ಆ್ಯಪ್ನಗರ

ಕೊಲ್ಲಾಪುರದ ಅಂಬಾಬಾಯಿಗೆ ಈ ಬಾರಿ ಬರಲಿಲ್ಲ ತಿಮ್ಮಪ್ಪನ ಗಿಫ್ಟ್‌

ಈ ಬಾರಿ ತಿರುಪತಿಯಿಂದ ಅಂಬಾಬಾಯಿಗೆ ಯಾವುದೇ ಸೀರೆ ಕಳುಹಿಸಿಲ್ಲ.

Maharashtra Times 22 Sep 2017, 6:35 pm
ಪ್ರತೀ ವರ್ಷ ದಸರಾ ಉತ್ಸವಕ್ಕೆ ತಿರುಪತಿ ತಿರುಮಲಾ ದೇವಾಲಯದಿಂದ ಕೊಲ್ಲಾಪುರದ ಅಂಬಾಬಾಯಿಗೆ ಉಡಲು ಸೀರೆ ಕಳುಹಿಸುವ ಪದ್ಧತಿ ಇತ್ತು. ಆದರೆ ಈ ಬಾರಿ ತಿರುಪತಿಯಿಂದ ಅಂಬಾಬಾಯಿಗೆ ಯಾವುದೇ ಸೀರೆ ಕಳುಹಿಸಿಲ್ಲ.
Vijaya Karnataka Web on dasara no draping of shalu gifted by tirupati to ambabai of kolhapur
ಕೊಲ್ಲಾಪುರದ ಅಂಬಾಬಾಯಿಗೆ ಈ ಬಾರಿ ಬರಲಿಲ್ಲ ತಿಮ್ಮಪ್ಪನ ಗಿಫ್ಟ್‌


ದಸರಾ ಉತ್ಸವ ಸಂದರ್ಭದಲ್ಲಿ ತಿರುಪತಿಯಿಂದ ಕಳುಹಿಸುತ್ತಿದ್ದ ಸೀರೆಯನ್ನು ಅಂಬಾಬಾಯಿ ದೇವಿಗೆ ತೊಡಿಸುತ್ತಿದ್ದರು. ಈ ಪದ್ಧತಿ ನೂರಾರು ವರ್ಷಗಳಿಂದ ಆಚರಣೆಯಲ್ಲಿತ್ತು. ಆದರೆ ಈ ಪಶ್ಷಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ(PMDS) ಕೊಲ್ಲಾಪುರ ಅಂಬಾಬಾಯಿ ದೇವಿಗೆ ತಿರುಪತಿಯಿಂದ ಬರುವ ಸೀರೆಯ ಬದಲಿಗೆ ಮಹಾವಸ್ತ್ರ ತೊಡಿಸಲು ತೀರ್ಮಾನಿಸಿದೆ.

ಪ್ರತೀವರ್ಷ ಪಿಎಂಡಿಎಸ್‌ ರೇಷ್ಮೆ ಸೀರೆ ಕಳುಹಿಸುವಂತೆ ಕೋರಿ ತಿರುಪತಿಗೆ ಪತ್ರ ಬರೆಯುತ್ತಿದ್ದರು. ಆದರೆ ಈ ಬಾರಿ ಬರೆಯಲಿಲ್ಲ. ತಿರುಪತಿ ಸೀರೆ ಬಂದರೆ ದಸರಾದ ಎರಡನೇ ದಿನ ಉಡಿಸಲು ತೀರ್ಮಾನಿಸಿದೆ.

ದಸರಾ ಹಬ್ಬ ಕಳೆದ ಬಳಿಕ ದೇವಿಗೆ ಉಡಿಸಿದ ಸೀರೆಯನ್ನು ಹರಾಜು ಕರೆಯುತ್ತಾರೆ. ಆದರೆ ಕಳೆದ ವರ್ಷ ಹರಾಜಿನಲ್ಲಿ ಕನಿಷ್ಠ ಬೆಲೆಯೇ 4.2 ಲಕ್ಷ ಇದ್ದ ಕಾರಣ ಸೀರೆ ಮಾರಾಟವಾಗಿಲ್ಲ.
ದೇವಿಗೆ ಉಡಿಸಿದ ಸೀರೆ
2011ರಲ್ಲಿ 2.51 ಲಕ್ಷ
2010ರಲ್ಲಿ 2.26 ಲಕ್ಷ
2012ಲ್ಲಿ 3.21 ಲಕ್ಷ
2013ರಲ್ಲಿ 7.5 ಲಕ್ಷ
2014ರಲ್ಲಿ 5.5 ಲಕ್ಷ ಹಣಕ್ಕೆ ಮಾರಾಟವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ