ಆ್ಯಪ್ನಗರ

Nithya Bhavishya: ಸಿಂಹ ರಾಶಿಯವರೇ ನಿಮ್ಮ ಉಡಾಫೆ ಭರಿತ ಮಾತುಗಳು ನಿಮ್ಮ ಅಭ್ಯುದಯಕ್ಕೆ ಅಡ್ಡಗಾಲಾಗುವುದು

ಮೀನ ರಾಶಿಯವರೇ ಮಾಯೆಯ ಎಳೆಗಳು ನಿಮ್ಮನ್ನು ಕಾಣದ ಬಲೆಯಲ್ಲಿ ಕೆಡವಿ ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯದಿಂದ ಬಂದದ್ದನ್ನು ಎದುರಿಸಿ. ಒಳಿತಾಗುವುದು.

Vijaya Karnataka 31 Jan 2020, 10:14 am
ಮೇಷ:- ಈ ದಿನ ನಿಮಗೆ ಅನುಕೂಲಕರವಾದ ವಿಚಾರಗಳಿದ್ದರೂ ಅನಪೇಕ್ಷಿತ ಜನರಿಂದ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಮಾತಾ ದುರ್ಗಾದೇವಿಯನ್ನು ಪ್ರಾರ್ಥಿಸಿ ಒಳಿತಾಗುವುದು. ಹಣಕಾಸಿನ ತೊಂದರೆ ಇರುವುದಿಲ್ಲ.
Vijaya Karnataka Web ದಿನ ಭವಿಷ್ಯ


ವೃಷಭ:- ಜನರ ಸಂಬಂಧವಾದ ಸುಖ ಸಂತೋಷಗಳ ಬಗ್ಗೆ ಕಾರ್ಯೋನ್ಮುಖರಾಗಿ ಹೆಸರು ಗಳಿಸುವಿರಿ. ಮಕ್ಕಳ ಅಭ್ಯುದಯ ಮನಸ್ಸಿಗೆ ಸಂತೋಷವನ್ನುಂಟು ಮಾಡುವುದು. ನಿಮ್ಮ ಕಾರ್ಯ ವಿಧಾನಗಳು ನಿಮಗೆ ಪ್ರಶಂಸೆ ಮತ್ತು ಲಾಭವನ್ನು ತಂದುಕೊಡುವುವು.

ಮಿಥುನ:- ಮನೆ ಕಟ್ಟುವ ವಿಚಾರದಲ್ಲಿ ಬಹು ಮಹತ್ವದ ಅಡೆತಡೆಯೊಂದು ಸಂಪೂರ್ಣವಾಗಿ ನಿವಾರಣೆಯಾಗಲಿದೆ ಮತ್ತು ಅನೇಕ ಸಮಸ್ಯೆಗಳು ಹಿರಿಯರ ಮಾರ್ಗದರ್ಶನದಿಂದ ಪರಿಹಾರ ಆಗುವುವು. ಸ್ನೇಹಿತರು ಸಕಾಲದಲ್ಲಿ ಸಹಾಯ ನೀಡುವರು.

ಧನುಸ್ಸು ರಾಶಿಯವರೇ ಮನೆಯಲ್ಲಿ ನಿತ್ಯ ದೇವತಾರ್ಚನೆ ಮಾಡುವುದು ಸರ್ವಶ್ರೇಷ್ಠ: ನಿಮ್ಮ ವಾರ ಭವಿಷ್ಯ ನೋಡಿ

ಕಟಕ:- ಬಾಳಸಂಗಾತಿಯ ಜತೆಗಿನ ಮಾತುಕತೆಗಳು ಬಿಕ್ಕಟ್ಟು ತೋರಲು ಅವಕಾಶವಾಗಬಹುದು. ಹಾಗಾಗಿ ಮೌನದಿಂದ ಇರುವುದು ಒಳ್ಳೆಯದು. ಮನಸ್ಸಿನ ನಿಯಂತ್ರಣಕ್ಕಾಗಿ ಶಿವ ಪಂಚಾಕ್ಷರಿ ಮಂತ್ರ ಪಠಿಸಿ.

ಸಿಂಹ:- ಯಾರನ್ನೂ ಹಗುರವಾಗಿ ಕಾಣದಿರಿ. ಆನೆ ತೂಕ ಆನೆಗೆ, ಆಡಿನ ತೂಕ ಆಡಿಗೆ. ನಿಮ್ಮ ಉಡಾಫೆ ಭರಿತ ಮಾತುಗಳು ನಿಮ್ಮ ಅಭ್ಯುದಯಕ್ಕೆ ಅಡ್ಡಗಾಲಾಗಿ ನಿಲ್ಲುವುವು. ನಿಮ್ಮ ಸಂಕಲ್ಪಶಕ್ತಿಗೆ ಹೆಚ್ಚಿನ ತೊಂದರೆಯನ್ನು ನೀಡುವುವು.

ಕನ್ಯಾ:- ನಿಮ್ಮ ಅತಿಯಾದ ಆದರ್ಶಗಳಿಂದ ಜನರು ನಿಮ್ಮಿಂದ ಬಹುವಾಗಿ ಸಹಾಯ ಪಡೆಯಲು ಬರುವರು. ನಿಮ್ಮ ಸ್ಥೈರ್ಯ, ಧೈರ್ಯ, ಸಾಹಸಗಳಿಂದ ಒಳಿತುಗಳಿಗೆ ಸೂಕ್ತವಾದ ದಾರಿ ದೊರೆಯಲಿದೆ.

ಈ ವರ್ಷ ಪ್ರೀತಿಯಲ್ಲಿ ಉತ್ತಮ ಹೊಂದಾಣಿಕೆ ಕಂಡುಕೊಳ್ಳುವ ರಾಶಿಗಳು ಇವು..!

ತುಲಾ:- ಬಹಳ ದಿನಗಳ ನಿಮ್ಮ ತಲೆನೋವು ನಿವಾರಣೆಗೆ ತೀರಾ ಅಪರಿಚಿತರಿಂದ ಹೊಸ ಸಲಹೆಗಳು ಸಿಕ್ಕಿ, ಹರ್ಷಕ್ಕೆ ದಾರಿ ಮಾಡಿಕೊಡುವುದು. ಹಳೆಯ ವ್ಯಾಜ್ಯಗಳಿಂದ ದಣಿದಿರುವ ನಿಮಗೆ ಹಿರಿಯರೊಬ್ಬರ ಸಹಾಯವು ಒಳಿತಿನ ಬದಲಾವಣೆಯನ್ನು ತಂದು ಕೊಡುವುದು.

ವೃಶ್ಚಿಕ:- ಕುಟುಂಬದ ಸದಸ್ಯರನ್ನು ಸೂಕ್ತವಾಗಿ ನಿರ್ದೇಶಿಸಿ ಕಾರ್ಯತತ್ಪರನ್ನಾಗಿ ಮಾಡಿಕೊಳ್ಳಿ. ನಿಮಗೆ ಗೆಲುವಿನ ನಗೆ ನಿಶ್ಚಿತ. ಗುರು ಕಾರುಣ್ಯದಿಂದ ಹಲವು ರೀತಿಯ ಹೊಸದಾದ ಯೋಜನೆಗಳನ್ನು ಹೆಣೆಯುವ ಶಕ್ತಿ ನಿಮಗೆ ಬರಲಿದೆ.

ಧನುಸ್ಸು:- ಸದ್ಯದ ಪ್ರತಿ ಹೆಜ್ಜೆಯೂ ಎಚ್ಚರದ ಜಾಗ್ರತೆಯ ಆವರಣಗಳನ್ನು ಬಯಸಿದೆ. ಸಾವಧಾನದಿಂದ ಮುನ್ನುಗ್ಗಿದರೆ ಕ್ಷೇಮವಿದೆ. ವಾಕ್‌ ಸ್ಥಾನದ ಶನಿಯು ಮಾತಿನ ವಿಚಾರದಲ್ಲಿ ತಪ್ಪು ನುಸುಳುವಂತೆ ಮಾಡುವನು. ಇದು ಜಗಳಕ್ಕೆ ಕಾರಣವಾಗುವುದು. ಈ ಬಗ್ಗೆ ಎಚ್ಚರ ಇರಲಿ.

ಮಕರ:- ಹೊಸ ಯೋಜನೆಯ ಹೊಸ್ತಿಲಿನಲ್ಲಿ ಏನೋ ಎಡವಟ್ಟು ಆಗಿ, ಹಲವು ತಾಂತ್ರಿಕ ತೊಂದರೆಗಳನ್ನು ತಂದು ಆತಂಕ ನಿರ್ಮಿಸಬಹುದು. ಉದರ ಶೂಲೆಯಂತಹ ತೊಂದರೆಯೂ ಕಾಡುವುದರಿಂದ ಮನಸ್ಸಿಗೆ ಹಿತ ಎನಿಸುವುದಿಲ್ಲ. ಕುಲದೇವರನ್ನು ಪ್ರಾರ್ಥನೆ ಮಾಡಿ.

ಕುಂಭ ರಾಶಿಗೆ ಸಾಡೇ ಸಾತಿ ಆರಂಭ: ಏಳೂವರೆ ಶನಿಯ ಫಲಗಳೇನು ಗೊತ್ತಾ?

ಕುಂಭ:- ಅಧಿಕಾರದಲ್ಲಿರುವ ಜನರು ನಿರೀಕ್ಷೆಗೂ ಮೀರಿದ ಬೆಂಬಲವನ್ನು ನಿಮಗೆ ನೀಡುವುದರಿಂದ ನಿಮ್ಮ ಕೆಲಸ ಕಾರ್ಯಗಳು ಅನಾಯಾಸವಾಗಿ ಆಗುವುವು. ಜಗದಂಬೆಯ ಕರುಣೆಯಿಂದ ಹಲವು ಯೋಜನೆಗಳು ಪರಿಪೂರ್ಣಗೊಳ್ಳುವುವು.

ಮೀನ:- ಮಾಯೆಯ ಎಳೆಗಳು ನಿಮ್ಮನ್ನು ಕಾಣದ ಬಲೆಯಲ್ಲಿ ಕೆಡವಿ ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯದಿಂದ ಬಂದದ್ದನ್ನು ಎದುರಿಸಿ. ಒಳಿತಾಗುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ