ಆ್ಯಪ್ನಗರ

ಕರುನಾಡ ಶಕ್ತಿದೇವತೆಗಳು: ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ

ವಿಜಯದಶಮಿ ದಿನ ಮಹಾಲಕ್ಷ್ಮೀ ಅಮ್ಮನವರನ್ನು ಮೆರವಣಿಗೆ ಮೂಲಕ ಕೆಳಗೋಟೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ

Vijaya Karnataka 17 Oct 2018, 10:39 am
ಚಿತ್ರದುರ್ಗದ ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯದಲ್ಲಿ ಕಳೆದ ನಾಲ್ಕು ವರ್ಷದಿಂದ ನವರಾತ್ರಿ ಉತ್ಸವ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಗುಡಿಗೆ ಎರಡು ಶತಮಾನಗಳ ಚರಿತ್ರೆ ಇದೆ. ಇತ್ತೀಚೆಗೆ ಇಡೀ ದೇವಾಲಯವನ್ನು ಜೀರ್ಣೋದ್ದಾರ ಮಾಡಲಾಗಿದೆ.
Vijaya Karnataka Web Mahalakshmi


ನವರಾತ್ರಿ ಉತ್ಸವಕ್ಕೆ ದೇವಿಗೆ ನಾನಾ ಅಲಂಕಾರ ಮಾಡಲಾಗುತ್ತದೆ. ದೇವಿಗೆ ನವರಾತ್ರಿ ಉತ್ಸವ ನಿಮಿತ್ತ ಬ್ರಹ್ಮಚಾರಿಣೇ ಮಾತಾ ಅಲಂಕಾರ, ಚಂದ್ರ ಘಂಟಾ ಮಾತಾ ಅಲಂಕಾರ, ಕೂಷ್ಮಾಂಡಾ ಮಾತಾ ಅಲಂಕಾರ, ಸ್ಕಂದ ಮಾತಾ ಅಲಂಕಾರ, ಕಾತ್ಯಾಯಿನೀ ದೇವಿ ಅಲಂಕಾರ, ಮಹಾಸರಸ್ವತಿ ಮಾತಾ ಅಲಂಕಾರ, ಕಾಳಿಮಾತಾ ಅಲಂಕಾರ, ಧನಲಕ್ಷ್ಮೀ ಮಾತಾ ಅಲಂಕಾರ ಮಾಡಲಾಗುವುದು.

ವಿಜಯದಶಮಿ ದಿನ ಮಹಾಲಕ್ಷ್ಮೀ ಅಮ್ಮನವರನ್ನು ಮೆರವಣಿಗೆ ಮೂಲಕ ಕೆಳಗೋಟೆ ಗಣೇಶ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ತುರುವನೂರು ರಸ್ತೆಯ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದ ಸನ್ನಿಧಾನದಲ್ಲಿ ಬನ್ನಿಪೂಜೆ ಮುಗಿಸಿಕೊಂಡು ರಾತ್ರಿ ಪುನಃ ಕೆಳಗೋಟೆಯ ದೇವಾಲಯಕ್ಕೆ ದೇವಿಯ ಮೂರ್ತಿ ಮರಳಿತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ