ಆ್ಯಪ್ನಗರ

ಸಾಮಾಜಿಕ ಮಾಧ್ಯಮಗಳಲ್ಲಿ ಉಕ್ಕಿ ಹರಿದ ಮಹಾಶಿವರಾತ್ರಿ ಭಕ್ತಿ ಪ್ರವಾಹ

ಮಹಾಶಿವರಾತ್ರಿ ಮಾಸದ ಅತಿ ಹೆಚ್ಚು ಕತ್ತಲು ಕವಿದ ದಿನ. ಬೆಳಕಿಗೊಂದು ಮೂಲವಿದೆ. ಸೀಮಿತತೆಯಿದೆ. ಆದಿ ಮತ್ತು ಅಂತ್ಯವಿದೆ. ಆದರೆ ಕತ್ತಲೆ ಅನಂತವಾಗಿದೆ. ಅದು ನಿರಂತರ.

Vijaya Karnataka Web 27 Mar 2018, 3:13 pm
ಮಹಾಶಿವರಾತ್ರಿ ಮಾಸದ ಅತಿ ಹೆಚ್ಚು ಕತ್ತಲು ಕವಿದ ದಿನ. ಬೆಳಕಿಗೊಂದು ಮೂಲವಿದೆ. ಸೀಮಿತತೆಯಿದೆ. ಆದಿ ಮತ್ತು ಅಂತ್ಯವಿದೆ. ಆದರೆ ಕತ್ತಲೆ ಅನಂತವಾಗಿದೆ. ಅದು ನಿರಂತರ. ಶಿವರಾತ್ರಿಯ ಜಾಗರಣೆಯ ಮೂಲ ಉದ್ದೇಶವೇ ಕತ್ತಲನ್ನು ಅರಿಯುವುದು. ಕತ್ತಲೊಳಗಿನ ಅನಂತತ್ವವನ್ನು ಕಾಣುವುದು.
Vijaya Karnataka Web mahashivaratri festival devotion on social media
ಸಾಮಾಜಿಕ ಮಾಧ್ಯಮಗಳಲ್ಲಿ ಉಕ್ಕಿ ಹರಿದ ಮಹಾಶಿವರಾತ್ರಿ ಭಕ್ತಿ ಪ್ರವಾಹ


ತಿಂಗಳ ಬೆಳದಿಂಗಳ ಬೆಳಕಿಗೂ ಮುನ್ನ ಬರುವ ಚತುರ್ದಶಿ ಶಿವನ ಪೂಜೆಗೆ ಪ್ರಶಸ್ತವಾದ ಪರ್ವ. ಮಾಘ ಶುಕ್ಲ ತ್ರಯೋದಶಿಯೇ ಶಿವರಾತ್ರಿ. ಹತ್ತು ಹಲವು ಆಯಾಮಗಳಿಂದ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಗಮನ ಸೆಳೆವ ಕಾಲ. ಅಧ್ಯಾತ್ಮ ಸಾಧಕರಿಗೆ ಅದು ವೇ ಪರ್ವಕಾಲ. ಜಾಗರಣೆಯ ನೆವದಲ್ಲಿ ರಾತ್ರಿಯಿಡೀ ಎಚ್ಚರವಿದ್ದು ಜಗತ್ಪಾಲಕ ಶಿವನ ನೆನೆವ ಕ್ಷಣವಿದು. ಉಪವಾಸ ವ್ರತ ಆಚರಿಸುವ ಮೂಲಕ ದೇಹದೊಳಗಿನ ನಕಾರಾತ್ಮಕ ಶಕ್ತಿಯ ಉಚ್ಛಾಟನೆ. ಸಕಾರಾತ್ಮಕ ಶಕ್ತಿಯ ಆವಾಹನೆ.

ಕೈಲಾಸ ವಾಸ ಗೌರೀಶ ಈಶನ ನೆನಹಿನಲ್ಲೇ ಆಚರಿಸಲ್ಪಡುವ ಮಹಾಶಿವರಾತ್ರಿ, ಸ್ತಬ್ದಗೊಂಡ ದಿವ್ಯ ರಾತ್ರಿಯಂತೆ ಕಾಣುತ್ತದೆ. ಶಿವರಾತ್ರಿಯೊಂದಿಗಿನ ಆಚರಣೆ, ಅದರ ಹಿಂದಿನ ಪುರಾಣ, ಏನೇ ಇದ್ದರೂ ಅಧ್ಯಾತ್ಮ ಸಾಧಕನಿಗೆ ಅದು ಪರ್ವಕಾಲವಾಗೇ ಕಾಣುತ್ತದೆ. ಶಿವನ ಆರಾಧನೆಗೆ ಅದುವೇ ಪ್ರಶಸ್ತವೆನಿಸುತ್ತದೆ. ಯೋಗ, ಯೋಗ ವಿಜ್ಞಾನ ಶಿವನನ್ನು ಚೈತನ್ಯ ರೂಪವೆನ್ನುತ್ತದೆ. ಆತನೇ ಸಮಸ್ತ ಶಕ್ತಿಯ ಮೂಲ ಎನ್ನುತ್ತದೆ. ಶಿವನೇ ಶಕ್ತಿಯ ಮೂಲ ಎಂದು ಪ್ರತಿಪಾದಿಸುವ ಪೂರಕ ರಾತ್ರಿಯಿದು.
ಪ್ರತಿ ತಿಂಗಳ ಚತುರ್ದಶಿಯಂದು ಕತ್ತಲು ಹೆಚ್ಚಿರುತ್ತದೆ. ಆ ಕಾರಣ ಶಿವರಾತ್ರಿಯಂದು ಕತ್ತಲನ್ನು ಆರಾಧಿಸುತ್ತೇವೆ. ಯಾರು ಕತ್ತಲಲ್ಲಿ ಇರುತ್ತಾರೋ, ಕತ್ತಲಲ್ಲಿ ವಾಸ ಮಾಡುತ್ತಾರೋ ಸಹಜವಾಗೇ ಅವರ ಮನಸ್ಸು ಬೆಳಕಿನತ್ತ ವಾಲುತ್ತದೆ. ಬೆಳಕು ಬೇಕೆಂದು ಬಯಸುತ್ತದೆ. ಆದರೆ ಶಿವನೆಂದರೆ ಶಾಂತ. ಆತನೇ ಪ್ರಜ್ಞಾನ. ಆತನೇ ಅನಂತ. ಅನಂತ ತತ್ವದಲ್ಲಿ ಇರುವುದೇ ಸೃಷ್ಟಿ, ಸ್ಥಿತ ಮತ್ತು ಸಮಭಾವ ಜ್ಞಾನ. ಅದುವೇ ಬ್ರಹ್ಮಮಯವಾದ ಶಿವ.

"ಯಾರು ಮಾಘಕೃಷ್ಣ ಚತುದರ್ಶಿಯ ದಿನ ಬಿಲ್ವದಳದಿಂದ ಅರ್ಚನೆ ಮಾಡಿ, ಉಪವಾಸ ಇದ್ದು ಜಾಗರಣೆ ಮಾಡುವರೋ ಅವರ ಸಕಲ ಇಷ್ಟಾರ್ಥಗಳು ಈಡೇರಿಸುತ್ತೇನೆ" -ಶಿವನು ಪಾರ್ವತಿಗೆ ಹೇಳಿದ್ದು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ