ಆ್ಯಪ್ನಗರ

ಮಕರ ರಾಶಿಯಲ್ಲಿ ಗುರು ಸಂಚಾರ: ನವೆಂಬರ್‌ನಲ್ಲಿ ಈ ರಾಶಿಗಳಿಗೆ ಗುರು ಬಲ..!

ಇದೇ ನವೆಂಬರ್ 20 ಶುಕ್ರವಾರದಂದು ಗುರುವು ಶನಿಯ ರಾಶಿ ಚಿಹ್ನೆಯಾದ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ಗ್ರಹದ ಸ್ಥಾನಪಲ್ಲಟದಿಂದ ಯಾವೆಲ್ಲಾ ರಾಶಿಗಳು ಶುಭ ಫಲವನ್ನು ಪಡೆದುಕೊಳ್ಳಲಿದೆ..? ಗುರುವಿನ ಸ್ಥಾನ ಬದಲಾವಣೆ ಯಾವ ರಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ..?

Vijaya Karnataka Web 18 Nov 2020, 12:59 pm
ನವೆಂಬರ್ ತಿಂಗಳಿನಲ್ಲಿ ಬಹುತೇಕ ಗ್ರಹಗಳ ಸ್ಥಾನವು ಬದಲಾವಣೆಯಾಗುತ್ತದೆ. ಅವುಗಳಲ್ಲಿ ಮೊದಲನೆಯದು ಗುರು. ಈ ಬೃಹಸ್ಪತಿ ದೇವನು ಶನಿಯು ಈಗಾಗಲೇ ವಿರಾಜಮಾನವಾಗಿರುವ ಮಕರ ರಾಶಿಯ ಮನೆಯನ್ನು ಪ್ರವೇಶಿಸಲಿದ್ದಾನೆ. ಗುರು ಹೇಳಿಕೇಳಿ ದೇವತೆಗಳ ಗುರು, ನವೆಂಬರ್ 20 ಶುಕ್ರವಾರದಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅದೇ ಮನೆಯಲ್ಲಿ ಈ ವರ್ಷದ ಕೊನೆಯ ಭಾಗದವರೆಗೆ ಗುರು ಇರುತ್ತಾನೆ. ಗುರುವು ಗುರುಬಲ ನೀಡುವವನು, ಅಂದರೆ ಐಶ್ವರ್ಯ, ಧನ, ಸಂಪತ್ತು ಐಷಾರಾಮಿ ಎಂದೆಲ್ಲಾ ನಾವು ಏನು ಕರೆಯುತ್ತೇವೆಯೋ, ಅವುಗಳ ಕಾರಕ ಗ್ರಹ ಈ ಗುರು. ಹೀಗಾಗಿ ಗುರು ಸಂಚಾರ ಮಾಡುತ್ತಿದ್ದಾನೆ ಎಂದರೆ, ರಾಶಿಗಳ ಮೇಲೆ ತನ್ನದೇ ಆದ ಪ್ರಭಾವವನ್ನು ಈತ ಬೀರುತ್ತಾನೆ. ಗುರು ಆಯಕಟ್ಟಿನ ಸ್ಥಾನದಲ್ಲಿದ್ದರೆ, ಜಾತಕನಿಗೆ ಸಂಪತ್ತು ಮತ್ತು ಸಂತೋಷ ಹೆಚ್ಚಿಗೆ ದೊರೆಯುತ್ತದೆ. ಸಂಪತ್ತು ದೊರೆಯುವುದರ ಜೊತೆಗೆ ದ್ವಿಗುಣಗೊಳ್ಳುತ್ತಾ ಹೋಗುತ್ತದೆ. ಅದೇ ರೀತಿ ಗುರುವಿನ ಸಂಚಾರವು ಕೆಲವರಿಗೆ ನಕಾರಾತ್ಮಕ ಪ್ರಭಾವವನ್ನು ಸಹ ನೀಡುತ್ತದೆ. ಇಂದು ನಾವು ಗುರು ಸಂಚಾರದಿಂದ ಪ್ರಯೋಜನವನ್ನು ಪಡೆಯುವ ರಾಶಿಗಳ ಕುರಿತಾಗಿ ಚರ್ಚಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಕೆಳಕಂಡ ರಾಶಿಗಳು ಗುರುವಿನ ಕೃಪೆಗೆ ಪಾತ್ರರಾಗಿ ಒಳ್ಳೆಯದನಗಳನ್ನು ನೋಡುತ್ತಾರೆ, ಇನ್ನೇಕೆ ತಡ ಮುಂದೆ ಓದಿ....
Vijaya Karnataka Web jupiter transit in capricorn from 20 november and these 6 zodiac sign may get benefits
ಮಕರ ರಾಶಿಯಲ್ಲಿ ಗುರು ಸಂಚಾರ: ನವೆಂಬರ್‌ನಲ್ಲಿ ಈ ರಾಶಿಗಳಿಗೆ ಗುರು ಬಲ..!


​ಮೇಷ: ವ್ಯಾಪಾರದಲ್ಲಿ ಅಭಿವೃದ್ಧಿ

ಗುರುವಿನ ಸ್ಥಾನ ಬದಲಾವಣೆಯು ಈ ರಾಶಿಗೆ ವರವಾಗಿ ಕೂಡಿಬರುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಮಾನಸಿಕ ನೆಮ್ಮದಿ ಸಹ ನಿಮಗೆ ಲಭಿಸುತ್ತದೆ. ವ್ಯಾಪಾರದಲ್ಲಿ ಅಭಿವೃದ್ದಿಯನ್ನು ನೀವು ಕಾಣುವಿರಿ, ವ್ಯಾಪಾರವನ್ನು ವಿಸ್ತರಿಸುವುದರಲ್ಲೂ ಸಹ ನೀವು ಯಶಸ್ಸನ್ನು ಕಾಣುವಿರಿ. ವೈವಾಹಿಕ ಜೀವನ ಸಂತೋಷಕರವಾಗಿರುತ್ತದೆ ಮತ್ತು ದಾಂಪತ್ಯದಲ್ಲಿ ಸಿಹಿ ಸುದ್ದಿಯನ್ನು ಕೇಳುವ ಕಾಲ ನಿಮ್ಮದಾಗಲಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭ ನಿಮಗೆ ಕೂಡಿಬರಲಿದೆ. ನೀವು ಹಾಕಿದ ಬಂಡವಾಳಕ್ಕೆ ಉತ್ತಮ ಲಾಭ ನಿಮ್ಮ ಕೈಸೇರಲಿದೆ. ಮಕ್ಕಳು ಶಿಕ್ಷಣದಲ್ಲಿ ಏಳಿಗೆಯನ್ನು ಕಾಣುತ್ತಾರೆ.

ಇಂದು ತುಲಾ ರಾಶಿಗೆ ಶುಕ್ರನ ಪ್ರವೇಶ: ಈ 6 ರಾಶಿಯವರಿಗೆ ಶುಕ್ರದೆಸೆ ಆರಂಭ..!

​ಮಿಥುನ: ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ

ಗುರುವಿನ ಸಂಚಾರವು ನಿಮಗೆ ಪ್ರಯೋಜನವನ್ನು ನೀಡಲಿದೆ. ನಿಮ್ಮ ನಿಂತು ಹೋಗಿರುವ ಕೆಲಸ ಕಾರ್ಯಗಳು ವೇಗವನ್ನು ಪಡೆದುಕೊಳ್ಳುವ ಕಾಲ ಇದಾಗಲಿದೆ ಮತ್ತು ವ್ಯವಹಾರಗಳಲ್ಲಿ ಸಹ ಫಲಿತಾಂಶ ನಿಮ್ಮ ಕಡೆಗೆ ವಾಲುತ್ತದೆ. ವೃತ್ತಿಯಲ್ಲಿ ಆದಾಯ ಹೆಚ್ಚುತ್ತದೆ ಹಾಗೂ ಹೊಸ ಹುದ್ದೆ ಸಹ ನಿಮಗೆ ದೊರೆಯುತ್ತದೆ. ಸ್ನೇಹಿತರ ಸಹಕಾರದಿಂದ ನಿಮ್ಮ ಯೋಜನೆಗಳು ಪರಿಪೂರ್ಣಗೊಳ್ಳುತ್ತವೆ. ನಿರುದ್ಯೋಗಿ ಯುವಕರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಪೋಷಕರ ಜೊತೆಗೆ ಉತ್ತಮ ಸಮಯವನ್ನು ಕಳೆಯುತ್ತೀರಿ ಹಾಗೂ ಅವರಿಂದ ಒಳ್ಳೆಯ ಮಾರ್ಗದರ್ಶನವನ್ನು ಪಡೆಯುವ ಕಾಲ ಇದು. ನಿಮ್ಮ ಸ್ನೇಹಿತೆಯರು ನಿಮಗೆ ಹೊಸ ವ್ಯವಹಾರ ಹಾಗೂ ಹಣ ದೊರೆಯುವ ಮಾರ್ಗಗಗಳನ್ನು ತೋರಿಸುತ್ತಾರೆ.

ಕೆಲಸದಲ್ಲಿ ಪದೇ ಪದೇ ಕಿರಿಕಿರಿ ಅನುಭವಿಸುತ್ತಿದ್ದೀರಾ..? ಇಲ್ಲಿದೆ ಪರಿಹಾರ

​ಕನ್ಯಾ ರಾಶಿ: ಮನೆ ಮತ್ತು ವಾಹನದ ಕನಸು ನನಸಾಗುತ್ತದೆ

ಗುರುವಿನ ಸಂಚಾರದಿಂದ ನಿಮಗೆ ಒಳ್ಳೆಯ ಕಾಲ ಬರಲಿದೆ. ನೀವು ಹೊಸ ವ್ಯವಹಾರದ ಅವಕಾಶಗಳನ್ನು ಪಡೆಯಲಿರುವಿರಿ. ಜೊತೆಗೆ ಬಂಡವಾಳಗಳಿಂದ ಸಹ ನಿಮಗೆ ಲಾಭಗಳು ದೊರೆಯಲಿವೆ. ವ್ಯವಹಾರದಲ್ಲಿ ಪಾಲುದಾರರು ನಿಮಗೆ ದೊರೆಯುತ್ತಾರೆ ಹಾಗೂ ನೀವು ಬಯಸಿದ ಫಲಿತಾಂಶಗಳು ನಿಮಗೆ ದೊರೆಯುತ್ತವೆ. ಬಹುದಿನಗಳಿಂದ ಕನಸಾಗಿಯೇ ಉಳಿದಿದ್ದ ಮನೆ ಮತ್ತು ವಾಹನ ಕೊಳ್ಳುವ ವಿಚಾರವು ಈಗ ನನಸಾಗುತ್ತದೆ. ಕೋರ್ಟ್ ವ್ಯಾಜ್ಯಗಳು ನಿಮ್ಮ ಪರವಾಗಿ ಬಗೆಹರಿಯಲಿವೆ. ನಿಮ್ಮಿಂದ ಮುನಿಸಿಕೊಂಡು ದೂರ ಹೋಗಿದ್ದ ಸ್ನೇಹಿತರೊಬ್ಬರು ಮರಳಿ ನಿಮ್ಮ ಬಳಿಗೆ ಬರುವ ಕಾಲ ಇದು. ಪ್ರೇಮ ಮತ್ತು ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಇರುವ ಕಾಲ ಇದು. ನಿಮ್ಮ ಸಂಗಾತಿಯಿಂದ ಸಂತೋಷ ನಿಮ್ಮದಾಗಲಿದೆ.

Vara Bhavishya: ಮಕರ ರಾಶಿಯವರು ದೈಹಿಕ ಅಸ್ವಸ್ಥತೆಗೆ ಒಳಗಾಗುವಿರಿ ಎಚ್ಚರ..!

​ತುಲಾ ರಾಶಿ: ಐಷಾರಾಮಿ ವಸ್ತುಗಳ ಲಾಭ

ಗುರುವಿನ ಸಂಚಾರದಿಂದ ನಿಮಗೆ ಅಮೃತ ಘಳಿಗೆ ಕೂಡಿಬರಲಿದೆ. ನಿಮ್ಮ ಸಾಧನೆಯನ್ನು ಕಂಡು ನಿಮ್ಮ ಸಂಗಾತಿ ಮತ್ತು ಮನೆಯವರು ಹೆಮ್ಮೆ ಪಡುವ ಕಾಲ ಇದಾಗುತ್ತದೆ. ನಿಮ್ಮ ಮಕ್ಕಳ ಮದುವೆಯ ಕುರಿತಾಗಿ ಇದ್ದ ಚಿಂತೆಯು ಈಗ ದೂರವಾಗುತ್ತದೆ ಹಾಗೂ ಮನೆಗೆ ಬರುವ ಅತಿಥಿಗಳಿಂದ ಶುಭ ಸುದ್ದಿಯನ್ನು ಕೇಳುವಿರಿ. ವ್ಯವಹಾರದಲ್ಲಿ ಇದ್ದ ಸವಾಲುಗಳು ಅಂತ್ಯವಾಗಿ ಸುಗಮವಾಗಿ ಸಾಗುತ್ತದೆ. ಮಕ್ಕಳ ಏಳಿಗೆ ಮತ್ತು ಐಷಾರಾಮಿ ವಸ್ತುಗಳ ಲಾಭದಿಂದಾಗಿ ನಿಮ್ಮ ಮನಸ್ಸು ಸಂತೋಷದಿಂದ ಕುಣಿದಾಡುವ ಕಾಲ ಇದಾಗಲಿದೆ.

ಮೀನರಾಶಿಯೆಡೆಗೆ ಮಾರ್ಗಿಯಾಗಿರುವ ಮಂಗಳ: ಈ 5 ರಾಶಿಯವರಿಗಿದು ಶುಭಕಾಲ?

​ಮಕರ ರಾಶಿ: ಹೊಸ ಗುರುತು ನಿಮಗೆ ದೊರೆಯುತ್ತದೆ

ಗುರುವಿನ ಬದಲಾವಣೆಯಿಂದ ನಿಮಗೆ ಉತ್ತಮ ಕಾಲ ಒದಗಿಬರುತ್ತದೆ. ವಿದೇಶಕ್ಕೆ ಹೋಗುವ ನಿಮ್ಮ ಕೋರಿಕೆ ಈಡೇರುತ್ತದೆ. ಜೊತೆಗೆ ನೀವು ವಿದೇಶದಲ್ಲಿಯೇ ನೆಲೆಗೊಂಡರೂ ಅಚ್ಚರಿಯಿಲ್ಲ. ತೀರ್ಥಯಾತ್ರೆಗಳನ್ನು ಮಾಡುತ್ತೀರಿ ಹಾಗೂ ನಿಮ್ಮ ಸಂಗಾತಿಯ ಜೊತೆಗೆ ಬಾಂಧವ್ಯ ಹೆಚ್ಚಾಗುತ್ತದೆ. ಭಾವನಾತ್ಮಕವಾಗಿ ನೀವು ಇನ್ನೂ ಹತ್ತಿರವಾಗುತ್ತೀರಿ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ನಿಮಗೆ ಹೊಸ ಗುರುತು ಮತ್ತು ಖ್ಯಾತಿ ಹುಡುಕಿಕೊಂಡು ಬರುತ್ತದೆ. ಈ ಕ್ಷೇತ್ರದಲ್ಲಿ ಹೊಸ ಹೊಸ ವಿಚಾರಗಳನ್ನು ನೀವು ಕಲಿಯುತ್ತೀರಿ ಹಾಗೂ ಕೆಲಸಕ್ಕೆ ಸಂಬಂಧಿಸಿದ ಅಡಚಣೆಗಳು ಅಂತ್ಯಗೊಂಡು, ನಿಮ್ಮ ದಾರಿ ಸುಗಮವಾಗುತ್ತದೆ. ಎಲ್ಲೋ ಸಿಕ್ಕಿಹಾಕಿಕೊಂಡಿದ್ದ ನಿಮ್ಮ ಹಣವು ಮತ್ತೆ ನಿಮ್ಮ ಕೈಸೇರಲಿದೆ ಮತ್ತು ನಿಮ್ಮ ಸಂಸಾರದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.

ದೀಪಾವಳಿ 2020 - ದೀಪಾವಳಿ 2021: ಭವಿಷ್ಯದ ಜಗತ್ತು ನಿಮಗೆ ಶುಭವೋ, ಅಶುಭವೋ ..?

​ಕುಂಭ ರಾಶಿ: ಹಳೆಯ ಬಂಡವಾಳದಿಂದ ಲಾಭ

ಗುರುವಿನ ಬದಲಾವಣೆಯಿಂದಾಗಿ ನಿಮಗೆ ಭಾಗ್ಯದ ಬಾಗಿಲು ತೆರೆಯುತ್ತದೆ. ನಿಮಗೆ ಹೊಸ ಸ್ನೇಹಿತರು ಮತ್ತು ಅವರಿಂದ ಪ್ರಯೋಜನಗಳು ದೊರೆಯುತ್ತವೆ. ಆರ್ಥಿಕ ಸಮಸ್ಯೆಗಳು ಕೊನೆಗೊಳ್ಳುತ್ತವೆ ಮತ್ತು ವ್ಯವಹಾರದಲ್ಲಿ ಲಾಭ ನಿಮಗೆ ದೊರೆಯುತ್ತದೆ. ನಿಮಗೆ ಹೊಸ ಆದಾಯದ ಮೂಲವು ಒಂದು ಗೋಚರಿಸಲಿದೆ. ನೀವು ಈ ಹಿಂದೆ ಹೂಡಿರುವ ಬಂಡವಾಳದಿಂದ ಲಾಭ ನಿಮಗೆ ದೊರೆಯಲಿದೆ. ಭೂಮಿಯ ಮೇಲೆ ಹಣ ಹೂಡಲು ಇದು ಸಕಾಲ. ಕೌಟುಂಬಿಕ ಆಸ್ತಿ ಪಾಸ್ತಿ ದ್ವಿಗುಣಗೊಳ್ಳುವ ಕಾಲ ಇದು. ಹಣಕಾಸಿನ ಸಂಬಂಧವಾಗಿ ಇದ್ದ ವಾದವಿವಾದಗಳು ಸುಖಾಂತ್ಯವನ್ನು ಕಾಣುತ್ತವೆ ಮತ್ತು ನೀವು ವಿದೇಶಕ್ಕೆ ಹೋಗುವ ಅವಕಾಶಗಳು ಹೆಚ್ಚುತ್ತವೆ.

ದೀಪಾವಳಿ 2020 ಭವಿಷ್ಯ: 2021 ದೀಪಾವಳಿಯವರೆಗೆ ಆರ್ಥಿಕ ಲಾಭ ಪಡೆಯುವ ರಾಶಿಗಳಾವುವು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ