ಆ್ಯಪ್ನಗರ

ಪವಿತ್ರ 'ರಕ್ಷಾ ಬಂಧನ'ದ ಹಿಂದಿನ ಕಥೆ ಏನು ಗೊತ್ತಾ?

ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿ ಸಹೋದರನ ಕೈಗೆ ಕೇಸರಿ ದಾರ ಬರಿ ದಾರವಲ್ಲ, ಅದು ರಕ್ಷೆಯ ಪ್ರತೀಕ. ಈ ಹಬ್ಬದ ಹಿಂದಿನ ಕಥೆಗಳು, ಇತಿಹಾಸ ಇಲ್ಲಿ ನೋಡಿ.

Agencies 15 Aug 2019, 8:35 am
ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 15ರಂದು ರಕ್ಷಾಬಂಧನವನ್ನು ಆಚರಿಸಲಾಗುತ್ತಿದೆ.
Vijaya Karnataka Web rakhi


ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ.

ಈ ಸುದ್ದಿಯನ್ನು ಓದಿ: ರಕ್ಷಾ ಬಂಧನದ ಇತಿಹಾಸ ಏನು ಗೊತ್ತಾ? ರಾಖಿಯ ಮಹತ್ವ, ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಲು ಇಲ್ಲಿ ನೋಡಿ

ಪುರಾಣದ ಕಥೆ
ಹಿಂದೂ ಪುರಾಣದ ಪ್ರಕಾರ ಹಲವು ವರ್ಷಗಳ ಹಿಂದೆ, ದೇವರು ಮತ್ತು ರಾಕ್ಷಸರ ನಡುವೆ 12 ವರ್ಷಗಳ ಕಾಲ ನಿರಂತರವಾಗಿ ಯುದ್ಧ ನಡೆಯಿತು. ಯುದ್ಧದ ಕೊನೆಯಲ್ಲಿ ರಾಕ್ಷಸರು ಗೆದ್ದರು. ಆ ವೇಳೆ ರಾಕ್ಷಸರು ದೇವರ-ಇಂದ್ರನ ರಾಜನ ಸಿಂಹಾಸನವನ್ನು ವಶಪಡಿಸಿಕೊಂಡಿದ್ದಲ್ಲದೆ ಮೂರು ಪ್ರಪಂಚಗಳನ್ನೂ ಸಹ ವಶಪಡಿಸಿಕೊಂಡರು.

ಇಂದ್ರನು ಯುದ್ಧದಲ್ಲಿ ಸೋತಾಗ, ದೇವತೆಗಳ ಆಧ್ಯಾತ್ಮಿಕ ಶಿಕ್ಷಕ ಬೃಹಸ್ಪತಿಯ ಬಳಿಗೆ ಹೋಗಿ ಸಲಹೆಯನ್ನು ಪಡೆದನು. ಬೃಹಸ್ಪತಿ ಇಂದ್ರನಿಗೆ ರಕ್ಷಣೆ ನೀಡುವ ಕೆಲವು ಮಂತ್ರಗಳನ್ನು ಪಠಿಸುವಂತೆ ಸಲಹೆ ನೀಡಿದರು. ಬೃಹಸ್ಪತಿ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಮಂತ್ರಗಳನ್ನು ಪಠಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.
ಮಂತ್ರಗಳನ್ನು ಪಠಿಸುವ ಈ ಸಮಾರಂಭದಲ್ಲಿ ಒಂದು ಸಣ್ಣ ಪ್ಯಾಕೆಟ್‌ನ ಸುತ್ತಲೂ ದಾರವನ್ನು ಬಿಗಿಯಾಗಿ ಕಟ್ಟಲಾಗಿತ್ತು. ಸಮಾರಂಭದ ನಂತರ, ರಕ್ಷಣೆಯ ಆಶೀರ್ವಾದಗಳನ್ನು ಹೊಂದಿರುವ ಈ ಪ್ಯಾಕೆಟ್ ಅನ್ನು ಇಂದ್ರನ ಪತ್ನಿ ಶಾಚಿ (ಇಂದ್ರಾಣಿ) ಇಂದ್ರನ ಬಲ ಮಣಿಕಟ್ಟಿನ ಮೇಲೆ ಕಟ್ಟುತ್ತಾಳೆ. ಈ ಆಶೀರ್ವಾದಗಳಿಂದಾಗಿ, ಭಗವಾನ್ ಇಂದ್ರನು ರಾಕ್ಷಸರನ್ನು ಸೋಲಿಸಲು ಮತ್ತು ಕಳೆದುಹೋದ ತನ್ನ ರಾಜ್ಯವನ್ನು ಮರಳಿ ಪಡೆಯಲು ಶಕ್ತಿಯನ್ನು ಪಡೆದುಕೊಂಡನು.

ಇದನ್ನೂ ಓದಿ: ನಿಮ್ಮ ಪ್ರೀತಿಯ ಸಹೋದರನಿಗೆ ರಾಖಿ ಕಟ್ಟಲು ದಿನಾಂಕ, ಶುಭ ವೇಳೆ ಯಾವುದು ಗೊತ್ತಾ?

ರಕ್ಷಾ ಬಂಧನವನ್ನು ಏಕೆ ಆಚರಿಸುತ್ತೇವೆ ಮತ್ತು ಹೇಗೆ ಆಚರಿಸುತ್ತೇವೆ?

ಇಂದು ರಕ್ಷಾಬಂಧನ: ನಿಮ್ಮ ಸಹೋದರ - ಸಹೋದರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿದೆ ನೋಡಿ ಸಂದೇಶಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ