ಶ್ರಾವಣ ಮಾಸದ ಎರಡನೇ ಶುಕ್ರವಾರ ( ಆಗಸ್ಟ್ 9) ಅಂದರೆ ಇವತ್ತು ವರಮಹಾಲಕ್ಷ್ಮೀ ಹಬ್ಬ. ಈ ಹಿನ್ನೆಲೆ ಇಂದು ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಸೇರಿ ಮನೆಗಳಲ್ಲಿಯೂ ವರಮಹಾಲಕ್ಷ್ಮೀ ವ್ರತ ಜರುಗಲಿದೆ.
ಶುಕ್ರವಾರ ವರಮಹಾಲಕ್ಷ್ಮೀ ಬಂದರೆ ಮನೆಯಲ್ಲಿ ಹಿಂದಿನ ದಿನ ಅಂದರೆ ಗುರುವಾರವೇ ಪೂಜೆಗೆ ಬೇಕಿರುವ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಅಲ್ಲದೆ, ಗುರುವಾರವೇ ಪೂಜೆಗೆ ತಯಾರಿ ಸಹ ಆರಂಭವಾಗುತ್ತದೆ.
ಈ ಸುದ್ದಿಯನ್ನು ಓದಿ: ವರಮಹಾಲಕ್ಷ್ಮೀ ಬರಮಾಡಿಕೊಳ್ಳಲು ಸಜ್ಜಾದ ನಾಡು: ವ್ರತ ಮಾಡಲು ಶುಭ ವೇಳೆ ಇಲ್ಲಿದೆ ನೋಡಿ
ವ್ರತ ಮಾಡುವವರು ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು. ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಲಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ.
ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದು ಹೇಗೆ?
ಕಳಶದ ಚೊಂಬಿನಲ್ಲಿ ಅಕ್ಕಿ ಅಥವ ನೀರು, ನಾಣ್ಯಗಳು, ಒಂದು ನಿಂಬೆಹಣ್ಣು, ಐದು ವೀಳ್ಯದ ಎಲೆಗಳು ಮತ್ತು ಅಡಿಕೆಯನ್ನು ಹಾಕಿ ತುಂಬಿಸುತ್ತಾರೆ. ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಣ್ಣದ ಬಳೆಗಳು ಮತ್ತು ಕಪ್ಪು ಬಣ್ಣದ ಮಣಿಗಳನ್ನು ಚೊಂಬಿನ ಪಕ್ಕದಲ್ಲಿ ಜೋಡಿಸುತ್ತಾರೆ. ಪೂಜೆಯಲ್ಲಿ ಲಕ್ಷ್ಮಿ ದೇವಿಯ ಶ್ಲೋಕಗಳನ್ನು ಹೇಳುವುದರ ಮೂಲಕ ಮತ್ತು ಲಕ್ಷ್ಮೀ ಸಹಸ್ರನಾಮಗಳನ್ನು ಸ್ಫಟಿಸುವುದು ಕೂಡಿರುತ್ತವೆ. ಕಲಶಕ್ಕೆ ಆರತಿಯನ್ನು ಮಾಡುತ್ತಾರೆ. ವಿವಿಧ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಕೆಲವೆಡೆ ಪೂಜೆ ಮಾಡಿದ ಮಹಿಳೆಯರು ತಮ್ಮ ಕೈ ಮಣಿಕಟ್ಟಿನ ಸುತ್ತ ಹಳದಿದಾರವನ್ನು ಕಟ್ಟಿಕೊಳ್ಳುತ್ತಾರೆ. ಇನ್ನು, ಪೂಜೆ ಮಾಡಿದ ಮರುದಿನ, ಅಂದರೆ ಶನಿವಾರ, ಸ್ನಾನಮಾಡಿದ ನಂತರ ಕಲಶವನ್ನು ತೆರೆದು ಎಲ್ಲವನ್ನು ಬಿಚ್ಚಿ, ಅದರಲ್ಲಿ ಇಟ್ಟಿದ್ದ ನೀರನ್ನು ಮನೆಯ ಎಲ್ಲಾ ಪ್ರದೇಶದಲ್ಲಿ ಚಿಮುಕಿಸುತ್ತಾರೆ. ನೀರಿನ ಬದಲು ಅಕ್ಕಿಯನ್ನಿಟ್ಟಿದ್ದರೆ, ಅದರಲ್ಲಿ ಅನ್ನ ಮಾಡಿ ಆ ಅನ್ನವನ್ನು ಊಟಕ್ಕೆ ತಯಾರಿಸಿದ ಅನ್ನದ ಜೊತೆ ಬೆರೆಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯನ್ನು ಸರಳವಾಗಿಯೂ ಮಾಡಬಹುದು. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೂ ಲಕ್ಷ್ಮೀದೇವಿಯನ್ನು ಮೆಚ್ಚಿಸಬಹುದಾಗಿದೆ.
ಶುಕ್ರವಾರ ವರಮಹಾಲಕ್ಷ್ಮೀ ಬಂದರೆ ಮನೆಯಲ್ಲಿ ಹಿಂದಿನ ದಿನ ಅಂದರೆ ಗುರುವಾರವೇ ಪೂಜೆಗೆ ಬೇಕಿರುವ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ಅಲ್ಲದೆ, ಗುರುವಾರವೇ ಪೂಜೆಗೆ ತಯಾರಿ ಸಹ ಆರಂಭವಾಗುತ್ತದೆ.
ಈ ಸುದ್ದಿಯನ್ನು ಓದಿ: ವರಮಹಾಲಕ್ಷ್ಮೀ ಬರಮಾಡಿಕೊಳ್ಳಲು ಸಜ್ಜಾದ ನಾಡು: ವ್ರತ ಮಾಡಲು ಶುಭ ವೇಳೆ ಇಲ್ಲಿದೆ ನೋಡಿ
ವ್ರತ ಮಾಡುವವರು ಬೆಳಗ್ಗೆ ಎದ್ದು ಮಂಗಳಸ್ನಾನ ಮಾಡಿ, ಪೂಜಾಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸುತ್ತಾರೆ. ಅಷ್ಟದಳ ಪದ್ಮದ ರಂಗೋಲಿ ಹಾಕಿ ಅದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು, ಅಕ್ಕಿ ಹಾಕಿ, ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ನಾಣ್ಯ ಇಟ್ಟು ಅದರ ಮೇಲೆ ಅರಿಶಿಣ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು ಲಕ್ಷ್ಮೀದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಬೇಕು. ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಲಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ.
ವೀಳ್ಯದ ಎಲೆ, ಮಾವಿನ ಎಲೆಗಳನ್ನು ಇಟ್ಟು ಸಿದ್ಧಪಡಿಸಿದ ಈ ಕಲಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ಈ ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲಿಡಬೇಕು. ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ, ಒಡವೆ ಹಾಕಿ ಅಲಂಕಾರ ಮಾಡುತ್ತಾರೆ. ದೇವಿಗೆ ಪೊಂಗಲ್ ನೈವೇದ್ಯ ಮಾಡಿ ಅರ್ಪಿಸುತ್ತಾರೆ. ಮುತ್ತೈದೆಯರನ್ನು ಪೂಜೆಗೆ ಆಮಂತ್ರಿಸಿ, ಪೂಜೆಯ ನಂತರ ಅವರಿಗೆ ತಾಂಬೂಲ ನೀಡುವ ಪದ್ಧತಿ ಇದೆ. ವ್ರತ ಮಾಡುವವರು ಪೂಜೆ ಮುಗಿದ ನಂತರ ಆಹಾರ ಸೇವಿಸುತ್ತಾರೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದು ಹೇಗೆ?
ಕಳಶದ ಚೊಂಬಿನಲ್ಲಿ ಅಕ್ಕಿ ಅಥವ ನೀರು, ನಾಣ್ಯಗಳು, ಒಂದು ನಿಂಬೆಹಣ್ಣು, ಐದು ವೀಳ್ಯದ ಎಲೆಗಳು ಮತ್ತು ಅಡಿಕೆಯನ್ನು ಹಾಕಿ ತುಂಬಿಸುತ್ತಾರೆ. ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಣ್ಣದ ಬಳೆಗಳು ಮತ್ತು ಕಪ್ಪು ಬಣ್ಣದ ಮಣಿಗಳನ್ನು ಚೊಂಬಿನ ಪಕ್ಕದಲ್ಲಿ ಜೋಡಿಸುತ್ತಾರೆ. ಪೂಜೆಯಲ್ಲಿ ಲಕ್ಷ್ಮಿ ದೇವಿಯ ಶ್ಲೋಕಗಳನ್ನು ಹೇಳುವುದರ ಮೂಲಕ ಮತ್ತು ಲಕ್ಷ್ಮೀ ಸಹಸ್ರನಾಮಗಳನ್ನು ಸ್ಫಟಿಸುವುದು ಕೂಡಿರುತ್ತವೆ. ಕಲಶಕ್ಕೆ ಆರತಿಯನ್ನು ಮಾಡುತ್ತಾರೆ. ವಿವಿಧ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಕೆಲವೆಡೆ ಪೂಜೆ ಮಾಡಿದ ಮಹಿಳೆಯರು ತಮ್ಮ ಕೈ ಮಣಿಕಟ್ಟಿನ ಸುತ್ತ ಹಳದಿದಾರವನ್ನು ಕಟ್ಟಿಕೊಳ್ಳುತ್ತಾರೆ. ಇನ್ನು, ಪೂಜೆ ಮಾಡಿದ ಮರುದಿನ, ಅಂದರೆ ಶನಿವಾರ, ಸ್ನಾನಮಾಡಿದ ನಂತರ ಕಲಶವನ್ನು ತೆರೆದು ಎಲ್ಲವನ್ನು ಬಿಚ್ಚಿ, ಅದರಲ್ಲಿ ಇಟ್ಟಿದ್ದ ನೀರನ್ನು ಮನೆಯ ಎಲ್ಲಾ ಪ್ರದೇಶದಲ್ಲಿ ಚಿಮುಕಿಸುತ್ತಾರೆ. ನೀರಿನ ಬದಲು ಅಕ್ಕಿಯನ್ನಿಟ್ಟಿದ್ದರೆ, ಅದರಲ್ಲಿ ಅನ್ನ ಮಾಡಿ ಆ ಅನ್ನವನ್ನು ಊಟಕ್ಕೆ ತಯಾರಿಸಿದ ಅನ್ನದ ಜೊತೆ ಬೆರೆಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯನ್ನು ಸರಳವಾಗಿಯೂ ಮಾಡಬಹುದು. ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೂ ಲಕ್ಷ್ಮೀದೇವಿಯನ್ನು ಮೆಚ್ಚಿಸಬಹುದಾಗಿದೆ.