ಆ್ಯಪ್ನಗರ

ಕರುನಾಡ ಶಕ್ತಿದೇವತೆಗಳು: ವಿದ್ಯಾದೇವತೆ ಶೃಂಗೇರಿ ಶ್ರೀ ಶಾರದಾ

ಈ ಪೀಠಗಳಲ್ಲಿ ಪ್ರಮುಖವಾದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವು ತುಂಗಭದ್ರಾ ತೀರದಲ್ಲಿರುವ ಶೃಂಗೇರಿ ಕ್ಷೇತ್ರದಲ್ಲಿ ವಿರಾಜಮಾನವಾಗಿದೆ.

Vijaya Karnataka 13 Oct 2018, 7:55 am
ಆದಿಶಂಕರ ಭಗವತ್ಪಾದಾಚಾರ್ಯರು ದೇಶದ ಉದ್ದಗಲಕ್ಕೂ ಸಂಚಾರ ಮಾಡಿ ಅದ್ವೈತ ಸಿದ್ಧಾಂತವನ್ನು ಎಲ್ಲ ಕಡೆಗಳಲ್ಲಿಯೂ ಪ್ರಚಾರ ಮಾಡಿದರು. ನಿರಂತರ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರೆಂಬ ವಿಷಯ ಸರ್ವವಿಧಿತವಾಗಿದೆ.
Vijaya Karnataka Web sharada devi


ಈ ಪೀಠಗಳಲ್ಲಿ ಪ್ರಮುಖವಾದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವು ತುಂಗಭದ್ರಾ ತೀರದಲ್ಲಿರುವ ಶೃಂಗೇರಿ ಕ್ಷೇತ್ರದಲ್ಲಿ ವಿರಾಜಮಾನವಾಗಿದೆ. ಶ್ರೀಶಂಕರಾಚಾರ್ಯರ ಪ್ರಧಾನ ಶಿಷ್ಯರಾದ ಶ್ರೀಸುರೇಶ್ವರಾಚಾರ್ಯರಿಂದ ಆರಂಭಿಸಿ ಇಂದಿನವರೆಗೂ ಈ ಪೀಠವು ಅವಿಚ್ಛಿನ್ನವಾದ ಗುರುಪರಂಪರೆಯಿಂದ ಕಂಗೊಳಿಸುತ್ತಿದೆ. ಸಕಲ ವಿದ್ಯಾಧಿದೇವತೆಯಾದ ಶ್ರೀಶಾರದಾ ಪರಮೇಶ್ವರಿಯು ಈ ಪೀಠದ ಆರಾಧ್ಯದೇವತೆಯಾಗಿ ಭಕ್ತಜನಕಲ್ಪವೃಕ್ಷ ವಾಗಿ ಶೋಭಿಸುತ್ತಿದ್ದಾಳೆ. ಇಲ್ಲಿ ಶರನ್ನವರಾತ್ರಿ ಮಹೋತ್ಸವ ಅತ್ಯಂತ ವೈಭವದಿಂದ ನಡೆಯುತ್ತದೆ. ನವರಾತ್ರಿ ಪ್ರಯುಕ್ತ ಪ್ರತಿ ದಿನವೂ ಉಭಯ ಶ್ರೀಗಳವರಿಂದ ಶ್ರೀ ಶಾರದಮ್ಮನವರಿಗೆ ವಿಶೇಷ ಪೂಜೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅಮ್ಮನವರ ಬೀದಿ ಉತ್ಸವ, ರಾತ್ರಿ ಶ್ರೀ ಜಗದ್ಗುರುಗಳು ಕಿರೀಟಧಾರಿಗಳಾಗಿ ಸಿಂಹಾಸನಾರೋಹಣ, ಶ್ರೀ ಶಾರದಮ್ಮನವರಿಗೆ ಬಂಗಾರದ ದಿಂಡೀ ಉತ್ಸವ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ