ಆ್ಯಪ್ನಗರ

ವೃಷಭ ರಾಶಿಯವರೇ ನಿಮ್ಮ ಚಿಂತನೆಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ

ಕುಂಭ ರಾಶಿಯವರೇ ಸಕಲಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಭಗವಂತನನ್ನು ಭಕ್ತಿಯಿಂದ ಪ್ರಾರ್ಥಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನಿಮ್ಮ ನೌಕರಿ ವಿಚಾರವಾಗಿ ನಿಮಗೆ ಮಹತ್ವದ ಮಾಹಿತಿ ದೊರೆಯುವುದು.

Vijaya Karnataka 27 Feb 2020, 5:35 pm
ಮೇಷ:- ಅನೇಕರು ನಿಮ್ಮ ಕಾರ್ಯವೈಖರಿಗೆ ಬೆರಗಾಗುವರು. ಇನ್ನು ಕೆಲವರು ಮುಕ್ತ ಕಂಠದಿಂದ ಪ್ರಶಂಸಿಸಲು ಶುರುಮಾಡುತ್ತಾರೆ. ಇವೆಲ್ಲವೂ ಅವರ ಸ್ವಾರ್ಥ ಸಾಧನೆಗಾಗಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಸಲುವಾಗಿ ಎಂಬುದು ನಿಮ್ಮ ಅರಿವಿಗೆ ಬರುವುದಿಲ್ಲ. ಈ ಬಗ್ಗೆ ಎಚ್ಚರ ಇರಲಿ.
Vijaya Karnataka Web ದಿನ ಭವಿಷ್ಯ


ವೃಷಭ:- ನಿಮ್ಮ ಚಿಂತನೆಗಳನ್ನು ಕುಟುಂಬದ ಸದಸ್ಯರೊಂದಿಗೆ ಭಾವನಾತ್ಮಕವಾಗಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಚಿಂತನೆಗಳು ಎಷ್ಟು ಉದಾತ್ತವಾಗಿವೆ ಎಂದು ಅವರು ಅಭಿಪ್ರಾಯ ಪಡುವರು. ಸಮಾಜದಲ್ಲಿ ನಿಮಗೆ ಕೀರ್ತಿ, ಗೌರವ ದೊರಕುವುದು.

ಮಿಥುನ:- ಕಾಲದ ಕಪಿಮುಷ್ಠಿಯಲ್ಲಿ ಸಿಲುಕಿರುವ ನಿಮಗೆ ಒಂಟಿತನದ ಬೇಸರವಿದೆ. ಎಲ್ಲರಿಂದಲೂ ದೂರವಾಗಿದ್ದೇನೆ ಎಂದು ಮನಸ್ಸು ಖಿನ್ನತೆಯತ್ತ ಸಾಗುವುದು. ಲೋಕ ರಕ್ಷಕನಾದ ಪರಶಿವನನ್ನು ಪ್ರಾರ್ಥಿಸಿದಲ್ಲಿ ಎಲ್ಲವೂ ಒಳಿತಾಗುವುದು.

ವೃಷಭ ರಾಶಿಯವರೇ ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಸಡಿಲಿಸಬೇಡಿ: ವಾರ ಭವಿಷ್ಯ ನೋಡಿ

ಕಟಕ:- ಯಾವುದೋ ಹಳೆಯ ಕಾಲದ ಸಮಸ್ಯೆಯೊಂದು ಮರುಕಳಿಸುವ ಸಾಧ್ಯತೆ ಇದೆ. ಕುಲದೇವರ ಪ್ರಾರ್ಥನೆ ಮಾಡಿ ಮತ್ತು ಹಿರಿಯರ ಆಶೀರ್ವಾದ ಪಡೆಯಿರಿ. ನೂತನ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಬೇಡ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

ಸಿಂಹ:- ನಿಮ್ಮ ನಡವಳಿಕೆಯನ್ನು ಬಹು ಹತ್ತಿರದಿಂದ ಗಮನಿಸುತ್ತಿರುವ ವ್ಯಕ್ತಿಗಳು ನಿಮ್ಮ ತಪ್ಪನ್ನು ಹುಡುಕಲು ಹವಣಿಸುತ್ತಿರುವರು. ಆದರೆ ಅವರ ಟೀಕಾ ಪ್ರಹಾರಕ್ಕೆ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿ.

ಕನ್ಯಾ:- ಬರೀ ಮಾತಿನಿಂದ ಉಪಯೋಗವಿಲ್ಲ. ನಿಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಾರ್ವಜನಿಕ ಮನ್ನಣೆಗೆ ಪಾತ್ರರಾಗುವಿರಿ. ನಿಮ್ಮ ನಿಜವಾದ ಶಕ್ತಿಯನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ. ಅನ್ಯರ ಬೆಂಬಲ ದೊರೆಯಲಿದೆ.

ಧನುಸ್ಸು ರಾಶಿಯಲ್ಲಿ ಮಂಗಳ ಗ್ರಹ: ರಾಶಿಗಳ ಮೇಲೆ ಉಂಟಾಗುವ ಫಲಗಳೇನು ಗೊತ್ತಾ?

ತುಲಾ:-ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಕನಸಿನ ಮನೆಯು ನಿಮ್ಮದಾಗುವುದು. ಅದಕ್ಕೆ ಪೂರಕವಾದ ಹಣಕಾಸು ಹೊಂದಿಸುವಿರಿ. ಒಳಾಂಗಣ ಕೆಲಸಗಳನ್ನು ಆರಂಭಿಸುವಿರಿ. ಸಂಗಾತಿಯ ಸಹಕಾರ ಮತ್ತು ಬಂಧುಗಳ ಸಹಕಾರ ನಿಮಗೆ ದೊರೆಯುವುದು.

ವೃಶ್ಚಿಕ:- ಸ್ನೇಹಿತರ ವ್ಯವಹಾರದಲ್ಲಿ ಅನಗತ್ಯವಾದ ವಾಗ್ದಾನ ಮಾಡಿ ಸಿಲುಕಿಕೊಳ್ಳದಿರಿ. ಅವತ್ಯವಿದ್ದಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಬಡವರಿಗೆ ಆಹಾರವನ್ನು ನೀಡಿ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.

ಧನುಸ್ಸು:- ಉದರಕ್ಕೆ ಸಂಬಂಧ ಪಟ್ಟಂಥ ತೊಂದರೆಗಳು ಎದುರಾಗುವುವು. ಅನುವಂಶಿಕ ಕಾಯಿಲೆಗಳು ನಿಮಗೆ ಮರುಕಳಿಸುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಉದಾಸೀನ ಮಾಡದೆ ಸೂಕ್ತ ವೈದ್ಯಕೀಯ ಉಪಚಾರ ನಡೆಸಿ.

ಮಕರ:- ಜಯವಿರುವವರೆಗೂ ಭಯವಿಲ್ಲ ಎಂದರು ಹಿರಿಯರು. ಅಂತೆಯೇ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುವು. ಪ್ರಯಾಣದಲ್ಲಿ ಹೆಚ್ಚಿನ ಸುಖ ಸಂತೋಷ ದೊರೆಯುವುದು.

ಅದೃಷ್ಟ ತರುವ ಗಜ ಕೇಸರಿ ಯೋಗಕ್ಕೆ ಗ್ರಹಗಳ ಸ್ಥಾನ ಹೇಗಿರಬೇಕು ಗೊತ್ತಾ?

ಕುಂಭ:- ಸಕಲಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಭಗವಂತನನ್ನು ಭಕ್ತಿಯಿಂದ ಪ್ರಾರ್ಥಿಸಿ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ನಿಮ್ಮ ನೌಕರಿ ವಿಚಾರವಾಗಿ ನಿಮಗೆ ಮಹತ್ವದ ಮಾಹಿತಿ ದೊರೆಯುವುದು.

ಮೀನ:- ಮನುಜ ಸಂಘಜೀವಿ. ಹಾಗಾಗಿ ಯಾರನ್ನೂ ತಿರಸ್ಕರಿಸುವಂತಿಲ್ಲ. ಯಾರಿಂದ ಯಾವ ಸಮಯದಲ್ಲಿ ಸಹಕಾರ ದೊರೆಯುವುದೋ ಗೊತ್ತಾಗುವುದಿಲ್ಲ. ನೀವು ದೂರ ಇಟ್ಟ ವ್ಯಕ್ತಿಯಿಂದಲೇ ನಿಮಗೆ ದೈಹಿಕ ಮತ್ತು ಮಾನಸಿಕ ಬೆಂಬಲ ದೊರೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ