ಆ್ಯಪ್ನಗರ

ತುಲಾ ರಾಶಿಯವರ ಬಹುತೇಕ ಕಾರ್ಯಗಳು ನಿಮ್ಮ ಇಚ್ಛೆಯಂತೆ ಕೈಗೂಡುವವು: ನಿಮ್ಮ ಇಂದಿನ ಭವಿಷ್ಯ ಹೇಗಿದೆ?

ಮೇಷ:- ನಿಮ್ಮ ಸಲಹೆ ಸೂಚನೆಗಳನ್ನು ತಿಳಿಯುವ ಸಲುವಾಗಿ ಜನರು ನಿಮ್ಮ ಬಳಿಗೆ ಬರುವರು...

Vijaya Karnataka 29 May 2018, 7:38 am
ಮೇಷ:- ನಿಮ್ಮ ಸಲಹೆ ಸೂಚನೆಗಳನ್ನು ತಿಳಿಯುವ ಸಲುವಾಗಿ ಜನರು ನಿಮ್ಮ ಬಳಿಗೆ ಬರುವರು. ನಿಮ್ಮ ಬಾಲ್ಯದ ಸ್ನೇಹಿತ ನಿಮಗೆ ಎದುರಾಗುವುದರಿಂದ ಸಂಭ್ರಮವನ್ನು ಹೊಂದುವಿರಿ. ಆತನ ಕೆಲವು ವಿಚಾರಗಳು ನಿಮ್ಮನ್ನು ಮಂತ್ರಮುಗ್ಧನನ್ನಾಗಿಸುವುದು.
Vijaya Karnataka Web astrology


ವೃಷಭ:- ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬುವ ನಿಮ್ಮನ್ನು ಅನೇಕರು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವರು. ಹಾಗಾಗಿ ಎಲ್ಲರನ್ನು ನಂಬುವುದು ಸೂಕ್ತವಲ್ಲ. ಸಂಗಾತಿ ಕೊಡುವ ಹಿತವಚನ ಪಾಲಿಸಿದಲ್ಲಿ ಅನುಕೂಲವಾಗುವುದು.

ಮಿಥುನ:- ನಿಮ್ಮನ್ನು ನೀವೇ ಸ್ವಯಂ ಸಂಪೂರ್ಣ ವ್ಯಕ್ತಿಯೆಂದು ಭ್ರಮಿಸಿಕೊಂಡಿದ್ದಲ್ಲಿ ಅನರ್ಥಗಳು ಆಗುವುದು. ಆದ್ದರಿಂದ ಎಲ್ಲವನ್ನು ನಿಯಂತ್ರಿಸುವ ಸ್ವತಂತ್ರ ವ್ಯಕ್ತಿಯಾದ ಭಗವಂತನ ಮೊರೆ ಹೋಗುವುದರಿಂದ ಒಳಿತಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

ಕಟಕ:- ಶಿವನ ಆರಾಧನೆಯಿಂದ ವಿವಿಧ ಕಾರ್ಯಗಳಲ್ಲಿ ಗೆಲುವು ಕಾಣುವಿರಿ. ನಿಮ್ಮ ಕರ್ತೃತ್ವ ಶಕ್ತಿಗೆ ಅನುಸರಿಸಿ ಹೊಸ ಅವಕಾಶಗಳು ನಿಮ್ಮನ್ನು ಅರಸಿ ಬರುವವು. ಇದನ್ನು ಸ್ವೀಕರಿಸಿ ಕಾರ್ಯ ಪೂರ್ಣಗೊಳಿಸಿಕೊಡಿ ಒಳಿತಾಗುವುದು.

ಸಿಂಹ:- ಎಲ್ಲಾ ಕಾಲದಲ್ಲೂ ನಿಮ್ಮ ಮಾತೇ ನಡೆಯಬೇಕೆಂಬ ಹಠ. ಒಮ್ಮೆ ಸೋಲು ಒಮ್ಮೆ ಗೆಲುವು ಇದು ಜೀವನದ ಆಟ. ಹಾಗಾಗಿ ಸೋತು ಗೆಲ್ಲುವುದು ಜಾಣರ ಲಕ್ಷ ಣ. ನಾರಸಿಂಹ ದೇವರನ್ನು ಅನನ್ಯ ಭಕ್ತಿಯಿಂದ ನೆನೆಯಿರಿ. ಬಂದ ಸಂಕಷ್ಟಗಳು ದೂರವಾಗುವವು.

ಕನ್ಯಾ:- ಹತ್ತಿರದ ಬಂಧುಗಳೇ ಕಿರಿಕಿರಿ ಮಾಡುವ ಸಾಧ್ಯತೆ ಇರುವುದು. ಹಾಗಂತ ಎಲ್ಲಾ ಬಂಧುಗಳನ್ನು ದೂಷಿಸುವುದು ಸರಿಯಲ್ಲ. ನೀವು ಸಾಗುತ್ತಿರುವ ದಾರಿ ಉತ್ತಮವಾಗಿದ್ದು ಇದು ಕೆಲವರಿಗೆ ಅಸೂಯೆಯನ್ನುಂಟು ಮಾಡುವುದು. ಆದರೆ ಈ ಬಗ್ಗೆ ನೀವು ತಲೆಕೆಡಿಸಿಕೊಳ್ಳದಿರುವುದು ಉತ್ತಮ.

ತುಲಾ: ಬಹುತೇಕ ಕಾರ್ಯಗಳು ನಿಮ್ಮ ಇಚ್ಛೆಯಂತೆ ಕೈಗೂಡುವವು. ಆದರೆ ಅದಕ್ಕಾಗಿ ನೀವು ಪೂರ್ವಾ ತಯಾರಿ ನಡೆಸಿದ್ದರೆ ಮಾತ್ರ ಇಲ್ಲವೆ ಅನವಶ್ಯಕ ಒತ್ತಡಗಳು ನಿಮ್ಮನ್ನು ಹೈರಾಣ ಮಾಡಿಸುವವು. ಗುರು ಹಿರಿಯರ ಅಶೀರ್ವಾದ ಪಡೆಯಿರಿ.

ವೃಶ್ಚಿಕ:- ವಿರೋಧಿಗಳು ನಿಮ್ಮನ್ನು ಸೋಲಿಸಲು ಪಣ ತೊಟ್ಟಿರುವಂತಿದೆ. ಆದರೆ ನೀವು ಇದಕ್ಕೆ ಅಂಜುವ ಅಗತ್ಯವಿಲ್ಲ. ವಿರೋಧಿಗಳು ಎಸೆಯುವ ಪ್ರತಿಯೊಂದು ಅಸ್ತ್ರಕ್ಕೂ ನಿಮ್ಮ ಬಳಿ ಪ್ರತಿ ಅಸ್ತ್ರ ಇದೆ. ಅದನ್ನು ಸಕಾಲದಲ್ಲಿ ಉಪಯೋಗಿಸಿ ಯಶಸ್ಸನ್ನು ಹೊಂದುವಿರಿ.

ಧನಸ್ಸು:- ಹೊಸ ಬಂಡವಾಳದಿಂದ ನೂತನ ಕಾರ್ಯಗಳಲ್ಲಿ ಸಾಫಲ್ಯ ಹೊಂದುವಿರಿ. ನಿಮ್ಮ ದೂರದ ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುವಲ್ಲಿ ಇಂದಿನ ಯೋಚನೆಗಳು ಸಹಕಾರಿಯಾಗಲಿದೆ. ಅದಕ್ಕಾಗಿ ವಿವಿಧ ಮೂಲಗಳಿಂದ ಹಣಕಾಸು ಬರುವುದು.

ಮಕರ:- ಎಲ್ಲಾ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿವೆ. ಎಲ್ಲಾ ಕಾರ್ಯಗಳು ಧಾರಾವಾಹಿಯಂತೆ ದೀರ್ಘ ಸಮಯವನ್ನು ತೆಗೆದುಕೊಳ್ಳುವವು. ಕೆಲಸದಲ್ಲಿ ಚುರುಕುತನ ಕಾಣಲು ಆಂಜನೇಯ ಸ್ತೋತ್ರ ಪಠಿಸಿ.

ಕುಂಭ:- ಹೊಸ ಉತ್ಸಾಹದೊಂದಿಗೆ ಕಾರ್ಯ ಆರಂಭಿಸುವಿರಿ. ಆರಂಭಿಸಿದ ಎಲ್ಲಾ ಕಾರ್ಯಗಳು ಯಶಸ್ಸಿನತ್ತ ಸಾಗುವವು. ಇದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.

ಮೀನ:- ಗಾಳಿಸುದ್ದಿಗಳನ್ನು ನಂಬಬೇಡಿ. ಸುದ್ದಿಗೆ ರೆಕ್ಕೆ ಪುಕ್ಕ ಹಚ್ಚಿ ಮಾತಾಡುವ ಜನರಿಂದ ದೂರವಿರಿ. ಕಚೇರಿಯಲ್ಲಿ ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮಗೆ ಅಸಹಕಾರ ನೀಡುವರು ಮತ್ತು ಅವರೇ ಇಲ್ಲ ಸಲ್ಲದ ಸುದ್ದಿಯನ್ನು ಹಬ್ಬಿಸುವರು. ತಾಳ್ಮೆಯಿಂದ ಇರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ