ಆ್ಯಪ್ನಗರ

ಪತಿ ಸಾವಿನ ಬಳಿಕ ದುರ್ಯೋಧನ, ರಾವಣನ ಪತ್ನಿ ಹೀಗೆ ಮಾಡಿದರಂತೆ!

ರಾಮಾಯಣ ಮತ್ತು ಮಹಾಭಾರತ ಹಿಂದೂ ಧರ್ಮದ ಪವಿತ್ರ ಗ್ರಂಥ. ಈ ಗ್ರಂಥಗಳಿಂದ ಕೇವಲ ಧರ್ಮ ಮತ್ತು ಮುಕ್ತಿಯ ಮಾರ್ಗಗಳಷ್ಟೆ ಅಲ್ಲದೆ, ಸಾಮಾಜಿಕ ವ್ಯವಸ್ಥೆಯ ಜ್ಞಾನವು ಲಭ್ಯವಾಗುತ್ತದೆ. ಈ ಧರ್ಮ ಗ್ರಂಥದಲ್ಲಿ ನಾಯಕಿಯನ್ನು ಪತಿವೃತೆ ಎಂದು ಬಿಂಬಿಸಲಾಗಿದ್ದರೆ, ಖಳನಾಯಕರ ಪತ್ನಿ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿದರೆ ಹೈರಾಣ ಆಗುತ್ತಿರಿ.

Navbharat Times 16 May 2019, 3:18 pm
ರಾಮಾಯಣ ಮತ್ತು ಮಹಾಭಾರತ ಹಿಂದೂ ಧರ್ಮದ ಪವಿತ್ರ ಗ್ರಂಥ. ಈ ಗ್ರಂಥಗಳಿಂದ ಕೇವಲ ಧರ್ಮ ಮತ್ತು ಮುಕ್ತಿಯ ಮಾರ್ಗಗಳಷ್ಟೆ ಅಲ್ಲದೆ, ಸಾಮಾಜಿಕ ವ್ಯವಸ್ಥೆಯ ಜ್ಞಾನವು ಲಭ್ಯವಾಗುತ್ತದೆ. ಈ ಧರ್ಮ ಗ್ರಂಥದಲ್ಲಿ ನಾಯಕಿಯನ್ನು ಪತಿವೃತೆ ಎಂದು ಬಿಂಬಿಸಲಾಗಿದ್ದರೆ, ಖಳನಾಯಕರ ಪತ್ನಿ ಬಗ್ಗೆ ಹೇಳಿರುವ ಮಾತುಗಳನ್ನು ಕೇಳಿದರೆ ಹೈರಾಣ ಆಗುತ್ತಿರಿ. ಪತಿ ಸಾವಿನ ಬಳಿಕ ದುರ್ಯೋಧನ ಮತ್ತು ರಾವಣನ ಪತ್ನಿ ಮಾಡಿರುವ ಕೆಲಸ ಕೇಳಿದರೆ ಆಶ್ಚರ್ಯರಾಗುತ್ತಿರಿ. ಹಾಗಾದರೆ, ಬನ್ನಿ ಅದೇನು ಎಂದು ನೋಡೋಣ...
Vijaya Karnataka Web 10


ನಾಶವಾಯ್ತು ರಾವಣನ ಸಮಸ್ತ ಕುಲ

ರಾವಣ ಸೀತಾ ಮಾತೆಯನ್ನು ಅಪಹರಿಸಿಕೊಂಡು ಬಂದಾಗ ಆತನ ಪತ್ನಿ ಮಂಡೋದರಿ ಸಾಕಷ್ಟ ದುಃಖ ಪಟ್ಟಿದ್ದಳು. ಸೀತೆಯನ್ನು ಭಗವಾನ್ ಶ್ರೀರಾಮನಿಗೆ ಹಸ್ತಾಂತರಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಳು. ಆದರೆ, ರಾವಣ ಪತ್ನಿಯ ಮಾತನ್ನು ಕೇಳದೆ, ರಾಮನ ಜತೆ ಯುದ್ಧಕ್ಕೆ ಮುಂದಾಗಿದ್ದ. ಆದರೆ, ವಿಷ್ಣುವಿನ ಪರಮ ಭಕ್ತನಾಗಿದ್ದ ರಾವಣನ ಕಿರಿಯ ಸಹೋದರ ವಿಭೀಷಣ, ರಾಮನ ಬೆನ್ನಿಗೆ ನಿಂತಿದ್ದ. ಹೀಗಾಗಿ ರಾವಣನ ಕುಲದಲ್ಲಿ ವಿಭೀಷಣ ಮಾತ್ರ ಬದುಕುಳಿದ.

ರಾಜನಾದ ವಿಭೀಷಣ

ಯುದ್ಧದ ಬಳಿಕ ರಾವಣ ಸಾವನ್ನಪ್ಪುತ್ತಾನೆ. ಆದರೆ, ಇದಕ್ಕೂ ಮೊದಲು, ನನಗೆ ಮುಕ್ತಿ ಸಿಗುತ್ತಿದೆ. ನಾನು ಸತ್ತ ಬಳಿಕ ನಿನ್ನ ಸ್ಥಿತಿ ಶೋಚನೀಯವಾಗಬಾರದು. ಹೀಗಾಗಿ ನನ್ನ ಕಿರಿಯ ಸಹೋದರ ವಿಭೀಷಣ ಜತೆ ವಿವಾಹವಾಗು ಎಂದು ಪತ್ನಿ ಮಂಡೋದರಿ ಬಳಿ ವಿನಂತಿಸಿಕೊಳ್ಳುತ್ತಾನೆ. ಪತಿವ್ರತೆಯಾದ ಆಕೆ, ಪತಿಯ ಮಾತಿನಂತೆ ಮೈದುನನನ್ನೇ ವಿವಾಹವಾಗುತ್ತಾಳೆ. ಪತಿ ರಾವನನ ಸಾವಿನ ಬಳಿಕ ಮಾಂಡೊದರಿ ಲಂಕಾದ ಮಹಾರಾಣಿಯಾಗುತ್ತಾಳೆ.

ವಾಲಿಯ ಪತ್ನಿಯೂ ಹೀಗೆ ಮಾಡಿದ್ದಳು

ರಾಮಾಯಣದಲ್ಲಿ ಪತಿ ಸಾವಿನ ಬಳಿಕ ಪತ್ನಿ ಮೈದುನನನ್ನು ವಿವಾಹವಾದ ಘಟನೆ ಇದೇ ಮೊದಲಲ್ಲ. ವಿಭೀಷಣ ಮತ್ತು ಮಂಡೋದರಿಗಿಂತ ಮೊದಲು ವಾಲಿಯ ಪತ್ನಿಯೂ ಹೀಗೆ ಮಾಡಿದ್ದಳು. ಭಗವಾನ್ ಶ್ರೀರಾಮನ ಕೈಯಿಂದ ಹತನಾದ ವಾಲಿ, ತನ್ನ ಪತ್ನಿ ತಾರಾಳ ಸುರಕ್ಷತೆಗಾಗಿ ತನ್ನ ಸಹೋದರನಾದ ಸುಗ್ರೀವನ ಜತೆ ವಿವಾಹ ಮಾಡಿಸುತ್ತಾನೆ.

ದುರ್ಯೋಧನ ಪತ್ನಿಯ ವಿಚಿತ್ರ ಕಥೆ

ರಾಜಾ ಚಂದ್ರವರ್ಮನ ಪುತ್ರಿ ಭಾನುಮತಿ ಸ್ವರ್ಗದಲ್ಲಿರುವ ಅಪ್ಸರೆಗಳಿಗಿಂತ ಸುಂದರವಾಗಿದ್ದಳು. ಪುತ್ರಿಗೆ ಸುಯೋಗ ವರ ಹುಡುಕಲು ರಾಜ ಸ್ವಯಂ ವರ ಏರ್ಪಡಿಸಿದ್ದ. ಈ ಸಭೆಗೆ ದುರ್ಯೋಧನ ಮತ್ತು ಕರ್ಣ ಸಹ ಆಗಮಿಸಿದ್ದರು. ಭಾನುಮತಿಯನ್ನು ನೋಡಿ ದುರ್ಯೋಧನ ಮನಸಿನಲ್ಲಿಯೇ ಆಕೆಯನ್ನು ವಿವಾಹವಾಗುವ ವಿಚಾರ ಮಾಡಿದ್ದ.

ಭಾನುಮತಿಗೆ ದುರ್ಯೋಧನ ಇಷ್ಟವಿರಲಿಲ್ಲ

ಸ್ವಯಂ ವರ ಸಭೆಯಲ್ಲಿ ವರಮಾಲೆ ತೆಗೆದುಕೊಂಡ ಭಾನುಮತಿ, ದುರ್ಯೋಧನನ್ನು ಬಿಟ್ಟು ಮುನ್ನಡೆದಳು. ಇದರಿಂದ ಕುಪಿತನಾದ ದುರ್ಯೋಧನ, ಒತ್ತಾಯ ಪೂರ್ವಕವಾಗಿ ಭಾನುಮತಿಯಿಂದ ವರಮಾಲೆ ಹಾಕಿಸಿಕೊಳ್ಳುತ್ತಾನೆ. ಅಲ್ಲಿ ನೆರದಿದ್ದ ರಾಜರೆಲ್ಲ ವಿರೋಧ ವ್ಯಕ್ತಪಡಿಸಿದಾಗ, ಯುದ್ಧಕ್ಕೆ ಬನ್ನಿ ಎಂದು ಆಹ್ವಾನ ನೀಡುತ್ತಾನೆ.

ಜಯದ್ರಥ ಬಿಟ್ಟು ಎಲ್ಲರೂ ಹಿಂದೆ ಸರಿದರು...

ದುರ್ಯೋಧನ ಯುದ್ಧಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ಜಯದ್ರಥ‌ನನ್ನು ಬಟ್ಟು ಉಳಿದೆಲ್ಲರು ಹಿಂದಕ್ಕೆ ಸರಿದರು. ಆಗ ದುರ್ಯೋಧನ ಕರ್ಣನ ಜತೆ ಯುದ್ಧ ಮಾಡಿ ಗೆಲ್ಲುವಂತೆ ಎಲ್ಲರಿಗೂ ಆಹ್ವಾನ ನೀಡಿದ. ಆದರೆ, ಕರ್ಣ ಎಲ್ಲರನ್ನು ಪರಾಭವಗೊಳಿಸಿದ. ಕೊನೆಗೆ ಜಯದ್ರಥನೂ ಸಹ ಪರಾಭವಗೊಂಡ. ಆದರೆ, ಸಾಕಷ್ಟು ಶಕ್ತಿ ಪ್ರದರ್ಶನ ಮಾಡಿದ ಕಾರಣ ಇವರಿಬ್ಬರು ಮಿತ್ರರಾದರು. ಒಟ್ಟಾರೆ ಹೇಳುವುದಾದರೆ, ದುರ್ಯೋಧನ ತನ್ನ ಶಕ್ತಿ ಪ್ರದರ್ಶನದಿಂದ ಭಾನುಮತಿಯನ್ನು ವರಿಸುತ್ತಾನೆ. ಆದರೆ, ಭಾನುಮತಿ ಕರ್ಣನ ವೀರತೆಗೆ ಪ್ರಭಾವಿತಳಾಗಿದ್ದು, ಮನಸಲ್ಲಿ ಆತನನ್ನೆ ಪ್ರೀತಿಸುತ್ತಿರುತ್ತಾಳೆ.

ದುರ್ಯೋಧನ ಸಾವಿನ ಬಳಿಕ ಭಾನುಮತಿ ಇವರನ್ನು ವರಿಸಿದಳು

ಮಹಾಭಾರತದ ಯುದ್ಧದಲ್ಲಿ ದುರ್ಯೋಧನ ಮತ್ತು ಕರ್ಣ ಸಾವನ್ನಪ್ಪುತ್ತಾರೆ. ಇದರಲ್ಲಿ ಅರ್ಜುನನ ಪುತ್ರ ಅಭಿಮನ್ಯು ಭಾನುಮತಿಯ ಪುತ್ರ ಲಕ್ಷ್ಮಣನನ್ನು ಹೊಡೆದುರುಳಿಸುತ್ತಾನೆ. ಇದೆಲ್ಲದರ ಬಳಿಕ ಮಹಾಭಾರತ ಯುದ್ಧ ಸಮಾಪ್ತಿಯಾಗುತ್ತದೆ. ದುರ್ಯೋಧನನ ಪತ್ನಿ ಭಾನುಮತಿ ಅರ್ಜುನನ ವಿವಾಹ ಸಂಬಂಧವನ್ನು ಸ್ವೀಕರಿಸುತ್ತಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ