ಆ್ಯಪ್ನಗರ

ಇಷ್ಟಾರ್ಥ ಸಿದ್ಧಿಗೆ ಭಗವದ್ಗೀತೆ ಪಠಣ

ಭಗವದ್ಗೀತೆ ಹಿಂದೂಗಳ ಪವಿತ್ರಗ್ರಂಥ. ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಈ ಗ್ರಂಥ. ಎಲ್ಲಾ ಉಪನಿಷತ್‌ಗಳ ಸಾರಾಂಶವನ್ನೊಳಗೊಂಡಿದೆ. ಭಗವದೀತೆಯನ್ನು ಜೀವನದಲ್ಲಿ ಒಮ್ಮೆಯಾದರೂ ಅಥವಾ ತಿಂಗಳಿಗೆ ಒಮ್ಮೆಯಾದಾರೂ ಓದಬೇಕು ಎಂಬುದು ನಮ್ಮ ಧಾರ್ಮಿಕ ನಂಬಿಕೆ.

Vijaya Karnataka 21 Jul 2019, 12:15 pm
- ಅರವಿಂತ್‌ ಕೃಷ್ಣಮೂರ್ತಿ
Vijaya Karnataka Web sri krishna

ತನ್ನನ್ನು ತಾನು ಹೇಗೆ ನಿರ್ವಹಣೆ ಮಾಡಿಕೊಳ್ಳಬೇಕು, ನಾಯಕತ್ವ ಗುಣಗಳನ್ನು ಹೇಗೆ ಬೆಳೆಸಿಕೊಳ್ಳಬೇಕು, ಬಾಹ್ಯ ಹಾಗೂ ಲೌಕಿಕ ಪ್ರಪಂಚದಲ್ಲಿ ಹೇಗೆ ಜೀವನ ನಡೆಸಬೇಕು ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸುವುದು ಹೇಗೆ ಎಂಬುದರ ಕುರಿತು ಭಗವದ್ಗೀತೆಯಲ್ಲಿ ಹೇಳಲಾಗಿದೆ.

ಬದುಕನ್ನು ಹೀಗೆಯೇ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದರ ಕುರಿತಾಗಿ ಮಾರ್ಗದರ್ಶನ ಮಾಡುವ ಪ್ರತಿಯೊಬ್ಬ ಗುರುವೂ ಭಗವದ್ಗೀತೆಯನ್ನು ಉದಾಹರಿಸದೆ ಇರಲಾರರು. ಅಂತಹ ತತ್ತ್ವ ಚಿಂತನೆಗಳು, ನಂಬಿಕೆಗಳು ಭಗವದ್ಗೀತೆಯಲ್ಲಿವೆ. ಈ ಪವಿತ್ರ ಗ್ರಂಥದ ಪ್ರತಿಯೊಂದು ಅಧ್ಯಾಯವೂ ವಿಭಿನ್ನವಾಗಿದ್ದು ಅದರಿಂದ ತಿಳಿದುಕೊಳ್ಳಬೇಕಾದಂತಹ ಅನೇಕ ವಿಚಾರಗಳಿವೆ.

ಭಗವದ್ಗೀತೆಯನ್ನು ಓದುವುದು ಅಂದರೆ ಅದರಲ್ಲಿನ ಶ್ಲೋಕಗಳನ್ನು, ಮಂತ್ರಗಳನ್ನು ಪಠಿಸುವುದು ಮಾತ್ರವಲ್ಲ. ಅದರ ಅರ್ಥವನ್ನು ತಿಳಿದುಕೊಳ್ಳುವುದು ಬಹಳ ಅಗತ್ಯ. ಪ್ರತಿಯೊಬ್ಬರೂ ಕೂಡಾ ಭಗವದ್ಗೀತೆಯನ್ನು ಓದುವುದನ್ನು ರೂಢಿಸಿಕೊಳ್ಳಬೇಕು.

ಹೆಚ್ಚಿನ ಪ್ರತಿಫಲವನ್ನು ಪಡೆಯುವುದಕ್ಕಾಗಿ ಶ್ರೀಕೃಷ್ಣನ ವಿಗ್ರಹವನ್ನು ಎದುರು ಇಟ್ಟುಕೊಂಡು ಪ್ರತಿದಿನ ಅಥವಾ ಒಂದು ವಾರದಲ್ಲಿ 10 ಶ್ಲೋಕಗಳನ್ನು ಪಠಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ. ವಿಗ್ರಹದ ಮುಂದೆ ಕೇಳುವ ಹಾಗೆ 10 ಶ್ಲೋಕಗಳನ್ನು ಪಠಿಸಿ. ಅದರ ಜತೆಗೆ ಅದರ ಅರ್ಥವನ್ನು ಓದಬೇಕು. ಶ್ಲೋಕ ಪಠಿಸಿದ ನಂತರ ವಿಗ್ರಹದ ಮುಂದೆ ಎರಡು ತುಪ್ಪದ ದೀಪಗಳನ್ನು ಬೆಳಗಿ, ಶ್ರೀಕೃಷ್ಣನಿಗೆ ಆರತಿ ಮಾಡಬೇಕು.

ಭಗವದ್ಗೀತೆಯನ್ನು ಅರ್ಥ ಮಾಡಿಕೊಂಡು ಓದುವುದರಿಂದ ಶ್ರೀಕೃಷ್ಣನ ಸಮೀಪದಲ್ಲೇ ಇದ್ದೇನೆ ಎನ್ನುವ ಭಾವ ಉಂಟಾಗುವುದು. ಹಾಗೂ ಇಡೀ ಜಗತ್ತನ್ನು ಧೈರ್ಯದಿಂದ ಎದುರಿಸುವ ಕವಚದಂತಹ ದೃಢ ಮನಸ್ಥಿತಿ ನಿಮ್ಮದಾಗುವುದು.

ಜತೆಗೆ ಶ್ರೀಕೃಷ್ಣನಿಗೆ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ. ಮನೆಯಲ್ಲಿಯೇ ಅಥವಾ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದು.ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಲು ಭಗವಾನ್‌ ಶ್ರೀಕೃಷ್ಣ ದಾರಿ ತೋರುತ್ತಾನೆ.

ಗೀತೆಯನ್ನು ತಮ್ಮ 60ನೇ ವಯಸ್ಸಿನಲ್ಲಿ ಓದುವುದರಿಂದ ಮನೆಯಲ್ಲಿ ಜಗಳ ಉಂಟಾಗುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಯಾವುದೋ ಒಂದು ಸಂದರ್ಭದಲ್ಲಿ ಹಾಗೆ ಹೇಳಿದ್ದಿರಬಹುದು. ಆದರೆ ಇದರಿಂದ ಏನೂ ತೊಂದರೆ ಇಲ್ಲ. ಹಾಗಾಗಿ ಅದರಿಂದ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ