ಆ್ಯಪ್ನಗರ

ನವರಾತ್ರಿ 4ನೇ ದಿನ-ಕೂಷ್ಮಾಂಡ ದೇವಿ ಪೂಜೆಯ ಮಹತ್ವ

ಪ್ರಸನ್ನ ವದನಾಂಬುಜೇ ಶ್ರೀಪೀಠೇ ಸುರ ಪೂಜಿತೇ ಎಂದು ಪೂಜಿಸಲ್ಪಡುವ ದೇವಿಯೇ ಕೂಷ್ಮಾಂಡ.

Vijaya Karnataka Web 25 Sep 2017, 12:46 pm

ಕೂಷ್ಮಾಂಡ ದೇವಿ ಪೂಜೆ

ಪ್ರಸನ್ನ ವದನಾಂಬುಜೇ ಶ್ರೀಪೀಠೇ ಸುರ ಪೂಜಿತೇ ಎಂದು ಪೂಜಿಸಲ್ಪಡುವ ದೇವಿಯೇ ಕೂಷ್ಮಾಂಡ. ಈ ದೇವಿ ಸದಾ ಮಂದಸ್ಮಿತೆ. ದುರ್ಗಾ ದೇವಿಯ ನಾಲ್ಕನೆಯ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಆಯುರ್ವೇದ ಶಾಸ್ತ್ರದ ರೀತ್ಯ ಬೂದುಗುಂಬಳಕಾಯಿಯು ಜ್ಞಾನ ವರ್ಧಕ, ತೇಜೋ ವರ್ಧಕ. ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಕಾಹಾರ. ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳಬೇಕೆಂದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯ ಶಕ್ತಿಯನ್ನೇ ತನ್ನೊಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ.

ದುರ್ಗಾ ಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದಲ್ಲಿ ಸ್ಥಿತವಾಗಿರುವ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಿದ್ದಾಳೆ. ಆಕೆ ಇರುವಲ್ಲಿ ಬೆಳಕಿದೆ, ಜ್ಞಾನದ ಹೊಂಗಿರಣವಿದೆ. ಕೂಷ್ಮಾಂಡ ದೇವಿ ತನ್ನ ಏಳು ಕೈಗಳಲ್ಲಿ ಕಮಂಡಲು, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ, ಜಪಮಾಲೆಯನ್ನು ಹಿಡಿದಿದ್ದಾಳೆ. ಅಷ್ಟ ಸಿದ್ದಿ ಮತ್ತು ನವನಿಧಿಗಳನ್ನು ಸಂಕೇತಿಸುತ್ತಿದ್ದಾಳೆ. ವ್ಯಾಘ್ರ ವಾಹಿನಿಯಾಗಿ ಧರ್ಮದ ಪ್ರತೀಕವಾಗಿದ್ದಾಳೆ. ನವರಾತ್ರಿ ಹಬ್ಬದ ನಾಲ್ಕನೇ ದಿನವಾದ ಇಂದು ಕೂಷ್ಮಾಂಡ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಆಕೆಯನ್ನು ಅರ್ಚಿಸಿ, ಪ್ರಾರ್ಥಿಸಿ. ಕೂಷ್ಮಾಂಡ ದೇವಿಗೆ ಬೂದುಗುಂಬಳಕಾಯಿಯಿಂದ ತಯಾರಿಸಿದ ಸಿಹಿ ತಿನಿಸನ್ನು ನೈವೇದ್ಯ ಮಾಡಿ.

Vijaya Karnataka Web navaratri day 4 kushmanda devi
ನವರಾತ್ರಿ 4ನೇ ದಿನ-ಕೂಷ್ಮಾಂಡ ದೇವಿ ಪೂಜೆಯ ಮಹತ್ವ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ