ಮೇಷರಾಶಿ:- ವಿಚಿತ್ರವಾದ ಗೊಂದಲಗಳ ನಡುವೆ ಸಿಕ್ಕಿಬೀಳುವ ಸಂದಿಗ್ಧತೆ ಎದುರಾಗಲಿದೆ. ಅದರಿಂದಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಹೆಣಗಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ. ಒಳಿತಾಗುವುದು.
ವೃಷಭ:- ನಿಮಗೆ ಜನ್ಮದತ್ತವಾಗಿ ಬಂದ ಕೆಲವು ಸಂಗತಿಗಳನ್ನು ಮರೆಮಾಚದಿರಿ. ಅವುಗಳಿಂದ ನಿಮ್ಮ ಕೀರ್ತಿ ಶಿಖರಕ್ಕೆ ಏರಲು ಅನುಕೂಲವಾಗುವುದು. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗಾಗಿ ನೀವು ನಿಮ್ಮ ಕೀಳರಿಮೆಯಿಂದ ಹೊರಬನ್ನಿ.
ಮಿಥುನ:- ನಿಮ್ಮಲ್ಲಿ ಅನೇಕರು ಬಂಡಾಯದ ಕಹಳೆಯನ್ನು ಊದುವ ತವಕದಲ್ಲಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆ ಉಂಟಾಗುವುದು. ಹಾಗಾಗಿ ನಿಮಗೆ ಒಂಟಿತನ ಕಾಡುವುದು.
ಕಟಕ: ಹಿತಶತ್ರುಗಳು ನಿಮ್ಮ ಬಗ್ಗೆ ಅಲ್ಲಸಲ್ಲದ ಅಪವಾದಗಳನ್ನು ಹೇರುವ ಸಾಧ್ಯತೆ ಇದೆ. ಆದರೆ ಅದು ಸುಳ್ಳೆಂದು ಗೊತ್ತಾದಾಗ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಪ್ರಸಂಗ ಎದುರಾಗುವುದು.
ಸಿಂಹ:- ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿ. ಆದಾಗ್ಯೂ ನಿಮಗೆ ದೈವಕೃಪೆಯಿಂದ ಒಳಿತಾಗುವುದು.
ಕನ್ಯಾ:- ಉತ್ತಮವಾದ ಪುರಸ್ಕಾರವೊಂದು ಬರಲು ದಿನವು ಪ್ರಶಸ್ತವಾಗಿದೆ. ಇದಕ್ಕೆ ಬಾಳಸಂಗಾತಿಯ ಬೆಂಬಲವೂ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಆದರೆ ಇದೆಲ್ಲವನ್ನು ಸ್ವೀಕರಿಸುವ ಸಮಯ ನಿಮಗೆ ಸಿಗದೆ ಹೋಗಬಹುದು.
ತುಲಾ:- ಅನೇಕ ಕೊರತೆಗಳ ಸರಮಾಲೆ ದಿಢೀರನೆ ಎದುರಾಗಬಹುದು. ಆರ್ಥಿಕ ಮುಗ್ಗಟ್ಟಿನ ತೊಂದರೆಯು ಬೃಹದಾಕಾರವಾಗಿ ಎದುರು ನಿಲ್ಲುವುದು. ಸ್ನೇಹಿತರು, ಬಂಧುಗಳು ನಿಮಗೆ ಹಣ ಸಹಾಯ ಮಾಡಬಹುದು. ಆದರೆ ನೀವು ಅವರ ವಿಶ್ವಾಸವನ್ನು ಗಳಿಸಬೇಕಾಗುವುದು.
ವೃಶ್ಚಿಕ:- ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರಿಗೆ ಸಂಕಷ್ಟದ ದಿನ. ನೀವು ಮಾಡದೆ ಇರುವ ತಪ್ಪಿಗೆ ಹೊಣೆಗಾರರಾಗಬೇಕಿದೆ. ಇದರಿಂದ ಹೊರಬಂದು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಧನುಸ್ಸು:- ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಣೆ ದುಸ್ತರವಾಗುವುದು. ಇದಕ್ಕಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಸಾಧ್ಯವಾದರೆ ಕಡಲೇಕಾಳನ್ನು ದಾನ ಮಾಡಿ. ಇಲ್ಲವೆ ಹಸುವಿಗೆ ನೀಡಿ. ಬಡವರಿಗೆ ಆಹಾರವನ್ನು ನೀಡಿ.
ಮಕರ:- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಗುರುಜನ ಮಾನ್ಯರ ಕರೆದು ಆದರ ಆತಿಥ್ಯವನ್ನು ಮಾಡುವಿರಿ. ಅವರ ಆಶೀರ್ವಾದದಿಂದ ನಿಮಗೆ ಒಳಿತಾಗುವುದು. ಸಾಂಸಾರಿಕ ಜೀವನ ಉತ್ತಮ ಮಟ್ಟದ್ದಾಗಿರುತ್ತದೆ.
ಕುಂಭ:- ನಿಮ್ಮ ಕೆಲಸದ ಒತ್ತಡದ ಮಧ್ಯೆ ನಿಮ್ಮ ಕೆಲವು ಪ್ರತಿಭಾಯುಕ್ತ ಹವ್ಯಾಸಗಳನ್ನು ಅಲಕ್ಷ ್ಯ ಮಾಡದಿರಿ. ಇಂತಹ ಹವ್ಯಾಸಗಳಿಂದ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಿ.
ಮೀನ:- ಕಚೇರಿಯ ಕೆಲಸದಲ್ಲಿ ಸಮಯಾವಾಧಾನದಿಂದ ಉತ್ಕೃಷ್ಟ ಫಲವನ್ನು ಹೊಂದುವಿರಿ. ಇದರಿಂದ ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಸಹೋದ್ಯೋಗಿಗಳು ಕೂಡಾ ನಿಮ್ಮ ಬಗ್ಗೆ ಮೆಚ್ಚುಗೆಯ ನೋಟವನ್ನು ಹರಿಸುವರು.
ವೃಷಭ:- ನಿಮಗೆ ಜನ್ಮದತ್ತವಾಗಿ ಬಂದ ಕೆಲವು ಸಂಗತಿಗಳನ್ನು ಮರೆಮಾಚದಿರಿ. ಅವುಗಳಿಂದ ನಿಮ್ಮ ಕೀರ್ತಿ ಶಿಖರಕ್ಕೆ ಏರಲು ಅನುಕೂಲವಾಗುವುದು. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗಾಗಿ ನೀವು ನಿಮ್ಮ ಕೀಳರಿಮೆಯಿಂದ ಹೊರಬನ್ನಿ.
ಮಿಥುನ:- ನಿಮ್ಮಲ್ಲಿ ಅನೇಕರು ಬಂಡಾಯದ ಕಹಳೆಯನ್ನು ಊದುವ ತವಕದಲ್ಲಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆ ಉಂಟಾಗುವುದು. ಹಾಗಾಗಿ ನಿಮಗೆ ಒಂಟಿತನ ಕಾಡುವುದು.
ಕಟಕ: ಹಿತಶತ್ರುಗಳು ನಿಮ್ಮ ಬಗ್ಗೆ ಅಲ್ಲಸಲ್ಲದ ಅಪವಾದಗಳನ್ನು ಹೇರುವ ಸಾಧ್ಯತೆ ಇದೆ. ಆದರೆ ಅದು ಸುಳ್ಳೆಂದು ಗೊತ್ತಾದಾಗ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಪ್ರಸಂಗ ಎದುರಾಗುವುದು.
ಸಿಂಹ:- ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿ. ಆದಾಗ್ಯೂ ನಿಮಗೆ ದೈವಕೃಪೆಯಿಂದ ಒಳಿತಾಗುವುದು.
ಕನ್ಯಾ:- ಉತ್ತಮವಾದ ಪುರಸ್ಕಾರವೊಂದು ಬರಲು ದಿನವು ಪ್ರಶಸ್ತವಾಗಿದೆ. ಇದಕ್ಕೆ ಬಾಳಸಂಗಾತಿಯ ಬೆಂಬಲವೂ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಆದರೆ ಇದೆಲ್ಲವನ್ನು ಸ್ವೀಕರಿಸುವ ಸಮಯ ನಿಮಗೆ ಸಿಗದೆ ಹೋಗಬಹುದು.
ತುಲಾ:- ಅನೇಕ ಕೊರತೆಗಳ ಸರಮಾಲೆ ದಿಢೀರನೆ ಎದುರಾಗಬಹುದು. ಆರ್ಥಿಕ ಮುಗ್ಗಟ್ಟಿನ ತೊಂದರೆಯು ಬೃಹದಾಕಾರವಾಗಿ ಎದುರು ನಿಲ್ಲುವುದು. ಸ್ನೇಹಿತರು, ಬಂಧುಗಳು ನಿಮಗೆ ಹಣ ಸಹಾಯ ಮಾಡಬಹುದು. ಆದರೆ ನೀವು ಅವರ ವಿಶ್ವಾಸವನ್ನು ಗಳಿಸಬೇಕಾಗುವುದು.
ವೃಶ್ಚಿಕ:- ಸರ್ಕಾರಿ ಮತ್ತು ಅರೆಸರ್ಕಾರಿ ನೌಕರರಿಗೆ ಸಂಕಷ್ಟದ ದಿನ. ನೀವು ಮಾಡದೆ ಇರುವ ತಪ್ಪಿಗೆ ಹೊಣೆಗಾರರಾಗಬೇಕಿದೆ. ಇದರಿಂದ ಹೊರಬಂದು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ಧನುಸ್ಸು:- ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಣೆ ದುಸ್ತರವಾಗುವುದು. ಇದಕ್ಕಾಗಿ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. ಸಾಧ್ಯವಾದರೆ ಕಡಲೇಕಾಳನ್ನು ದಾನ ಮಾಡಿ. ಇಲ್ಲವೆ ಹಸುವಿಗೆ ನೀಡಿ. ಬಡವರಿಗೆ ಆಹಾರವನ್ನು ನೀಡಿ.
ಮಕರ:- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಗುರುಜನ ಮಾನ್ಯರ ಕರೆದು ಆದರ ಆತಿಥ್ಯವನ್ನು ಮಾಡುವಿರಿ. ಅವರ ಆಶೀರ್ವಾದದಿಂದ ನಿಮಗೆ ಒಳಿತಾಗುವುದು. ಸಾಂಸಾರಿಕ ಜೀವನ ಉತ್ತಮ ಮಟ್ಟದ್ದಾಗಿರುತ್ತದೆ.
ಕುಂಭ:- ನಿಮ್ಮ ಕೆಲಸದ ಒತ್ತಡದ ಮಧ್ಯೆ ನಿಮ್ಮ ಕೆಲವು ಪ್ರತಿಭಾಯುಕ್ತ ಹವ್ಯಾಸಗಳನ್ನು ಅಲಕ್ಷ ್ಯ ಮಾಡದಿರಿ. ಇಂತಹ ಹವ್ಯಾಸಗಳಿಂದ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಿ.
ಮೀನ:- ಕಚೇರಿಯ ಕೆಲಸದಲ್ಲಿ ಸಮಯಾವಾಧಾನದಿಂದ ಉತ್ಕೃಷ್ಟ ಫಲವನ್ನು ಹೊಂದುವಿರಿ. ಇದರಿಂದ ಮೇಲಧಿಕಾರಿಗಳ ಪ್ರಶಂಸೆಗೆ ಕಾರಣರಾಗುವಿರಿ. ಸಹೋದ್ಯೋಗಿಗಳು ಕೂಡಾ ನಿಮ್ಮ ಬಗ್ಗೆ ಮೆಚ್ಚುಗೆಯ ನೋಟವನ್ನು ಹರಿಸುವರು.