ಆ್ಯಪ್ನಗರ

ಕರುನಾಡ ಶಕ್ತಿ ದೇವತೆಗಳು: ಹಿನ್ನೀರು ಹಿರಿಮೆಯ ಸಿಗಂದೂರು ಶ್ರೀದೇವಿ

ಸಿಗಂದೂರಿನ ಕೃಷಿಭೂಮಿಯ ಸಂಪಿಗೆ ಮರದಡಿ ನೆಲೆನಿಂತ ಶಕ್ತಿವಂತೆ ಚೌಡೇಶ್ವರಿಯನ್ನು ಶೃದ್ಧಾಭಕ್ತಿಯಿಂದ ಆರಾಧಿಸುವ ಸಹಸ್ರಾರು ಭಕ್ತರು ನಾಡಿನಾದ್ಯಂತ ನಂಬಿಕೆಯಿಂದ ಬದುಕುತ್ತಿದ್ದಾರೆ.

Vijaya Karnataka 16 Oct 2018, 10:57 am
ಸಾಗರ: ಧಾರ್ಮಿಕ ನಂಬಿಕೆಯ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲೆಯ ಶ್ರೀ ಕ್ಷೇತ್ರ ಸಿಗಂದೂರು ಬಹಳ ಪ್ರಭಾವಿ ಪುಣ್ಯ ಕ್ಷೇತ್ರವಾಗಿದೆ. ಸುಮಾರು 300 ವರ್ಷಗಳ ಇತಿಹಾಸ ಇರುವ ಶ್ರೀ ಕ್ಷೇತ್ರದ ದರ್ಶನಕ್ಕೆ ಶರಾವತಿ ಹಿನ್ನಿರನ್ನು ಲಾಂಚ್‌ ಬಳಸಿ ದಾಟಬೇಕಾದುದು ಸಹ ಬಹು ಮುಖ್ಯ ಆಕರ್ಷಣೆ.
Vijaya Karnataka Web Sigandooramma


ಸಿಗಂದೂರಿನ ಕೃಷಿಭೂಮಿಯ ಸಂಪಿಗೆ ಮರದಡಿ ನೆಲೆನಿಂತ ಶಕ್ತಿವಂತೆ ಚೌಡೇಶ್ವರಿಯನ್ನು ಶೃದ್ಧಾಭಕ್ತಿಯಿಂದ ಆರಾಧಿಸುವ ಸಹಸ್ರಾರು ಭಕ್ತರು ನಾಡಿನಾದ್ಯಂತ ನಂಬಿಕೆಯಿಂದ ಬದುಕುತ್ತಿದ್ದಾರೆ. ಪ್ರಭಾವಿ ಪುಣ್ಯ ಕ್ಷೇತ್ರವಾಗಿ ಬೆಳೆದುನಿಂತ ಸಿಗಂದೂರಿನ ಅಧಿದೇವತೆ ಚೌಡೇಶ್ವರಿಯು ಇಂದಿನ ಧರ್ಮದರ್ಶಿ ರಾಮಪ್ಪ ಅವರ ಕುಲದೇವರು. ಕನಸಿನಲ್ಲಿ ಆದ ಆದೇಶದಂತೆ ಸುಮಾರು 1990ರಲ್ಲಿ ಆಗಮ ಶಾಸ್ತ್ರೋಕ್ತವಾಗಿ ಸಿಗಂದೂರಿನ ಚೌಡೇಶ್ವರಿಯನ್ನು ಪ್ರತಿಷ್ಠಾಪಿಸಲಾಯಿತು.

ಸಂಪಿಗೆ ಮರದಡಿಯ ಚೌಡಮ್ಮ ಇಂದು ನಾಡಿನಾದ್ಯಂತ ಅನುಪಮ ಶಕ್ತಿ ದೇವತೆಯಾಗಿ ಭಕ್ತರ ಭರವಸೆಯ ದೇವಿಯಾಗಿದ್ದಾಳೆ. ತಾಯಿಯ ಆರಾಧನೆಯಿಂದ ಬದುಕಿನ ಭರವಸೆ ಚಿಗಿತು ನೆಮ್ಮದಿಯಿಂದ ಭಕ್ತರು ಬದುಕಲು ಸಿಗಂದೂರು ಚೌಡೇಶ್ವರಿ ಸಹಾಯಹಸ್ತ ನೀಡುತ್ತಾಳೆ ಎಂಬ ನಂಬಿಕೆ ನಾಡಿನಾದ್ಯಂತ ಅಚಲವಾಗಿದೆ.

ಶ್ರೀಕ್ಷೇತ್ರವನ್ನು ನಂಬಿಕೆಯ ತಾಣವನ್ನಾಗಿಸಿದೆ. ಜತೆಗೆ ಬಾಯಿಯಿಂದ ಕಿವಿಗೆ ಹರಡುವ ವಯ್ಯಕ್ತಿಕ ಅನುಭವಗಳು ಸಹ ಕ್ರೇತ್ರದ ಪ್ರಸಿದ್ಧಿ ಹೆಚ್ಚಿಸಿವೆ. ಕಷ್ಟಕಾರ್ಪಣ್ಯಗಳನ್ನು ಚೌಡೇಶ್ವರಿ ಹಗುರಮಾಡಿ, ಪರಿಹರಿಸಿದ ವೈವಿಧ್ಯಮಯ ಜೀವನಾನುಭವಗಳು ಸಹ ಶ್ರೀಕ್ಷೇತ್ರದ ಪ್ರಭಾವಕ್ಕೆ ಕೈಗನ್ನಡಿಯಾಗಿವೆ. ದೇವಿಯ ಪದತಲದಲ್ಲಿ ನಮಸ್ಕರಿಸಿ, ಬೇಡಿಕೆಯನ್ನಿಟ್ಟು ಹರಕೆ ಹೊತ್ತರೆ, ಹೊಳೆ ದಾಟುವುದರೊಳಗಾಗಿ ಫಲ ದೊರಕುತ್ತದೆ ಎಂಬುದು ಒಂದು ಕಾಲದಲ್ಲಿ ಇದ್ದ ಬಲವಾದ ನಂಬಿಕೆ. ಶೇಷಗಿರಿ ಭಟ್ಟರು ಪ್ರಧಾನ ಅರ್ಚಕರಾಗಿದ್ದಾರೆ. ಇಂದು ಸಿಗಂದೂರು ಕ್ಷೇತ್ರ ನಾಡಿನ ಬಹಳ ಪ್ರಸಿದ್ಧ ಕ್ಷೇತ್ರವಾಗಿ ರೂಪು ಪಡೆದಿದೆ.

ಶ್ರೀಕ್ಷೇತ್ರದ ಹೆಸರಿನಲ್ಲಿ ಯಕ್ಷ ಗಾನ ಮೇಳವಿದೆ. ಸಿಗಂದೂರುವಾಣಿ ಎಂಬ ಪತ್ರಿಕೆ ಪ್ರಕಟಿಸಲಾಗುತ್ತಿದೆ. ಸಂಕ್ರಾಂತಿಯಂದು ವಾರ್ಷಿಕ ಜಾತ್ರಾಮಹೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ವರ್ಷಪೂರ್ತಿ ನಡೆಯುವ ವಿವಿಧ ಧಾರ್ಮಿಕ ಕಾರ‍್ಯಕ್ರಮಗಳಲ್ಲಿ ಯಕ್ಷಾಗನ, ನಾಟಕ ಮುಂತಾದ ಕಲಾಪ್ರಕಾರಗಳ ಪ್ರದರ್ಶನ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ಸಹ ವಿಶೇಷ ಪೂಜೆ, ಧಾರ್ಮಿಕ ಕಾರ‍್ಯಕ್ರಮಗಳು ನಡೆಯುತ್ತವೆ. ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ