ಆ್ಯಪ್ನಗರ

Nithya Bhavishya: ಮಕರರಾಶಿಯವರೇ ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು

ಮಿಥುನರಾಶಿಯವರೇ ಗೊತ್ತಿದ್ದೂ ಗೊತ್ತಿದ್ದು ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪರೇಷೆಗಳ ವಿಚಾರವನ್ನು ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.

Vijaya Karnataka 30 Oct 2019, 5:49 am
ಮೇಷ:- ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಿಗುವುದು. ಕೆಲವರಿಗೆ ತಮ್ಮ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತಹ ಸಂದರ್ಭ ಬರುವುದು. ಯಾವುದಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.

ವೃಷಭ:- ನಿಮ್ಮ ಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿ ಆಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ದೀಪಾವಳಿ ವಾರ್ಷಿಕ ಭವಿಷ್ಯ: ಮಿಥುನ ರಾಶಿಯವರು ಗುರುವಿನ ಶುಭ ಸಂಚಾರದಿಂದ ಶುಭಫಲವನ್ನು ಕಾಣುವಿರಿ

ಮಿಥುನ:- ಗೊತ್ತಿದ್ದೂ ಗೊತ್ತಿದ್ದು ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪರೇಷೆಗಳ ವಿಚಾರವನ್ನು ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.

ಕಟಕ:- ದೂರದ ಸಂಬಂಧಿಗಳಾಗಲಿ, ಹಳೆಯ ಸ್ನೇಹಿತರಾಗಲಿ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ, ಸಹಕಾರಗಳನ್ನು ನೀಡಿ ಸಂತೋಷ ಪಡಿಸುವಿರಿ.

ಸಿಂಹ:- ಯಾರನ್ನೂ ದಿಢೀರನೆ ನಂಬಲು ಹೋಗದಿರಿ. ನಿಮ್ಮ ಕಾರ್ಯ ಯೋಜನೆಗೆ ಸಹಾಯಕವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆಯ ಸದಸ್ಯರೊಡನೆ ಮತ್ತು ನೆರೆಹೊರೆಯ ಜನರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವುದು ಕ್ಷೇಮ.

ಕನ್ಯಾ:- ಕಾರ್ಯಾರಂಭದ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯವನ್ನು ಆರಂಭಿಸಿ ನಿಮ್ಮ ಸದೀಚ್ಛೆಯಂತೆ ಭಗವಂತ ಕರುಣೆ ತೋರುವರು.

Vara Bhavishya: ತುಲಾ ರಾಶಿಯವರೆ ನಿಮಗೆ ಬರುವಂತಹ ಕಷ್ಟಗಳು ಮಂಜಿನಂತೆ ಕರಗುವವು; ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ತುಲಾ:- ಎಲ್ಲಾಕಾರ್ಯ, ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನನ್ನು ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಕಾರ್ಯಗಳು ಕೈಗೂಡುವುವು.

ವೃಶ್ಚಿಕ:- ಭಗವಂತನ ಆಟ ಬಲ್ಲವರಾರು ಒಮ್ಮೆ ಸುಖವನ್ನು ಕೊಡುವನು, ಮತ್ತೊಮ್ಮೆ ದುಃಖವನ್ನುಂಟು ಮಾಡುವನು. ನಿಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಶಂಸೆಯು ನಿಮ್ಮನ್ನು ಹುರಿದುಂಬಿಸುವುದು. ಇದು ಮುಂದಿನ ಕಾರ್ಯಗಳಿಗೆ ನಾಂದಿ ಆಗುವುದು.

ಧನುಸ್ಸು:- ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್‌ ಕಹಾ ಹೇ ಅಂತ ನೋಡಿದರೆ ಬಗಲ್‌ಮೇ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿ.

ಮಕರ:- ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸ ಆಲೋಚನೆಯು ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.

ಗುರು ಸಂಚಾರ ಫಲ: ಮಕರ ರಾಶಿಯವರಿಗೆ ವ್ಯಯಾಧಿಪತಿಯಾಗಿ ಪರಿಣಮಿಸುವ ಗುರು
ಕುಂಭ:- ಗಾಳಿ ಗುದ್ದಿ ಮೈ ನೋಯಿಸಿಕೊಂಡ ಹಾಗೆ ಇದೆ ಇಂದಿನ ಪರಿಸ್ಥಿತಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿನೀವು ಪರರಿಗೆ ಉಪಕಾರ ಆಗಲಿ ಎಂದು ಬುದ್ಧಿಮಾತು ಹೇಳಿದರೆ ಅದು ವ್ಯರ್ಥವಾಗುವುದು. ವ್ಯರ್ಥವಾಗುವ ಇಂತಹ ಕಾರ್ಯಗಳಿಗೆ ಕೈ ಹಾಕಬೇಡಿ.

ಮೀನ:- ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ವಿಷ್ಣುವಿನ ಸ್ತೋತ್ರ ಪಠಿಸಿ. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ