ಆ್ಯಪ್ನಗರ

ಕರುನಾಡ ಶಕ್ತಿದೇವತೆ: ಶಾರದೆ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ಶರನ್ನವರಾತ್ರಿ ಸಂದರ್ಭದಲ್ಲಿ ಶಾರದೆ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷ ರಭ್ಯಾಸ ಮಾಡಿಸಿದರೆ ವಿದ್ಯೆಯನ್ನು ತಾಯಿ ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ.

Vijaya Karnataka 14 Oct 2018, 10:31 am
ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಶನಿವಾರ ಶ್ರೀ ಶಾರದಾಂಬೆಗೆ ಮಯೂರ ವಾಹನ ಅಲಂಕಾರ ಮಾಡಲಾಗಿತ್ತು.
Vijaya Karnataka Web sharadambe

ರಜೆ ಇರುವ ಕಾರಣದಿಂದ ಸ್ಥಳಿಯ ಹಾಗೂ ದೂರದ ಊರುಗಳಿಂದ ಭಕ್ತರು ಹೆಚ್ಚು ಆಗಮಿಸಿದ್ದರು.

ಶರನ್ನವರಾತ್ರಿ ಸಂದರ್ಭದಲ್ಲಿ ಶಾರದೆ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷ ರಭ್ಯಾಸ ಮಾಡಿಸಿದರೆ ವಿದ್ಯೆಯನ್ನು ತಾಯಿ ಕರುಣಿಸುತ್ತಾಳೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ನೂರಾರು ಪೋಷಕರು ಸರತಿ ಸಾಲಿನಲ್ಲಿ ಮಕ್ಕಳೊಂದಿಗೆ ಶ್ರೀ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಅಕ್ಷ ರಭ್ಯಾಸ ಮಾಡಿಸಿದರು.

ಕೈಯಲ್ಲಿ ಶಕ್ತಾಯುಧ ಧರಿಸಿ ನವಿಲನ್ನು ಏರಿ ಷಣ್ಮುಖನ ಶಕ್ತಿಯಾಗಿ ಶೋಭಾಯಮಾನವಾಗಿ ಕಂಗೊಳಿಸುತ್ತಿದ್ದ ಶಾರದೆಯ ದರ್ಶನ ಪಡೆದು ಭಕ್ತರು ಭಾವಪರವಶರಾದರು. ಶ್ರೀಮಠದ ಒಳಗಿನ ಒಂದು ಭಾಗದಲ್ಲಿ ವೇದ ಪಾರಾಯಣ ನಡೆಯುತ್ತಿದ್ದರೆ,ಮತ್ತೊಂದು ಭಾಗದಲ್ಲಿ ಶಕ್ತಿ ಗಣಪತಿ ದೇಗುಲದ ಎದುರು ಸುವಾಸಿನಿ ಪೂಜೆ,ವಾದ್ಯ ಸೇವೆ ನಡೆಯಿತು. ಬೆಂಗಳೂರಿನ ಭೂಮಿಕಾ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ