ಆ್ಯಪ್ನಗರ

ಗ್ರಹಗಳ ಚಲನೆಯು ಯಾವ ರಾಶಿಗಳ ಮೇಲೆ ಯಾವ ಪರಿಣಾಮ ಬೀರುತ್ತೆ ಗೊತ್ತಾ?

ಜ್ಯೋತಿಷ್ಯದ ಪ್ರಕಾರ ಸೌರಮಂಡಲದಲ್ಲಿರುವ ಹನ್ನೆರಡು ಗ್ರಹಗಳೂ ನಮ್ಮ ಜೀವನವನ್ನು ನಿರ್ಧರಿಸುತ್ತದೆ. ಗ್ರಹಗಳ ಚಲನೆಯು ನಮ್ಮ ಭವಿಷ್ಯವನ್ನು ನಿರ್ಧರಿಸುವುದೆಂದು ಹೇಳಲಾಗುತ್ತದೆ. ಒಂಭತ್ತು ನವಗ್ರಹಗಳೂ ಕೂಡಾ ಹನ್ನೆರಡು ರಾಶಿಗಳನ್ನು ಪ್ರವೇಶಿಸುತ್ತವೆ. ಆಗ ಈ ಗ್ರಹಗಳ ಪರಿಣಾಮವೂ ಭಿನ್ನವಾಗಿರುತ್ತದೆ. ಹಾಗಾಗಿ ಯಾವ ಗ್ರಹವು ಯಾವ ಸ್ಥಾನದಲ್ಲಿದ್ದಾಗ ಯಾವ ರಾಶಿಗೆ ಉತ್ತಮ ಫಲ ಯಾಗೂ ಯಾವ ರಾಶಿಗೆ ಅಶುಭ ಫಲ ನೀಡುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Vijaya Karnataka Web 20 Mar 2020, 1:36 pm
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಾಗೂ ವೈಜ್ಞಾನಿಕವಾಗಿಯೂ ನವಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜೀವನದ ಪ್ರತಿಯೊಂದು ಅಂಶವನ್ನೂ ನಿರ್ಧರಿಸುವುದರ ಜೊತೆಗೆ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳನ್ನು ನೀಡುತ್ತದೆ. ಗ್ರಹಗಳ ಸ್ಥಾನಗಳು ಪ್ರತಿತಿಂಗಳೂ ಬದಲಾಗುತ್ತವೆ. ಕೆಲವೊಂದು ಗ್ರಹಗಳು ಸ್ಥಾನ ಬದಲಾಯಿಸಲು ಒಂದೂವರೆ ತಿಂಗಳು, ಒಂದು ವರ್ಷವನ್ನೂ ತೆಗೆದುಕೊಳ್ಳುತ್ತವೆ. ಗ್ರಹಗಳ ಸ್ಥಾನ ಬದಲಾವಣೆಯು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸ್ಥಾನ ಬದಲಾದಾಗ ಯಾವ ಗ್ರಹಗಳು ಶುಭ ಹಾಗೂ ಕೆಟ್ಟ ಫಲವನ್ನು ನೀಡುವುದು ಹಾಗೂ ಗ್ರಹಗಳ ಚಲನೆ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಈ ಸ್ಟೋರಿ ಓದಿ.
Vijaya Karnataka Web planetary position


ಸೂರ್ಯ ಗ್ರಹ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ಒಂದು ತಿಂಗಳು ಒಂದು ರಾಶಿಯಲ್ಲಿ ಉಳಿದರೆ, ಇನ್ನೊಂದು ತಿಂಗಳು ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಸೂರ್ಯನ ಚಲನೆಗೆ ಅನುಗುಣವಾಗಿ ಸ್ಥಳೀಯ ರಾಶಿಯ ಮೇಲೆ ಸೂರ್ಯನ ಪ್ರಭಾವವೇನು ಎನ್ನುವುದರ ಮೇಲೆ ಸೂರ್ಯನ ಫಲವು ನಿರ್ಧರಿಸಲ್ಪಡುತ್ತದೆ. ಸೂರ್ಯನು ಮಕರ ರಾಶಿ ಹಾಗೂ ಕುಂಭ ರಾಶಿಯಲ್ಲಿದ್ದಾಗ ಪೀಡಕನಾಗುತ್ತಾನೆ. ಸಿಂಹರಾಶಿಯ ಅಧಿಪತಿಯಾಗಿರುವ ಸೂರ್ಯ ಸಂಚರಿಸುವಾಗ ತನ್ನ ರಾಶಿಯಿಂದ ಮೂರನೇ, ಆರನೇ, ಹತ್ತನೇ ಮತ್ತು ಹನ್ನೊಂದನೇ ಮನೆಗೆ ಶುಭ ಫಲಿತಾಂಶಗಳನ್ನು ನೀಡಿದರೆ ಉಳಿದ ಮನೆಗಳಿಗೆ ಅಶುಭ ಫಲಿತಾಂಶವನ್ನು ನೀಡುತ್ತಾನೆ.

ಚಂದ್ರ ಗ್ರಹ
ಚಂದ್ರನು ಪ್ರತಿ ಎರಡೂವರೆ ದಿನಗಳಿಗೊಮ್ಮೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಒಬ್ಬ ವ್ಯಕ್ತಿಯ ಕುಂಡಲಿಯಲ್ಲಿ ಚಂದ್ರನು ಯಾವ ಸ್ಥಾನದಲ್ಲಿದ್ದಾನೆ ಎನ್ನುವುದರ ಮೇಲೆ ಪರಿಣಾಮಗಳು ನಿರ್ಧಾರವಾಗುತ್ತದೆ. ಚಂದ್ರನು ಶನಿ ರಾಶಿಚಕ್ರ ಚಿಹ್ನೆ ಅಂದರೆ ಮಕರ ಹಾಗೂ ಕುಂಭ ರಾಶಿಯಲ್ಲಿದ್ದಾಗ ಕೆಟ್ಟ ಪರಿಣಾಮಗಳನ್ನು ಬೀರುತ್ತಾನೆ. ಚಂದ್ರನು ಕಟಕ ರಾಶಿಯ ಅಧಿಪತಿ ತನ್ನ ರಾಶಿಯಿಂದ ಮೊದಲನೇ ಮನೆ, ಮೂರನೇ, ಏಳನೇ ಹತ್ತನೇ ಮತ್ತು ಹನ್ನೊಂದನೇ ಮನೆಗೆ ಶುಭಕಾರಕನಾಗಿದ್ದರೆ, ನಾಲ್ಕನೇ, ಏಳನೇ ಮತ್ತು ಹನ್ನೊಂದನೇ ಮನೆಗೆ ಅಶುಭಕಾರಕನಾಗಿರುತ್ತಾನೆ.

ಕುಂಡಲಿಯಲ್ಲಿರುವ ಹನ್ನೆರಡು ಮನೆಗಳು ಏನನ್ನು ಸೂಚಿಸುತ್ತವೆ ಗೊತ್ತಾ?

ಮಂಗಳ ಗ್ರಹ
ಮಂಗಳ ಗ್ರಹವು ಒಂದೊಂದು ರಾಶಿಚಕ್ರದಲ್ಲಿ ಸುಮಾರು ಒಂದೂವರೆ ತಿಂಗಳು ಒಂದೊಂದು ರಾಶಿಚಕ್ರದಲ್ಲಿ ಸಂಚರಿಸುತ್ತದೆ. ಕೆಲವೊಮ್ಮೆ ಮೂರು ತಿಂಗಳ ಅವಧಿಯನ್ನೂ ತೆಗೆದುಕೊಳ್ಳುತ್ತದೆ. ಮೇಷ ಹಾಗೂ ವೃಶ್ಚಿಕ ರಾಶಿಯ ಅಧಿಪತಿಯಾದ ಮಂಗಳನು ಮೂರನೇ, ಆರನೇ ಮತ್ತು ಹನ್ನೊಂದನೇ ಮನೆಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಉಳಿದ ಮನೆಗಳಿಗೆ ಅಶುಭ ಗ್ರಹವಾಗಿರುತ್ತದೆ ಮಂಗಳ.

ಬುಧ ಗ್ರಹ
ಬುಧ ಗ್ರಹ ಸುಮಾರು 14 ದಿನಗಳ ಕಾಲ ಒಂದೊಂದು ರಾಶಿ ಚಕ್ರದಲ್ಲಿ ನೆಲೆಸುತ್ತದೆ. ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾದ ಬುಧನು ಕುಂಡಲಿಯಲ್ಲಿ ಆರೋಹಣದ ಪ್ರಕಾರ ಎರಡನೇ, ನಾಲ್ಕನೇ, ಆರನೇ, ಎಂಟನೇ, ಹತ್ತನೇ ಮತ್ತು ಹನ್ನೊಂದನೇ ಮನೆಗಳಿಗೆ ಶುಭಕಾರಕನಾಗಿರುತ್ತಾನೆ. ಉಳಿದ ಮನೆಗಳಿಗೆ ಅಶುಭಕಾರಕನಾಗಿರುತ್ತಾನೆ.

ಅದೃಷ್ಟ ತರುವ ಗಜ ಕೇಸರಿ ಯೋಗಕ್ಕೆ ಗ್ರಹಗಳ ಸ್ಥಾನ ಹೇಗಿರಬೇಕು ಗೊತ್ತಾ?

ಗುರು ಗ್ರಹ
ಗುರು ಒಂದೊಂದು ರಾಶಿಚಕ್ರದಲ್ಲಿ ಒಂದೊಂದು ವರ್ಷ ಉಳಿಯುತ್ತಾನೆ. ಕುಂಡಲಿಯ ಆರೋಹಣ ಚಿಹ್ನೆಯಿಂದ ಎರಡನೇ, ಐದನೇ, ಏಳನೇ, ಒಂಭತ್ತನೇ ಮತ್ತು ಹನ್ನೊಂದನೇ ಮನೆಯಲ್ಲಿ ಫಲದಾಯಕನಾದ ಗುರುವು, ಉಳಿದ ಮನೆಗಳಿಗೆ ಅಶುಭ ಫಲವನ್ನು ನೀಡುತ್ತಾನೆ. ಗುರುವು ಧನುಸ್ಸು ರಾಶಿ ಹಾಗೂ ಮೀನ ರಾಶಿಯ ಅಧಿಪತಿಯಾಗಿರುತ್ತಾನೆ.

ಶುಕ್ರ ಗ್ರಹ
ವೃಷಭ ಮತ್ತು ತುಲಾ ರಾಶಿಯ ಅಧಿಪತಿಯಾದ ಶುಕ್ರನು ಒಂದೊಂದು ರಾಶಿಚಕ್ರದಲ್ಲಿ 23 ದಿನಗಳವರೆಗೆ ಇರುತ್ತಾನೆ. ಶುಕ್ರನು ವಕ್ರಿಯಾದಾಗ ಒಂದು ರಾಶಿಯಲ್ಲಿ ಒಂದೂವರೆ ತಿಂಗಳಿಂದ ಎರಡೂವರೆ ತಿಂಗಳವರೆಗೆ ಇರುತ್ತಾನೆ. ತನ್ನ ರಾಶಿಚಕ್ರದ ಮೊದಲನೇ, ಎರಡನೇ, ಮೂರನೇ, ನಾಲ್ಕನೇ, ಐದನೇ, ಎಂಟನೇ, ಒಂಭತ್ತನೇ, ಹನ್ನೊಂದನೇ ಮತ್ತು ಹನ್ನೆರಡನೆಯ ಮನೆಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಮತ್ತು ಉಳಿದ ಮನೆಗಳಿಗೆ ಕೆಟ್ಟ ಫಲಿತಾಂಶವನ್ನು ನೀಡುತ್ತದೆ.

ಶನಿ ಗ್ರಹ
ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಶನಿಯು ಸಂಚರಿಸಲು ತೆಗೆದುಕೊಳ್ಳುವ ಸಮಯ ಎರಡೂವರೆ ವರ್ಷ ಅಂದರೆ 30 ತಿಂಗಳು. ಮಕರ ಹಾಗೂ ಕುಂಭ ರಾಶಿಯ ಅಧಿಪತಿಯಾದ ಶನಿಯು ಜನ್ಮ ರಾಶಿಯಿಂದ ಮೂರನೇ, ಆರನೇ ಹಾಗೂ ಹನ್ನೊಂದನೇ ಮನೆಯಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಉಳಿದ ಮನೆಗಳಿಗೆ ಅಶುಭ ಫಲವನ್ನು ನಿಡುತ್ತಾನೆ.

ನಿಮ್ಮ ರಾಶಿಗೆ ಸಂಬಂಧಪಟ್ಟ ಹೂವು ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

ಛಾಯಾ ಗ್ರಹ ರಾಹು
ಛಾಯಾ ಗ್ರಹವೆಂದು ಕರೆಯಲ್ಪಡುವ ರಾಹು ಒಂದು ರಾಶಿಯಲ್ಲಿ ಒಂದೂವರೆ ವರ್ಷಗಳ ಕಾಲ ಸ್ಥಿತನಾಗುತ್ತಾನೆ. ರಾಹು ತನ್ನ ಸಂಚಾರದ ಸಮಯದಲ್ಲಿ ಜನ್ಮ ರಾಶಿಚಕ್ರದಿಂದ ಮೂರನೇ, ಆರನೇ ಮತ್ತು ಹನ್ನೊಂದನೇ ಮನೆಗೆ ಶುಭದಾಯಕನಾದರೆ ಉಳಿದ ಮನೆಗಳಲ್ಲಿ ದುರುದ್ದೇಶಪೂರಿತ ಫಲಿತಾಂಶಗಳನ್ನು ನೀಡುತ್ತಾನೆ.

ಛಾಯಾ ಗ್ರಹ ಕೇತು
ರಾಹುವಿನಂತೆಯೇ ಕೇತುವೂ ಕೂಡಾ ಒಂದು ರಾಶಿ ಚಕ್ರದಲ್ಲಿ ಒಂದೂವರೆ ವರ್ಷಗಳ ಕಾಲ ಸ್ಥಿತನಾಗಿರುತ್ತಾನೆ. ಕೇತುವಿನ ಸಂಚಾರವು ಆರೋಹಣದ ಮೊದಲ, ಎರಡನೇ, ಮೂರನೇ, ನಾಲ್ಕನೇ, ಐದನೇ, ಏಳನೇ, ಒಂಭತ್ತನೇ ಮತ್ತು ಹನ್ನೊಂದನೇ ಮನೆಯಲ್ಲಿ ಶುಭ ಫಲಿತಾಂಶವನ್ನು ನೀಡಿದರೆ ಉಳಿದ ಮನೆಗಳಿಗೆ ಕೆಟ್ಟ ಫಲವನ್ನು ನೀಡುತ್ತಾನೆ.

ಒಂಭತ್ತು ಗ್ರಹಗಳಲ್ಲಿ ಸೂರ್ಯ ಮತ್ತು ಚಂದ್ರ ಎಂದಿಗೂ ಹಿಮ್ಮುಖವಾಗಿ ಚಲಿಸುವುದಿಲ್ಲ. ರಾಹು ಮತ್ತು ಕೇತು ಯಾವಾಗಲೂ ಹಿಮ್ಮುಖವಾಗಿ ಚಲಿಸುವ ಗ್ರಹಗಳಾಗಿರುತ್ತವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ