ಆ್ಯಪ್ನಗರ

Nithya Bhavishya: ಮಕರ ರಾಶಿಯವರಿಗೆ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುವುದು

ಧನುಸ್ಸು ರಾಶಿಯವರೇ ಪದೇಪದೆ ಎದುರಾಗುತ್ತಿರುವ ಅಪಯಶಸ್ಸುಗಳಿಂದ ಹೊರಬರುವ ಸಿದ್ಧಿಯನ್ನು ನೀವಿಂದು ಸಂಪಾದಿಸುವಿರಿ. ಹಣಕಾಸಿನ ತೊಂದರೆ ಸ್ವಲ್ಪ ಮಟ್ಟಿಗೆ ಇರುವುದು. ಅಧಿಕಾರಿಗಳ ಜತೆ ವ್ಯವಹರಿಸುವಾಗ ಮಾತಿನ ಮೇಲೆ ಹಿಡಿತವಿರಲಿ.

Vijaya Karnataka 27 Jan 2020, 10:24 am
ಮೇಷ:- ಮಹತ್ವದ ದಿನಗಳನ್ನು ಎದುರು ನೋಡುತ್ತಿರುವ ನಿಮಗೆ ಹೊಸ ಜವಾಬ್ದಾರಿಯೊಂದರಿಂದ ನೆಮ್ಮದಿ ದೊರೆಯುವುದು. ಆದರೆ ಮತ್ತೊಬ್ಬರ ಹಣಕಾಸಿನ ವಿಷಯದಲ್ಲಿ ಮಧ್ಯೆ ಪ್ರವೇಶಿಸುವುದು ಅಥವಾ ಒಬ್ಬರ ಹಣಕ್ಕೆ ಜಾಮೀನು ಸಹಿ ಹಾಕುವುದು ಸೂಕ್ತವಲ್ಲ.
Vijaya Karnataka Web ದಿನ ಭವಿಷ್ಯ


ವೃಷಭ:- ಸಂಬಂಧವಿರದ ವಿಷಯದಲ್ಲಿ ನಿಮ್ಮನ್ನು ಎಳೆದು ತಂದು ತೊಂದರೆಗೆ ಸಿಲುಕಿಸುವ ಜನರಿಂದ ಎಚ್ಚರ ವಹಿಸಿ. ಸಹೋದರನ ವ್ಯವಹಾರದಲ್ಲಿ ಮೂಗು ತೂರಿಸದಿರಿ. ಮಕ್ಕಳ ವಿಷಯದಲ್ಲಿ ಆಹ್ಲಾದಕರ ವಾತಾವರಣ ಕಂಡು ಬರುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.

ಮಿಥುನ:- ಕಠಿಣ ಪರಿಶ್ರಮ ಬಿಟ್ಟರೆ ಅನ್ಯಮಾರ್ಗವಿಲ್ಲ. ಆದರೆ ಮಾಡುವ ಕೆಲಸದ ರೀತಿ ರಿವಾಜುಗಳನ್ನು ತಪ್ಪಿಸಲು ಮನೋಕಾರಕ ರಾಹು ಹಾತೊರೆಯುತ್ತಿರುವುದರಿಂದ ದುರ್ಗಾ ಜಪವನ್ನು ಮಾಡಿ. ಗುರುವಿನ ಶುಭ ಆಶೀರ್ವಾದವಿದ್ದು ಹೆಚ್ಚಿನ ತೊಂದರೆ ಇಲ್ಲ.

ಧನುಸ್ಸು ರಾಶಿಯವರೇ ಮನೆಯಲ್ಲಿ ನಿತ್ಯ ದೇವತಾರ್ಚನೆ ಮಾಡುವುದು ಸರ್ವಶ್ರೇಷ್ಠ: ನಿಮ್ಮ ವಾರ ಭವಿಷ್ಯ ನೋಡಿ

ಕಟಕ:- ಕೈಗೆ ಬಂದ ತುತ್ತು ಬಾಯಿಗೆ ಇಲ್ಲಎಂಬುವಂತಹ ಪರಿಸ್ಥಿತಿಯನ್ನು ಎದುರಿಸುವಿರಿ. ದೂರದ ಸ್ಥಳದಲ್ಲಿ ಉದ್ಯೋಗದ ಅಭಿವೃದ್ಧಿ ಇರುವುದರಿಂದ ಈಗ ಮಾಡುತ್ತಿರುವ ಕೆಲಸದಲ್ಲಿ ಬಿಡುಗಡೆ ಸಂಭವವಿದೆ. ಸಂಗಾತಿಯ ಜೊತೆ ವಾದ-ವಿವಾದ ಮಾಡದಿರಿ.

ಸಿಂಹ:- ಪಂಚಮಶನಿಯು ಮಾನಸಿಕ ಒತ್ತಡವನ್ನು ಇದುವರೆಗೆ ನೀಡಿದ್ದರೂ ಇನ್ನು ಮುಂದೆ ಪೊರೆ ಕಳಚಿದ ಹಾವಿನಂತೆ ಹೊಸ ಉತ್ಸಾಹ ಹೊಸ ಹುರುಪಿನಿಂದ ಕಾರ್ಯ ಪ್ರವೃತ್ತರಾಗುವಿರಿ. ನಿಮ್ಮ ಮಾತನ್ನು ವಿರೋಧಿಸುತ್ತಿದ್ದವರೇ ನಿಮ್ಮನ್ನು ಹಾಡಿ ಹೊಗಳುವರು.

ಕನ್ಯಾ:- ಕಾರ್ಯವಾಸಿ ಕತ್ತೆಕಾಲು ಹಿಡಿ ಎಂಬುದು ಗಾದೆ ಮಾತು. ಅಂತೆಯೇ ಇನ್ನು ಮುಂದೆ ಪಂಚಮಶನಿಯ ಪ್ರಭಾವಕ್ಕೆ ಒಳಗಾಗುವುದರಿಂದ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗುವುದು ಒಳ್ಳೆಯದು. ಮಕ್ಕಳ ಪ್ರಗತಿಯ ವಿಚಾರದಲ್ಲಿ ಸ್ವಲ್ಪ ಚೇತರಿಕೆ ಕಂಡುಬರುವುದು.

ತುಲಾ:- ಅರ್ಧಾಷ್ಟಮ ಶನಿಯ ಅವಕೃಪೆಗೆ ಪಾತ್ರರಾದರೂ ನಿಮ್ಮ ರಾಶಿಗೆ ಶನಿ ಮಹಾರಾಜ ಯೋಗದಾಯಕರಾದ್ದರಿಂದ ಹೆಚ್ಚಿನ ತೊಂದರೆಯಿರುವುದಿಲ್ಲ. ಮಾತೃವರ್ಗದವರಿಗೆ ಸ್ವಲ್ಪ ಅನಾರೋಗ್ಯ ಕಾಡುವ ಸಾಧ್ಯತೆ ಇದ್ದು ಇದಕ್ಕೆ ಸೂಕ್ತ ಔಷಧೋಪಚಾರ ನಡೆಸುವುದು ಒಳ್ಳೆಯದು.

ಶನಿ ಸಂಚಾರ ಫಲದ ದೋಷಗಳನ್ನು ನಿವಾರಿಸಲು ಸರಳ ಪರಿಹಾರಗಳು ಇಲ್ಲಿದೆ ನೋಡಿ.

ವೃಶ್ಚಿಕ:- ಪರಾಕ್ರಮ ಸ್ಥಾನದಲ್ಲಿನ ಶನಿಯ ಸಂಚಾರ ನಿಮಗೆ ಆನೆಬಲವನ್ನು ತಂದುಕೊಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ನಿಮ್ಮ ಮನೋಕಾಮನೆಗಳು ಯಾವ ಅಡೆತಡೆ ಇಲ್ಲದೆ ಯಶಸ್ಸಿನತ್ತ ಹೆಜ್ಜೆ ಹಾಕುವುವು.

ಧನುಸ್ಸು:- ಪದೇಪದೆ ಎದುರಾಗುತ್ತಿರುವ ಅಪಯಶಸ್ಸುಗಳಿಂದ ಹೊರಬರುವ ಸಿದ್ಧಿಯನ್ನು ನೀವಿಂದು ಸಂಪಾದಿಸುವಿರಿ. ಹಣಕಾಸಿನ ತೊಂದರೆ ಸ್ವಲ್ಪ ಮಟ್ಟಿಗೆ ಇರುವುದು. ಅಧಿಕಾರಿಗಳ ಜತೆ ವ್ಯವಹರಿಸುವಾಗ ಮಾತಿನ ಮೇಲೆ ಹಿಡಿತವಿರಲಿ.

ಮಕರ:- ಮನೆಯ ಮಗ ಮನೆಗೆ ತಿರುಗಿ ಬಂದಾಗ ಆಗುವಂಥ ಸಂತೋಷ ನಿಮ್ಮದಾಗುವುದು. ಬಹುದಿನದ ಕನಸುಗಳು ನನಸಾಗುವ ಸಂದರ್ಭವಿರುವುದು. ಗೆಳೆಯರೊಬ್ಬರ ಬೆಂಬಲದಿಂದ ಕಾರ್ಯ ಸಿದ್ಧಿ ಆಗುವುದು. ಹಣಕಾಸಿನ ಪರಿಸ್ಥಿತಿಯಲ್ಲಿಸುಧಾರಣೆ ಕಂಡು ಬರುವುದು.

ಶನಿ ಸಂಚಾರ ಫಲ 2020: ಧನುಸ್ಸು ರಾಶಿಗೆ ಶನಿಯ ಸಾಡೇ ಸಾತಿ ಪ್ರಭಾವ

ಕುಂಭ:- ನೀವಿಂದು ವಿಶೇಷವಾದುದನ್ನು ಮಾಡಿ ಮುಗಿಸಿದ ಧನ್ಯತೆಯನ್ನು ಪಡೆಯುವಿರಿ. ಮನಸ್ಸು ನಿರಾಳವಾಗುವುದು. ಮುಂಬರುವ ದಿನಗಳು ನಿಮಗೆ ಸಿಹಿ ಸುದ್ದಿಯನ್ನು ಕೊಡಲಿವೆ. ಗುರುಹಿರಿಯರ ಆಶೀರ್ವಾದವನ್ನು ಪಡೆಯಿರಿ.

ಮೀನ:- ಮಕ್ಕಳಿಂದ, ಬಾಳಸಂಗಾತಿಯಿಂದ ಒತ್ತಡದ ನಿವಾರಣೆಗಾಗಿ ಸಲಹೆ ಸೂಚನೆಗಳನ್ನು ಪಡೆಯಿರಿ. ಇದರಿಂದ ಒಳಿತಾಗುವುದು. ಮನೋನಿಯಾಮಕ ರುದ್ರದೇವರನ್ನು ಮನಸಾ ಭಜಿಸಿ, ಒಳಿತಾಗುವುದು. ಆಸ್ತಿಗೆ ಸಂಬಂಧಪಟ್ಟ ವ್ಯವಹಾರ ಬೇಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ