ಆ್ಯಪ್ನಗರ

ಧನುಸ್ಸು ರಾಶಿಯವರೇ ಯೋಚಿಸದೆ ಮಾತನಾಡಲು ಮುಂದಾಗದಿರಿ, ಟೀಕೆಗೊಳಗಾಗಬಹುದು!

ವೃಷಭ ರಾಶಿಯವರೇ ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ.

Vijaya Karnataka 27 Feb 2020, 5:36 pm
ಮೇಷ:- ಬಹಳಷ್ಟು ಉನ್ನತ ಸ್ಥಾನವನ್ನು ಅಲಂಕರಿಸುವ ಯೋಗ ಬರುವ ಸಾಧ್ಯತೆ ಇದೆ. ವರ್ತಮಾನದ ದಿನಗಳು ನಿಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವವು. ವಿವಿಧ ಮೂಲಗಳಿಂದ ಹಣ ಬರುವುದು.
Vijaya Karnataka Web ದಿನ ಭವಿಷ್ಯ


ವೃಷಭ:- ಎಚ್ಚರಿಕೆ ಇರಲಿ. ಹಳೆಯ ವಿಷಯವನ್ನು ಕೆದಕಿ ನಿಮ್ಮನ್ನು ನಗೆಪಾಟಲಿಗೆ ಈಡು ಮಾಡುವ ಸಾಧ್ಯತೆಗಳು ಇವೆ. ಹಾಗಾಗಿ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಮಕ್ಕಳ ವಿಷಯದಲ್ಲಿ ಅತಿಯಾದ ವಿಶ್ವಾಸ ಇಡುವುದು ಬೇಡ.

ಮಿಥುನ:- ನಿಮ್ಮ ಆಸಕ್ತಿಯ ವಿಷಯದ ವಿಸ್ತಾರ ಕಗ್ಗಂಟಾಗುವಂತೆ ಹತ್ತಿರದವರು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಆರಾಧನೆ ಮಾಡುವುದು ಒಳ್ಳೆಯದು. 250 ಗ್ರಾಂ ಉದ್ದಿನಕಾಳನ್ನು ದಾನಮಾಡಿ.

ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ

ಕಟಕ:- ತುರ್ತು ಅವಶ್ಯಕತೆಯ ಕಾರಣದಿಂದ ಬೇಡವಾಗಿರುವ ಪ್ರವಾಸ ಒಂದನ್ನು ಕೈಗೊಳ್ಳಬೇಕಾಗಿ ಬರುವ ಸಾಧ್ಯತೆ ಇದೆ. ಆದಷ್ಟು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಹಿರಿಯರ ಆಶೀರ್ವಾದ ಪಡೆದು ಪ್ರಯಾಣ ಮಾಡಿ.

ಸಿಂಹ:- ಗುರಿ ತಲುಪಲು ಬೇಕಾದ ಅವಕಾಶ ಜಾಸ್ತಿಯೇ ಇದೆಯಾದರೂ ದುಡುಕಿನ ಮಾತುಗಳು ಇದಕ್ಕೆ ತೊಂದರೆ ತರುವ ಸಾಧ್ಯತೆ ಇದೆ. ನಿಮ್ಮ ಪಾಂಡಿತ್ಯ ಮತ್ತು ನೀವು ಇರುವ ಸ್ಥಾನಮಾನವನ್ನು ಅರಿತು ತೂಕಬದ್ಧವಾದ ಮಾತನ್ನು ಆಡುವುದು ಒಳ್ಳೆಯದು.

ಕನ್ಯಾ:- ಸಾಮಾಜಿಕ ವಲಯದಲ್ಲಿ ನಿಮಗೆ ವಿಶೇಷವಾದ ಜವಾಬ್ದಾರಿಯು ಬರಲು ವರ್ತಮಾನವು ಸಹಕರಿಸುವುದು. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು, ಬಂಧುಗಳು ನಿಮ್ಮ ಸಹಾಯಹಸ್ತ ಕೇಳಿಬರುವರು.

ಮನೆಯಲ್ಲಿ ಆರ್ಥಿಕ ಸಮೃದ್ಧಿಯಾಗಬೇಕೆಂದರೆ ಗೃಹ ವಾಸ್ತು ಹೀಗಿರಬೇಕು!

ತುಲಾ:- ಬೇಡದ ಒತ್ತಡಗಳನ್ನು ಎದುರಿಸಿ ದಣಿಯುವ ಪರಿಸ್ಥಿತಿಗೆ ತುತ್ತಾಗುವ ಸಾಧ್ಯತೆಗಳು ಅಧಿಕ. ಎಚ್ಚರದಿಂದ ಇರಿ. ಮಡದಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸುವುದು ಒಳ್ಳೆಯದು. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡುವುದು ಉತ್ತಮ.

ವೃಶ್ಚಿಕ:- ಯುದ್ಧಕ್ಕಿಂತ ಮುಂಚೆಯೇ ಸೋಲಲು ನಿರ್ಧರಿಸಬೇಡಿ. ಶಕ್ತಿ ಇರುವವರೆಗೂ ಹೋರಾಡಿ. ಭಗವಂತ ನಿಮಗೆ ಸಹಾಯ ಮಾಡುವನು. ಕೊನೆ ಹಂತದಲ್ಲಿ ನೀವೇ ಜಯಶಾಲಿಯಾಗುವಿರಿ. ನಿಮ್ಮ ವಿಜಯವು ವಿರೋಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗುವುದು.

ಧನುಸ್ಸು:- ಯೋಚಿಸದೆ ಮಾತನಾಡಲು ಮುಂದಾಗದಿರಿ. ವಿರೋಧಿಗಳ ಟೀಕೆಗಳಿಗೆ ನೀವೇ ಅವಕಾಶ ಮಾಡಿಕೊಡದಿರಿ. ಅವಮಾನ ಪ್ರಸಂಗ ಎದುರಿಸುವ ಸಾಧ್ಯತೆ ಇದೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.

ಮಕರ:- ನಿಮ್ಮಲ್ಲಿರುವ ಜ್ಞಾನಸಂಪತ್ತನ್ನು ಪರರಿಗೆ ಧಾರೆ ಎರೆಯುವ ನಿಮ್ಮ ಕೌಶಲ್ಯವು ಸಮಾಜದಲ್ಲಿ ಮನ್ನಣೆ ಗಳಿಸುವುದು. ಈ ಮೂಲಕ ಹಣಕಾಸು ಕೂಡಾ ನಿಮಗೆ ಬರುವುದು. ಮನೆಯಲ್ಲಿ ಸಂತಸದ ವಾತಾವರಣ ಮೂಡುವುದು.

ಜ್ಯೋತಿಷ್ಯದ ಪ್ರಕಾರ ಕಡ್ಡಿ ಮುರಿದಂತೆ ಮಾತನಾಡುವವರು ಈ ರಾಶಿಯವರು..!

ಕುಂಭ:- ಭಗವಂತನ ಒಲುಮೆ ಆದರೆ ಬೇರೆಯವರ ಹಂಗೇಕೆ? ಅಂತೆಯೇ ನೀವು ಮಾಡಿದ ನಿಸ್ವಾರ್ಥ ಸೇವೆಯು ನಿಮಗೆ ವರರೂಪದಲ್ಲಿ ಫಲ ನೀಡುವುದು. ಮೇಲಧಿಕಾರಿಗಳಿಂದ ಸಿಹಿಸುದ್ದಿಯನ್ನು ಹೊಂದುವಿರಿ.

ಮೀನ:- ಸ್ಥಿರಾಸ್ತಿ ಖರೀದಿಯಲ್ಲಿ ಮೋಸ ಹೋಗುವ ಸಂದರ್ಭವಿದೆ. ಹಾಗಾಗಿ ಆಸ್ತಿ ಖರೀದಿಯ ಬಗ್ಗೆ ಸರಿಯಾದ ಕಾಗದ ಪತ್ರಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಆಸ್ತಿ ಖರೀದಿಗೆ ಬ್ಯಾಂಕಿನ ಮೂಲಕ ಹಣ ಸಹಾಯ ದೊರೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ