ಮೇಷ:- ನಿಮ್ಮ ವಹಿವಾಟು ಸರಾಗವಾಗಿ ನಡೆಯುವುದು. ಹೊಸದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಹಳೆಯ ಒಡಂಬಡಿಕೆಗಳನ್ನು ಮತ್ತು ಹಳೆಯ ಗ್ರಾಹಕರ ಸಹಕಾರವನ್ನು ಮರೆಯುವಂತಿಲ್ಲ. ಹಳೆಯ ಗ್ರಾಹಕರಿಗೂ ನಿಮ್ಮ ಹೊಸ ವಹಿವಾಟಿನ ಪರಿಚಯ ಮಾಡಿಕೊಡಿ.
Vara Bhvishya: ಮಕರ ರಾಶಿಯವರೇ, ಮಾಡುವ ಕೆಲಸಗಳಲ್ಲಿ ತಾಳ್ಮೆ ಶಿಸ್ತನ್ನು ಕಾಪಾಡಿಕೊಳ್ಳಿ; ನಿಮ್ಮ ವಾರ ಭವಿಷ್ಯ ನೋಡಿ
ವೃಷಭ:- ಭಗವಂತನ ಅನುಗ್ರಹ ಯಾವ ಸಂದರ್ಭದಲ್ಲಿಆಗುತ್ತದೆ ಎಂದು ಗೊತ್ತಾಗುವುದಿಲ್ಲ. ಅಂತೆಯೇ ಆತನು ಕೊಡುವ ಸಂದರ್ಭದಲ್ಲಿ ನಾವು ಮೌನಿಗಳಾಗಿರಬಾರದು. ಅಂತಹದೊಂದು ವಿಶೇಷ ಕಾರ್ಯ ಚಟುವಟಿಕೆಗಳು ಭೂಮಿಗೆ ಸಂಬಂಧಪಟ್ಟಂತೆ ನಡೆಯುವುವು.
ಮಿಥುನ:- ಅಪರಿಚಿತರ ಬಳಿ ಮನಸ್ಸಿನ ಅಂತರಂಗವನ್ನು ತೆರೆದಿಡುವುದು ಸೂಕ್ತವಲ್ಲ. ಕೆಲವು ಧೂರ್ತರು ನಿಮ್ಮ ಸಂಪತ್ತನ್ನು ಅಪಹರಿಸುವ ಸಂಚು ಮಾಡುತ್ತಿರುವರು. ಆದಷ್ಟು ಬಹು ಎಚ್ಚರಿಕೆಯಿಂದ ವ್ಯವಹಾರ ನಡೆಸಿ.
ಕಟಕ:- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ತಿಳಿದೂ ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ದೂರದಲ್ಲಿಎಲ್ಲೋ ಒಂದು ಕಡೆ ನಿಮ್ಮ ಲಾಭದ ದಾರಿ ಇದೆ. ಪ್ರಯತ್ನಪಟ್ಟು ಜಯಶೀಲರಾಗಿ. ಇಲ್ಲವೇ ಅದೊಂದು ಹೊಸ ಅನುಭವವೆಂದು ಸುಮ್ಮನಾಗಿ.
ಸಿಂಹ:- ಸಹಾಯ ಮಾಡಬೇಕಾದ ಮಂದಿ ಹಿಂದಕ್ಕೆ ಸರಿಯಬಹುದು. ಆದರೂ ನೀವು ಧೈರ್ಯದಿಂದ ಮುನ್ನುಗ್ಗಿ. ನಿಮ್ಮ ಆತ್ಮಸಾಕ್ಷಿಯಂತೆ ಕಾರ್ಯ ನಿರ್ವಹಿಸಿ. ಆಗ ನಿಮ್ಮ ಹಿಂದೆ ಆಡಿಕೊಳ್ಳುತ್ತಿದ್ದ ವ್ಯಕ್ತಿಗಳ ಬಾಯಿಗೆ ಬೀಗ ಹಾಕಿದಂತೆ ಆಗುವುದು.
ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್ ತಿಂಗಳ ಭವಿಷ್ಯ ನೋಡಿ
ಕನ್ಯಾ:- ಸದ್ಯದ ಗ್ರಹಸ್ಥಿತಿಗಳು ನಿಮ್ಮಲ್ಲಿ ನಿರುತ್ಸಾಹ ತುಂಬುತ್ತಿರುವುದರಿಂದ ಯಾವುದೇ ಕೆಲಸ ಕಾರ್ಯಗಳಲ್ಲಿಆಸಕ್ತಿ ಇಲ್ಲದಂತೆ ಆಗುವುದು. ಹಾಗಾಗಿ ಒಬ್ಬಂಟಿಗರಾಗಿ ಇರಬೇಡಿ. ಆದಷ್ಟು ಗುಂಪಿನಲ್ಲಿ ಬೆರೆಯಿರಿ. ಮನಸ್ಸಿನ ಕಲ್ಮಶಗಳನ್ನು ತೊಳೆದುಕೊಳ್ಳಿ.
ತುಲಾ:- ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಉತ್ತಮ ದಿನ. ಆದರೆ ಸಿನಿಮಾರಂಗ, ಲ್ಯಾಂಡ್ ಡೆವಲಪರ್ಸ್, ಹೋಟೆಲ್ ಉದ್ಯಮದ ಮಂದಿ ಹೆಚ್ಚಿನ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಕೈಕೆಳಗಿನ ಕೆಲಸಗಾರರ ಮನ ಒಲಿಸಿಕೊಳ್ಳಿ.
ವೃಶ್ಚಿಕ:- ಸಣ್ಣ ತಪ್ಪು ಕೂಡ ದೊಡ್ಡದೇ ಆದ ಕಿರಿಕಿರಿ ತರುವ ಸಾಧ್ಯತೆ ಇದೆ. ಆದರೆ ಗುರುವಿನ ಶ್ರೀರಕ್ಷೆ ಇರುವುದರಿಂದ ಯಾವುದಾದರು ವಿಷಯದ ಮೂಲಕ ನಿಮಗೆ ಸಕಾಲಿಕ ಎಚ್ಚರಿಕೆಯನ್ನು ಭಗವಂತ ನೀಡುವನು. ನಿಮ್ಮ ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ.
ಧನುಸ್ಸು:- ಯಾವುದೇ ಸಂದರ್ಭದಲ್ಲಿ ನಿಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ವಿಚಾರವನ್ನು ಯಾರೊಡನೆಯೂ ಚರ್ಚಿಸದಿರಿ. ಒಂದು ವೇಳೆ ಚರ್ಚಿಸಿದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವುದು.
ಗುರು ಗೋಚಾರ ಫಲ: ವೃಶ್ಚಿಕ ಹಾಗೂ ಧನುಸ್ಸು ರಾಶಿಯ ಮೇಲೆ ಉಂಟಾಗುವ ಪರಿಣಾಮಗಳೇನು ಗೊತ್ತಾ?
ಮಕರ:- ಮನೋ ಜಯತ್ ಮಾಂಡವ್ಯಂ ಎಂದರು. ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಪೂರ್ಣವಾಗಿ ಇರುವುದಾದರೂ ಗುರು ಹಿರಿಯರ ಆಶೀರ್ವಾದ ಮುದ್ರೆ ಅದಕ್ಕೆ ಬಿದ್ದಲ್ಲಿ ಹೆಚ್ಚು ಅನುಕೂಲವಾಗುವುದು.
ಕುಂಭ:- ನಿಮ್ಮ ಕಾರ್ಯ ಯೋಜನೆಯ ಕಗ್ಗಂಟುಗಳು ಶೀಘ್ರವೇ ಪವಾಡ ಸದೃಶವಾಗಿ ಬಿಚ್ಚಿಕೊಳ್ಳಲಿವೆ. ಇದರಿಂದ ಮನಸ್ಸಿನಲ್ಲಿನಿರಾಳತೆ ಅನುಭವಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.
ಮೀನ:- ಉದರಕ್ಕೆ ಸಂಬಂಧಿಸಿದ ಕಾಯಿಲೆಯ ಬಗ್ಗೆ ಅಲಕ್ಷ್ಯ ಮಾಡದಿರುವುದು ಕ್ಷೇಮ. ಆದಷ್ಟು ಕುಟುಂಬ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ.
Vara Bhvishya: ಮಕರ ರಾಶಿಯವರೇ, ಮಾಡುವ ಕೆಲಸಗಳಲ್ಲಿ ತಾಳ್ಮೆ ಶಿಸ್ತನ್ನು ಕಾಪಾಡಿಕೊಳ್ಳಿ; ನಿಮ್ಮ ವಾರ ಭವಿಷ್ಯ ನೋಡಿ
ವೃಷಭ:- ಭಗವಂತನ ಅನುಗ್ರಹ ಯಾವ ಸಂದರ್ಭದಲ್ಲಿಆಗುತ್ತದೆ ಎಂದು ಗೊತ್ತಾಗುವುದಿಲ್ಲ. ಅಂತೆಯೇ ಆತನು ಕೊಡುವ ಸಂದರ್ಭದಲ್ಲಿ ನಾವು ಮೌನಿಗಳಾಗಿರಬಾರದು. ಅಂತಹದೊಂದು ವಿಶೇಷ ಕಾರ್ಯ ಚಟುವಟಿಕೆಗಳು ಭೂಮಿಗೆ ಸಂಬಂಧಪಟ್ಟಂತೆ ನಡೆಯುವುವು.
ಮಿಥುನ:- ಅಪರಿಚಿತರ ಬಳಿ ಮನಸ್ಸಿನ ಅಂತರಂಗವನ್ನು ತೆರೆದಿಡುವುದು ಸೂಕ್ತವಲ್ಲ. ಕೆಲವು ಧೂರ್ತರು ನಿಮ್ಮ ಸಂಪತ್ತನ್ನು ಅಪಹರಿಸುವ ಸಂಚು ಮಾಡುತ್ತಿರುವರು. ಆದಷ್ಟು ಬಹು ಎಚ್ಚರಿಕೆಯಿಂದ ವ್ಯವಹಾರ ನಡೆಸಿ.
ಕಟಕ:- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದು ತಿಳಿದೂ ನಿರ್ಲಕ್ಷ್ಯ ವಹಿಸುವುದು ಸೂಕ್ತವಲ್ಲ. ದೂರದಲ್ಲಿಎಲ್ಲೋ ಒಂದು ಕಡೆ ನಿಮ್ಮ ಲಾಭದ ದಾರಿ ಇದೆ. ಪ್ರಯತ್ನಪಟ್ಟು ಜಯಶೀಲರಾಗಿ. ಇಲ್ಲವೇ ಅದೊಂದು ಹೊಸ ಅನುಭವವೆಂದು ಸುಮ್ಮನಾಗಿ.
ಸಿಂಹ:- ಸಹಾಯ ಮಾಡಬೇಕಾದ ಮಂದಿ ಹಿಂದಕ್ಕೆ ಸರಿಯಬಹುದು. ಆದರೂ ನೀವು ಧೈರ್ಯದಿಂದ ಮುನ್ನುಗ್ಗಿ. ನಿಮ್ಮ ಆತ್ಮಸಾಕ್ಷಿಯಂತೆ ಕಾರ್ಯ ನಿರ್ವಹಿಸಿ. ಆಗ ನಿಮ್ಮ ಹಿಂದೆ ಆಡಿಕೊಳ್ಳುತ್ತಿದ್ದ ವ್ಯಕ್ತಿಗಳ ಬಾಯಿಗೆ ಬೀಗ ಹಾಕಿದಂತೆ ಆಗುವುದು.
ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್ ತಿಂಗಳ ಭವಿಷ್ಯ ನೋಡಿ
ಕನ್ಯಾ:- ಸದ್ಯದ ಗ್ರಹಸ್ಥಿತಿಗಳು ನಿಮ್ಮಲ್ಲಿ ನಿರುತ್ಸಾಹ ತುಂಬುತ್ತಿರುವುದರಿಂದ ಯಾವುದೇ ಕೆಲಸ ಕಾರ್ಯಗಳಲ್ಲಿಆಸಕ್ತಿ ಇಲ್ಲದಂತೆ ಆಗುವುದು. ಹಾಗಾಗಿ ಒಬ್ಬಂಟಿಗರಾಗಿ ಇರಬೇಡಿ. ಆದಷ್ಟು ಗುಂಪಿನಲ್ಲಿ ಬೆರೆಯಿರಿ. ಮನಸ್ಸಿನ ಕಲ್ಮಶಗಳನ್ನು ತೊಳೆದುಕೊಳ್ಳಿ.
ತುಲಾ:- ದೊಡ್ಡ ದೊಡ್ಡ ವ್ಯವಹಾರಸ್ಥರಿಗೆ ಉತ್ತಮ ದಿನ. ಆದರೆ ಸಿನಿಮಾರಂಗ, ಲ್ಯಾಂಡ್ ಡೆವಲಪರ್ಸ್, ಹೋಟೆಲ್ ಉದ್ಯಮದ ಮಂದಿ ಹೆಚ್ಚಿನ ಎಚ್ಚರ ವಹಿಸುವುದು ಒಳ್ಳೆಯದು. ನಿಮ್ಮ ಕೈಕೆಳಗಿನ ಕೆಲಸಗಾರರ ಮನ ಒಲಿಸಿಕೊಳ್ಳಿ.
ವೃಶ್ಚಿಕ:- ಸಣ್ಣ ತಪ್ಪು ಕೂಡ ದೊಡ್ಡದೇ ಆದ ಕಿರಿಕಿರಿ ತರುವ ಸಾಧ್ಯತೆ ಇದೆ. ಆದರೆ ಗುರುವಿನ ಶ್ರೀರಕ್ಷೆ ಇರುವುದರಿಂದ ಯಾವುದಾದರು ವಿಷಯದ ಮೂಲಕ ನಿಮಗೆ ಸಕಾಲಿಕ ಎಚ್ಚರಿಕೆಯನ್ನು ಭಗವಂತ ನೀಡುವನು. ನಿಮ್ಮ ಕುಲದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ.
ಧನುಸ್ಸು:- ಯಾವುದೇ ಸಂದರ್ಭದಲ್ಲಿ ನಿಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ವಿಚಾರವನ್ನು ಯಾರೊಡನೆಯೂ ಚರ್ಚಿಸದಿರಿ. ಒಂದು ವೇಳೆ ಚರ್ಚಿಸಿದರೆ ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕಿಕೊಳ್ಳುವಿರಿ. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುವುದು.
ಗುರು ಗೋಚಾರ ಫಲ: ವೃಶ್ಚಿಕ ಹಾಗೂ ಧನುಸ್ಸು ರಾಶಿಯ ಮೇಲೆ ಉಂಟಾಗುವ ಪರಿಣಾಮಗಳೇನು ಗೊತ್ತಾ?
ಮಕರ:- ಮನೋ ಜಯತ್ ಮಾಂಡವ್ಯಂ ಎಂದರು. ಮನಸ್ಸಿಗೆ ಸರಿ ಎನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಪೂರ್ಣವಾಗಿ ಇರುವುದಾದರೂ ಗುರು ಹಿರಿಯರ ಆಶೀರ್ವಾದ ಮುದ್ರೆ ಅದಕ್ಕೆ ಬಿದ್ದಲ್ಲಿ ಹೆಚ್ಚು ಅನುಕೂಲವಾಗುವುದು.
ಕುಂಭ:- ನಿಮ್ಮ ಕಾರ್ಯ ಯೋಜನೆಯ ಕಗ್ಗಂಟುಗಳು ಶೀಘ್ರವೇ ಪವಾಡ ಸದೃಶವಾಗಿ ಬಿಚ್ಚಿಕೊಳ್ಳಲಿವೆ. ಇದರಿಂದ ಮನಸ್ಸಿನಲ್ಲಿನಿರಾಳತೆ ಅನುಭವಿಸುವಿರಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದು.
ಮೀನ:- ಉದರಕ್ಕೆ ಸಂಬಂಧಿಸಿದ ಕಾಯಿಲೆಯ ಬಗ್ಗೆ ಅಲಕ್ಷ್ಯ ಮಾಡದಿರುವುದು ಕ್ಷೇಮ. ಆದಷ್ಟು ಕುಟುಂಬ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ.