ಆ್ಯಪ್ನಗರ

Nithya Bhavishya: ಕನ್ಯಾ ರಾಶಿಯವರೇ ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯದಿಂದ ಮುಂದುವರಿಯಿರಿ

ಕಟಕ ರಾಶಿಯವರೇ ಕೌಟುಂಬಿಕ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹೊಂದಾಣಿಕೆಗಳಿಗೆ ತೊಡಗಲು ಸಕಾಲವಾಗಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.

Vijaya Karnataka 29 Jan 2020, 10:09 am
ಮೇಷ:- ರಾಜಕಾರಣಿಗಳಿಗೆ ಸಾರ್ವಜನಿಕರ ಎದುರು ಮುಖಭಂಗ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮಾತೇ ಬೆಳ್ಳಿ ಮೌನವೇ ಬಂಗಾರ ಎಂಬಂತೆ ಮೌನದಿಂದಿರುವುದು ಒಳ್ಳೆಯದು. ವಿಷ್ಣುವಿನ ಆರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ.
Vijaya Karnataka Web ದಿನ ಭವಿಷ್ಯ


ವೃಷಭ:- ಸಮಾಧಾನ ಇರಲಿ. ಮನೆಯಲ್ಲಿ ಶಾಂತಿ ಕದಡದ ಹಾಗೆ ನಿಗಾ ವಹಿಸಿ. ನಿಮ್ಮ ಅಂತಃಶಕ್ತಿಯು ಅಪಾರವಾಗಿದೆ. ಅದನ್ನು ಎದುರಾಳಿಗಳ ಮುಂದೆ ವೃಥಾ ಮಾತನಾಡಿ ವ್ಯರ್ಥ ಮಾಡಿಕೊಳ್ಳದಿರಿ. ಕಣ್ಣಿಗೆ ಸಂಬಂಧಪಟ್ಟ ತೊಂದರೆ ಎದುರಾಗುವ ಸಾಧ್ಯತೆ ಇದೆ.

ಮಿಥುನ:- ಸಂಬಂಧಿಗಳನ್ನು ನೀವು ದೂರ ಇರಿಸಿದಷ್ಟು ಹತ್ತಿರಕ್ಕೆ ಬರುತ್ತಾರೆ. ಅವರನ್ನು ಜಾಣ್ಮೆಯಿಂದ ಹೊರಹಾಕುವುದು ಒಳ್ಳೆಯದು. ಬೇಡದ ಚಿಂತನೆಗಳಿಂದ ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.

ಧನುಸ್ಸು ರಾಶಿಯವರೇ ಮನೆಯಲ್ಲಿ ನಿತ್ಯ ದೇವತಾರ್ಚನೆ ಮಾಡುವುದು ಸರ್ವಶ್ರೇಷ್ಠ: ನಿಮ್ಮ ವಾರ ಭವಿಷ್ಯ ನೋಡಿ

ಕಟಕ:- ಕೌಟುಂಬಿಕ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹೊಂದಾಣಿಕೆಗಳಿಗೆ ತೊಡಗಲು ಸಕಾಲವಾಗಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.

ಸಿಂಹ:- ಹತ್ತಿರದವರಿಂದ ನೋವು ಎದುರಿಸುವ ಸಂದರ್ಭ ಒದಗಿ ಬರುವ ಸಾಧ್ಯತೆ ಇದೆ. ಆದರೆ ನೀವು ನಂಬಿದ ದೇವರು ನಿಮ್ಮ ಕೈ ಬಿಡುವುದಿಲ್ಲ. ಆತ್ಮವಿಶ್ವಾಸದಿಂದ ಎದುರಾಗುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

ಕನ್ಯಾ:- ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯದಿಂದ ಮುಂದುವರಿಯಿರಿ. ನೀವು ಪಡೆದ ಜ್ಞಾನವನ್ನು ಪರರಿಗೆ ಹಂಚುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳುವಿರಿ. ಅಂತೆಯೇ ಹೆಚ್ಚಿನ ಜನರ ಗೌರವಕ್ಕೂ ಪಾತ್ರರಾಗುವಿರಿ.

ಪುರುಷರು ಈ ರಾಶಿಯವರಾಗಿದ್ದರೆ ಮಹಿಳೆಯರು ತಾವಾಗಿಯೇ ಅವರತ್ತ ಆಕರ್ಷಿತರಾಗುತ್ತಾರೆ..!

ತುಲಾ:- ಭ್ರಮೆಯ ಕಾರಣದಿಂದ ಹಗ್ಗವೊಂದು ಹಾವಿನಂತೆ ಕಾಣುವ ಸಂದರ್ಭವಿದೆ. ಸಣ್ಣಪುಟ್ಟ ಸಾಲವನ್ನು ಕೊಟ್ಟವರು ನನ್ನನ್ನು ಕಾಡುವರು ಎಂಬ ಭ್ರಮೆ ನಿಮ್ಮನ್ನು ಕಾಡುವುದು. ಅವರಿಗೆ ನಿಜ ಸಂಗತಿಯನ್ನು ಹೇಳಿ ಕೆಲವು ದಿನ ಕಾಲಾವಕಾಶವನ್ನು ಕೇಳಿ.

ವೃಶ್ಚಿಕ:- ವಿದೇಶ ಪ್ರಯಾಣವನ್ನು ಊಹಿಸಿರದ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಸುದ್ದಿಯೊಂದು ಕೇಳಿಸುವುದು. ಉನ್ನತ ವ್ಯಾಸಂಗಕ್ಕಾಗಲಿ ಅಥವಾ ನೌಕರಿ ವಿಷಯಕ್ಕಾಗಲಿ ನಿಮಗೆ ವಿದೇಶಿ ಕರೆಯೊಂದು ಬರುವ ಸಾಧ್ಯತೆ ಇದೆ.

ಧನುಸ್ಸು:- ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವ ಸಾಹಸ ಬೇಡ. ನಿಮ್ಮ ವಿರೋಧಿಗಳು ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಹದ್ದಿನ ಕಣ್ಣಿನ ರೀತಿಯಲ್ಲಿ ಗಮನಿಸುತ್ತಿರುವರು. ಹಾಗಾಗಿ ನೀವು ಎಚ್ಚರದಿಂದ ಇರುವುದು ಒಳ್ಳೆಯದು.

ಶನಿಯ ಜನ್ಮರಾಶಿಯಾದ ಮಕರರಾಶಿಗೆ ಸಾಡೇ ಸಾತಿಯ ಪ್ರಭಾವಗಳೇನು ಗೊತ್ತಾ?

ಮಕರ:- ಕಪ್ಪು ವಸ್ತುಗಳ ಮಾರಾಟದಿಂದ ಅಧಿಕ ಲಾಭವುಂಟಾಗುವುದು. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅಸಿಡಿಟಿ ತೊಂದರೆಯಿಂದ ಬಳಲಬೇಕಾಗುವುದು. ಹಾಗಾಗಿ ಸೂಕ್ತ ಸಮಯದಲ್ಲಿಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಕುಂಭ:- ಅನೇಕ ರೀತಿಯ ಪ್ರಶಂಸೆಗಳು ಕಾಣಿಕೆಗಳನ್ನು ಪಡೆಯುವ ಅಪರೂಪದ ಸಾಧನೆ ನಿಮ್ಮಿಂದ ಘಟಿಸುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ. ಬಹುದಿನದ ಕನಸು ನನಸಾಗುವುದು.

ಮೀನ:- ಪ್ರಯಾಣದಲ್ಲಿ ಎಚ್ಚರವಿರಲಿ. ಮಾತೃ ಸಂಬಂಧದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಇರುವ ಮನೆ ಬದಲಿಸಬೇಕಾದ ಸಂದರ್ಭ ಬರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ