್ಧವಾದ ಮಾತನ್ನು ಆಡುವುದು ಒಳ್ಳೆಯದು.
ಕನ್ಯಾ:- ಸಾಮಾಜಿಕ ವಲಯದಲ್ಲಿ ನಿಮಗೆ ವಿಶೇಷವಾದ ಜವಾಬ್ದಾರಿಯು ಬರಲು ವರ್ತಮಾನವು ಸಹಕರಿಸುವುದು. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು, ಬಂಧುಗಳು ನಿಮ್ಮ ಸಹಾಯಹಸ್ತ ಕೇಳಿಬರುವರು.
ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಬೇಕೆಂದರೆ ಗೃಹ ವಾಸ್ತು ಹೀಗಿರಬೇಕು!
ತುಲಾ:- ಬೇಡದ ಒತ್ತಡಗಳನ್ನು ಎದುರಿಸಿ ದಣಿಯುವ ಪರಿಸ್ಥಿತಿಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಎಚ್ಚರದಿಂದ ಇರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವುದು ಒಳ್ಳೆಯದು. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡುವುದು ಉತ್ತಮ.
ವೃಶ್ಚಿಕ:- ಯುದ್ಧಕ್ಕಿಂತ ಮುಂಚೆಯೇ ಸೋಲಲು ನಿರ್ಧರಿಸಬೇಡಿ. ಶಕ್ತಿ ಇರುವವರೆಗೂ ಹೋರಾಡಿ. ಭಗವಂತ ನಿಮಗೆ ಸಹಾಯ ಮಾಡುವನು. ಕೊನೆ ಹಂತದಲ್ಲಿ ನೀವೇ ಜಯಶಾಲಿಯಾಗುವಿರಿ. ನಿಮ್ಮ ವಿಜಯವು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.
ಧನುಸ್ಸು:- ಯೋಚಿಸದೆ ಮಾತನಾಡಲು ಮುಂದಾಗದಿರಿ. ವಿರೋಧಿಗಳ ಟೀಕೆಗಳಿಗೆ ನೀವೇ ಅವಕಾಶ ಮಾಡಿಕೊಡದಿರಿ. ಅವಮಾನ ಪ್ರಸಂಗ ಎದುರಿಸುವ ಸಾಧ್ಯತೆ ಇದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಮಕರ:- ನಿಮ್ಮಲ್ಲಿರುವ ಜ್ಞಾನಸಂಪತ್ತನ್ನು ಪರರಿಗೆ ಧಾರೆ ಎರೆಯುವ ನಿಮ್ಮ ಕೌಶಲ್ಯವು ಸಮಾಜದಲ್ಲಿ ಮನ್ನಣೆ ಗಳಿಸುವುದು. ಈ ಮೂಲಕ ಹಣಕಾಸು ಕೂಡಾ ನಿಮಗೆ ಬರುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು.
ಜ್ಯೋತಿಷ್ಯದ ಪ್ರಕಾರ ಕಡ್ಡಿ ಮುರಿದಂತೆ ಮಾತನಾಡುವವರು ಈ ರಾಶಿಯವರು..!
ಕುಂಭ:- ಭಗವಂತನ ಒಲುಮೆ ಆದರೆ ಬೇರೆಯವರ ಹಂಗೇಕೆ? ಅಂತೆಯೇ ನೀವು ಮಾಡಿದ ನಿಸ್ವಾರ್ಥ ಸೇವೆಯು ನಿಮಗೆ ವರರೂಪದಲ್ಲಿ ಫಲ ನೀಡುವುದು. ಮೇಲಧಿಕಾರಿಗಳಿಂದ ಸಿಹಿಸುದ್ದಿಯನ್ನು ಹೊಂದುವಿರಿ.
ಮೀನ:- ಸ್ಥಿರಾಸ್ತಿ ಖರೀದಿಯಲ್ಲಿ ಮೋಸ ಹೋಗುವ ಸಂದರ್ಭವಿದೆ. ಹಾಗಾಗಿ ಆಸ್ತಿ ಖರೀದಿಯ ಬಗ್ಗೆ ಸರಿಯಾದ ಕಾಗದ ಪತ್ರಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಆಸ್ತಿ ಖರೀದಿಗೆ ಬ್ಯಾಂಕಿನ ಮೂಲಕ ಹಣ ಸಹಾಯ ದೊರೆಯುವುದು.
ವೃಷಭ:- ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಮಕ್ಕಳ ವಿಷಯದಲ್ಲಿ ಅತಿಯಾದ ವಿಶ್ವಾಸ ಇಡುವುದು ಬೇಡ.
ಮಿಥುನ:- ನಿಮ್ಮ ಆಸಕ್ತಿಯ ವಿಷಯದ ವಿಸ್ತಾರ ಕಗ್ಗಂಟಾಗುವಂತೆ ಹತ್ತಿರದವರು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಆರಾಧನೆ ಮಾಡುವುದು ಒಳ್ಳೆಯದು. 250 ಗ್ರಾಂ ಉದ್ದಿನಕಾಳನ್ನು ದಾನಮಾಡಿ.
ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ
ಕಟಕ:- ತುರ್ತು ಅವಶ್ಯಕತೆಯ ಕಾರಣದಿಂದ ಬೇಡವಾಗಿರುವ ಪ್ರವಾಸ ಒಂದನ್ನು ಕೈಗೊಳ್ಳಬೇಕಾಗಿ ಬರುವ ಸಾಧ್ಯತೆ ಇದೆ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಿರಿಯರ ಆಶೀರ್ವಾದ ಪಡೆದು ಪ್ರಯಾಣ ಮಾಡಿ.
ಸಿಂಹ:- ಗುರಿ ತಲುಪಲು ಬೇಕಾದ ಅವಕಾಶ ಜಾಸ್ತಿಯೇ ಇದೆಯಾದರೂ ದುಡುಕಿನ ಮಾತುಗಳು ಇದಕ್ಕೆ ತೊಂದರೆ ತರುವ ಸಾಧ್ಯತೆ ಇದೆ. ನಿಮ್ಮ ಪಾಂಡಿತ್ಯ ಮತ್ತು ನೀವು ಇರುವ ಸ್ಥಾನಮಾನವನ್ನು ಅರಿತು ತೂಕಬದ್ಧವಾದ ಮಾತನ್ನು ಆಡುವುದು ಒಳ್ಳೆಯದು.
ಕನ್ಯಾ:- ಸಾಮಾಜಿಕ ವಲಯದಲ್ಲಿ ನಿಮಗೆ ವಿಶೇಷವಾದ ಜವಾಬ್ದಾರಿಯು ಬರಲು ವರ್ತಮಾನವು ಸಹಕರಿಸುವುದು. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು, ಬಂಧುಗಳು ನಿಮ್ಮ ಸಹಾಯಹಸ್ತ ಕೇಳಿಬರುವರು.
ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಬೇಕೆಂದರೆ ಗೃಹ ವಾಸ್ತು ಹೀಗಿರಬೇಕು!
ತುಲಾ:- ಬೇಡದ ಒತ್ತಡಗಳನ್ನು ಎದುರಿಸಿ ದಣಿಯುವ ಪರಿಸ್ಥಿತಿಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಎಚ್ಚರದಿಂದ ಇರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವುದು ಒಳ್ಳೆಯದು. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡುವುದು ಉತ್ತಮ.
ವೃಶ್ಚಿಕ:- ಯುದ್ಧಕ್ಕಿಂತ ಮುಂಚೆಯೇ ಸೋಲಲು ನಿರ್ಧರಿಸಬೇಡಿ. ಶಕ್ತಿ ಇರುವವರೆಗೂ ಹೋರಾಡಿ. ಭಗವಂತ ನಿಮಗೆ ಸಹಾಯ ಮಾಡುವನು. ಕೊನೆ ಹಂತದಲ್ಲಿ ನೀವೇ ಜಯಶಾಲಿಯಾಗುವಿರಿ. ನಿಮ್ಮ ವಿಜಯವು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.
ಧನುಸ್ಸು:- ಯೋಚಿಸದೆ ಮಾತನಾಡಲು ಮುಂದಾಗದಿರಿ. ವಿರೋಧಿಗಳ ಟೀಕೆಗಳಿಗೆ ನೀವೇ ಅವಕಾಶ ಮಾಡಿಕೊಡದಿರಿ. ಅವಮಾನ ಪ್ರಸಂಗ ಎದುರಿಸುವ ಸಾಧ್ಯತೆ ಇದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.
ಮಕರ:- ನಿಮ್ಮಲ್ಲಿರುವ ಜ್ಞಾನಸಂಪತ್ತನ್ನು ಪರರಿಗೆ ಧಾರೆ ಎರೆಯುವ ನಿಮ್ಮ ಕೌಶಲ್ಯವು ಸಮಾಜದಲ್ಲಿ ಮನ್ನಣೆ ಗಳಿಸುವುದು. ಈ ಮೂಲಕ ಹಣಕಾಸು ಕೂಡಾ ನಿಮಗೆ ಬರುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು.
ಜ್ಯೋತಿಷ್ಯದ ಪ್ರಕಾರ ಕಡ್ಡಿ ಮುರಿದಂತೆ ಮಾತನಾಡುವವರು ಈ ರಾಶಿಯವರು..!
ಕುಂಭ:- ಭಗವಂತನ ಒಲುಮೆ ಆದರೆ ಬೇರೆಯವರ ಹಂಗೇಕೆ? ಅಂತೆಯೇ ನೀವು ಮಾಡಿದ ನಿಸ್ವಾರ್ಥ ಸೇವೆಯು ನಿಮಗೆ ವರರೂಪದಲ್ಲಿ ಫಲ ನೀಡುವುದು. ಮೇಲಧಿಕಾರಿಗಳಿಂದ ಸಿಹಿಸುದ್ದಿಯನ್ನು ಹೊಂದುವಿರಿ.
ಮೀನ:- ಸ್ಥಿರಾಸ್ತಿ ಖರೀದಿಯಲ್ಲಿ ಮೋಸ ಹೋಗುವ ಸಂದರ್ಭವಿದೆ. ಹಾಗಾಗಿ ಆಸ್ತಿ ಖರೀದಿಯ ಬಗ್ಗೆ ಸರಿಯಾದ ಕಾಗದ ಪತ್ರಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಆಸ್ತಿ ಖರೀದಿಗೆ ಬ್ಯಾಂಕಿನ ಮೂಲಕ ಹಣ ಸಹಾಯ ದೊರೆಯುವುದು.