ಆ್ಯಪ್ನಗರ

ಗಣಪತಿ ಪೂಜೆಗೆ ಗರಿಕೆ ಕಡ್ಡಾಯ, ಏಕೆ?

ಶಿವನಿಗೆ ಬಿಲ್ವದಳ ಇಷ್ಟವಾಗಿರುವಂತೆ ಶ್ರೀಕೃಷ್ಣನಿಗೆ ನವಿಲುಗರಿ ಪ್ರಿಯವಾಗಿರುವಂತೆ, ಗಣಪನಿಗೆ ಪ್ರಿಯವಾದುದು ಗರಿಕೆ.

Vijaya Karnataka 24 Aug 2017, 6:06 pm
ಶಿವನಿಗೆ ಬಿಲ್ವದಳ ಇಷ್ಟವಾಗಿರುವಂತೆ ಶ್ರೀಕೃಷ್ಣನಿಗೆ ನವಿಲುಗರಿ ಪ್ರಿಯವಾಗಿರುವಂತೆ, ಗಣಪನಿಗೆ ಪ್ರಿಯವಾದುದು ಗರಿಕೆ. ಗಣಪತಿಗೆ ಗರಿಕೆ ಇಡದಿದ್ದರೆ ಅಂದು ಉಪವಾಸ ಮಾಡುತ್ತಾನೆ ಎಂಬ ಪ್ರತೀತಿ. ಆದ್ದರಿಂದ 'ಅವನೀಶ' (ವಿಶ್ವವಂದಿತ) ಗರಿಕೆಯನ್ನೇ ಆಹಾರವನ್ನಾಗಿ ಸೇರಿಸುತ್ತಾನೆಂಬ ನಂಬಿಕೆ.
Vijaya Karnataka Web garike in lord ganapathi pooja
ಗಣಪತಿ ಪೂಜೆಗೆ ಗರಿಕೆ ಕಡ್ಡಾಯ, ಏಕೆ?


ಅಲ್ಲದೇ ಪ್ರತಿನಿತ್ಯ ತಪ್ಪದೇ ಗರಿಕೆ ನೀರನ್ನು ಸೇವಿಸಿದರೆ ಅಲ್ಪಜೀವಿಯೂ ಶತಾಯುಷಿಯಾಗುತ್ತಾನೆ, ವಜ್ರಕಾಯನಾಗುತ್ತಾನೆ ಎಂಬ ನಂಬಿಕೆಯಿದೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಗರಿಕೆ ಸೇವನೆಯಿಂದ ಮೂಲವ್ಯಾಧಿ ಸಂಪೂರ್ಣ ಗುಣವಾಗುತ್ತದೆ.

ತಾಯಿ ಹಾಲಿನ ಬದಲು ಮಗುವಿಗೆ ಒಂದು ಚಮಚ ಗರಿಕೆ ರಸದ ಜೊತೆ ಜೇನುತುಪ್ಪವನ್ನು ಪ್ರತಿನಿತ್ಯ ನೀಡುವುದರಿಂದ ಮಗು ದಷ್ಟಪುಷ್ಟವಾಗಿ ಬೆಳೆಯುತ್ತದೆ (ಆಯುರ್ವೇದ ಗ್ರಂಥದಲ್ಲಿಈ ಬಗ್ಗೆ ಉಲ್ಲೇಖವಿದೆ). ಈ ವಿನಾಯಕನ ತಲೆಯ ಭಾಗ ಆನೆಯದು, ಆನೆಗೆ ಕಬ್ಬು, ಗರಿಕೆ, ಸೊಪ್ಪುಸದೆಯೆಂದರೆ ಪಂಚಪ್ರಾಣ. ಆದ್ದರಿಂದ 'ಗಣಾಧಿಪ' ಗರಿಕೆಪ್ರಿಯ ಎನ್ನಲಾಗಿದೆ.

ಗಣೇಶ ಪುರಾಣದಲ್ಲಿಪ್ರಸ್ತಾಪವಾಗಿರುವಂತೆ 'ಲಂಬಕರ್ಣ'ನು ಚಿಕ್ಕವನಾಗಿದ್ದಾಗಲೇ ಅನೇಕಾನೇಕ ದನುಜರನ್ನು ಸಂಹರಿಸಿದ್ದನಂತೆ. ಹಾಗೆಯೇ ಅದೊಂದು ದಿನ ಒಬ್ಬ ರಾಕ್ಷಸನನ್ನು ನುಂಗಿ ಬಿಡುತ್ತಾನೆ. ಎಷ್ಟು ಸಮಯವಾದರೂ ಅವನ ಕೋಪ ಕಡಿಮೆಯಾಗಲಿಲ್ಲ.

ಆಗ ಸಾವಿರಾರು ಋಷಿಮುನಿಗಳು ತಲಾ 21 ಗರಿಕೆಗಳನ್ನು ಬಾಲಗಣಪತಿಗೆ ಅರ್ಪಿಸಿದಾಗ ಅವನ ಕೋಪ ಶಮನಗೊಂಡು ಪರಿಸ್ಥಿತಿ ತಿಳಿಯಾಗಿ ಸಂಕಷ್ಟ ನಿವಾರಣೆಯಾಯಿತು ಎಂದು ನಂಬಲಾಗಿದೆ. ಈ ಕಾರಣದಿಂದಲೇ ಇರಬೇಕು ಪ್ರತಿ ತಿಂಗಳು ಬರುವ 'ಸಂಕಷ್ಟ ಹರ' ವ್ರತಾಚರಣೆ ಸಂದರ್ಭದಲ್ಲಿಗಣಪತಿಗೆ ಗರಿಕೆಯನ್ನಿಟ್ಟುಪೂಜಿಸುವ ಸಂಪ್ರದಾಯ ಬೆಳೆದು ಬಂದಿದೆ.

Garike(one kid of grass) will offer during Lord Ganapati pooja. There is belives that without garike Ganapati pooja will not be completed.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ